Monday, December 14, 2009

ಮರೆಯದ ಹಾಡು- ೧

   ಆಗ ನಾನು ತುಂಬಾ ಚಿಕ್ಕವನು.. ಬಹುಶ ೨-೩ ನೆ ಕ್ಲಾಸ್ ನಲ್ಲಿದ್ದಿರಬೇಕು... ಮನೆಯಲ್ಲಿ ಅಮ್ಮ ಕೆಲಸ ಮಾಡುತ್ತಾ ಹೇಳುತ್ತಿದ್ದ ಹಾಡುಗಳು ನನ್ನನ್ನು ಆಕರ್ಷಿಸಿದ್ದವು... ಇವತ್ತು ಏನೂ ಕೆಲಸ ಇಲ್ಲದೆ ಕುಳಿತಿದ್ದಾಗ ಹಿಂದಿನದೆಲ್ಲವೂ ನೆನಪಾಯಿತು... ಆ ಹಾಡುಗಳು ಎಲ್ಲವೂ ಮರೆತೆ ಹೋಗಿವೆ.. ಆದರೂ ನನ್ನ ನೆನಪಿನ ಬುತ್ತಿಯನ್ನು ಕದಡಿ , ಜಾಲಾಡಿ ಈ ಒಂದು ಹಾಡು ನಿಮ್ಮ ಮುಂದಿಡುತ್ತಿದ್ದೇನೆ... ಇದರ ಮೂಲ ಲೇಖಕ/ಲೇಖಕಿ ಯಾರೆಂದು ಗೊತ್ತಿಲ್ಲ... ಬಹುಶ ಜಾನಪದವಿರಬೇಕು... ಇದನ್ನು ರಾಗವಾಗಿ ಹಾಡುತ್ತಿದ್ದ  ಅಮ್ಮನ ಧ್ವನಿ ಈಗಲೂ ಕಿವಿಯಲ್ಲಿ ಗುಯಿಗುಡುತ್ತಿದೆ...

 ಅತ್ತೆ ಮನೆಯ ಸಮ್ಮಾನ
ವ್ಹಾರೆ ಪರಮಾನ್ನ..
ಪರಮಾನ್ನ ತಿನಲಿಕೆಂದೇ ನಾನು ಮದುವೆಯಾದೆನು..
ಸಂಜೆ ಹೊತ್ತಿನಲ್ಲಿ ಅತ್ತೆ ಮನೆಗೆ ನಡೆದೆನು...

ಮಾಡಿದಾರೆ ಪಾಯಸ
ತಿಂದು ನನಗೆ ಉಬ್ಬಸ
ರಾತ್ರಿಯಿಡೀ ನಿದ್ದೆ ಇಲ್ಲ
ಎಣಿಸಿ ಎಣಿಸಿ ಪಾಯಸ ..

ಮೆಲ್ಲನೆದ್ದೆನು
ಅಡುಗೆ ಕೋಣೆಗೆ ನಡೆದೆನು
ಮೂಲೆಯಲ್ಲಿದ್ದ ಪಾಯಸದ ಮಡಕೆಗೆ ಮಂಡೆ ಹಾಕ್ದೆನು..

ಸಿಗಲಿಲ್ಲ ಪಾಯಸ
ಸಿಗದೇ ನಾನು ಬಿಡಲಿಲ್ಲ
ಸಿಗುವ ಗೌಜಿ ಮಂಡೆ ಒಡೆದು
ಓಡು ಕುತ್ತಿಗೆಗಾಯ್ತಲ್ಲ..

ಅತ್ತೆ ಎದ್ದರು
ಹಿಡಿವ ಸೂಡಿ ಹಿಡಿದರು
ಸೊಕಿದ ಬೆಕ್ಕು ಬರುವುದೆಂದು ಕಾದು ಕುಳಿತರು
ಕಾದು ಕುಳಿತ ನನ್ನ ಅತ್ತೆ ಎರಡು ಬಿಟ್ಟರು..

ಸಮ್ಮಾನ ಬರೋಬ್ಬರಿ
ಪೆಟ್ಟಿನ ಲೆಕ್ಕ ಕೆಳ್ವಿರಾ?
ಏಕ್, ದೋ ತೀನ್ ಚಾರ್ ಪಾಂಚ್ ತಿಂದಿರಾ..

ಅತ್ತೆ ಮನೆಗೆ ಹೋಗಲು
ಈಗ ಬಹಳ ನಾಚಿಕೆ
ಅಲ್ಲಿ
 ನಾದಿನಿಯರ ಮೊಗವ ಕಂಡರೆ ನಗುವು ಬರುವುದು..

ಯಾರಿಗಾದರೂ ಈ ಹಾಡು ಗೊತ್ತಿದ್ದರೆ ಮತ್ತು ಇದರಲ್ಲಿ ತಪ್ಪುಗಳಿದ್ದರೆ ದಯವಿಟ್ಟು ಸರಿಪಡಿಸಿ ಮತ್ತು ನನಗೆ ತಿಳಿಸಿ.. ಹಾಗೆಯೇ ಎಲ್ಲಿಯಾದರೂ ಅರ್ಥವಾಗದೇ  ಇದ್ದರೆ ತಿಳಿಸಿ :-)

ಇಂತಹ ಅದೆಷ್ಟೋ ಹಾಡುಗಳಿವೆ... ನಿಮಗಿಷ್ಟವಾದರೆ, ನೆನಪಾದಾಗಲೆಲ್ಲ ಹಾಕುವೆ..

Tuesday, December 8, 2009

ಪಿಂಡದಾನ !!

  " ಥೂ ಎಲ್ಲಾ ನಾಟಕ... ನಮ್ಮನ್ನ ಪರೀಕ್ಷೆನಲ್ಲಿ ಫೈಲ್ ಮಾಡ್ಬೇಕು ಅಂತ ಇವ್ರು ಹಿಂಗಾಡ್ತಾರೆ... ಅವರ ಮೋಡಿಗೆ ಮರುಳಾಗಿ ನಾವು ಅವ್ರಿಗೆ ಲೈನ್ ಹೊಡ್ದು ಅವ್ರ ಬಗ್ಗೆ ಆಲೋಚನೆ ಮಾಡ್ತಾ ಇರ್ತೀವಿ... ಅವರೋ ಆರಾಮಾಗಿ ಓದ್ಕೊಂಡು ನಮಗೆ ಟೋಪಿ ಹಾಕ್ತಾರೆ.." ಸದಾನಂದ ಧಿಮಿಗುಡುತ್ತಲೇ ಇದ್ದ.. "ಛೆ ಹೀಗೆಲ್ಲ ಮಾಡಲ್ಲ ಯಾರೂ.. ಅದು ನಿನ್ನ ಆಲೋಚನೆ ಅಷ್ಟೇ.." ನಾನು ಆತನನ್ನು ಸಮಾಧಾನ ಗೊಳಿಸಲು ಯತ್ನಿಸಿದೆ.. "ಹೇ ನಿನ್ಗದೆಲ್ಲ ಗೊತ್ತಾಗಲ್ಲ ಗೋರೆ.." ಸದಾನಂದ ತಿರುಗಿ ಬಿದ್ದ..."ಹೌದು ಈ ಹುಡ್ಗೀರೆ ಹೀಗೆ ಎಲ್ಲಾ ಮೋಸ" ಹಾಗಂತ ಮದ್ಧ್ಯೆ ಎಲ್ಲಿಂದಲೋ ಮನೀಶ್ ನುಗ್ಗಿ ಬಂದ.. ಆತನೇನೋ ನಮ್ಮ ಸ್ನೇಹಿತರ ಗುಂಪಿನವನಲ್ಲ.. ಆತನಿಗೂ ಸದಾನಂದನೀಗೂ ಅಷ್ಟಕ್ಕಷ್ಟೇ.. ಆದರೆ ಆವತ್ತು ಅವರಿಬ್ಬರ ಆಲೋಚನೆಗಳು ಒಂದೇ ಆಗಿದ್ದವು.. ಒಬ್ಬರಿಗೊಬ್ಬರು ಬೆಂಬಲಿಸುತ್ತಿದರು... ಇಷ್ಟಕ್ಕೂ ಆವತ್ತು ಸದಾನಂದ  ಸಿಟ್ಟು ಮಾಡಿಕೊಂಡಿದ್ದುದು ಟೀನಾ ಮೇಲೆ..
ಅದು ನಮ್ಮ ಕಾಲೇಜ್ ದಿನಗಳು.. ಈ ಸದಾನಂದ ನಮ್ಮ ಎಂಟು ಜನರ ಸ್ನೇಹಿತರ  ಗುಂಪಿನಲ್ಲಿ ಒಬ್ಬ.. ಆತ ನಮ್ಮದೇ ಕ್ಲಾಸ್ ನ ಟೀನಾ ಅನ್ನೋ ಸುಂದರ ಹುಡುಗಿಗೆ ಲೈನ್ ಹೊಡಿತಾ ಇದ್ದಿದ್ದು ತಿಳಿದಿದ್ದ ವಿಷಯವೇ.. ಆದರೆ ಆಕೆಯನ್ನು ಮಾತಾಡಿಸುವಷ್ಟು  ಧೈರ್ಯವಂತನಲ್ಲ.. ಆತನಿಗೆ ಸ್ಪರ್ಧೆಗೆ ಇಳಿದವನು ನಮ್ಮ ಕ್ಲಾಸ್ನ ಇನ್ನೊಂದು ಗುಂಪಿನ ಲೀಡರ್ ಮನೀಶ್... ಆತನೂ ಟೀನಾ ಹಿಂದೆ ಸುತ್ತೊದನ್ನ ನೋಡಿ ಸದಾನಂದ ಆತನಿಗೆ ಎಚ್ಚರಿಕೆಯನ್ನೂ ಕೊಟ್ಟಿದ್ದ... ದಿನ ಕಳೆದಂತೆ ಟೀನಾ , ಸದಾನಂದನನ್ನು  ನೋಡಿ ನಗೋದಕ್ಕೂ ," ಹಲೋ , ಹಾಯ್" ಅಂತ ಹೇಳೋದನ್ನೂ ನೋಡಿ ನಾವೂ ಅಚ್ಚರಿಗೊಂಡಿದ್ದೆವು..
ಆವತ್ತು ಸದಾನಂದನ ಹುಟ್ಟು ಹಬ್ಬ.. ಅಂತೂ ಇಂತೂ ಧೈರ್ಯಮಾಡಿ ಆತ ಪಾರ್ಟಿಗೆ ಟೀನಳನ್ನು ಕರೆದದ್ದೂ ಆಯ್ತು..
ಅಲ್ಲೇ ಪಕ್ಕದಲ್ಲೇ ಇದ್ದ ಅಮೃತ್ ಕ್ರೀಂ ಪಾರ್ಲರ್ ಅನ್ನೋ ಇದ್ದ ಒಂದೇ ಒಂದು ಅಡ್ಡಕ್ಕೆ ನಾವು ೫ ಗಂಟೆಗೆ ನುಗ್ಗಿದೆವು.. ಟೀನಾ ೫.೩೦ ಬರುತ್ತೇನೆ ಅಂದಿದ್ದಳಂತೆ.. ನಾವು ಸದಾನಂದನ ಕಾಲೆಳೆಯುತ್ತಾ  ತಮಾಷೆ ಮಾಡುತ್ತಾ ಸಾಗಿದ್ದರೆ, ಸದಾನಂದ ಟೀನಾ ಬರ್ತಾಳೆ ಅಂತ ಕಾಯ್ತಾನೆ ಇದ್ದ...  ೫.೩೦, ಆಯ್ತು..೫.೪೫.. ೬.೦೦ ಉಹುಂ ಆಕೆಯ ಸುದ್ದಿಯೇ ಇಲ್ಲ.. ಆಕೆಗಾಗಿ ಕಾದು ಕಾದು ಬೇಸತ್ತಿದ್ದ ಸದದಾನಂದನನ್ನು ನಾನೇ ಮೆಲ್ಲ ಸಮಾಧಾನ ಪಡಿಸಿ ೮  ಗಂಟೆಯಷ್ಟು ಹೊತ್ತಿಗೆ ಎಬ್ಬಿಸಿಕೊಂಡು ಹೋದೆ...
ಮರುದಿನ ಕಾಲೇಜಿಗೆ ಬಂದಾಗ ನಮ್ಮ ಅರ್ಧವಾರ್ಷಿಕ ಪರೀಕ್ಷೆಯ ಅಂಕಗಳು ಹೊರ ಬಿದ್ದಿದ್ದವು..ನಾನು ಮತ್ತೆ ಸದಾನಂದ ಯಾವಾಗಲೂ ಟಾಪ್ ೫ ರಲ್ಲಿ ಗ್ಯಾರೆಂಟಿ... ಆ ಪರೀಕ್ಷೆಯಲ್ಲಿ ನಾನು ಮೂರನೇ ಸ್ತಾನದಲ್ಲಿದ್ದರೆ ಸದಾನಂದ ೧೧ನೆ ಸ್ತಾನಕ್ಕೆ ಜಾರಿದ್ದ.. ಟೀನಾ ಎಂಟನೆ ಸ್ತಾನದಲ್ಲಿದ್ದಳು.. ಹಿಂದಿನ ದಿನ ಟೀನಾ ಪಾರ್ಟಿಗೆ ಬರದೆ ಇರೋ ಸಿಟ್ಟು ಮತ್ತು ಪರೀಕ್ಷೆಯಲ್ಲಿ ಹಿಂದಕ್ಕೆ ಬಿದ್ದ ಸಿಟ್ಟು ಎರಡೂ ಆತನನ್ನು ಮುತ್ತಿಕೊಂಡಿದ್ದವು... ಆಗಲೇ ಆತ " ಥೂ ಎಲ್ಲಾ ನಾಟಕ... " ಅನ್ನೋ ಡೈಲಾಗ್ ಹೊಡೆಯಲು ಶುರುಮಾಡಿದ್ದು...

ಎಷ್ಟೇ ಪ್ರಯತ್ನಿಸಿದರೂ ಆತನನ್ನು ಸಮಾಧಾನ ಪಡಿಸಲು ಸಾದ್ಧ್ಯವಾಗಲಿಲ್ಲ.. ಬದಲಿಗೆ ಮನೀಶ್ ಬೇರೆ ಸೇರಿಕೊಂಡಿದ್ದ.. ಟೀನಾಳ ಬಗ್ಗೆ ಕನುಸು ಕಾಣುತ್ತ ಓದದೆ ೪ ಪರೀಕ್ಷೆಯಲ್ಲಿ ಫೈಲ್ ಆದ ತನ್ನ ದುರ್ಗತಿ ವಿವರಿಸಿಕೊಂಡ... ನಾನು ನಗುತ್ತಲೇ ಇದ್ದೆ...
ಸರಿ ಇನ್ನೇನ್ ಮಾಡೋದು... "ಇನ್ಯಾವತ್ತು ನಾನು ಹುಡ್ಗೀರಿಗೆ ಲೈನ್ ಹೊಡೆಯೋದಿಲ್ಲ"  ಸದಾನಂದ  ಪ್ರಮಾಣ ಮಾಡಿದ.. "ನಾನೂ ಅಷ್ಟೇ " ದನಿಗೂಡಿಸಿದ್ದು ಮನೀಶ್.. "ಅಲ್ಲಯ್ಯ ಮತ್ತೆ ಟೀನಾ?" ಮಧ್ಯದಲ್ಲಿ ಹುಳಿ ಹಿಂಡಿದ್ದು  ಮಾಧವ ಅನ್ನೋ ಉಬ್ಬು ಹಲ್ಲಿನ 'ಗರಗಸ'...
"ಆಕೆಗೆ ನಾನು ಪಿಂಡ ಬಿಡ್ತಾ ಇದ್ದೀನಿ " ಸದಾನಂದ ಅರಚಿಕೊಂಡ.. "ಹೌದು ಅದೇ ಸರಿ.. ಆಕೆಗೆ ಪಿಂಡ ದಾನ ಮಾಡಲೇ ಬೇಕು.. ಆಕೆ ಸತ್ತು ಹೋದಳು ಅಂತ ತಿಳ್ಕೊತಿನಿ" ಮನೀಶ್ ಕೂಡ ಯಾಕೋ ಹೆಜ್ಜೆ ತಪ್ಪುತ್ತಿದ್ದ... ಸದಾನಂದ ನನ್ನನ್ನು ಕರೆದುಕೊಂಡು ಕಾಲೇಜ್ ಹಿಂಭಾಗದಲ್ಲಿದ್ದ ತೋಟದತ್ತ ಸಾಗಿದ...ಉಳಿದವರೂ ನಮ್ಮನ್ನು ಹಿಂಬಾಲಿಸಿದರು... ನಮ್ಮ ಗುಂಪಿನ ಹರಿಪ್ರಸಾದ್ ಶಾಸ್ತ್ರಿ ಆವತ್ತು ಪುರೋಹಿತ.. ಆತ ತಿಥಿ ಕರ್ಮದ ಮಂತ್ರಗಳನ್ನು ಹೇಳೋದನ್ನೂ , ಸದಾನಂದ ಅಲ್ಲಿಯೇ ಇದ್ದ ನಲ್ಲಿಯಿಂದ ನೀರು ಬಿಡೋದನ್ನು ನೋಡಿ ನಾವು ಹೊಟ್ಟೆ ಹುಣ್ಣಾಗುವಷ್ಟು ನಕ್ಕೆವು... ಊಟಕ್ಕೆಂದು ತಂದಿದ್ದ ಅನ್ನ ಪಿಂಡವಾಗಿತ್ತು .. ಪಿಂಡ ದಾನಕ್ಕೆ ಸದಾನಂದ ಜೊತೆ ಸೇರಿಕೊಂಡಿದ್ದು ಮನೀಶ್.. ಸರಿ ಇಬ್ಬರೂ ಹರಿಪ್ರಸಾದ್ ಶಾಸ್ತ್ರಿಗಳ ಪೌರೋಹಿತ್ಯದಲ್ಲಿ ಪಿಂಡ ದಾನ ಮಾಡಿಬಿಟ್ಟಿದ್ದರು.. !!!
"ಇವತ್ತಿನಿಂದ ಟೀನಳ ಕಡೆ ತಿರುಗಿಯೂ ನೋಡಲಾರೆವು " ಹಾಗಂತ ಇಬ್ಬರೂ  ಶಪಥ ಗೈದರು...
ಆವತ್ತಿನಿಂದ ಸದಾನಂದ ಬದಲಾಗಿಬಿಟ್ಟಿದ್ದ.. ಟೀನಳ ಕಡೆ ತಿರುಗಿಯೂ ನೋಡುತ್ತಿರಲಿಲ್ಲ... ಬಹುಶ ಹುಟ್ಟುಹಬ್ಬದ ಪಾರ್ಟಿಗೆ ಬಂದಿಲ್ಲದ್ದಕ್ಕೆ ಹಿಂಗಾಡುತ್ತಿದ್ದಾನೆ ಅಂದು ಕೊಂಡಿದ್ದ ಟೀನಾ ಕಳಿಸಿದ 'ಸಾರೀ' ಗ್ರೀಟಿಂಗ್ಸ್ ಕಾರ್ಡು ಸಹ ಈ ಸದಾನಂದ ಹರಿದು ಬಿಸಾಕಿದ್ದ..
"ಎಲ್ಲಾ ನಾಟಕ ಕಣ್ರೋ.. ಅವ್ರಿಗೆ ನಿಜವಾಗಿ ನಿಮ್ ಮೇಲೆ ಪ್ರೀತಿ ಇರಲ್ಲ.. ಅವ್ರಿಗೆ ನಾವು ಇಷ್ಟೆಲ್ಲಾ ಮಜಾಮಾಡಿ ಪರೀಕ್ಷೆಯಲ್ಲಿ ಒಳ್ಳೆ ಅಂಕ ಕೂಡ ತೆಗೆಯೋದನ್ನ ನೋಡಿ ಹೊಟ್ಟೆ ಕಿಚ್ಚು..  ಕಂಠ ಪಾಠ ಮಾಡಿ ಮಾಡಿ ಸಾಧ್ಯ ಆಗದೆ ಇದ್ದಾಗ ನಮ್ ಹಿಂದೆ ಬರ್ತಾರೆ.. ಅವ್ರ ಮೋಡಿಗೆ ಒಳಗಾಗಿ ಬಿಟ್ವಿ ಅಂದ್ರೆ ಅಷ್ಟೇ.. ಆಮೇಲೆ ಪರೀಕ್ಷೆ , ಭವಿಷ್ಯ ಎಲ್ಲಾ ಮರ್ತು ಬಿಡಿ.. ..." ಸದಾನಂದ ನಮ್ಮ ಗುಂಪಿಗೆಲ್ಲ ಉಪೇಂದ್ರ ಸ್ಟೈಲ್ ನಲ್ಲಿ ಬುದ್ಧಿವಾದ ಹೇಳಿದ್ದ..
ಇದಾಗಿ ೩-೪ ತಿಂಗಳು ಕಳೆದವು...ಒಂದು ದಿನ ನಾವು ಕಾಲೇಜ್ ಮುಗಿಸಿ ನಮ್ಮ ರೂಂ ನತ್ತ ಹೆಜ್ಜೆ ಹಾಕುತ್ತಿದೆವು.. ಮೈ ಹುಷಾರಿಲ್ಲದ ಕಾರಣ ಸದಾನಂದ ಆವತ್ತು ಕಾಲೇಜ್ ಗೆ ಬರದೆ ರೂಮ್ನಲ್ಲೇ  ಮಲಗಿಕೊಂಡಿದ್ದ.. ನಾವು ಮುಂದೆ ಸಾಗುತ್ತಿದ್ದಂತೆ ದೂರದಲ್ಲಿ ಅಮೃತ್ ಕ್ರೀಂ ಪಾರ್ಲರ್ ನಲ್ಲಿ ಯಾರೋ ಹುಡುಗ-ಹುಡುಗಿ ಕುಳಿತಿದ್ದು ಮೊದಲಿಗೆ ನೋಡಿದ್ದೇ ನಮ್ಮ 'ಗರಗಸ'.. "ಅದು ಟೀನಾ ಅಲ್ವ " ತನ್ನ ಅನುಮಾನ ವ್ಯಕ್ತ ಪಡಿಸಿದ.. ಸೂಕ್ಷ್ಮವಾಗಿ ಗಮನಿಸಿದೆವು.. ಹೌದು ಅದು ಟೀನಾ.. ಆದರೆ ಆ ಹುಡುಗ ಯಾರು? ಸರಿಯಾಗಿ ಕಾಣಿಸುತ್ತಿರಲಿಲ್ಲ.. ಸರಿ, ನೋಡೇ ಬಿಡೋಣ ಅಂತ ಆಕಡೆ ಹೆಜ್ಜೆ ಹಾಕಿದೆವು.. ಮೆಲ್ಲನೆ ಕಳ್ಳ ರಂತೆ ಕದ್ದು ನೋಡುತ್ತಿದ್ದ ನಾವೆಲ್ಲಾ ಬೆಚ್ಚಿಬಿದ್ದೆವು.. ಆಕೆಯ ಜೊತೆಗಿದ್ದದ್ದು  ಮನೀಶ್!!!! ಅವರಿಬ್ಬರೂ  ಒಂದೇ ಬೌಲ್ ನಿಂದ ಐಸ್ ಕ್ರೀಂ ತಿನ್ನುತ್ತಿದ್ದರು.. ಅರೆ ಆವತ್ತು ಟೀನಗೆ ಪಿಂಡ ಬಿಟ್ಟಿದ್ದ ಮನೀಶ್!!! ಇನ್ಯಾವತ್ತು ಆಕೆಯನ್ನು ತಿರುಗೀನೂ ನೋಡಲ್ಲ ಅಂತ ಸದಾನಂದನ  ಜೊತೆಗೂಡಿ ಪ್ರತಿಜ್ಞೆ ಮಾಡಿದ್ದ ಮನೀಶ್!!!..ನಾವು ಒಂದು ಕ್ಷಣ ಒಬ್ಬರ ಮುಖ ಒಬ್ಬರು ನೋಡತೊಡಗಿದೆವು... ಅವರು ನಮ್ಮನ್ನು ನೋಡೋದು ಬೇಡ ಅಂತ  ನಾವು ಅವರಿಗೆ ತಿಳಿಯದಂತೆ ಅಲ್ಲಿಂದ ಪರಾರಿಯಾದೆವು...'ಗರಗಸ' ಮಾತ್ರ ರೂಂ ತಲುಪುವ ತನಕವೂ  ಬಿದ್ದು ಬಿದ್ದು ನಗುತ್ತಲೇ ಇದ್ದ..

 ಈ ವಿಷಯ ತಿಳಿದ ಸದಾನಂದ ಮರು ದಿವಸ, ಮೈ ಸುಡುವ ಜ್ವರದಲ್ಲೂ  ಅದೇ ಕಾಲೇಜ್ ತೋಟದಲ್ಲಿ, ಅದೇ ಹರಿಪ್ರಸಾದ್ ಶಾಸ್ತ್ರಿಗಳ ಪೌರೋಹಿತ್ಯದಲ್ಲಿ ಮನೀಶ್ ಗೆ ಪಿಂಡ ದಾನ ಮಾಡಿದ್ದ!!!!

Monday, November 30, 2009

ಶಾಪ...

"ಲೇ ಬೊ.. ಮಗನೆ.... ಎಷ್ಟು ಸಾರಿ ಹೇಳಿದ್ದೀನಿ ನಿಂಗೆ ದಾರಿಯಲ್ಲಿ ಮೀನು ಸ್ವಚ್ಚ ಮಾಡುತ್ತಾ ಕೂರಬೇಡ ಅಂತ... ಗೊತ್ತಾಗೊದಿಲ್ವೇನಯ್ಯಾ ನಿಂಗೆ.. ಸೂ.. ಮಗನೆ... " ಭಟ್ಟರು ಒಂದೇ ಸಮನೆ ಕಿರುಚಾಡುತ್ತಿದ್ದರೆ ಕೋಪ ಉಕ್ಕಿ ಉರಿಯಿತು ... ಮನೆ ಅಂಗಳದಲ್ಲಿ ಮೀನು ಸ್ವಚ್ಛ ಮಾಡುತ್ತಾ ಕುಳಿತಿದ್ದ ಚನಿಯ ಧಡಾರನೆ ಎದ್ದು ನಿಂತ.."ಏನು ಭಟ್ರೇ , ನಾವು ಮೀನು ದಾರಿಯಲ್ಲದ್ರೂ ಹಾಕ್ತಿವಿ, ಇಲ್ಲ ದಂಡೆಯಲ್ಲದ್ರೂ ಹಾಕ್ತೀವಿ... ಇದು ನನ್ನ ಮನೆ ಅಂಗಳ , ನೀವ್ಯಾರ್ರಿ ಕೇಳೋಕೆ... ನಿಮಗೆ ಇಷ್ಟ ಇದ್ರೆ ಇದನ್ನು ದಾಟ್ಕೊಂಡು ಹೋಗ್ರಿ... ಇಲ್ಲಾಂದ್ರೆ ಇದ್ದೆ ಇದೆಯಲ್ಲ ಊರಿನ ದಾರಿ ಅದ್ರಲ್ಲಿ ಹೋಗ್ರಿ.. ನೀವು ಏನ್ ಮಾಡಿದ್ರು ಸರಿನಾ?? ನಿಮ್ಮ ಮನೆ ದಾರಿಯಲ್ಲಿ ಇಡೀ ದರ್ಭೆ ಬೆಳೆಸಿ ಇಟ್ಟಿದ್ದಿರಲ್ಲ... ಯಾರದು , ನಿಮ್ಮಪ್ಪನ ಜಾಗಾನ ಅದು.. ಸುಮ್ನೆ ಹೋಗ್ರಿ.." ಚನಿಯಪ್ಪನೂ ಪ್ರತ್ಯುತ್ತರ ಕೊಟ್ಟಿದ್ದ.. ಹತ್ತಿರದ ದಾರಿಯಾದ್ದರಿಂದ ಚನಿಯಪ್ಪನ ಮನೆ ಅಂಗಳದಿಂದ ದಾಟಿ ಹೋಗುತ್ತಿದ್ದ ಭಟ್ಟರು ಸಿಟ್ಟಿನಿಂದ ಊರಿನ ದಾರಿಯಲ್ಲಿ ೨ ಕಿಲೋಮೀಟರು ಹೆಚ್ಚು ನಡೆದು ಮನೆ ಸೇರಿದ್ದರು...
ಇಷ್ಟಕ್ಕೂ ಚನಿಯಪ್ಪ ಆವತ್ತು ಮೀನು ಹಿಡಿದು ತಂದಿದ್ದು ತಾನು ಮೀನು ಸಾಕುತ್ತಿದ್ದ ಊರಿನ ಕೆರೆಯಿಂದ... ಅದು ಭಟ್ಟರ ಮನೆ ಪಕ್ಕದಲ್ಲೇ ಇದೆ.. ೩೬೫ ದಿನವೂ ನೀರಿನಿಂದ ತುಂಬಿ ತುಳುಕುವ ಆ ಭಾರಿ ಕೆರೆ ಬೇಸಿಗೆಯಲ್ಲಿ ಅಲ್ಲಿನ ಹೆಚ್ಚಿನ ಜನರಿಗೆ ನೀರಿನ ಮೂಲವಾಗಿತ್ತು... ಅಲ್ಲಿ ಚನಿಯ ಮೀನು ಹಿಡಿಯುತ್ತಿದ್ದ... ಹಿಡಿದ ಮೀನನ್ನು ಮಾರಿ, ಕೆಲವೊಮ್ಮೆ ಕೂಲಿಗೆ ಹೋಗಿ ಜೀವನ ಸಾಗಿಸುತ್ತಿದ್ದ ಚನಿಯ...ಊರಿನ ಕೆರೆಯಾದ್ದರಿಂದ ಯಾರು ಬೇಕಾದರೂ ನೀರು ಉಪಯೋಗಿಸಬಹುದಿತ್ತು... ವರ್ಷಕ್ಕೊಮ್ಮೆ ಭಟ್ಟರು ಆ ಕೆರೆಯನ್ನು ಸ್ವಚ್ಚ ಗೊಳಿಸಿ ಊರಿನ ಜನರ ಉಪಯೋಗಕ್ಕೆಂದು ಅಲ್ಲಿಂದ ನೀರು ಸರಬರಾಜಿಗೂ ವ್ಯವಸ್ಥೆ ಮಾಡಿದ್ದರು.. ಅಲ್ಲಿ ಮೀನು ಸಾಕುವ ಕೆಲಸ ಮಾಡುತ್ತಿದ್ದುದು ಚನಿಯ... ಮೀನುಗಳಿಂದಾಗಿ ನೀರೂ ಸ್ವಚ್ಚ ವಾಗಿರುತ್ತದೆ ಎಂದು ತಿಳಿದಿದ್ದ ಭಟ್ಟರೂ ಅದಕ್ಕೆ ಸಮ್ಮತಿ ಸೂಚಿಸಿದ್ದರು...

ಮನೆಗೆ ಬಂದಿದ್ದ ಮಗಳಿಗೆ ಭರ್ಜರಿ ಮೀನಿನ ಭೋಜನ ಉಣಬಡಿಸಿದ್ದ ಚನಿಯ ಆಕೆಯನ್ನು ವಾಪಸು ಊರಿಗೆ ಕಳಿಸಿ ಆಕೆಯ ಮನೆಯಲ್ಲೇ ಎರಡು ದಿನ ಇದ್ದು ವಾಪಸು ಬಂದಿದ್ದ... ವಾಪಸು ಮನೆಗೆ ಬಂದ ಚನಿಯನಿಗೆ ಅದ್ಯಾಕೋ ಮೂರು ದಿನಗಳ ಹಿಂದೆ ಭಟ್ಟರ ಜೊತೆ ಆಡಿದ್ದ ಜಗಳ ನೆನಪಾಯಿತು.. ಅದ್ಯಾವುದೋ ಆಲೋಚನೆಯಲ್ಲಿ , ಸೋಲ್ಪವೇ ಸ್ವಲ್ಪ ಕುಡಿದಿದ್ದ ಮತ್ತಿನಲ್ಲಿ ತಾನು ಭಟ್ಟರಿಗೆ ಬೈದಿದ್ದು , ಭಟ್ಟರು ಸಿಟ್ಟಿನಿಂದ ಕುದಿಯುತ್ತಾ ಸಾಗಿದ್ದು.. ಎಲ್ಲವೂ ನೆನಪಾಗತೊಡಗಿತು... ತಾನು ಮಾಡಿದ್ದು ತಪ್ಪಲ್ಲವೇ.? ಭಟ್ಟರಿಗೆ ತಾನು ಬೈಯಬಹುದಿತ್ತೆ... ಅವರೇನಾದರೂ ಶಾಪ ಹಾಕಿಬಿಟ್ಟರೆ... ಅದ್ಯಾಕೋ ಚನಿಯ ಹೆದರಿಕೆಯಿಂದ ನಡುಗತೊಡಗಿದ... ಛೆ !! ಈ ಕಲಿಗಾಲದಲ್ಲಿ ಅದ್ಯಾವ ಬ್ರಾಹ್ಮಣ , ಅದ್ಯಾವ ಶಾಪ? ತನ್ನಷ್ಟಕ್ಕೆ ತಾನೆ ಸಮಾಧಾನ ಹೇಳಿಕೊಂಡು ಮೀನು ಹಿಡಿಯಲು ಕೆರೆಯತ್ತ ಸಾಗಿದ... ಒಂದು ಘಂಟೆ , ಎರಡು ಘಂಟೆ ಉಹುಂ..ಎಷ್ಟು ಹೊತ್ತಾದರೂ ಒಂದೇ ಒಂದು ಮೀನು ಗಾಳಕ್ಕೆ ಸಿಕ್ಕಿಬೀಳಲಿಲ್ಲ... ಊರಿಗೆ ಕುಡಿಯುವ ನೀರು ಒದಗಿಸುವ ಕೆರೆಯಾದ್ದರಿಂದ ಗಲೀಜು ಮಾಡುವಂತಿಲ್ಲ... ಒಂದರ್ಧ ಗಂಟೆಯೊಳಗೆ ಮೀನಿನ ಬುಟ್ಟಿ ತುಂಬಿಸಿ ಬಿಡುತ್ತಿದ್ದ ಚನಿಯನಿಗೆ ಇವತ್ತು ಗಂಟೆಗಟ್ಟಲೆ ಕಾದರೂ ಒಂದೇ ಒಂದು ಮೀನು ಸಿಗದೇ ಇದ್ದಿದ್ದು ಅಚ್ಚರಿ ಮೂಡಿಸಿತು.. ಅದೇನೇನೋ ಆಲೋಚನೆಗಳು ಬರತೊಡಗಿದವು...ಚನಿಯನಿಗೆ ಭಯ ಹೆಚ್ಚಾಗ ತೊಡಗಿತು.. ಇಲ್ಲ ಇದು ಭಟ್ಟರ ಶಾಪವೇ ಇರಬೇಕು.. ಆವತ್ತು ಸಿಟ್ಟಿನಿಂದ ಹೊರಟು ಹೋದ ಭಟ್ಟರ ಮುಖ ನೆನಪಾಯಿತು...ಇನ್ನು ನನಗೆ ಒಳ್ಳೆಯದಾಗದು... ಈಗಲೇ ಹೋಗಿ ಭಟ್ಟರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು... ಹಾಗಂತ ನಿರ್ಧರಿಸಿದವನೆ ನಡುಗುವ ಕಾಲುಗಳೊಂದಿಗೆ ಚನಿಯ , ಭಟ್ಟರ ಮನೆ ಕಡೆ ದೌಡಾಯಿಸತೊಡಗಿದ... ದೂರದಿಂದ ಇದನ್ನು ಗಮನಿಸುತ್ತಿದ್ದ ಭಟ್ಟರು , ನಿನ್ನೆ ತಾನೆ ಪಕ್ಕದ ಊರಿನಿಂದ ಹನೀಫ ನನ್ನು ಕರೆಸಿ ಕೆರೆಯಲ್ಲಿದ್ದ ಎಲ್ಲ ಮೀನುಗಳನ್ನು ಹಿಡಿಸಿದ್ದು ಯಾರಿಗೂ ಗೊತ್ತಾಗಲಿಲ್ಲವೆಂದು ಒಳಗೊಳಗೇ ಗಹಗಹಿಸಿ ನಗತೊಡಗಿದರು...!!!

Thursday, September 24, 2009

ನಾನು ಸುತ್ತಿಗೆಯಿಂದ ಬಡಿಯುತ್ತಲೇ ಇದ್ದೆ....(ನನ್ನ ಕಥೆ -ಭಾಗ ೨)

ಆಗ ನನಗೆ ನೆನಪಾದದ್ದೇ ಸುತ್ತಿಗೆ ವಿದ್ಯೆ... ಅಂದರೆ ಬೆಳ್ಳಿಯ ಕುಸುರಿ ಕೆಲಸ... ನನ್ನ ಚಡ್ಡಿ ದೋಸ್ತು ಸದಾನಂದನ ಮನೆಯಲ್ಲಿ ಈ ಕೆಲಸ ನಡೆಯುತ್ತಿತ್ತು... ಆತನ ತಂದೆ ಬೆಳ್ಳಿಯ ಕೆಲಸದಲ್ಲಿ ನಿಸ್ಸೀಮರು.. ಬೆಳ್ಳಿಯ ಮೂರ್ತಿಗಳು, ಕಲಶಗಳು, ದೇವಸ್ಥಾನದ ಬಾಗಿಲು, ಪಲ್ಲಕ್ಕಿ ಇಂಥ ಕೆಲಸಗಳಲ್ಲಿ ಆಗ ಅವರು ಭಾರಿ ಹೆಸರುವಾಸಿ... ರಜಾ ದಿನಗಳಲ್ಲಿ ನಾನು ಮತ್ತು ಸದಾನಂದನೂ ಸುತ್ತಿಗೆ ಹಿಡಿದು ಕೂರುತ್ತಿದ್ದೆವು... ಅದೆಷ್ಟೋ ಕೆಲಸ ಮಾಡಿ ನಾವೂ ಅದರಲ್ಲಿ ಅಲ್ಪ ಸ್ವಲ್ಪ ನಿಸ್ಸೀಮರಾಗಿ ಬಿಟ್ಟಿದ್ದೆವು.. ಒಂದು ಸಾರಿ ಆ ಚಿಕ್ಕ ಸುತ್ತಿಗೆ ಏಟು ತಪ್ಪಿ ನನ್ನ ಕೈಗೆ ಬಿದ್ದು ಗಾಯ ಮಾಡಿಕೊಂಡಿದ್ದೆ , ಆವತ್ತಿನಿಂದ ನಾವು ಬೆಳ್ಳಿ ಕೆಲಸ ಅನ್ನೋ ಬದಲು ಸುತ್ತಿಗೆ ಕೆಲಸ ಎಂದು ಕರೆಯುತ್ತಿದ್ದೆವು...ಈಗ ನನಗೆ ನೆನಪಾದದ್ದೇ ಆ ವಿದ್ಯೆ... ಸರಿ ಮುಂದೆ ಆಲೋಚಿಸುವುದೆನಿದೆ... ಒಬ್ಬಂಟಿಯಾಗಿ ಕೆಲಸ ಪ್ರಾರಂಭಿಸಿಯೇ ಬಿಟ್ಟೆ ... ಇನ್ನೂ ವಿದ್ಯೆ ಮರೆತಿಲ್ಲ ಅನ್ನೋದಕ್ಕೆ ಸಾಕ್ಷಿಯಾಗಿ ತಿಂಗಳ ಒಳಗಾಗಿ ಎರಡು ಅದ್ಭುತ ಬೆಳ್ಳಿಯ ಮೂರ್ತಿಗಳು ತಯಾರಾಗಿ ಬಿಟ್ಟಿದ್ದವು... ಅವನ್ನು ಮಾರುವದೇನೂ ಕಷ್ಟವಾಗಲಿಲ್ಲ... ನೋಡ ನೋಡುತ್ತಲೇ ಈ ಕೆಲಸ ಅದ್ಯಾವ ಪರಿ ಬೇಡಿಕೆ ತಂದು ಕೊಟ್ಟಿತೆಂದರೆ ೨-೩ ತಿಂಗಳೊಳಗಾಗಿ ೧೦ ಜನ ನನ್ನಲ್ಲಿ ಕೆಲಸ ಮಾಡುವಂತಾಯಿತು.. ಇಷ್ಟೊಂದು ವರ್ಷ ಸರ್ಕಾರಿ ಕೆಲಸ ಮಾಡಿದ್ದು ಯಾಕೆ ಎಂದು ನನ್ನನ್ನು ನಾನು ಕೇಳುವಷ್ಟು ಪ್ರಸಿದ್ಧಿ ಯಾಗಿಬಿಟ್ಟೆ... ದಿನಗಳು ಕಳೆಯುತ್ತಿದ್ದವು... ನನ್ನ ಈ ಕೆಲಸದಲ್ಲಿ ವರ್ಷ ಕಳೆದಿದ್ದೆ ನನಗೆ ಗೊತ್ತಾಗಲಿಲ್ಲ... ಇನ್ನೂ ೬೦ ವರ್ಷ ಬದುಕಬೇಕು ಅಂತ ನನಗೆ ಜೀವನದಲ್ಲಿ ಮೊದಲಬಾರಿ ಅನ್ನಿಸತೊಡಗಿತ್ತು...
ಆದರೆ ಈ ಒಂದು ವರ್ಷದ ಅವಧಿಯಲ್ಲಿ ಒಂದೇ ಒಂದು ಸಾರಿಯೂ ಮಗಳಾಗಲಿ ಅಥವಾ ಮಗನಾಗಲಿ ಫೋನ್ ಮಾಡಲಿಲ್ಲ.. ಬರೆದ ಈ -ಮೇಲ್ ಬಹುಶ ಕಂಪ್ಯೂಟರ್ ಕಸದ ಬುಟ್ಟಿಗೆ ಸೇರಿದ್ದವೋ ಏನೋ.. ಆದರೆ ನಾನು ಮಾತ್ರ ಒಂದು ಅಥವಾ ಎರಡು ತಿಂಗಳಿಗೊಮ್ಮೆಯಾದರೂ ಫೋನಾಯಿಸುತ್ತಿದ್ದೆ.. ಆವತ್ತೊಂದಿನ "ಒಂದೇ ಒಂದು ಸಾರಿ ಮಗ ಮತ್ತು ಮಗಳಿಗೆ ಫೋನ್ ಮಾಡೋಣ.. ಬನ್ನಿ ಅಂದ್ರೆ ಹೋಗೋಣ... ಏನು ಅಂತ ಗೊತ್ತಾಗುತ್ತಲ್ಲ.. ಫೋನ್ ಮಾಡೋಣ.. ಅವ್ರನ್ನ ಇಲ್ಲಿಗೆ ಬರೋಕೆ ಹೇಳೋಣ" ಹಾಗಂತ ಹೆಂಡತಿ ಹೇಳಿದ್ದು ಸರಿಯೆನಿಸಿತು... ಆಕೆಗೂ ಬಹುಶ ಮಕ್ಕಳನ್ನು ನೋಡಬೇಕು ಅಂತ ಅನ್ನಿಸಿರಬೇಕು.. ಎಷ್ಟಾದರೂ ತಾಯಿ ಹೃದಯವಲ್ಲವೇ...ಹಾಗಂತ ಮಗನಿಗೆ ಫೋನ್ ಹೊಡೆದದ್ದು ಆಯಿತು.. ಎಲ್ಲ ಕ್ಷೇಮ ಸಮಾಚಾರದ ನಂತರ ಮೆಲ್ಲನೆ ನಾನು ವಿಷಯಕ್ಕೆ ಬಂದೆ.. "ಒಂದು ಸ್ವಲ್ಪ ದಿನ ಅಲ್ಲಿಗೆ ಬರ್ತೀವಿ.. ವಯಸ್ಸೂ ಆಗ್ತಿದೆ.. ಒಮ್ಮೆ ಅಮ್ಮನಿಗೂ ಅಮೇರಿಕಾ ನೋದಬೇಕೆನ್ನೋ ಆಸೆಯಿದೆ.. ಪೂರೈಸಲು ನನ್ನಿಂದಾಗಲಿಲ್ಲ .. ನಾವು ಬರ್ಲೆನಪ್ಪ" ಹಾಗಂತ ಕೇಳಿದೆ.. "ಒಹ್ ಖಂಡಿತಾ ಬನ್ನಿ.. ಒಂದು ತಿಂಗಳು ಇರಿ ಅಪ್ಪಾ.. ತುಂಬಾ ದಿನ ಇರೋದು ಕಷ್ಟ ಅಪ್ಪ.. ಇಲ್ಲಿ ತುಂಬಾ ದಿನ ಇರೋದು ಕಷ್ಟ.. ನಂಗೆ ತುಂಬಾ ಟೂರ್ ಗಳಿರುತ್ವೆ.. ಅವಳಿಗೂ ಅಷ್ಟೆ ತುಂಬಾ ಕೆಲಸ.. ಒಂದು ತಿಂಗಳ ಮಟ್ಟಿಗೆ ಬನ್ನಿ" ಹಾಗಂತ ಮಗನಿಂದ ಆಮಂತ್ರಣವೂ ಬಂತು... ಆವತ್ತು ಮಗಳಿಗೆ ಫೋನ್ ಹೊಡೆದೆ... "ಅಪ್ಪಾ.. ಈಗ ತಾನೆ ನಾನು ಫೋನ್ ಮಾಡುವವಳಿದ್ದೆ ಅಷ್ಟರಲ್ಲಿ ನೀವೇ ಫೋನ್ ಮಾಡಿದ್ರಿ... ನನಗೀಗ ೪ ತಿಂಗಳು.. ಅಮ್ಮನನ್ನ ಕಳಿಸಿ ಕೊಡಿ.." ಹಾಗಂತ ಹೇಳಿದಳು... ನಾನೂ ಬರ್ಲೆನಮ್ಮಾ ಅಂತ ಕೇಳೋ ಮನಸ್ಸಾಗದೆ ಫೋನ್ ಹೆಂಡತಿಯ ಕೈಗೆ ವರ್ಗಾಯಿಸಿ ನಾನು ಬೆಳ್ಳಿಯ ಕೆಲಸ ಮಾಡಿಟ್ಟಿದ್ದ ಶೆಡ್ಡಿನತ್ತ ಹೆಜ್ಜೆ ಹಾಕಿದೆ.. ಸ್ವಲ್ಪ ಹೊತ್ತಿಗೆ ಯಾರೋ ಒಳಗೆ ಬಂದಂತಾಯಿತು .. ತಲೆಯೆತ್ತಿ ನೋಡಿದರೆ ಹೆಂಡತಿ.. ಮುಖ ಕೆಂಪಗಾಗಿ ಕಣ್ಣೀರು ಈಗಲೋ ಆಗಲೋ ಧುಮುಕಲು ತಯಾರಾದನ್ತಿತ್ತು.. ಬಹುಶ ಇವತ್ತು ಆಕೆಯ ಸಹನೆಯ ಕಟ್ಟೆ ಒಡೆದಿರಬೇಕು.. ಮಗಳಿಗೆ ಅದ್ಯಾವ ಪರಿ ಮಂಗಳಾರ್ಚನೆ ಯಾಗಿರಬಹುದು ಅಂತ ನನಗೆ ಅರ್ಥವಾಗಿ ಹೋಗಿತ್ತು..
"ಎಷ್ಟಾದರೂ ಮಕ್ಕಳಲ್ವೇ .. ಅವರು ತಪ್ಪು ಮಾಡದೇ ನಾವು ಮಾಡೋಕಾಗುತ್ತಾ.... ಬರೋದಾದ್ರೆ ನಾವಿಬ್ರೂ ಬರ್ತೀವಿ , ಇಲ್ಲಾಂದ್ರೆ ಒಬ್ರೂ ಬರಲ್ಲ ಅಂತ ಹೇಳಿ ಬಿಟ್ಟಿದ್ದೀನಿ.. ಮುಂದಿನ ತಿಂಗಳು ಹೊಗೊಣಾವೆನ್ರೀ.. ಪಾಪ ಒಬ್ಳಿಗೆ ಅದೆಷ್ಟು ಕಷ್ಟವಾಗುತ್ತೋ ಏನೋ.." ಆಕೆ ಮಾತನಾಡುತ್ತಲೇ ಇದ್ದಳು...
ನನ್ನ ಎದುರಿಗೇ ಇದ್ದ ಬೆಳ್ಳಿಯ ತಗಡಿಗೆ , ತೂತು ಬಿದ್ದಿದ್ದನ್ನೂ ಗಮನಿಸದೆ ನಾನು ಆ ಸಣ್ಣ ಸುತ್ತಿಗೆಯಿಂದ ಅದಕ್ಕೆ ಅವ್ಯಾಹತವಾಗಿ ಬಡಿಯುತ್ತಲೇ ಇದ್ದೆ..ಟಕ್.....ಟಕ್.....ಟಕ್.....ಟಕ್...

(ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಆ ಮಗ ತನ್ನನ್ನು ಸಾಕಿ ಸಲಹಿದ ತಂದೆ ತಾಯಿಯನ್ನು , ಸುರಿಯುತ್ತಿದ್ದ ಜಡಿಮಳೆಯಲ್ಲಿ ಮನೆಯಿಂದ ಹೊರಗೆ ಹಾಕಿದ ಘಟನೆ ಇನ್ನೂ ನನ್ನ ಕಣ್ಣ ಮುಂದಿದೆ.. ಅದನ್ನು ಬರೆಯುವ ಮನಸ್ಸಾಗದೆ ಹೀಗೊಂದು ಕಥೆ ಹುಟ್ಟಿಕೊಂಡಿತು.......)

(ಈ ಬರಹ "ಕೆಂಡಸಂಪಿಗೆ" ಯಲ್ಲಿ ದಿನದ ಬ್ಲಾಗ್ ಎಂದು ೨೫ ಸೆಪ್ಟೆಂಬರ್ ನಂದು ಆಯ್ಕೆಯಾಗಿದೆ .. http://www.kendasampige.com/article.php?id=1774)

Tuesday, September 22, 2009

ನನ್ನ ಕಥೆ..

ಆಗ ನನಗೆ ೫೬ ವರ್ಷ.. ಇನ್ಯಾಕೆ ಬೇಕು ಈ ಸರ್ಕಾರಿ ಕೆಲಸ... ಹಾಗಂತ ಒಂದು ದಿನ ನಿರ್ಧಾರ ಮಾಡಿದವನೇ, ಮಾಡುತ್ತಿದ್ದ ಸರ್ಕಾರಿ ಕೆಲಸದ ಮುಖಕ್ಕೊಂದು ರಾಜೀನಾಮೆ ಬಿಸಾಕಿ ಮನೆಗೆ ಬಂದು ಆರಾಮಾಗಿ ಕೂತುಬಿಟ್ಟೆ... ಮೊನ್ನೆಯಷ್ಟೇ ಮದುವೆಯಾಗಿ ಅಮೆರಿಕಾದಲ್ಲಿ ಕೈತುಂಬಾ ಸಂಬಳ ಪಡೆಯುವ ಮಗ-ಸೊಸೆ.. ಈಗಾಗಲೇ ಜರ್ಮನಿ ಯಲ್ಲಿ ಠಿಕಾಣಿ ಹೂಡಿರೋ ಮಗಳು ಮತ್ತು ಅಳಿಯ.. ಒಬ್ಬ ಅಪ್ಪ ತನ್ನ ಮಕ್ಕಳಿಗೆ ಒದಿಸಿ, ಕಲಿಸಿ, ಪ್ರೀತಿಸಿ ಇದಕ್ಕಿಂತ ಹೆಚ್ಚಾಗಿ ಇನ್ನೇನು ಮಾಡಲು ಸಾದ್ಧ್ಯ... ಹಾಗಂತ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದೆ...
"ಮೊದಲಿಗೆ ಎಲ್ಲಿಗೆ ಹೋಗೋಣ? ಮಗಳ ಮನೆಗೋ? ಇಲ್ಲ ಮಗನ ಮನೆಗೋ?" ಹಾಗಂತ ಒಂದು ದಿನ ಹೆಂಡತಿಯಲ್ಲಿ ಕೇಳಿದೆ..." ಮಗಳ ಮನೆಗೆ ಹೋಗೋಣಾರಿ.. ಮಗ ಈಗ ತಾನೆ ಮದ್ವೇಯಾಗಿದ್ದಾನೆ.. ಸ್ವಲ್ಪ ದಿನ ಇಬ್ರೆ ಇರ್ಲಿ" ಹಾಗಂತ ಹೇಳಿದ್ದಳಾಕೆ .. ಸರಿ ಅಂದು ನಾನು ಆ ದಿನಕ್ಕಾಗಿ ಕಾಯುತ್ತಿದ್ದೆ... ಬಹುಶ ಜೀವನದ ಅತೀ ಸುಂದರ ಕ್ಷಣಗಳು ಅವೇ ಅನ್ನಿಸಿಬಿಟ್ಟಿತ್ತು...

ಆದರೆ ಹಿಂದಿನಂತೆ ಮಗಳು ಈಗೀಗ ವಾರಕ್ಕೊಂದು ಸಾರಿ ಇರಲಿ , ತಿಂಗಳಿಗೊಮ್ಮೆಯಾದರೂ ಫೋನ್ ಮಾಡುವುದು ನಿಂತೆ ಹೋಗಿತ್ತು.. ಹಾಗಂತ ನಾನು ಮಾತ್ರ ತಿಂಗಳಿಗೊಮ್ಮೆಯಾದರೂ ಫೋನ್ ಮಾಡಿ ವಿಚಾರಿಸುವ ನನ್ನ ಕ್ರಮವನ್ನು ಮಾತ್ರ ಬಿಟ್ಟಿರಲಿಲ್ಲ.. ಆದರೆ ಇದ್ಯಾಕೆ ಹೀಗಾಗಿ ಹೋಯ್ತು?? ಈಗೀಗ ನಮ್ಮ ಕರೆಗೆ ಮಗಳಿಂದ ಸರಿಯಾದ ಉತ್ತರವೇ ಬರುತ್ತಿರಲಿಲ್ಲ... ಬೇಕೋ ಬೇಡವೋ ಅನ್ನುವ ನಾಟಕೀಯ ಉತ್ತರಗಳು... ಇಲ್ಲಿ ತುಂಬಾ ಚಳಿ , ನಿಮ್ಮಿಂದ ಇಲ್ಲಿರೋಕೆ ಕಷ್ಟ ಆಗಬಹುದು ಅನ್ನೋವಂಥ ಮಾತು .. ಇಷ್ಟೊಂದು ಪ್ರೀತಿಯಿಂದ ಬೆಳೆಸಿದ ಮಗಳಿಗೆ ನಾವು ಬೇಡವಾದೆವೆ?? ೨ ವರ್ಷಕ್ಕೆ ಹಿಂದೆ ನಂ ಜೊತೆ ಬನ್ನಿ ಅಂತ ರಚ್ಚೆ ಹಿಡಿದಿದ್ದ ಮಗಳು ಇವಳೇನಾ? ನನಗ್ಯಾಕೋ ತಲೆ ಧಿಂ ಎನ್ನ ತೊಡಗಿತ್ತು...
ಹೀಗೆ ಸುಮಾರು ಒಂದು ವರ್ಷ ಕಳೆದಿದ್ದೆ ಗೊತ್ತಾಗಲಿಲ್ಲ... ಮನೆಯ ಖರ್ಚುಗಳು ನನ್ನ ಅರ್ಧ ಸಂಬಳ ಸಾಕಾಗೋದಿಲ್ಲ ಅನ್ನೋ ಸೂಚನೆ ಕೊಡತೊಡಗಿದ್ದವು.. ಮಗ ಅಥವಾ ಮಗಳನ್ನು ದುಡ್ಡು ಕೇಳಲು ಯಾಕೋ ಮನಸ್ಸಾಕ್ಷಿ ಒಪ್ಪಲಿಲ್ಲ... ಇನ್ನೊಂದೇ ಒಂದು ವರ್ಷ ಕಳೆದರೂ ಸಾಕು.. ನನ್ನ , ನನ್ನ ಹೆಂಡತಿಯ ಹೆಸರಲ್ಲಿರೋ ಇನ್ಸೂರೆನ್ಸ್ ದುಡ್ಡು ಸಿಕ್ಕಿ ಬಿಡುತ್ತದೆ.. ಆಮೇಲೆ ಏನೂ ತೊಂದರೆಯಿಲ್ಲ... ಆದರೆ ಈ ಒಂದು ವರ್ಷ ಏನ್ಮಾಡಲಿ... ಹಾಗಂತ ಆಲೋಚಿಸುತ್ತ ಮಲಗಿದ್ದೆ...ನನ್ನ ಅಲ್ಪ ಸ್ವಲ್ಪ ಉಳಿತಾಯದ ದುಡ್ಡು ಈಗಲೇ ತೆಗೆದರೂ ಅದು ಅಷ್ಟಕ್ಕಷೆ.. ಅದಕ್ಕಿಂತ ಮುಂದಿನ ವರ್ಷ ತೆಗೆದರೆನೆ ಲಾಭ... ಇಲ್ಲಾ , ಏನಾದರೂ ಮಾಡಲೇ ಬೇಕು... ಯಾವ ಕೆಲಸವಾದರೂ ಸರಿ.. ಒಂದಿಷ್ಟು ದುಡ್ಡು ಸ್ವಲ್ಪ ದಿನದ ಮಟ್ಟಿಗೆ ಸಂಪಾದನೆ ಮಾಡಲೇಬೇಕು.. ಹಾಗಂತ ನಿರ್ಧರಿಸಿದವನಿಗೆ ನೆನಪಾದದ್ದೇ ನನ್ನ ಹಳೆಯ ವಿದ್ಯೆ..ಕಾಲೇಜ್ ಗೆ ಹೋಗುತ್ತಿದ್ದ ದಿನಗಳಲ್ಲಿ ನಾನು ಮತ್ತು ನನ್ನ ಚಡ್ಡಿ ದೋಸ್ತು ಸದಾನಂದ ಆ ಕೆಲಸ ಮಾಡುತ್ತಿದ್ದೆವು.. ಆವಾಗ ಸುಮ್ನೆ ತಮಾಷೆಗೆಂದು ಮಾಡುತ್ತಿದ್ದ ಆ ವಿದ್ಯೆ ಇವತ್ತು ಉಪಯೋಗಕ್ಕೆ ಬರಬಹುದು ಅಂತ ನಾನು ಕನಸಿನಲ್ಲೂ ಎಣಿಸಿರಲಿಲ್ಲ...

-- ಮುಂದುವರೆಯುವುದು..

Friday, July 24, 2009

ಆವತ್ತು ಯಾಕೋ ಮತ್ತೆ ಮಳೆ ಯಾಗಲೇ ಇಲ್ಲ

ಎರಡು ವರ್ಷಕ್ಕೆ ಹಿಂದೆ ಶುಕ್ರವಾರ ಬಂತೆಂದರೆ ಮತ್ತೆ ಕೇಳಬೇಕೆ... ನಾವೊಂದು ಎಂಟುಜನರ ಗುಂಪು ಗುರು ಗಾರ್ಡನ್ ಅನ್ನೋ ಅಡ್ಡದಲ್ಲಿ ೭-೭.೩೦ ಯಹಾಗೆ ಪ್ರತ್ಯಕ್ಷ ರಾಗಿ ಬಿಡುತ್ತಿದ್ದೆವು... ನಾವು ಬರುತ್ತೇವೆ ಎಂದು ತಿಳಿದಿದ್ದ ಗಾರ್ಡೆನ್ ಮಂದಿಯೂ ನಮಗೆ ಟೇಬಲ್ ಕಾಯ್ದಿರಿಸುತ್ತಿದ್ದರು... ತಂಪಾದ ಬಿಯರು...... ಹುಹ್ ಆ ದಿನಗಳು !!!!!!!
ನಮ್ಮಲ್ಲೊಬ್ಬ ನಿದ್ದ ಸದಾನಂದ ಅಂತ... ನನ್ನ ಭಾರಿ ಚಡ್ಡಿ ದೋಸ್ತು... ನಾನೆಂದರೆ ಆತನಿಗೆ ಏನೋ ನಂಬಿಕೆ, ಪ್ರೀತಿ...
ಆತನಿಗೆ ಶನಿವಾರವೂ ಆಫೀಸ್... ಆದರೆ ನಮಗೆ ಮಾತ್ರ ರಜೆ ಇದ್ದ ಕಾರಣ ಆತನೂ ನಮ್ಮ ಜೊತೆ ಬಂದಾಗಲೆಲ್ಲಾ ಮರುದಿನ ಆಫೀಸ್ ಗೆ ಚಕ್ಕರ್....ಕಾರಣ ಹಿಂದಿನ ದಿನದ ಹಂಗೋವೆರ್, ಆಫೀಸ್ ನಲ್ಲಿ ಪ್ರತಿಸಾರಿಯೂ ಆತ ಕೊಡುತ್ತಿದ್ದ ಕಾರಣ ತಾಯಿಗೆ ಹುಷಾರ್ ಇರ್ಲಿಲ್ಲ ಸಾರ್... ಅಂತ... ಆತ ಸುಳ್ಳು ಹೇಳುತ್ತಿದ್ದಿದ್ದು ನಿಜ, ಆದರೆ ತಾಯಿ ಯನ್ನು ತುಂಬ ಪ್ರೀತಿಸುತ್ತಿದ್ದ... ಅದು ಮಾತ್ರ ಖರೆ...
ಆವತ್ತೂ ಶುಕ್ರವಾರ , ಪ್ರತಿಸಾರಿಯಂತೆ ಅಂದೂ ಗಡದ್ದು ಪಾರ್ಟಿ ಮಾಡಿದ್ದೆವು... ಮರುದಿನ ಬೆಳಿಗ್ಗೆ ಸದಾನಂದನ ತಾಯಿ ಗೆ ಏನೋ ಹುಶಾರಿಲ್ಲವಾಗಿತ್ತು !!!! ಹಾಗಂತ ಆತ ಆಫೀಸ್ ಗೆ ಫೋನ್ ಹೊಡೆದದ್ದೂ ಆಯಿತು... ಆ ಕಡೆಯಿಂದ ಅದ್ಯಾವ ಪರಿ ಮಂಗಳಾರ್ಚನೆ ಆಯಿತೋ ಗೊತ್ತಿಲ್ಲ.... ಅಂತೂ ಇಂತೂ ಆತ ಆಫೀಸಿಗೆ ಹೋಗಲೇ ಬೇಕಾಯಿತು...ಆವತ್ತು ಆಕಾಶದಲ್ಲಿ ಭಾರಿ ಮೋಡ ಈಗಲೋ ಆಗಲೋ ಮಳೆ ಬರಿಸಲು ತಯಾರಾಗಿತ್ತು.. ಮದ್ಧ್ಯಾನ್ನ ಸುಮಾರು ಹನ್ನೆರಡು ಗಂಟೆ ಹೊತ್ತಿಗೆ ನನ್ನ ಫೋನ್ ರಿಂಗ್ ಆಗಿತ್ತು.. ಯಾರೆಂದು ನೋಡಿದರೆ ಸದಾನಂದ... ಏನಪ್ಪಾ ಅಂದೇ... "ತಾಯಿಗೆ ಹುಷಾರಿಲ್ಲ ಈಗ ತಾನೆ ಫೋನ್ ಮಾಡಿದ್ರು, ಎದೆ ನೋಯ್ತಿದೆಯಂತೆ, ಪ್ಲೀಸ್ ಆಸ್ಪತ್ರೆಗೆ ಬೇಗ ಕರ್ಕೊಂಡು ಹೋಗು... ಗೊತ್ತಲ್ಲ ನಾನು ತಾಯಿಗೆ ಹುಷಾರಿಲ್ಲ ಅಂದ್ರೆ ನನ್ನ ಇವತ್ತು ಕೆಲಸದಿಂದ ತೆಗ್ದೆ ಹಾಕ್ತಾರೆ " ಹಾಗಂತ ಆತ ಹೇಳುತ್ತಿದ್ದಂತೆ ಬೈಕ್ ಹೊರಗೆ ಎಳೆದು ಹಾಕಿದವನೇ ಆತನ ಮನೆಯತ್ತ ಧಾವಿಸಿದೆ... ಆತನ ತಾಯಿ ಎದೆ ನೋವು ಅಂದು ಒಂದು ಕಡೆ ಕೂತು ಬಿಟ್ಟಿದ್ದರು... ಅಲ್ಲಿಂದಲೇ ಒಂದು ಆಟೋ ದಲ್ಲಿ ಅವರನ್ನ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದೆ... ಹಾರ್ಟ್ ಅಟ್ಯಾಕ್ ಆಗಿದೆ ಅಂದು ICU ನಲ್ಲಿ ಸೇರಿಸಿದೆವು... ಪ್ರತಿ ಅರ್ಧ ಗಂಟೆಗೆ ಒಮ್ಮೆ ಸದಾನಂದ ಫೋನ್ ಮಾಡುತ್ತಲೇ ಇದ್ದ... ೫ ಗಂಟೆಯ ಹೊತ್ತಿಗೆ ಆಕೆ ಮತ್ತೆ ನಗುವುದನ್ನು ನೋಡಿ ನನಗೆ ಸಮಾಧಾನವಾಗಿತ್ತು...ಸುಮಾರು ಆರು ಗಂಟೆಯ ಹೊತ್ತಿಗೆ ಆತನ ಅಮ್ಮನಿಗೆ ಏನಾದರು ಕುಡಿಯಲು ಕೊಡೋಣ ಎಂದು ಹೊರಗೆ ಹೋಗಿ ಜೂಸ್ ತಂದು ಆಕೆಯ ವಾರ್ದಿನತ್ತ ಹೆಜ್ಜೆ ಹಾಕಿದೆ... ಸದಾನಂದನ ತಾಯಿ ಕಣ್ಣು ಮಿಟುಕಿಸದೆ ನನ್ನನ್ನೇ ನೋಡುತ್ತಿದ್ದರು... ಒಂದು ಸಲ ಗಾಭರಿಯಿಂದ ನೋಡಿದೆ.. ಹತ್ತಿರ ಬಂದ ಡಾಕ್ಟರ "ಸಾರೀ ಸಾರ್" ಅಂದ... ತಲೆ ಗಿರ್ರನೆ ತಿರುಗತೊಡಗಿತು...ಕೈಯಲ್ಲಿದ್ದ ಜೂಸ್ ಲೋಟ ಧಡಾರನೆ ನೆಲಕ್ಕುರುಳಿತು... ಸದಾನಂದ ನ ಫೋನ್ ಬರುತ್ತಲೇ ಇತ್ತು...
ಈಗಲೋ ಆಗಲೋ ಮಳೆ ಬರುವಂತಿದ್ದ ಆವತ್ತು ಯಾಕೋ ಮತ್ತೆ ಮಳೆ ಯಾಗಲೇ ಇಲ್ಲ...

Tuesday, June 16, 2009

ಚಿಕ್ಕ ಪ್ರೇಮಕಥೆ

ಆತ ನಕ್ಕ..
ಆಕೆಯೂ ನಕ್ಕಳು...
ಮಗು ಅಳತೊಡಗಿತು...!!! :-)

( ಎಲ್ಲಿಯೋ ಕೇಳಿದ್ದು...)

Friday, May 22, 2009

ಆತ ಯಾರೆಂದು ಕೊನೆಗೂ ತಿಳಿಯಲೇ ಇಲ್ಲ..!!!!

IPL ಗಿಂತ... ಆತನ ಬ್ಲಾಗ್ ಹೆಚ್ಚು ಜನಪ್ರಿಯವಾಯಿತು... IPL ನ ವೆಬ್ ಸೈಟ್ ಗೆ ಭೇಟಿ ನೀಡಿದವರಿಗಿಂತ ಆತನ ಬ್ಲಾಗ್ ಗೆ ಭೇಟಿ ನೀಡಿದವರ ಸಂಖೆಯೇ ಹೆಚ್ಚು... ಕೊಲ್ಕತ್ತಾ ನೈಟ್ riders, ಅದರ ಬಾಸ್ ಶಾರುಖ್, ಅಧಿಕಪ್ರಸಂಗಿ ಶ್ರೀಸಾಂತ್ ಎಲ್ಲರ ಜನ್ಮ ಜಾಲಾಡಿಸಿಬಿಟ್ಟ.. ೨೫ ದಿನಗಳಲ್ಲಿ ಆತನ ಬ್ಲಾಗ್ ಗೆ ಕಡಿಮೆಯೆಂದರೂ ೧.೫೦ ಲಕ್ಷ ಜನರು ಭೇಟಿ ನೀಡಿದರು... ಆತ ಯಾರು ಅನ್ನೋದು ಮೊನ್ನೆ ೧೮ ಕ್ಕೆ ಗೊತ್ತಾಗಬೇಕಿತ್ತು ಆದರೆ Fakeiplplayer ಎಂದು ತನ್ನನ್ನು ತಾನು ಕರೆಸಿಕೊಂಡ ಆತ ಕೊನೆಗೂ ಯಾರೆಂದು ತಿಳಿಯಲೇ ಇಲ್ಲ...
ಹೌದು... ನೀವು ಭೇಟಿ ಕೊಟ್ತಿದ್ದೀರೋ ಇಲ್ಲವೊ ಗೊತ್ತಿಲ್ಲ... ಆತನ ಬ್ಲಾಗ್ ಎಲ್ಲವನ್ನೂ ಹೇಳುತ್ತದೆ... ಟೀಂ ಮೀಟಿಂಗ್ ನಲ್ಲಿ ಏನಾಯಿತು, ಶಾಪಿಂಗ್ ಗೆ ಹೋದಾಗ, ಆಟ ಆಡೋವಾಗ, ಕಾಮೆಂಟರಿ ಮಾಡೋವಾಗ... ಎಲ್ಲೆಲ್ಲ ಏನೇನ್ ನಡಿಯತ್ತೆ, ಕೊಲ್ಕತ್ತಾ ಯಾಕೆ ಸೋತಿತು... ಹುಹ್... ಅದೆಷ್ಟು ನಿಜ , ಅದೆಷ್ಟು ಸುಳ್ಳು ಗೊತ್ತಿಲ್ಲ...ಆದರೆ ಎಲ್ಲವನ್ನು ಆತ ಹೇಳುತ್ತಾನೆ.. ತನ್ನನ್ನು ತಾನು FakeIPLPlayer ಎಂದು ಕರೆಸಿಕೊಳ್ಳುವ ಆತ ಹೇಳಿಕೊಳ್ಳುವಂತೆ ಆತ ಕೋಲ್ಕತ್ತಾ ಟೀಂ ನ ಆಟಗಾರ... ರಣಜಿ ಆಡಿದ್ದಾನೆ, ಭಾಷೆ ನೋಡಿದರೆ ಬೆಂಗಾಲಿ ಥರ ಅನ್ನಿಸುತ್ತೆ... ಸ್ವಚ್ಛ ಇಂಗ್ಲಿಷು... ಕಲಿತಿದ್ದು ಡೆಲ್ಲಿಯಲ್ಲಿ, ಭಾರತೀಯ ಟೀಂ ನಲ್ಲಿ ಆಡುವ ಅರ್ಹತೆ ಇದ್ದೂ ಆಡಲಾಗದವನು... ಕಳೆದ ವರ್ಷದ IPL ನಲ್ಲಿ ಚಾನ್ಸ್ ಸಿಗಲಿಲ್ಲ... ಈ ವರ್ಷ ಟೀಂ ನಲ್ಲಿ ಇದ್ದೂ ಆತನನ್ನು ಯಾರೂ ಆಡಿಸಲಿಲ್ಲ...
ಕೆಲವರು ಆತ ಆಕಾಶ್ ಚೋಪ್ರಾ ಅಂದರು, ಇನ್ನು ಕೆಲವರು ಸಂಜಯ್ ಬಂಗಾರ್ ಕಡೆ ಬೊಟ್ಟು ಮಾಡಿದರು... ಉಹುಂ... ಅವರಾರೂ ಅಲ್ಲ... ಆತ ಟೀಂ ನ ಮ್ಯಾಚ್ ಮುಗಿದ ಕೂಡಲೇ ಬ್ಲಾಗ್ ಬರೆಯುತ್ತಾನೆ, ಹೋಟೆಲ್ ರೂಮಲ್ಲಿ ಎಲ್ರೂ ಮಲಗಿದರೆ ಬ್ಲಾಗ್ ಗೀಚ್ತಾನೇ, ಹೊಸ ಲ್ಯಾಪ್ಟಾಪ್ ಖರೀದಿಸಿದ್ದೀನಿ ಅಂತಾನೆ, ಕೋಚ್ ನ ಲ್ಯಾಪ್ಟಾಪ್ ನಿಂದ ಅಂತ ಒಂದೆರಡು ವಾಕ್ಯ ಗೀಚುತ್ತಾನೆ.... ಆದರೆ ಇದುವರೆಗೂ ಆತ ಯಾರೆಂದು ತಿಳಿದಿಲ್ಲ...
ಆತನ ಬರಹದಲ್ಲಿ ಎಲ್ಲರಿಗೂ ಒಂದೊಂದು ಅಡ್ಡ ಹೆಸರಿದೆ... ಫಾರೆನ್ ಬಬುಸ್, ಪ್ರಿನ್ಸ್ ಆಫ್ ಪಟಿಯಾಲ, ಅಪ್ಪಂ , ದೀವಾರ್, ಬೆವದಾ , ಬಾಟ್ಲಿ ವಾಲಾ...ಹೀಗೆ... ಕ್ರಿಕೆಟ್, ಅದರೊಳಗಿನ ಡಂಭಾಚಾರ, ಮಂದಿರಾ ಬೇಡಿ, ಅಲ್ಲಿನ ರಾಜಕೀಯ, ಸೆಕ್ಸ್, ಪಾರ್ಟಿಗಳು... ಹುಹ್ ಏನೇನಿಲ್ಲ... ನಾನು ಜಾಸ್ತಿ ಹೇಳುವುದು ಒಳ್ಳೆಯದಲ್ಲ... ನೀವೇ ಸ್ವತಹ ಒಮ್ಮೆ ಓದಿ... ಆತ ಅದೆಷ್ಟು ನಿಜ, ಅದೆಷ್ಟು ಸುಳ್ಳು ಯಾರಿಗೂ ಗೊತ್ತಿಲ್ಲ... ಆತ ನಿಜವಾಗಿ ಕೊಲಕತ್ತಾ ಆಟಗಾರನೇ ಅಥವ ನಮ್ಮ ನಿಮ್ಮಂಥ ಸಾಮನ್ಯ ನೆ ತಿಳಿದಿಲ್ಲ... ಯಾರೇ ಇರಲಿ ತುಂಬ ಬುದ್ಧಿವಂತ... ಕೆಲವೊಂದು ಬಾರಿ ನನಗೆ IPL ಮ್ಯಾಚ್ ಬೋರ್ ಆದಾಗ ಟೈಮ್ ಪಾಸು ಮಾಡಿಸಿದ್ದಾನೆ... ಆತನ ಬ್ಲಾಗ್ ಓದಿ ಕೆಟ್ಟ ಮ್ಯಾಚ್ ಮರೆತು ಮತ್ತೆ ನಕ್ಕಿದ್ದೇನೆ...
ನನ್ನ ಪ್ರಕಾರ ಆತ ಯಾರೋ ಮೂರನೇ ವ್ಯಕ್ತಿ... ಕೋಲ್ಕತ್ತಾ ಟೀಂ ನ ಒಳಗಿನಿಂದ ಆತ ಯಾರ ಜೊತೆಗೋ ಸಂಪರ್ಕ ಇಟ್ಟುಕೊಂಡಿದ್ದಾನೆ... ಎಲ್ಲ ಮಾಹಿತಿ ಪಡೆದು ಬ್ಲಾಗ್ ಗೀಚುತ್ತಾನೆ... ಯಾಕಂದ್ರೆ ಅಲ್ಲಿರುವ ಇಂಟರ್ನೆಟ್, wi-fi ಎಲ್ಲದಕ್ಕೂ ಮೋಸ ಮಾಡುವ ಹಾಗಿಲ್ಲ... ಆದ್ದರಿಂದ ಅಲ್ಲಿಂದಲೇ ಬರೆಯುವ ಪ್ರಮೇಯ ತುಂಬಾ ಕಮ್ಮಿ... ಇನ್ನು ಒಂದು ತಿಂಗಳ ಕಾಲ ಎಲ್ಲರ ಕಣ್ಣು ತಪ್ಪಿಸಿ ಅಲ್ಲಿಂದ ಬರೆಯುವ ಸಾಧ್ಯತೆ ಕೂಡ ತುಂಬಾ ಕಮ್ಮಿ... ಆತನ ಬ್ಲಾಗ್ ಓದಲು ಇಲ್ಲಿ ಭೇಟಿ ಕೊಡಿ... http://fakeiplplayer.blogspot.com/

Tuesday, May 5, 2009

ಇನ್ನು ನಮಗೆ ಕೆಲಸ ಇಲ್ಲಾ!!!!

"Say no to Bangalore, Yes to Buffalo"..
ಹಾಗಂತ ಅಮೇರಿಕಾದ ಅಧ್ಯಕ್ಷ ಒಬಾಮ ಹೇಳಿಬಿಟ್ಟಿದ್ದಾನೆ...!!! ಅಮೇರಿಕಾ ದಂಥಾ ಅಮೇರಿಕಾ ದುಡ್ಡಿಗಾಗಿ ಪರದಾಡುತ್ತಿದ್ದರೆ ಆತನಿಂದ ಈ ಹೇಳಿಕೆ ಬಂದುಬಿಟ್ಟಿದೆ...ಅಲ್ಲಾ, ಈ ಒಬಾಮ ಅಧ್ಯಕ್ಷನಾಗಿ ಎಷ್ಟು ದಿನಗಳಾದವು?? ೧೦೦?? ೧೧೦? ೧೨೫??? ಕೇವಲ ೧೦೦ ದಿನದಲ್ಲಿ ಅಮೇರಿಕಾದ ಪರಿಸ್ತಿತಿ ಸುಧಾರಿಸಬೇಕಿದ್ದರೆ ಏನು ಮಾಡಬೇಕು ಅದನ್ನ ಮಾಡಿದ್ದಾನೆ... ಈ ಸಾಫ್ಟ್ವೇರ್, ಬಿ ಪಿ ಓ ಅನ್ನೋ ಕೆಲಸ ನಾವಿಲ್ಲಿ ಮಾಡ್ತಿವಲ್ಲ??? ಅಲ್ಲ, ನಾವ್ಯಾವತ್ತಾದ್ರೂ ಯೋಚಿಸಿದ್ದೀವ ಅಮೇರಿಕಾದವರು ನಮಗೆ ಯಾಕೆ ಕೆಲಸ ಕೊಡ್ತಿದ್ದಾರೆ ಅಂತ?? ಅವ್ರ ಲಾಭಕ್ಕಾಗಿ ತಾನೆ? ಅಲ್ಲ ಆನೋಕ್ಕಾಗಲ್ಲ.. ಹಾಗಂತ ನಮಗೇನೂ ಇದ್ರಿಂದ ಉಪಯೋಗ ಆಗ್ಲಿಲ್ವಾ?? ಖಂಡಿತ ಆಗಿದೆ...ಬಹುಶ ಭಾರತದಲ್ಲಿ ಇಷ್ಟೊಂದು ಉದ್ಯೋಗ ಸೃಷ್ಟಿಸಿದ್ದು , ದುಡ್ಡು ಹರಿದಾಡಿದ್ದು ಇವುಗಳಿ೦ದಾನೆ.. ಇಲ್ಲಾಂದ್ರೆ ಈ ಹಡಬೆ ಸರಕಾರಗಳು ನಮಗೆಲ್ಲಿ ಕೆಲಸ ಕೊಡ್ತಾ ಇದ್ವು?? ಎಲ್ಲಾ ಓಕೆ.. ಆದ್ರೆ ಈ ಅಮೇರಿಕಾ ಹೇಳಿದ್ದೆ ಯಾಕೆ??
ನಮ್ಮಲ್ಲಿ ದುಡ್ಡಿಲ್ಲ, ನಮ್ಮಲ್ಲಿ ಕೆಲಸ ಇಲ್ಲ ಅನ್ನೋ ಈ ಅಮೇರಿಕಾ ಪಾಕಿಸ್ತಾನಕ್ಕೆ ಬಿಲಿಯನ್ ಗಟ್ಟಲೆ ದುಡ್ಡು ಎಲ್ಲಿಂದ ಕೊಡುತ್ತೆ?? ಇರಾಕ್ ಮೇಲೆ ದಾಳಿ ಮಾಡಿ ಇಡೀ ವಿಶ್ವದ ಪೆಟ್ರೋಲಿಯಂ ಮೇಲೆ ಹೇಗೆ ಹಿಡಿತ ಸಾಧಿಸುತ್ತೆ?? ಬಹುಶ ಈ ಪ್ರಶ್ನೆಗಳಿಗೆ ಉತ್ತರ ಜೋರ್ಜ್ ಬುಷ್ ಅಥವಾ ಒಬಾಮ ಕೊಡಬಲ್ಲರೆನೋ... ನನ್ನದೊಂದು ಪ್ರಶ್ನೆ ಇಲ್ಲಿದೆ... ನಾವು ಭಾರತಕ್ಕೆ ಉದ್ಯೋಗ ಕೊಡೋದಿಲ್ಲ, ೧ ಡಾಲರ್ ಬೇಕಿದ್ರೆ ೫೦ ರುಪಾಯಿ ಕೊಡಿ ಅಂತ ಅವ್ರು ಕೇಳಬೇಕಾದರೆ ನಾವೇನ್ ಮಾಡಬಹುದು???
ಈ ಬಗ್ಗೆ ನಾನು ತುಂಬಾ ಆಲೋಚಿಸಿದೆ... ಉತ್ತರ ಹುಡುಕಿದೆ... ಉಹುಂ ಯಾಕೋ ಸಮಾಧಾನವಾಗಲಿಲ್ಲ...
"ಇವತ್ತಿಂದ ನಾಳೆಗೆ ಫಲಿತಾಂಶ ಬೇಕೆಂದರೆ ಹೇಗೆ ಸ್ವಾಮೀ.. ರಷ್ಯಾ ದಂಥ ದೇಶವನ್ನ ಹುಡಿ ಮಾಡಲು ಈ ಅಮೇರಿಕಾ ಬರೋಬ್ಬರಿ ೬೦ ವರ್ಷ ಕಾಯಲಿಲ್ಲವೇ?? ಬ್ರಿಟೀಷರು ಭಾರತದ ಮೇಲೆ ಹಿಡಿತ ಸಾಧಿಸಲು ಅದೆಷ್ಟು ವರ್ಷ ಕಾಯಲಿಲ್ಲ? ಅದೇ ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ ಬೇಕು ಅಂತ ಅದೆಷ್ಟೋ ಮಂದಿ ಊಟ ,ನಿದ್ದೆ ಎಲ್ಲ ಬಿಟ್ಟು ಅದೆಷ್ಟು ದಿನ ಹೊರಾಡಲಿಲ್ಲ?? ಹಾಗೆ..ಉತ್ತಮ ಫಲಿತಾಂಶಕ್ಕಾಗಿ ಹೋರಾಡಬೇಕು, ಕಾಯಬೇಕು, ಪ್ಲಾನ್ ಮಾಡ್ಬೇಕು" ಹಾಗಂತ ಮನಸ್ಸು ಎಚ್ಚರಿಸುತ್ತಲೇ ಇತ್ತು...
ಅಲ್ಲಯ್ಯ ಈ ಅಮೇರಿಕಾ ದವರು ನಮಗೆ ಕೆಲಸ ಕೊಡಲ್ಲ , ಸರಿ ,ನಂ ಕೆಲಸ , ನನ್ನ ದೇಶದ ಕೆಲಸ ನಾನ್ ಮಾಡ್ತೀನಿ...
ಅಮೇರಿಕಾ ಕ್ಕೆ ೧೦೦೦ ಕೋಟಿ ರುಪಾಯಿಯ ಸಾಫ್ಟ್ವೇರ್ ಬೇಕಂತೆ... ಸರಿ , ಜಗತ್ತಿನ ೭ನೆ ದೊಡ್ಡ ದೇಶ, ೧೦೦ ಕೋಟಿಗಿಂತಲೂ ಹೆಚ್ಚು ಜನರಿರುವ ನಮ್ಮ ದೇಶಕ್ಕೆ ಅದೆಷ್ಟು ಸಾವಿರ ಕೋಟಿ ಗಳ ಸಾಫ್ಟ್ವೇರ್ ಬೇಡ???
naಮ್ಮ ಜನಕ್ಕೆ ನಿಮ್ಮಲ್ಲಿಂದ ಕೆಲಸ ಸಿಗಲ್ಲ... ಹೋಗ್ರಯ್ಯ ನಿಮ್ ಪೆಪ್ಸಿ ಕೋಕ್ ನಂಗೂ ಬೇಡ...
ನೀವು ಕೊಡೊ ಕುರ್ಕುರೆ ಗಿಂತ ನಮ್ಮಜ್ಜಿ ಮಾಡೋ ಚಿಪ್ಸ್ ಅದೆಷ್ಟೋ ಚೆನ್ನಾಗಿರ್ತವೆ..
ನಿಮ್ಮ ಕೋಲ್ ಗೇಟ್ ಗೆ ಬೆಂಕಿ ಹಾಕಿ, ನಮ್ಮಲ್ಲಿರೋ ಇದ್ದಿಲ ಹುಡಿ ಸಾಕು... ಪಿಜ್ಜಾ ಹಟ್, ಪೀಚೆ ಹಟ್....
ಹಾಗಂತ ನಾವೂ ಹೇಳಿದ್ರೆ ಹೆಂಗೆ??? ಬಹುಶ ಇವತ್ತಿಂದ ನಾಳೆ ಫಲಿತಾಂಶ ಸಿಗೋದಿಲ್ಲ ... ಆದ್ರೆ ಆ ಮೂಲಕ ನಾವೂ ನಮ್ಮ ದೇಶಕ್ಕೆ ಅಲ್ಪ ಸಹಾಯ ಮಾಡಬಹುದು... ಮುಂದೊಂದು ದಿನ ಒಬ್ಬ ರೂಢಿಸಿದ ಈ ಅಬ್ಭ್ಯಾಸ ೧೦೦ ಜನ ರೂಢಿಸಿಕೊಂಡಾರು ...
ಹನಿ ಹನಿ ಕೂಡಿದರೆ ಹಳ್ಳ ತಾನೆ... ಯಾಕೋ ಆಜಾದಿ ಬಚಾವ್ ಆಂದೋಲನದ ರಾಜೀವ್ ದೀಕ್ಷಿತ್ ತುಂಬಾ ನೆನಪಾಗುತ್ತಿದ್ದಾನೆ ...

Tuesday, April 28, 2009

ಇದು ಉದಯ ಟಿವಿ ಯಾ??

ಹಳ್ಳಿಯ ಜನರ ಮುಗ್ದ ಮಾತು ಕೇಳೋದು ಅಂದ್ರೆ ಏನೋ ಖುಷಿ.... ಎಷ್ಟೋ ಬಾರಿ ಇಂಥ ಘಟನೆಗಳು ನನ್ನೂರಿನಲ್ಲೂ ನಡೆಯುತ್ತಿದ್ದವು... ಅದರಲ್ಲಿ ಒಂದು ಘಟನೆ ಹೇಳುತ್ತೇನೆ... ಇದು ನಡೆದದ್ದು ಸುಮಾರು ೧೦ - ೧೨ ವರ್ಷಗಳ ಹಿಂದೆ... ಆಗ ನಮ್ಮ ಹಳ್ಳಿಗೆ ಕರೆಂಟ್ , ಫೋನ್ ಯಾವುದೂ ಬಂದಿರಲಿಲ್ಲ... ಕಾಡಿನ ಮಧ್ಯದಲ್ಲಿ ಸೀಮೆಯೆಣ್ಣೆದೀಪದ್ದೆ ಬೆಳಕು... ೫-೧೦ ಪೈಸೆ ಪೋಸ್ಟ್ ಕಾರ್ಡ್ ಅಥವಾ ಇನ್ಲ್ಯಾಂಡ್ ಲೆಟರ್ ಗಳು ಬಳಕೆಯಲ್ಲಿದ್ದವು... ನಮ್ಮೂರಿನಲ್ಲಿ ಮೊದಲು ಕರೆಂಟ್ ಲೈಟ್ ಉರಿದದ್ದು ಬಹುಶ ನಮ್ಮನೆಯಲ್ಲೇ... ೧೯೯೬-೧೯೯೭ ಈ ಕಾಲದಲ್ಲಿ ನಮ್ಮನೆಗೆ ಸೋಲಾರ್ ಬಂತು... ಆಗ ನಾವು ಖುಷಿ ಪಟ್ಟದ್ದು ಸೋಲ್ಪವಲ್ಲ... ಇರಲಿ, ಈಗ ವಿಷಯಕ್ಕೆ ಬರುತ್ತೇನೆ...
ಅದೊಂದು ದಿನ ನಮ್ಮ ಮನೆಗೂ ಟಿವಿ ಹಾಕ್ಬೇಕು ಅಂತ ನಿರ್ಧಾರಕ್ಕೆ ಬಂದೆವು... ಒಂದು ಚಿಕ್ಕ ಕಪ್ಪು-ಬಿಳಿ ಒನಿಡಟಿವಿ ತಗೊಂಡಿದ್ದು ಆಯಿತು...(ಅದು ಬಹುಶ ೧೯೯೮ ಅಥವಾ 1೯೯೯ ನೆ ಇಸವಿ ಇರ್ಬೇಕು ಸರಿಯಾಗಿ ನೆನಪಿಲ್ಲ) ... ನಾನು ನಮ್ಮಣ್ಣ ಆ ಚಿಕ್ಕ ಟಿವಿ ಯನ್ನು ಹೊತ್ತುಕೊಂಡು ನಮ್ಮ ಮನೆಯ ೩ ಕಿಲೋಮೀಟರು ಹಾದಿಯನ್ನು ನಡೆಯುತ್ತಾ ಸಾಗಿದ್ದೆವು... ಅಷ್ಟರಲ್ಲೇ ಆ ಹೆಂಗಸು ನಮ್ಮನ್ನು ನೋಡಿಬಿಟ್ಟಿದ್ದಳು... ಅವಳ ಮನೆಯಿಂದ ಹೊರಗೆ ಬಂದವಳೇ ನಮ್ಮನ್ನ ಕೇಳಿದ್ಲು " ಬಟ್ರೆ ಟಿವಿ ಯಾ " ಅದಕ್ಕೆ ನಾನು ಹೌದು ಅಂತ ಹೇಳ್ದೆ... ಮತ್ತೆ ಅವಳಿಂದ ಇನ್ನೊಂದು ಪ್ರಶ್ನೆ ತೂರಿ ಬಂತು.. "ವೋವು ಟಿವಿ ಬಟ್ರೆ? ಉದಯ ಟಿವಿ ನಾ?" (ಯಾವ ಟಿವಿ ಬಟ್ರೆ? ಉದಯ ಟಿವಿ ನಾ) ... ಬಹುಶ ಆಕೆ ಎಲ್ಲೊ ಉದಯ ಚಾನೆಲ್ ಬಗ್ಗೆಕೆಳಿರ್ಬೇಕು ಅದಿಕ್ಕೆ ಇಂಥ ಪ್ರಶ್ನೆ ಕೇಳಿದ್ದಾಳೆ ... ನನಗೆ ಒಂದು ಕ್ಷಣ ಏನೆಂದೇ ಅರ್ಥ ವಾಗಲಿಲ್ಲ ...ಅಷ್ಟರಲ್ಲಿ ಅಣ್ಣ " ಅಂದ್ ಉಂದು ಉದಯ ಟಿವಿ " (ಹೌದು ಇದು ಉದಯ ಟಿವಿ) ಅಂತ ಹೇಳಿ ಮುಂದೆ ಸಾಗಿದ್ದ... ನಾನೂ ನಗುತ್ತಾ ಅಲ್ಲಿಂದ ಹೆಜ್ಜೆ ಹಾಕಿದೆ...

Monday, April 20, 2009

ಚದುರಂಗ..

ಚದುರಂಗ... ಆ ಆಟದ ಹೆಸರು ಕೆಳಿದ್ರೆನೆ ಒಂಥರಾ ರೋಮಾಂಚನ... ಆನೆ,ಒಂಟೆ(ರಥ),ಕುದುರೆ,ರಾಜ, ರಾಣಿ ಮತ್ತು ಕಾಲಾಳು ಇವಿಷ್ಟುಆ ಆಟದ ಅಂಗಗಳು... ೬೪ ಮನೆಗಳ ಪುಟ್ಟ ಹಾಳೆಯ ಮೇಲೆ ಆಡುವ ಆಟ ಅದೆಷ್ಟು ಜನರಿಗೆ ಇಷ್ಟವೋ ಗೊತ್ತಿಲ್ಲ...ಆದರೆ ಆ ಆಟ ಕೇವಲ ಮನರಂಜನೆಯ, ಟೈಂಪಾಸ್ ಆಟವಾಗಿರದೆ ಬುದ್ಧಿ ಮತ್ತೆಯನ್ನು ಹೆಚ್ಹಿಸಲು ಸಹಕಾರಿಯಾಗುವುದಂತು ಸುಳ್ಳಲ್ಲ...
ಚದುರಂಗ ಜನ್ಮತಾಳಿದ್ದು ಭಾರತದಲ್ಲಿ ಅಂತಾರೆ...ಕೆಲವರ ಅನಿಸಿಕೆ ಪ್ರಕಾರ ಇದು ಆರಂಭವಾದದ್ದು ೬ನೆ ಶತಮಾನದಲ್ಲಿ ... ಆ ನಂತರ ಬೇರೆ ಬೇರೆ ಮೂಲಗಳ ಮುಖಾಂತರ ಇಡೀ ವಿಶ್ವಕ್ಕೆ ಪಸರಿಸಿದ ಈ ಆಟ ಈಗಿನ ಕ್ರೀಡಾ ಜಗತ್ತಿನಲ್ಲಿ ಬಹು ಮುಖ್ಯ ಸ್ಥಾನವನ್ನು ಪಡೆದುಕೊಂಡಿದೆ... ಇರಲಿ ಅದರ ಇತಿಹಾಸ ಬಹು ದೊಡ್ಡದು ಅದರ ಬಗ್ಗೆ ಇನ್ನೊಮ್ಮೆ ನೋಡೋಣ...
ಮೊನ್ನೆ ತಾನೆ ಊರಿಗೆ ಹೋದಾಗ ನನ್ನ ತಂಗಿಯ ಮಗಳು "ಮಾಮ ಚೆಸ್ ಆಡೋ ಣವ " ಅಂತ ಕೇಳಿದಾಗ ಒಂದ್ಸಾರಿ ದಿಗಿಲು ಬಿದ್ದೆ.... ಹೌದಲ್ಲ...ಅದೆಷ್ಟು ದಿನವಾಯಿತು ಚದುರಂಗ ಆಡಿ... ಬಹುಶ ನಾನು ಕೊನೆಯದಾಗಿ ಚೆಸ್ ಆಡಿದ್ದು ೨೦೦೦ನೆ ಇಸವಿಯಲ್ಲಿ... ಆಗ ನಾನು ಪದವಿಯ ಕೊನೆಯ ವರ್ಷದಲ್ಲಿ ಓದುತ್ತಿದ್ದೆ... ಮಂಗಳೂರು ಯುನಿವೆರ್ಸಿಟಿಯ ಚೆಸ್ ಟಿಮ್ ಗೆ ನನ್ನ ಕಾಲೇಜ್ ನಿಂದ ನಾನೂ ಹೋಗಿ ಸೋತು ಬಂದಿದ್ದೆ... :-) .. ಸರಿ ಈಗ ಇನ್ನೊಮ್ಮೆ ಅವಕಾಶ ಸಿಗ್ತಲ್ಲ ಅನ್ನೋ ಖುಷಿಲಿ ಆಟಕ್ಕೆ ಕೂತೆ... ನನಗೆ ಗೊತ್ತಿರೋವಷ್ಟು ಆಟ ನನ್ನ ತಂಗಿಯ ಮಗಳಿಗೂ ಕಳಿಸಿದೆ... (ಚದುರಂಗ ಇನ್ನೊ ಮರೆತಿಲ್ಲ ಅನ್ನೋ ಖುಶಿನೂ ಆಯಿತು) ಆಟ ಮುಗಿಸಿದವನೇ ಆಲೋಚನೆಗೆ ಬಿದ್ದೆ... ಅರೆ.. ಇದ್ಯಾವ ಲೋಕದತ್ತ ನಾವು ಸಾಗುತ್ತಿದ್ದೇವೆ... ಚಿಕ್ಕಂದಿನಲ್ಲಿ ಅಪ್ಪ, ಅಮ್ಮ ನಮ್ಮನ್ನು ಕೂರಿಸಿ ಚದುರಂಗ ಕಲಿಸುತ್ತಿದ್ದರು.... ಅದರಿಂದಾಗಿಯೇ ನಾವು ಇಷ್ಟಾದರೂ ಬುದ್ಧಿವಂತ ರಾದೆವೋ ಏನೋ ಗೊತ್ತಿಲ್ಲ...
ಆದರೆ ಇಗೀಗ ಚೆಸ್ ಆಡುವ ಮಕ್ಕಳನ್ನು ನಾನು ಕಂಡಿದ್ದು ತುಂಬ ಕಮ್ಮಿ... ಅದೇನೇನೋ ಆಟಗಳು... ಒಂದೇ ಒಂದು ಆಟದಲ್ಲೂ ಬುದ್ಧಿಮತ್ತೆಗೆ ಅಥವಾ ದೇಹಕ್ಕೆ ವ್ಯಾಯಾಮ ಸಿಗದು... ಬುದ್ಧಿಗೆ ಕಸರತ್ತು ಕೊಡುವ ಇಂಥ ಆಟವನ್ನು ಕೇರಂ, ಹಾವೇಣಿ, ಲೂಡೋದಂಥ ಆಟಗಳು ನುಂಗಿ ಬಿಟ್ಟಿವೆ ... ಸಚಿನ್ ತೆಂಡೂಲ್ಕರ್ ಹೆಸರು ಗೊತ್ತಿರುವಷ್ಟು ಮಂದಿಗೆ ವಿಶ್ವನಾಥನ್ ಆನಂದ್ ಬಗ್ಗೆ ಗೊತ್ತಿಲ್ಲ...
ಇಂಥ ಒಂದು ಅದ್ಭುತ ಆಟ ತನ್ನ ನೆಲೆಯನ್ನೇ ಕಳೆದು ಕೊಳ್ಳುತ್ತಿದೆಯೇ ??? ಹಾಗಂತ ಯೋಚನೆಗೆ ಬಿದ್ದಿದ್ದೇನೆ ... ಬಹುಶ ಹಾಗಾಗಲಾರದು ಅಲ್ಲವೇ ??

Tuesday, April 14, 2009

ಸೆಖೇನಾ? ಹಂಗಂದ್ರೇನು? !!!

ಮೊನ್ನೆ ತಾನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಎಂಬ ಪುಟ್ಟ ಗ್ರಾಮಕ್ಕೆ ಹೋಗಿದ್ದೆ...
ಬಿಸಿಲಿಗೆ ಸುಸ್ತಾಗಿ ಬಿಟ್ಟಿದ್ದ ನಮಗೆ ತಂಪನ್ನು ನೀಡಿದ್ದು ಇಲ್ಲಿಯ "ದಾನುಂಡಿ" ಎಂಬ ಪುಟ್ಟ ಜಲಪಾತ...
ಅಲ್ಲಿಯ ಸುಂದರ ಪ್ರಕೃತಿಯ ಕೆಲವು ಫೋಟೋಗಳು...
ಮಾಳಕ್ಕೆ ತಲುಪಿದವರಿಗೆ ತಣ್ಣನೆ ಮಜ್ಜಿಗೆ ಕುಡಿದಾಗ ಹಾಯಾಗಿತ್ತು ..
ಅಷ್ಟೂ ಮಜ್ಜಿಗೆ ಕುಡ್ದು ಬಿಟ್ರಾ??.... ಛೆ ನಿಮಗೆ ಉಳ್ಸೋದು ಮರ್ತೆ ಹೋಯ್ತು...
ದಾನುಂಡಿಗೆ ಸಾಗುವ ದಾರಿ...
ಸುಸ್ತಾಯಿತು ಕಣ್ರೀ ...

ನಾವೂ ದಾನುಂಡಿಗೆ ಬರ್ಲಾ???

ದೂರದಿಂದ ಕಂಡ ಪುಟ್ಟ ಜಲಪಾತ , "ದಾನುಂಡಿ .."

ದಾನುಂಡಿ ..

ಸೆಖೇನಾ? ಹಂಗಂದ್ರೇನು? !!!

ಇದು ಹಾಲೋ ? ನೀರೋ?

ಹಾಲಲ್ಲಾದರು ಹಾಕು... ನೀರಲ್ಲಾದರು ಹಾಕು .......

ಹಾಲಲ್ಲಿ ಕೆನೆಯಾಗಿ ... ನೀರಲ್ಲಿ ಮೀನಾಗಿ ... ಹಾಯಾಗಿರುವೆ ...
(ಫೋಟೋಗಳು : ವಿನಯ್ ಭಟ್, ಶ್ರೀಹರ್ಷ,ಅರವಿಂದ್ )
(ಇವತ್ತಿಗೆ ಇಷ್ಟು ಸಾಕು... ಮಾಳದ ಬಗೆಗಿನ ಇನ್ನಷ್ಟು ಚಿತ್ರ ಲೇಖನ ಮುಂದೆ ... :-) )
(photo

Wednesday, March 18, 2009

ಆ ಹಾಡು ಕೇಳಿದ ನಂತರ....

ಅದೇನೋ ಆಸ್ಕರ್ ಬಂತು ಅಂತ "ಸ್ಲಮ್ ಡಾಗ್ ಮಿಲಿಯನರ್" ಚಲನ ಚಿತ್ರದ "ಜಯ ಹೋ" ಹಾಡು ಮೊನ್ನೆ ಕೇಳಿಸಿಕೊಳ್ಳುತ್ತಿದ್ದೆ... ಆ ಹಾಡು ಕೇಳಿದ ನಂತರ ಕೆಲವಾರು ಪ್ರಶ್ನೆ ಗಳು ನನ್ನನ್ನು ಕಾಡತೊಡಗಿದವು... ಯಾರನ್ನೂ ಕೇಳೋದು ಬೇಡ, ಆಸ್ಕರ್ ಪ್ರಶಸ್ತಿ ಬಂದ ಹಾಡು ಅಂತ ಸುಮ್ಮನಿದ್ದೆ... ಆದರೆ ಅದ್ಯಾಕೋ ಇವತ್ತು ಸುಮ್ಮನಿರಲಾಗುತ್ತಿಲ್ಲ...
ಅಲ್ಲ, ಆ ಹಾಡು ಆಸ್ಕರ್ ಪ್ರಶಸ್ತಿ ಬರೋವಷ್ಟು ಚೆನ್ನಾಗಿದೆಯೇ? ಬೇರೆ ಯಾರೂ ಅಥವಾ ಖುದ್ದು ಏ.ಆರ್.ರೆಹಮಾನರು ಇದಕ್ಕಿಂತ ಉತ್ತಮ ಹಾಡು ಕೊಟ್ಟಿಲ್ಲವೆ? ಅದ್ಯಾಕೋ ಇಂಥ ತಲೆಬುಡ ಇಲ್ಲದ ಪ್ರಶ್ನೆಗಳು ನನ್ನನ್ನು ಕಾಡತೊದಗಿವೆ...
ಅಳಿದೂರಿಗೆ ಉಳಿದವನೆ ಅರಸ ಅನ್ನೋ ಹಾಗೆ ಬೇರೆ ಯಾವ್ದೇ ಹಾಡು ಈ ವರ್ಷ ಸ್ಪರ್ಧೆಯಲ್ಲಿ ಇಲ್ಲದ್ದಕ್ಕೆ ಬಹುಮಾನ ಕೊಟ್ರೋ? ಅಥವ ಬೇರೆ ಏನಾದ್ರು ಕಾರಣ ವಿದ್ದಿರಬಹುದೇ?
ನಿಮಗೆ ಗೊತ್ತಿದ್ರೆ ಸ್ವಲ್ಪ ಹೇಳ್ತೀರಾ???

ಹೀಗೂ ಇರ್ತಾರೆ ನೋಡಿ!!

ನಮ್ಮದು ಒಂದು ಚಿಕ್ಕ ಹಳ್ಳಿ... ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕಾಡಿನ ಮಧ್ಯದಲ್ಲಿ ನಮ್ಮ ಮನೆ ಇತ್ತು (ಈವಾಗ ಅಲ್ಲಿ ನಕ್ಸಲೈಟ್ ಕಾಟ ಜಾಸ್ತಿ ಆಗಿ ತೋಟ ಮಾರಿ ನೆಲ್ಲಿಕಾರು ಅನ್ನೋ ಊರಲ್ಲಿ ಅಣ್ಣ ಮನೆಮಾಡಿಕೊಂಡಿದ್ದಾನೆ)... ಇನ್ನು ನಮ್ಮ ಪಕ್ಕದ ಮನೆ ಅಂದ್ರೆ ಸುಮಾರು ಅರ್ಧ ಕಿಲೋಮೀಟರು ದೂರ.. ನಮ್ಮ ಮನೆಯಿಂದ ಸುಮಾರು ೧ ಕಿಲೋಮೀಟರು ದೂರದಲ್ಲಿದ್ದದ್ದೆ ಅಚ್ಯುತ ಭಟ್ಟರ ಮನೆ... ನಾನು ಚಿಕ್ಕವನು ಅಂದ್ರೆ ೫-೬ ವರ್ಷದಿಂದ ಅವ್ರನ್ನು ನೋಡಿದ ನೆನಪು... ಬಹುಶ ಆಗ ಅವ್ರಿಗೆ ೬೫-೭೦ ವರ್ಷ ಇದ್ದಿರಬೇಕು... ಅವ್ರು ನಮ್ಮೂರಲ್ಲಿ ಭಾರಿ ಫೇಮಸ್ ಯಾಕಂದ್ರೆ ಅವ್ರಿಗೆ ಮದ್ವೇನೆ ಆಗಿರಲಿಲ್ಲ ಮತ್ತು ಆ ವಯಸ್ಸಿನಲ್ಲೂ ಮದ್ವೆ ಆಗ್ಬೇಕು ಅಂತ ಅವ್ರು ಹಾಕ್ತಿದ್ದ ಪ್ಲಾನ್...
ಅವ್ರ ಬಗ್ಗೆ ತುಂಬ ಕಥೆಗಳಿವೆ ಆದ್ರೆ ನಂಗೆ ತುಂಬ ಚೆನ್ನಾಗಿ ನೆನಪಿರೋದು ಅಂದ್ರೆ ಅವ್ರು ನಮ್ಮ ಇಡೀ ತಾಲೂಕಿಗೆ ಡಿಕ್ಲೆರೇಶನ್ ಕೊಟ್ಟಿದ್ದು... (ಡಿಕ್ಲರೇಶನ್ ಅಂದ್ರೆ ಉಳುವವನೇ ಭೂಮಿಯ ಒಡೆಯ ಅಂತ ಇಂದಿರಾ ಗಾಂಧಿಯವರು ತಂದ ಕಾನೂನು)...
ಇಂದಿರಾ ಗಾಂಧಿಯವರು ಅದ್ಯಾವಾಗ ಉಳುವವನೇ ಭೂಮಿಯ ಒಡೆಯ ಅಂತ ಕಾನೂನು ತಂದು ಅರ್ಜಿ ಹಾಕೋಕೆ ಹೇಳಿದರೋ ಆವಾಗ ಈ ಅಚ್ಯುತ ಭಟ್ಟರು ಇಡೀ ತಾಲುಕನ್ನೇ ಉಳುವವನು ನಾನು ಅಂತ ಅರ್ಜಿ ಹಾಕಿದರಂತೆ.... ಆದ್ರೆ ಅದು ಏನಾಯಿತು ಅಂತ ಕೇಳಿದ್ರೆ ಇನ್ನೊ ಏನೂ ಪ್ರತಿಕ್ರಿಯೆ ಬಂದಿಲ್ಲ ಅನ್ನುತ್ತಿದ್ದರು ಅಚ್ಯುತ ಭಟ್ಟರು!!!... ಮೊನ್ನೆ ಊರಿಗೆ ಹೋದಾಗ ಅವರನ್ನು ನೋಡ್ಕೊಂಡು ಬಂದೆ... ವಯಸ್ಸು ೮೫-೯೦ ರ ಆಸುಪಾಸು..ಈಗಲೋ ಆಗಲೋ ಅನ್ನುವಂತಿದ್ದಾರೆ ಆದ್ರೆ ನಂಗೆ ಇನ್ನೂ ಮದ್ವೆ ಆಗಿಲ್ಲ, ಕೊಟ್ಟ ಡಿಕ್ಲೆರೇಶನ್ ಅರ್ಜಿ ಏನಾಯಿತೋ ಏನೋ ಅಂತ ಮತ್ತೆ ಮೆಲ್ಲನೆ ಹೇಳಿಕೊಂಡರು ....ಬೆಂಗಳೂರಲ್ಲೇ ಇದ್ರೆ ನಂಗೊಂದು ಹುಡುಗಿ ಹುಡುಕ್ರಿ ಅಂದ್ರು ... ಎಷ್ಟು ವಯಸ್ಸಿನ ಹುಡುಗಿ ಬೇಕು ಅಂತ ಕೇಳ್ದೆ... ೪೦-೫೦ ಆಸುಪಾಸಿದ್ದು ತೊಂದ್ರೆ ಇಲ್ಲ ಅಂದ್ರು... ೪೦ ರ ವಯಸ್ಸಿನ ಹುಡುಗಿ ಸಿಕ್ಕಿಲ್ಲಂದ್ರೆ ೨೦ ರದ್ದು ಎರಡು ಆದಿತೋ ಅಂತ ಕೇಳಿದ್ದಕ್ಕೆ ಮೆಲ್ಲನೆ ನಕ್ಕರು... ವಯಸ್ಸು ಎಷ್ಟು ಅಂತ ಕೇಳಿದ್ದಕ್ಕೆ ೯೪- ೯೬ ಅಂತ ಏನೋ ಹೇಳಿದ್ರು.. ಸೆಂಚುರಿ ಬಾರ್ಸಿ ಅಜ್ಜಾ ಅಂತ ಹೇಳಿ ಅಲ್ಲಿಂದ ಎದ್ದು ಬಂದೆ...

Monday, March 16, 2009

ವ್ಯವಸಾಯ ಮತ್ತು ಸಾಫ್ಟ್ವೇರ್

ಅದ್ಯಾಕೋ ಈ ಕೆಲಸ ಸಾಕಾಗೋಗಿದೆ... ದಿನಾ ಬೆಳಿಗ್ಗೆ ಎದ್ದು ಅದೇ ಕಂಪ್ಯೂಟರ್ ಮುಂದೆ ಕೂತು ಸಂಜೆ ತನಕ ಕೀಬೋರ್ಡ್ ಒತ್ತಿ ಒತ್ತಿ ತಲೆ ಎಲ್ಲ ಹಾಳಾಗಿ ಹೋಗಿತ್ತು ಅಂತ್ಹೇಳಿ ಮೊನ್ನೆ ಊರಿನ ಕಡೆ ಹೊರಟೆ...
ಅದೆಷ್ಟು ಚೆಂದದ ಊರು... ಕಣ್ಣು ಹಾಯಿಸಿದಷ್ಟು ಹಸಿರು... ಸಂಜೆ ಹೊತ್ತಿಗೆ ಧಬೋ ಅಂತ ಸುರಿದ ಮಳೆ, ಕಾದ ಮನಸ್ಸನ್ನು ತಂಪಾಗಿಸಿದ್ದವು... ಬೆಳಿಗ್ಗೆ ಎದ್ದು ಕಾಫಿ ಕುಡಿದು ತೋಟದ ಕಡೆ ಹೆಜ್ಜೆ ಹಾಕಿದೆ... ೬-೭ ವರ್ಷಗಳ ಹಿಂದಿನ ದಿನಗಳು ನೆನಪಾದವು.... ಅದೇ ತೋಟ, ಅಲ್ಲಿ ಕಿತ್ತ ಸೊಪ್ಪು, ಹುಲ್ಲು, ಚಿಮ್ಮುವ ಸ್ಪ್ರಿಂಕ್ಲರ್, ಹೊತ್ತ ಗೊಬ್ಬರದ ವಾಸನೆ ಹಾಗೆಯೇ ಇದ್ದಂತ್ಹಿದ್ದವು ... ಹಕ್ಕಿಗಳ ಚಿಲಿಪಿಲಿ, ಪೇರಳೆ ಹಣ್ಣು (ಸೀಬೆ ಕಾಯಿ) , ಬೊಂಡ(ಸೀಯಾಳ), ಮಾವಿನ ಮಿಡಿ, ಪಪ್ಪಾಯಿ ಎಲ್ಲವನ್ನೂ ಸವಿದು ವಾಪಾಸು ಬೆಂಗಳೂರಿಗೆ ಹೊರಟಾಗ ಮನಸ್ಸು ಯಾಕೋ ಭಾರವಾಗಿತ್ತು... ಎಲ್ಲವನ್ನೂ ಬಿಟ್ಟು ಊರಲ್ಲಿ ಸ್ವಲ್ಪ ಜಮೀನು ಖರೀದಿಸಿ ವ್ಯವಸಾಯ ಶುರು ಮಾಡಿದರೆ ಹೇಗೆ ಅಂತ ಅದ್ಯಾವತ್ತಿನಿಂದಲೋ ಆಲೋಚಿಸುತ್ತಿದ್ದೇನೆ... ಆದರೆ ಯಾಕೋ ಎಲ್ಲವೂ ಏರುಪೇರು... ಇನ್ನೆಷ್ಟು ವರ್ಷಗಳು ಬೇಕೋ ನನ್ನ ಕನಸಿನ ಗೂಡಿಗೆ ವಾಪಸಾಗಲು... ಬೆಂಗಳೂರು ಅನ್ನೋದಂತೂ ನನಗ್ಯಾಕೋ ಚಕ್ರವ್ಯೂಹದ ಥರ ಅನ್ನಿಸ್ತಿದೆ... ಒಳಗೆ ಹೊಕ್ಕಾಗಿದೆ ಹೊರ ಬರುವ ದಾರಿ ಗೊತ್ತಾಗ್ತಿಲ್ಲ... ದಾರಿ ಕಾಣದಾಗಿದೆ ರಾಘವೆಂದ್ರನೆ...ಬೆಳಕ ತೋರಿ ನಡೆಸುವ.. ಅಂತ ಅತ್ತಿಗೆ ಮೊನ್ನೆ ಸಂಜೆ ಹೇಳುತ್ತಿದ್ದ ಭಜನೆ ಕಿವಿಯಲ್ಲಿ ಮತ್ತೆ ಮತ್ತೆ ಗುಯಿಗುಡುತ್ತಿದೆ...

Monday, February 16, 2009

ಪ್ರೇಮಿಗಳ ದಿನ ಮತ್ತು ಶಿವರಾತ್ರಿ...

ಫೆಬ್ರವರಿ ೧೪... ಪ್ರೇಮಿಗಳ ದಿನ...
ಫೆಬ್ರವರಿ ೨೪... ಶಿವರಾತ್ರಿ...
ಅದ್ಯಾಕೋ ಈ ಎರಡೂ ದಿನಗಳು ನಂಗೆ ತುಂಬಾ ಕನ್ಫ್ಯೂಸ್.. ಅದ್ಯಾಕೋ ಗೊತ್ತಿಲ್ಲ ಈ ಎರಡೂ ದಿನಗಳು ಬಂತು ಅಂದ್ರೆ ನಂಗೆ ಕಳ್ಳರ ನೆನಪಾಗುತ್ತೆ...
ಫೆಬ್ರವರಿ ೨೪ ಶಿವರಾತ್ರಿ ಸೋಗಿನಲ್ಲಿ ಕದಿಯುವವರು..ಫೆಬ್ರವರಿ ೧೪ ಹೃದಯ ಕದಿಯುವವರು.. ಸಾಮ್ಯತೆಯನ್ತು ಇದೆ...
ಅದ್ಯಾಕೆ ಪ್ರೇಮಿಗಳ ದಿನ ಅಂತ ಆಚರಿಸ್ಥಾರೋ ನನಗಂತೂ ಗೊತ್ತಿಲ್ಲ್ಲ... ನಾನು ಹೃದಯ ಕಡಿಯೋಕೆ ಪ್ರಯತ್ನ ಪಟ್ಟದ್ದಂತೂ ಫೆಬ್ರವರಿ ೧೪ ಅಲ್ಲ... ಬಹುಶ ಜೂನ್ ೬ , ಮತ್ತೆ ಜುಲೈ ೨೫ ಮತ್ತೆ ಜನವರಿ೨೮.. ಹೀಗೆ ಶತ ಪ್ರಯತ್ನಗಳ ಭಗೀರಥ...:-)
ಮೊನ್ನೆಯ ಪ್ರೇಮಿಗಳ ದಿನವಂತೂ ಇಡೀ ದೇಶದಲ್ಲೇ ದಾಂಧಲೆ ಯೇಬ್ಬಿಸಿದ್ದಂತೂ ಸುಳ್ಳಲ್ಲ..
ಪ್ರೇಮಿಗಳ ದಿನ ಆಚರಿಸೋಕೆ ತುದಿಗಾಲಲ್ಲಿ ನಿಂತ ಯುವಕ ಯುವತಿಯರು... ಪ್ರೇಮಿಗಳ ದಿನ ಆಚರಿಸುವವರ ಕಾಲು ಮುರಿಯಲು ಸಜ್ಜಾಗಿ ನಿಂತ ಆಂಜನೆಯರು... ಹೀಗೆ ಪ್ರೇಮಿಗಳ ದಿನಕ್ಕಂತೂ ಪುಕ್ಕಟೆ ಜಾಹಿರಾತು...
ವರ್ಷಕ್ಕೆ ಒಂದು ಸಾರಿ ಸತ್ತವರಿಗೂ ತಿಥಿ ಅಂತ ಆಚರಿಸೋ ನಮ್ಮ ಸಂಸ್ಕ್ರಿತಿಲಿ vaರ್ಶಕ್ಕೊಮ್ಮೆ ಪ್ರೇಮಿಗಳ ದಿನ ಅಂತ ಆಚರಿಸೋದ್ರಲ್ಲಿ ತಪ್ಪೇನಿದೆ? ಹಾಗಂತ ಕೇಳಿದ್ದ ನನ್ನ ಸ್ನೇಹಿತ.. ಹೌದು... ವರ್ಷಕ್ಕೊಂದ್ಸಾರಿ ಪ್ರೇಮಿಗಳ ದಿನ ಆಚರಿಸೋದು ಸರೀನೆ.. ಈ ಕೆಲಸದ ಒತ್ತಡದಲ್ಲಿ ನಮ್ಮನು ಪ್ರೀತಿಸುವವರನ್ನು, ನಾವು ಪ್ರೀತಿಸುವವರನ್ನು ನೆನಪಿಸಿ ಕೊಳ್ಳೋದು ಒಂಥರಾ ಸರಿ ಅನ್ಸುತ್ತೆ... ಹೊಸ ಪ್ರೀತಿ ಹುಡುಕೋಕೆ, ಕಳೆದು ಹೋದ ಪ್ರೀತಿಗೆ ಪಿಂಡ ಇಟ್ಟು, ತರ್ಪಣ ಕೊಟ್ಟು ಹೊಸ ಪ್ರೀತಿನ ಹುಡುಕೋಕೆ ಅದೊಂದು ದಿನ ಇರ್ಲಿ... ಏನಂತಿರ?
ಆದ್ರೆ ನಮ್ಮ ಸಂಸ್ಕ್ರಿತಿಲಿ ಇದೆಲ್ಲ ಇಲ್ಲ ಅಂತ ಬೊಬ್ಬೆ ಹೊಡೆಯೋರು ಒಂದು ಕಡೆ... ನಮಗೆ ದಿನಾಲೂ ಪ್ರೇಮಿಗಳ ದಿನಾನೇ .... ನಮ್ಮ ಭಾರತೀಯ ಸಂಸ್ಕ್ರುತಿಲಿ ೩೬೫ ದಿನಾನೂ ಪ್ರೇಮಿಗಳ ದಿನ... ಹೀಗಂತ ವಾದಿಸೋರನ್ನ ಕಂಡಿದ್ದೆ... ಅವ್ರನ್ನ ನಾನೂ ಕೆಲವು ಪ್ರಶ್ನೆ ಕೇಳ್ಬೇಕು...
ಮಕ್ಕಳ ದಿನ ಅಂತ ಆಚರಿಸ್ತೇವೆ ಯಾಕೆ? ಆ ಒಂದು ದಿನ ಮಾತ್ರ ನಮ್ಮ ಮಕ್ಕಳ ಬಗ್ಗೆ ಯೋಚಿಸಿದರೆ ಸಾಕೆ? ಗಾಂಧೀ ಜಯಂತಿ ಯಾಕೆ...? ಅಂಥ ಮಹಾನ್ ರಾಷ್ಟ್ರ ಪಿತನನ್ನು ಒಂದು ದಿನ ನೆನಪಿಸ್ಕೊಂದ್ರೆ ಸಾಕೆ? ಸ್ವಾತಂತ್ರ ದಿನ... ಆ ಒಂದು ದಿನ ಮಾತ್ರ ನಾವು ಸ್ವಾತಂತ್ರರೆ? ಬಹುಶ ಉತ್ತರ ಸಿಗಲಿಕ್ಕಿಲ್ಲ... ನಾನು ಒಂದು ವೇಳೆ ಇಂಥ ಪ್ರಶ್ನೆ ಪಬ್ಲಿಕ್ ನಲ್ಲಿ ಕೇಳಿದ್ರೆ ನಂಗೂ ೧೦ ವರ್ಷ ಹಾಕ್ಕೋಳು
ವಷ್ಟು ಚಡ್ಡಿ ಬನಿಯನ್ಗಳು ಸಿಕ್ಕಿಯಾವು ...
ಪ್ರೇಮಿಗಳ ದಿನ ಅಂತ ಸಿಕ್ಕ ಅವಕಾಶವನ್ನು ದುರುಪಯೋಗ ಪಡಿಸಿಕೊಲ್ಲೋರಿಗೆನೂ ಕಮ್ಮಿಯಿಲ್ಲ... ಅದಕ್ಕೆ ಈ ದಿನ ಆಚರಿಸೋದಕ್ಕೆ ವಿರೋಧ ವ್ಯಕ್ತ ವಾಗಿರಬೇಕು... ಅದಕ್ಕೆ ಈ ಚಡ್ಡಿ ಪುರಾಣ ಮಾಡೋದಕ್ಕಿಂತ ಅದೊಂದು ದಿನ ಬಾರ್ ಗಳಿಗೆ, ಪಬ್ ಗಳಿಗೆ, ಡಿಸ್ಕೋ ಥೆಕ್ ಗಳಿಗೆ ಬೀಗ ಜಡಿದದ್ದೇ ಆದ್ರೆ ಅಂಥವರೆಲ್ಲರನ್ನೂ ಮೆಚ್ಚಬಹುದಿತ್ತು.. ಎಲ್ಲ ಬಿಟ್ಟ ಭಂಗಿ ನೆಟ್ಟ ಅನ್ನೋ ಹಾಗೆ ಈ ಕುತಂತ್ರಿ ರಾಜಕಾರಣಿ ಗಳ ಆಟಕ್ಕೆ ಬಲಿಪಶು ವಾದದ್ದಂತೂ ಅಬ್ಬ ಸಾಮಾನ್ಯ ಪ್ರೇಮಿ... ಪಾಪ , ಪ್ರೇಮಿಗಳ ದಿನಕ್ಕೆ ವಿರೋಧ ವ್ಯಕ್ತ ಪಡಿಸಿದವನ ಮನೆಯಂತೂ ಚಡ್ಡಿಗಲಿಂದಲೇ ತುಂಬಿ ಹೋದ ಬಗ್ಗೆ ಓದಿ ಖೆದವೆನ್ನಿಸಿತು...(ಚಡ್ಡಿ ಕಳಸಿದೋರು ಅದನ್ನ ವಾಪಾಸ್ ಪಡಿಯೋಕೆ ಶಿವರಾತ್ರಿ ಯನ್ನ ಆರಿಸಿಕೊಂಡಿದ್ದಾರೆ ಅನ್ನೋ ಸುದ್ದಿ ಎಷ್ಟು ನಿಜ ಎಷ್ಟು ಸುಳ್ಳು ಅಂತ ದೇವರಾಣೆಗೂ ನಂಗೊತ್ತಿಲ್ಲ!!!)
ನಾನಂತೂ ಇನ್ನು ಮುಂದೆ ಅಕ್ಟೋಬರ್ ೨೩ ಪ್ರೇಮಿಗಳ ದಿನ , ಫೆಬ್ರವರಿ ೧೪ ಚಡ್ಡಿ ದಿನ ಅಂತ ಆಚರಿಸೋಕೆ ನಿರ್ಧಾರ ಮಾಡಿದ್ದೇನೆ..
ಇಬ್ಬರ ಚಡ್ಡಿ ಜಗಳ , ಬಟ್ಟೆ ಅಂಗಡಿಯವನಿಗೆ ಲಾಭ, ಪ್ರೇಮಿಗೆ ಪ್ರಾಣ ಸಂಕಟ....
ಫೆಬ್ರವರಿ ೧೪ಕ್ಕೆ ಆರಂಭ ಗೊಂಡ ಪ್ರೀತಿ ,ಫೆಬ್ರವರಿ ೨೪ ಕ್ಕೆ ಯಾರೂ ಕದ್ದುಕೊಂಡು ಹೋಗದಿರಲಿ ...
ಪ್ರೀತಿ ಅಮರವಾಗಿರಲಿ...

ತಲೆಹರಟೆ

ತಲೆಹರಟೆ ಜೋಕ್ ಗಳನ್ನ ಕೇಳಿದ್ದೀರಾ? ಇಲ್ಲೊಂದಿದೆ ಓದಿ..
ನನ್ನ ತಂಗಿ ಮಗಳು , ಇನ್ನೂ ೭ ವರ್ಷ ದವಳು... ತುಂಬಾ ತಲೆ ಹರಟೆ ... ಒಂದಿನ ನನ್ನ ಕೇಳಿದ್ಲು...
"ಒಬ್ಬ ನಡ್ಕೊಂಡು ಹೋಗ್ತಾ ಇರ್ಬೇಕಾದ್ರೆ , ಅವ್ನ ತಲೆ ನೇರಕ್ಕೆ ಬಂದ ಹಕ್ಕಿ ಹಿಕ್ಕೆ ಹಾಕ್ತು.. ಆದ್ರೆ ಅದು ಹಾಕಿದ ಹಿಕ್ಕೆ ಕೆಳಕ್ಕೆ ಬೀಳಲೇ ಇಲ್ಲ ಯಾಕೆ?"...
ಉತ್ತರಕ್ಕಾಗಿ ಯೋಚಿಸದೆ... ತಡಕಾಡಿದೆ ... ಕೊನೆಗೂ ಸೋತು ನೀನೆ ಹೇಳು ಅಂದೇ..
"ಉತ್ತರ ತುಂಬಾ ಸುಲಭ... ಯಾಕಂದ್ರೆ ಹಕ್ಕಿ ಚಡ್ಡಿ ಹಾಕ್ಕೊಂದ್ದಿತ್ತು.. " ಅನ್ನೋದೇ...
ನನಗಂತೂ ನಕ್ಕು ಸಾಕಾಗಿತ್ತು...
ಆವತ್ತು ಸಂಜೆ ನಾವೆಲ್ರು ವಾಕಿಂಗ್ ಹೋಗ್ತಾ ಇದ್ವಿ... ನನ್ನ ತಲೆನೆರಕ್ಕೆ ಬಂದ ಹಕ್ಕಿ ಹಿಕೆ ಹಾಕೇ ಬಿಡ್ತು... ನನ್ನ ತಲೆಮೇಲೆ ಎಲ್ಲ ಹಕ್ಕಿ ಹಿಕ್ಕೆ... ತಂಗಿಯ ಮಗಳು ಮೆಲ್ಲನೆ ನಗೋಕೆ ಶುರು... ತಕ್ಷಣ ನಂಗೆ ಅವಳೇ ಬೆಳಿಗ್ಗೆ ಹೇಳಿದ್ದ ಜೋಕ್ ನೆನಪಾಗಿ ಜೋರಾಗಿ "ಈ ಹಕ್ಕಿಗೆನು ಚಡ್ಡಿ ಹಾಕೋಕೆ ಆಗಲ್ವೇ" ಎಂದೆ... ಎಲ್ರೂ ನಗ್ತಾ ಇದ್ರೆ, ದೊಡ್ಡ ಜೋಕ್ ಹೇಳಿದೆ ಅಂತ ನಾನೂ ಬೀಗ್ತಾ ಇದ್ರೆ.. ಅಷ್ಟರಲ್ಲೇ ನನ್ನ ತಂಗಿ ಮಗಳು ಕೇಳಿದ ಪ್ರಶ್ನೆಗೆ ಉತ್ತರವೇ ಇಲ್ಲದೆ ಎಲ್ರೂ ಮೂಕರಾಗಿ ನಿಂತು ಬಿಟ್ಟೆವು... ಮುಂದಿನ ಅರ್ಧ ಗಂಟೆಗೂ ಮಿಕ್ಕಿ ನಾವೆಲ್ಲ ನಕ್ಕಿದ್ದೋ ನಕ್ಕಿದ್ದು... ಅವ್ಳು ಕೇಳಿದ ಪ್ರಶ್ನೆ ಏನು ಗೊತ್ತಾ..?
"ಮಾಮ, ನೀನು ಹಿಕ್ಕೆ ಹಾಕುವಾಗ ಚಡ್ಡಿ ಹಾಕ್ತಿಯೇನು?" !!!!!!!!!

ನನ್ನ ಮಾತು ಕೇಳಿ !!!

ಆಲ್ಕೋಹಾಲು ನಿಮ್ಮ ಪ್ರಶ್ನೆ ಗಳಿಗೆ ಉತ್ತರವಲ್ಲ.... ಆದರೆ ಅದು ನಿಮ್ಮ ಪ್ರಶ್ನೆ ಏನು ಎಂದು ಮರೆಸುತ್ತದೆ...
ಅದಕ್ಕೆ ಹೇಳ್ತೀನಿ , ನನ್ನ ಮಾತು ಕೇಳಿ... ನಿಮ್ಮ ಪ್ರಶ್ನೆಗೆ ಉತ್ತರ ಹುಡುಕುದಕ್ಕಿಂತ , ಪ್ರಶ್ನೆಯನ್ನೇ ಮರೆತು ಹಾಯಾಗಿರುವ ಬಗ್ಗೆ ಯೋಚಿಸಿ...