ನ್ಯಾಯ
ನ್ಯಾಯಕ್ಕೆ ಕಣ್ಣಿಲ್ಲ
ಅಂತ ಗೊತ್ತಿದ್ದ ನಮ್ಮ ಮಂತ್ರಿವರ್ಯರು ,
ಮೀಸಲಾತಿಯಲ್ಲಿ
ಕುರುಡನನ್ನು
ಲೋಕಾಯುಕ್ತರನ್ನಾಗಿಸಿದರು !!!
ಕವಿ
ರವಿ ಕಾಣದ್ದನ್ನು ಕವಿ ಕಂಡ
ಅನ್ನೋ ಮಾತು ಕೇಳಿ
ರವಿ ಅನ್ನೋ ನಾನು ಕವಿಯಾಗ ಹೊರಟೆ..
ಮುಂದೆಲ್ಲಾ ಕತ್ತಲು
ಏನೂ ಕಾಣಿಸಲೇ ಇಲ್ಲ..!!
ಬೇವು - ಬೆಲ್ಲ
ನಾನ್ಯಾವತ್ತು ಸಿಹಿಯಾಗಿರಬೇಕು ಅಂತ
ಸಿಕ್ಕಾಪಟ್ಟೆ ಸಿಹಿ ತಿಂದೆ..
ದೇಹ ಸಿಹಿಯಾಯಿತು
ಮನಸು ಕಹಿಯಾಯಿತು!!!
ಗೋರೆ ಉವಾಚ :
ಜೀವನ ಅಂದ್ರೆ ಇಷ್ಟೇ.. ಮಕ್ಕಳಿಗೆ ಮೊದಲ ೨-೩ ವರ್ಷ ಹೇಗೆ ನಡೆಯೋದು, ಹೇಗೆ ಮಾತಾಡೋದು ಅಂತ ಕಲಿಸುತ್ತಾ ಕಳೆಯುತ್ತೇವೆ... ಮುಂದಿನ ೧೬ ವರ್ಷ "ಸುಮ್ನೆ ಕೂತ್ಕೋ", "ಮಾತಾಡಬೇಡ" ಅನ್ನುತ್ತಾ ಕಳೆಯುತ್ತೇವೆ!!!