Friday, September 3, 2010

ಸುಮ್ನೆ ತಮಾಷೆಗೆ-೩ !!!

ನ್ಯಾಯ

ನ್ಯಾಯಕ್ಕೆ ಕಣ್ಣಿಲ್ಲ
ಅಂತ ಗೊತ್ತಿದ್ದ  ನಮ್ಮ ಮಂತ್ರಿವರ್ಯರು ,
ಮೀಸಲಾತಿಯಲ್ಲಿ
ಕುರುಡನನ್ನು
ಲೋಕಾಯುಕ್ತರನ್ನಾಗಿಸಿದರು !!!

ಕವಿ

ರವಿ ಕಾಣದ್ದನ್ನು ಕವಿ ಕಂಡ
ಅನ್ನೋ ಮಾತು ಕೇಳಿ
ರವಿ ಅನ್ನೋ ನಾನು ಕವಿಯಾಗ ಹೊರಟೆ..
ಮುಂದೆಲ್ಲಾ ಕತ್ತಲು
ಏನೂ ಕಾಣಿಸಲೇ ಇಲ್ಲ..!!

ಬೇವು - ಬೆಲ್ಲ
ನಾನ್ಯಾವತ್ತು ಸಿಹಿಯಾಗಿರಬೇಕು ಅಂತ
ಸಿಕ್ಕಾಪಟ್ಟೆ ಸಿಹಿ ತಿಂದೆ..
ದೇಹ ಸಿಹಿಯಾಯಿತು
ಮನಸು ಕಹಿಯಾಯಿತು!!!

ಗೋರೆ ಉವಾಚ :
ಜೀವನ ಅಂದ್ರೆ ಇಷ್ಟೇ.. ಮಕ್ಕಳಿಗೆ ಮೊದಲ ೨-೩ ವರ್ಷ ಹೇಗೆ ನಡೆಯೋದು, ಹೇಗೆ ಮಾತಾಡೋದು ಅಂತ ಕಲಿಸುತ್ತಾ  ಕಳೆಯುತ್ತೇವೆ... ಮುಂದಿನ ೧೬ ವರ್ಷ "ಸುಮ್ನೆ ಕೂತ್ಕೋ", "ಮಾತಾಡಬೇಡ" ಅನ್ನುತ್ತಾ ಕಳೆಯುತ್ತೇವೆ!!!