Tuesday, April 28, 2009

ಇದು ಉದಯ ಟಿವಿ ಯಾ??

ಹಳ್ಳಿಯ ಜನರ ಮುಗ್ದ ಮಾತು ಕೇಳೋದು ಅಂದ್ರೆ ಏನೋ ಖುಷಿ.... ಎಷ್ಟೋ ಬಾರಿ ಇಂಥ ಘಟನೆಗಳು ನನ್ನೂರಿನಲ್ಲೂ ನಡೆಯುತ್ತಿದ್ದವು... ಅದರಲ್ಲಿ ಒಂದು ಘಟನೆ ಹೇಳುತ್ತೇನೆ... ಇದು ನಡೆದದ್ದು ಸುಮಾರು ೧೦ - ೧೨ ವರ್ಷಗಳ ಹಿಂದೆ... ಆಗ ನಮ್ಮ ಹಳ್ಳಿಗೆ ಕರೆಂಟ್ , ಫೋನ್ ಯಾವುದೂ ಬಂದಿರಲಿಲ್ಲ... ಕಾಡಿನ ಮಧ್ಯದಲ್ಲಿ ಸೀಮೆಯೆಣ್ಣೆದೀಪದ್ದೆ ಬೆಳಕು... ೫-೧೦ ಪೈಸೆ ಪೋಸ್ಟ್ ಕಾರ್ಡ್ ಅಥವಾ ಇನ್ಲ್ಯಾಂಡ್ ಲೆಟರ್ ಗಳು ಬಳಕೆಯಲ್ಲಿದ್ದವು... ನಮ್ಮೂರಿನಲ್ಲಿ ಮೊದಲು ಕರೆಂಟ್ ಲೈಟ್ ಉರಿದದ್ದು ಬಹುಶ ನಮ್ಮನೆಯಲ್ಲೇ... ೧೯೯೬-೧೯೯೭ ಈ ಕಾಲದಲ್ಲಿ ನಮ್ಮನೆಗೆ ಸೋಲಾರ್ ಬಂತು... ಆಗ ನಾವು ಖುಷಿ ಪಟ್ಟದ್ದು ಸೋಲ್ಪವಲ್ಲ... ಇರಲಿ, ಈಗ ವಿಷಯಕ್ಕೆ ಬರುತ್ತೇನೆ...
ಅದೊಂದು ದಿನ ನಮ್ಮ ಮನೆಗೂ ಟಿವಿ ಹಾಕ್ಬೇಕು ಅಂತ ನಿರ್ಧಾರಕ್ಕೆ ಬಂದೆವು... ಒಂದು ಚಿಕ್ಕ ಕಪ್ಪು-ಬಿಳಿ ಒನಿಡಟಿವಿ ತಗೊಂಡಿದ್ದು ಆಯಿತು...(ಅದು ಬಹುಶ ೧೯೯೮ ಅಥವಾ 1೯೯೯ ನೆ ಇಸವಿ ಇರ್ಬೇಕು ಸರಿಯಾಗಿ ನೆನಪಿಲ್ಲ) ... ನಾನು ನಮ್ಮಣ್ಣ ಆ ಚಿಕ್ಕ ಟಿವಿ ಯನ್ನು ಹೊತ್ತುಕೊಂಡು ನಮ್ಮ ಮನೆಯ ೩ ಕಿಲೋಮೀಟರು ಹಾದಿಯನ್ನು ನಡೆಯುತ್ತಾ ಸಾಗಿದ್ದೆವು... ಅಷ್ಟರಲ್ಲೇ ಆ ಹೆಂಗಸು ನಮ್ಮನ್ನು ನೋಡಿಬಿಟ್ಟಿದ್ದಳು... ಅವಳ ಮನೆಯಿಂದ ಹೊರಗೆ ಬಂದವಳೇ ನಮ್ಮನ್ನ ಕೇಳಿದ್ಲು " ಬಟ್ರೆ ಟಿವಿ ಯಾ " ಅದಕ್ಕೆ ನಾನು ಹೌದು ಅಂತ ಹೇಳ್ದೆ... ಮತ್ತೆ ಅವಳಿಂದ ಇನ್ನೊಂದು ಪ್ರಶ್ನೆ ತೂರಿ ಬಂತು.. "ವೋವು ಟಿವಿ ಬಟ್ರೆ? ಉದಯ ಟಿವಿ ನಾ?" (ಯಾವ ಟಿವಿ ಬಟ್ರೆ? ಉದಯ ಟಿವಿ ನಾ) ... ಬಹುಶ ಆಕೆ ಎಲ್ಲೊ ಉದಯ ಚಾನೆಲ್ ಬಗ್ಗೆಕೆಳಿರ್ಬೇಕು ಅದಿಕ್ಕೆ ಇಂಥ ಪ್ರಶ್ನೆ ಕೇಳಿದ್ದಾಳೆ ... ನನಗೆ ಒಂದು ಕ್ಷಣ ಏನೆಂದೇ ಅರ್ಥ ವಾಗಲಿಲ್ಲ ...ಅಷ್ಟರಲ್ಲಿ ಅಣ್ಣ " ಅಂದ್ ಉಂದು ಉದಯ ಟಿವಿ " (ಹೌದು ಇದು ಉದಯ ಟಿವಿ) ಅಂತ ಹೇಳಿ ಮುಂದೆ ಸಾಗಿದ್ದ... ನಾನೂ ನಗುತ್ತಾ ಅಲ್ಲಿಂದ ಹೆಜ್ಜೆ ಹಾಕಿದೆ...

Monday, April 20, 2009

ಚದುರಂಗ..

ಚದುರಂಗ... ಆ ಆಟದ ಹೆಸರು ಕೆಳಿದ್ರೆನೆ ಒಂಥರಾ ರೋಮಾಂಚನ... ಆನೆ,ಒಂಟೆ(ರಥ),ಕುದುರೆ,ರಾಜ, ರಾಣಿ ಮತ್ತು ಕಾಲಾಳು ಇವಿಷ್ಟುಆ ಆಟದ ಅಂಗಗಳು... ೬೪ ಮನೆಗಳ ಪುಟ್ಟ ಹಾಳೆಯ ಮೇಲೆ ಆಡುವ ಆಟ ಅದೆಷ್ಟು ಜನರಿಗೆ ಇಷ್ಟವೋ ಗೊತ್ತಿಲ್ಲ...ಆದರೆ ಆ ಆಟ ಕೇವಲ ಮನರಂಜನೆಯ, ಟೈಂಪಾಸ್ ಆಟವಾಗಿರದೆ ಬುದ್ಧಿ ಮತ್ತೆಯನ್ನು ಹೆಚ್ಹಿಸಲು ಸಹಕಾರಿಯಾಗುವುದಂತು ಸುಳ್ಳಲ್ಲ...
ಚದುರಂಗ ಜನ್ಮತಾಳಿದ್ದು ಭಾರತದಲ್ಲಿ ಅಂತಾರೆ...ಕೆಲವರ ಅನಿಸಿಕೆ ಪ್ರಕಾರ ಇದು ಆರಂಭವಾದದ್ದು ೬ನೆ ಶತಮಾನದಲ್ಲಿ ... ಆ ನಂತರ ಬೇರೆ ಬೇರೆ ಮೂಲಗಳ ಮುಖಾಂತರ ಇಡೀ ವಿಶ್ವಕ್ಕೆ ಪಸರಿಸಿದ ಈ ಆಟ ಈಗಿನ ಕ್ರೀಡಾ ಜಗತ್ತಿನಲ್ಲಿ ಬಹು ಮುಖ್ಯ ಸ್ಥಾನವನ್ನು ಪಡೆದುಕೊಂಡಿದೆ... ಇರಲಿ ಅದರ ಇತಿಹಾಸ ಬಹು ದೊಡ್ಡದು ಅದರ ಬಗ್ಗೆ ಇನ್ನೊಮ್ಮೆ ನೋಡೋಣ...
ಮೊನ್ನೆ ತಾನೆ ಊರಿಗೆ ಹೋದಾಗ ನನ್ನ ತಂಗಿಯ ಮಗಳು "ಮಾಮ ಚೆಸ್ ಆಡೋ ಣವ " ಅಂತ ಕೇಳಿದಾಗ ಒಂದ್ಸಾರಿ ದಿಗಿಲು ಬಿದ್ದೆ.... ಹೌದಲ್ಲ...ಅದೆಷ್ಟು ದಿನವಾಯಿತು ಚದುರಂಗ ಆಡಿ... ಬಹುಶ ನಾನು ಕೊನೆಯದಾಗಿ ಚೆಸ್ ಆಡಿದ್ದು ೨೦೦೦ನೆ ಇಸವಿಯಲ್ಲಿ... ಆಗ ನಾನು ಪದವಿಯ ಕೊನೆಯ ವರ್ಷದಲ್ಲಿ ಓದುತ್ತಿದ್ದೆ... ಮಂಗಳೂರು ಯುನಿವೆರ್ಸಿಟಿಯ ಚೆಸ್ ಟಿಮ್ ಗೆ ನನ್ನ ಕಾಲೇಜ್ ನಿಂದ ನಾನೂ ಹೋಗಿ ಸೋತು ಬಂದಿದ್ದೆ... :-) .. ಸರಿ ಈಗ ಇನ್ನೊಮ್ಮೆ ಅವಕಾಶ ಸಿಗ್ತಲ್ಲ ಅನ್ನೋ ಖುಷಿಲಿ ಆಟಕ್ಕೆ ಕೂತೆ... ನನಗೆ ಗೊತ್ತಿರೋವಷ್ಟು ಆಟ ನನ್ನ ತಂಗಿಯ ಮಗಳಿಗೂ ಕಳಿಸಿದೆ... (ಚದುರಂಗ ಇನ್ನೊ ಮರೆತಿಲ್ಲ ಅನ್ನೋ ಖುಶಿನೂ ಆಯಿತು) ಆಟ ಮುಗಿಸಿದವನೇ ಆಲೋಚನೆಗೆ ಬಿದ್ದೆ... ಅರೆ.. ಇದ್ಯಾವ ಲೋಕದತ್ತ ನಾವು ಸಾಗುತ್ತಿದ್ದೇವೆ... ಚಿಕ್ಕಂದಿನಲ್ಲಿ ಅಪ್ಪ, ಅಮ್ಮ ನಮ್ಮನ್ನು ಕೂರಿಸಿ ಚದುರಂಗ ಕಲಿಸುತ್ತಿದ್ದರು.... ಅದರಿಂದಾಗಿಯೇ ನಾವು ಇಷ್ಟಾದರೂ ಬುದ್ಧಿವಂತ ರಾದೆವೋ ಏನೋ ಗೊತ್ತಿಲ್ಲ...
ಆದರೆ ಇಗೀಗ ಚೆಸ್ ಆಡುವ ಮಕ್ಕಳನ್ನು ನಾನು ಕಂಡಿದ್ದು ತುಂಬ ಕಮ್ಮಿ... ಅದೇನೇನೋ ಆಟಗಳು... ಒಂದೇ ಒಂದು ಆಟದಲ್ಲೂ ಬುದ್ಧಿಮತ್ತೆಗೆ ಅಥವಾ ದೇಹಕ್ಕೆ ವ್ಯಾಯಾಮ ಸಿಗದು... ಬುದ್ಧಿಗೆ ಕಸರತ್ತು ಕೊಡುವ ಇಂಥ ಆಟವನ್ನು ಕೇರಂ, ಹಾವೇಣಿ, ಲೂಡೋದಂಥ ಆಟಗಳು ನುಂಗಿ ಬಿಟ್ಟಿವೆ ... ಸಚಿನ್ ತೆಂಡೂಲ್ಕರ್ ಹೆಸರು ಗೊತ್ತಿರುವಷ್ಟು ಮಂದಿಗೆ ವಿಶ್ವನಾಥನ್ ಆನಂದ್ ಬಗ್ಗೆ ಗೊತ್ತಿಲ್ಲ...
ಇಂಥ ಒಂದು ಅದ್ಭುತ ಆಟ ತನ್ನ ನೆಲೆಯನ್ನೇ ಕಳೆದು ಕೊಳ್ಳುತ್ತಿದೆಯೇ ??? ಹಾಗಂತ ಯೋಚನೆಗೆ ಬಿದ್ದಿದ್ದೇನೆ ... ಬಹುಶ ಹಾಗಾಗಲಾರದು ಅಲ್ಲವೇ ??

Tuesday, April 14, 2009

ಸೆಖೇನಾ? ಹಂಗಂದ್ರೇನು? !!!

ಮೊನ್ನೆ ತಾನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಎಂಬ ಪುಟ್ಟ ಗ್ರಾಮಕ್ಕೆ ಹೋಗಿದ್ದೆ...
ಬಿಸಿಲಿಗೆ ಸುಸ್ತಾಗಿ ಬಿಟ್ಟಿದ್ದ ನಮಗೆ ತಂಪನ್ನು ನೀಡಿದ್ದು ಇಲ್ಲಿಯ "ದಾನುಂಡಿ" ಎಂಬ ಪುಟ್ಟ ಜಲಪಾತ...
ಅಲ್ಲಿಯ ಸುಂದರ ಪ್ರಕೃತಿಯ ಕೆಲವು ಫೋಟೋಗಳು...
ಮಾಳಕ್ಕೆ ತಲುಪಿದವರಿಗೆ ತಣ್ಣನೆ ಮಜ್ಜಿಗೆ ಕುಡಿದಾಗ ಹಾಯಾಗಿತ್ತು ..
ಅಷ್ಟೂ ಮಜ್ಜಿಗೆ ಕುಡ್ದು ಬಿಟ್ರಾ??.... ಛೆ ನಿಮಗೆ ಉಳ್ಸೋದು ಮರ್ತೆ ಹೋಯ್ತು...
ದಾನುಂಡಿಗೆ ಸಾಗುವ ದಾರಿ...
ಸುಸ್ತಾಯಿತು ಕಣ್ರೀ ...

ನಾವೂ ದಾನುಂಡಿಗೆ ಬರ್ಲಾ???

ದೂರದಿಂದ ಕಂಡ ಪುಟ್ಟ ಜಲಪಾತ , "ದಾನುಂಡಿ .."

ದಾನುಂಡಿ ..

ಸೆಖೇನಾ? ಹಂಗಂದ್ರೇನು? !!!

ಇದು ಹಾಲೋ ? ನೀರೋ?

ಹಾಲಲ್ಲಾದರು ಹಾಕು... ನೀರಲ್ಲಾದರು ಹಾಕು .......

ಹಾಲಲ್ಲಿ ಕೆನೆಯಾಗಿ ... ನೀರಲ್ಲಿ ಮೀನಾಗಿ ... ಹಾಯಾಗಿರುವೆ ...
(ಫೋಟೋಗಳು : ವಿನಯ್ ಭಟ್, ಶ್ರೀಹರ್ಷ,ಅರವಿಂದ್ )
(ಇವತ್ತಿಗೆ ಇಷ್ಟು ಸಾಕು... ಮಾಳದ ಬಗೆಗಿನ ಇನ್ನಷ್ಟು ಚಿತ್ರ ಲೇಖನ ಮುಂದೆ ... :-) )
(photo