Saturday, July 15, 2017

ಸುಮ್ನೆ ತಮಾಷೆಗೆ -೮

ಮನುಷ್ಯರಿಗೂ ಹಂದಿಗೂ ಇರುವ ವ್ಯತ್ಯಾಸವೇನು ? ಶರಾಬು ಕುಡಿದಾಗ ಹಂದಿ ಮನುಷ್ಯನಾಗುವುದಿಲ್ಲ !!

ಹೆಂಡತಿಯ ಜನ್ಮದಿನ ನೆನಪಿರುವವನು, ಆದರೆ ಆಕೆಯ ವಯಸ್ಸು ಮರೆತವನೇ ನಿಜವಾದ ಗಂಡ !!

ಗಂಡಸರು ಅದೆಷ್ಟು ಒಳ್ಳೆಯವರೆಂದರೆ , ತುಂಡುಡುಗೆಯಲ್ಲಿ ೯೦% ಮೈ ತೋರಿಸುತ್ತಾ  ಆಕೆ ಬಂದು ನಿಂತರೂ , ಆಕೆಯ ಬಟ್ಟೆ ಧರಿಸಿದ ಭಾಗವನ್ನಷ್ಟೇ ನೋಡುತ್ತಾನೆ!!

ಆತ ಒಬ್ಬ ಕುರುಡನಿಗಾಗಿ ಬಸ್ಸಿನಲ್ಲಿ ತನ್ನ ಆಸನವನ್ನು ಬಿಟ್ಟು ಕೊಟ್ಟಿದ್ದಕ್ಕೆ ಆತನನ್ನು ಬಸ್ಸಿನ ಡ್ರೈವರ್ ನೌಕರಿಯಿಂದ ತೆಗೆದು ಹಾಕಲಾಯಿತು!

ಗೋರೆ ಉವಾಚ :
ಜೀವನದಲ್ಲಿ ಎರಡು ನಿಯಮಗಳನ್ನು ಪಾಲಿಸಿ ...
೧. ನಿಮಗೆ ಗೊತ್ತಿರುವುದೆಲ್ಲವನ್ನೂ ಇತರರಿಗೆ ಹೇಳಬೇಡಿ ...
೨.


Friday, January 6, 2017

ಗಂಜಿ ಗಿರಾಕಿಗಳು !!

ಮೊನ್ನೆ ಕೆಲಸವಿಲ್ಲದೇ ಇದ್ದಾಗ ಸುಮ್ಮನೆ ಗೀಚಿದ್ದು ...



ಅತ್ಲಾಗೆ ಒಬ್ಬ ಕವಿ, ಇತ್ಲಾಗೆ ಒಬ್ಬ ಸಾಹಿತಿ
ಕುಳಿತು ಹರಟೆಯ ಹೊಡೆಯುತಿರಲು
ಬುದ್ಧಿಜೀವಿಗಳ ಜೀವನವೇ ಪಾವನವು
ಬದುಕಲು ದಾರಿ ನೂರೊಂದು !!


ಬರೆದದ್ದು ಬರೆದಾಯ್ತು , ಒದರಿದ್ದು ಮುಗಿದೋಯ್ತು
ಕೇಳಲು ಜನ ಮಾತ್ರ ಒಂದೊಂದು
ಜೀವನದಿ ಸಾಧಿಸಲು , ಕಷ್ಟಗಳ ಮರಸಾಲು
ಬಿಟ್ಟು ಬೇರೆಯದೇ ದಾರಿಯೆಂದು , ನಿರ್ಧರಿಸಿದರು ಬುದ್ಧಿಜೀವಿಗಳಾಗೋಣವೆಂದು
ಹೊರಟಿಹರು ಗಂಜಿ ಕೇಂದ್ರವನು ಹುಡುಕಿಕೊಂಡು !!


ದಾರಿಯಲಿ ಸಿಕ್ಕವರ ತಲೆಯನಿಷ್ಠು ಕೊರೆದು
ಅವರೆಲ್ಲ ಉಗಿಯಲು , ಬಾಯಿಯಲ್ಲಿ ತಾಂಬೂಲವನು ತಿಂದು
ಬರೆಯಲು ಏನಿಲ್ಲ , ಹೇಳಲೂ ಮತಿಯಿಲ್ಲ
ಬಿಟ್ಟು ಎಲ್ಲವನು ಅದೇ ಸರಿಯೆಂದು , ನಿರ್ಧರಿಸಿದರು ಬುದ್ಧಿಜೀವಿಗಳಾಗೋಣವೆಂದು
ಹೊರಟಿಹರು ಗಂಜಿ ಕೇಂದ್ರವನು ಹುಡುಕಿಕೊಂಡು !!


ಸಾಧಿಸಿದರೆ  ಸಬಲ ನುಂಗಬಹುದು ಅನ್ನುವುದನು ನೆನೆಸಿ
ಅರ್ಥ ತಿಳಿಯದೆ ಚಾಚಿದರು ಹಸ್ತವನು ಪುಡಿಗಾಸಿಗಾಗಿ
ಬಿರುದು ಬಾವಲಿಗಳು ದಾರಿಯಲಿ ಸಿಗುತಿರಲು
ಮತ್ತಿಬ್ಬರು ಸೇರಿದರು ಇದೆ ಸರಿಯೆಂದು , ನಿರ್ಧರಿಸಿದರು ಬುದ್ಧಿಜೀವಿಗಳಾಗೋಣವೆಂದು
ಹೊರಟಿಹರು ಗಂಜಿ ಕೇಂದ್ರವನು ಹುಡುಕಿಕೊಂಡು !!


ಇತಿಹಾಸವನು ತಿರುಚಿ , ಮೈಯನ್ನೆಲ್ಲವ ಪರಚಿ
ಅರುಹಿದರು ನಮ್ಮ ಮಾತು ಸ್ವಲ್ಪ ಕೇಳಿರೆಂದು
ಬರುವಾಗ ಬೆತ್ತಲೆ , ಹೋಗುವಾಗ ಬೆತ್ತಲೆ , ನಡುವೆ ಎಲ್ಲವೂ ಕತ್ತಲೆ
ಹುಡುಕಬಹುದಿತ್ತು ಬೆಳಕು ಅಲ್ಲೊಂದು , ಆದರೂ ನಿರ್ಧರಿಸಿದರು ಬುದ್ಧಿಜೀವಿಗಳಾಗೋಣವೆಂದು
ಹೊರಟಿಹರು ಗಂಜಿ ಕೇಂದ್ರವನು ಹುಡುಕಿಕೊಂಡು !!