Tuesday, November 9, 2010

ಹೀಗಿತ್ತು ದೀಪಾವಳಿ!

ದೀಪಾವಳಿಗೆ ಊರಿಗೆ ಹೋಗಿ ಬಂದೆ..ಎಲ್ಲರೂ ಸೇರಿ ದೀಪಾವಳಿ ಆಚರಿಸಿದೆವು.. ಅಲ್ಲಿಯ ಕೆಲವು ಚಿತ್ರಗಳು ಹಾಗೂ ಸಂಪ್ರದಾಯದ ಕೆಲವು ತುಣುಕುಗಳು..


ನಮ್ಮ ಗ್ರಾಮಕ್ಕೆ ಮಹಾಕಾಳಿ ಊರ ದೇವತೆಯಂತೆ.. ದೀಪಾವಳಿಯ ದಿನ "ಪರವ" ಜನಾಂಗದ ಜನರು ಈ ಮಹಾಕಾಳಿಯ ಮುಖವಾದ ಧರಿಸಿ ಮನೆ ಮನೆ ಹೋಗುವುದು ಇಲ್ಲಿನ ವಾಡಿಕೆ.. ಮಹಾಕಾಳಿ ದೇವತೆ ಊರಿಗೆ ಒಳಿತು ಮಾಡುತ್ತಾಳೆ ಅನ್ನು ನಂಬಿಕೆ ಜನರದು.. ಹೀಗೆ ಬಂದ ಮಹಾಕಾಳಿ ಮುಖವಾದ ಹೊತ್ತ ಪರವ ಜನಾಂಗದ ಒಂದು ತುಣುಕು..
ಪಟಾಕಿಯ ಬಳಕೆಯೂ ಹಿತ ಮಿತವಾಗಿ ಮನಸ್ಸಿಗೆ ಉಲ್ಲಾಸ ನೀಡಿತು..




ಹಬ್ಬಕ್ಕೆ ಹುಲಿ, ಕರಡಿ ವೇಷಧಾರಿಗಳು ಬಂದು ಮನರಂಜನೆ ನೀಡುವುದು ಎಲ್ಲರಿಗೂ ಗೊತ್ತು.. ಹಾಗೆ ಬಂದ ವೇಷಧಾರಿಗಳು.

Friday, October 29, 2010

ಸುಮ್ನೆ ತಮಾಷೆಗೆ - ೪ (ದೀಪಾವಳಿ ವಿಶೇಷ!)

ಪಟಾಕಿ

ದಿನವೂ ಪ್ರೀತಿಸುವ ನನಗೆ
ಪ್ರೇಮಿಗಳ ದಿನ ಬೇಕಾಗಿಲ್ಲ!
ಬಾಯಿ ಬಿಟ್ಟರೆ ಪಟಾಕಿ ಬಿಡುವ ನನಗೆ
ದೀಪಾವಳಿಯೂ ಬೇಕಾಗಿಲ್ಲಾ!!!

-----------------------------------------------------------------------------------------------------------------------------------
ದೀಪಾ-ವಳಿ
ನಮ್ಮ ಓಣಿಗೆ ಹೊಸದಾಗಿ ಬಂದಿದ್ದ
ದೀಪಾಳ ಹಿಂದೆ ಓಣಿ ಹುಡುಗರ ಹಾವಳಿ..
ಅದಕ್ಕೆ ನಮ್ಮ ಕೇರಿಯಲ್ಲಿ ದಿನವೂ
ದೀಪಾ-(ಹಾ)-ವಳಿ!!!

---------------------------------------------------------------------------------------------------------------------------------
ಯಮ ದೀಪ !
ದೀಪಾವಳಿಯ ಮುನ್ನಾ ದಿನ
ಯಮ ಧರ್ಮರಾಯನಿಗೆ
ಯಮದೀಪವಿಟ್ಟೆ!
ಎಣ್ಣೆ ಮುಗಿದು ಯಮನಿಗೆ ದಾರಿ
ಕಾಣದಾದಾಗ, ಮುಂದೆ ಹೋಗು ಅಂತ
ಮೊಂಬತ್ತಿ ಕೊಟ್ಟೆ!!!!
--------------------------------------------------------------------------------------------------------------------------------
(ದುರಾ)ದೃಷ್ಟ!!

ಜಿಪುಣಾಗ್ರೆಸರ ಆತ
ದೀಪಾವಳಿಗೂ  ಪಟಾಕಿ ತರಲಿಲ್ಲ !
ಇದನ್ನು ಕಂಡ ಆತನ ಪ್ರೇಯಸಿ
ತೆಗೋ ಎಂದು ಆತನತ್ತ ಪಟಾಕಿ ಎಸೆದಳು..!!
ಆತನ ದುರಾದೃಷ್ಟಕ್ಕೆ
ಅದಕ್ಕೆ ಬೆಂಕಿಯೂ ಹಚ್ಚಿದ್ದಳು!!!
--------------------------------------------------------------------------------------------------------------------------------
ಗೋರೆ ಉವಾಚ:
ಗಂಡ ಹೆಂಡಿರ ಜಗಳದ ಕೊನೆಗೆ ಬರುವ ನಿರ್ಧಾರಗಳಲ್ಲಿ  ಮೂರು ವಿಧಗಳಿರುತ್ತವೆ.. ಒಂದು ಗಂಡನ ನಿರ್ಧಾರ, ಎರಡನೆದ್ದು ಹೆಂಡತಿಯ ನಿರ್ಧಾರ, ಮತ್ತು ಮೂರನೆಯದು ಸರಿಯಾದ ನಿರ್ಧಾರ..!!!

Friday, September 3, 2010

ಸುಮ್ನೆ ತಮಾಷೆಗೆ-೩ !!!

ನ್ಯಾಯ

ನ್ಯಾಯಕ್ಕೆ ಕಣ್ಣಿಲ್ಲ
ಅಂತ ಗೊತ್ತಿದ್ದ  ನಮ್ಮ ಮಂತ್ರಿವರ್ಯರು ,
ಮೀಸಲಾತಿಯಲ್ಲಿ
ಕುರುಡನನ್ನು
ಲೋಕಾಯುಕ್ತರನ್ನಾಗಿಸಿದರು !!!

ಕವಿ

ರವಿ ಕಾಣದ್ದನ್ನು ಕವಿ ಕಂಡ
ಅನ್ನೋ ಮಾತು ಕೇಳಿ
ರವಿ ಅನ್ನೋ ನಾನು ಕವಿಯಾಗ ಹೊರಟೆ..
ಮುಂದೆಲ್ಲಾ ಕತ್ತಲು
ಏನೂ ಕಾಣಿಸಲೇ ಇಲ್ಲ..!!

ಬೇವು - ಬೆಲ್ಲ
ನಾನ್ಯಾವತ್ತು ಸಿಹಿಯಾಗಿರಬೇಕು ಅಂತ
ಸಿಕ್ಕಾಪಟ್ಟೆ ಸಿಹಿ ತಿಂದೆ..
ದೇಹ ಸಿಹಿಯಾಯಿತು
ಮನಸು ಕಹಿಯಾಯಿತು!!!

ಗೋರೆ ಉವಾಚ :
ಜೀವನ ಅಂದ್ರೆ ಇಷ್ಟೇ.. ಮಕ್ಕಳಿಗೆ ಮೊದಲ ೨-೩ ವರ್ಷ ಹೇಗೆ ನಡೆಯೋದು, ಹೇಗೆ ಮಾತಾಡೋದು ಅಂತ ಕಲಿಸುತ್ತಾ  ಕಳೆಯುತ್ತೇವೆ... ಮುಂದಿನ ೧೬ ವರ್ಷ "ಸುಮ್ನೆ ಕೂತ್ಕೋ", "ಮಾತಾಡಬೇಡ" ಅನ್ನುತ್ತಾ ಕಳೆಯುತ್ತೇವೆ!!!

Friday, August 13, 2010

ಆ ಸಿಗರೇಟು ಮತ್ತು ಇ-ಸಿಗರೇಟು !!!

ಸಿಗರೇಟು.. ಜೀವನದಲ್ಲಿ ಒಮ್ಮೆಯಾದರೂ ಸೇದದವರು ತುಂಬಾ ವಿರಳ.. ಒಂದು ತುದಿ ಬಾಯಿಗಿಟ್ಟು ಇನ್ನೊಂದು ತುದಿಗೆ ಬೆಂಕಿ ಹಚ್ಚಿ, ಬುಸ್ಸ್ಸ್ ಬುಸ್ಸ್ಸ್ ಅಂತ ಹೊಗೆ ಬಿಡೋದು ಅಂದ್ರೆ ಅದೇನೋ ಮಜಾ.. ಆದರೆ ಇದನ್ನೇ ಸೇದಿ ಸೇದಿ ಮುಂದೊಂದು ದಿನ ಕ್ಯಾನ್ಸೆರ್ ನಂಥ ಕಾಯಿಲೆ ಬಂದಾಗ ಭೀಕರ ಸಜಾ!!! ಇಂತಹ ಕಾಯಿಲೆಯಿಂದ ದೂರವಾಗಲು, ಸಿಗರೇಟು ತ್ಯಜಿಸಲೇ ಬೇಕು.. ಆದರೆ ಇದು ಸಾಧ್ಯವಾಗುತ್ತಿಲ್ಲವೇ..? ಅಂಥ್ವರಿಗಾಗಿಯೇ ಬಂದಿದೆ ಇ-ಸಿಗರೇಟು.... ಈಗ ಆ ಸಿಗರೇಟು ಬಿಟ್ಟು ಹಾಕಿ ಇ - ಸಿಗರೇಟು ಶುರು ಹಚ್ಚಿ...


ಏನಿದು ಇ- ಸಿಗರೇಟು?

ಇ-ಸಿಗರೇಟು ಅಂದರೆ ಎಲೆಕ್ಟ್ರೋನಿಕ್ ಸಿಗರೇಟು.. ಅರೆ ಅಂದರೆ ಇದಕ್ಕೆ ಕರೆಂಟ್ ಬೇಕಾ? ಹೌದು .. ಬೆಚ್ಚಿ ಬೀಳಬೇಡಿ . ಇ-ಸಿಗರೇಟು ಉರಿಯೋದು ಒಂದು ಚಿಕ್ಕ ಬ್ಯಾಟರಿ ಇಂದಾಗಿ.. ಇದನ್ನು ತಯಾರಿಸುವವರು ಇದು ತಂಬಾಕು ಸಿಗರೆಟ್ ನಂತೆ ಹಾನಿಕಾರಿಯಲ್ಲ.. ಇದರಿಂದ ಬರುವ ಹೊಗೆ ಪರಿಸರಕ್ಕಾಗಲಿ, ಅಕ್ಕ ಪಕ್ಕಾ ದವರಿಗಾಗಲಿ ಯಾವುದೇ ಹಾನಿಯುಂಟು ಮಾಡುವುದಿಲ್ಲ  ಎಂದು ಹೇಳಿಕೊಳ್ಳುತ್ತಾರೆ.. ಇದರ ಬಗ್ಗೆ ಮುಂದೆ ನೋಡೋಣ .. ಈಗ ಇ-ಸಿಗರೇಟು ಅಂದರೆ ಹೇಗಿರುತ್ತೆ ಸ್ವಲ್ಪ ನೋಡೋಣ..

ಈ ಮೇಲಿನ ಚಿತ್ರ ದಲ್ಲಿರುವುದೇ ಇ-ಸಿಗರೇಟು.. ನೋಡಲು ಸಾಮಾನ್ಯ  ಸಿಗರೇಟಿನಂತೆ ಕಾಣಿಸುವ ಇದು ಸಾಮಾನ್ಯ ಸಿಗರೆಟಲ್ಲ.. ಇದರಲ್ಲಿ ತಂಬಾಕು ಇಲ್ಲ.. ಬೆಂಕಿ ಹಚ್ಚುವ ಅವಶ್ಯಕತೆ ಇಲ್ಲ..  ಆದರೂ ಸೇದಬಹುದು.. ಹೊಗೆ ಬರುತ್ತೆ.. ಥೇಟು ಸಿಗರೇಟು ಸೇದಿದ ಅನುಭವ ಕೊಡುತ್ತೆ..  ಅಷ್ಟೇ ಅಲ್ಲ ಇದನ್ನು ನೋ ಸ್ಮೋಕಿಂಗ್ ಜಾಗದಲ್ಲೂ  ಸೇದಬಹುದಂತೆ..!!! ಅಕ್ಕ ಪಕ್ಕದವರಿಗೆ ಯಾವುದೇ ತೊಂದರೆಯಿಲ್ಲ!!!

ಹಾಗಾದರೆ ಇದರಲ್ಲೇನಿದೆ?

ಮೇಲಿನ ಚಿತ್ರದಲ್ಲಿರೋದೆ ಇ-ಸಿಗರೇಟಿನ ಭಾಗಗಳು..
A . ಎಲ್ ಇ ಡಿ (ಇದು ಉರಿದಾಗ ಸಿಗರೇಟಿನ ತುದಿಯ ಕೆಂಡದಂತೆ ಕಾಣಿಸುತ್ತೆ)
B . ಬ್ಯಾಟರಿ (ಹಾಗು ಕೆಲವು circuit  ಗಳು ಇದರೋಳಗಿವೆ)
C . ಬಿಸಿಯಾಗಿಸುವ ಭಾಗ
D . ಬಾಯಿಯೋಳಗಿಡುವ ಫಿಲ್ಟರ್ (Cratridge )

ಹೇಗೆ ಕೆಲಸ ಮಾಡುತ್ತದೆ?

  ಈ ಇ-ಸಿಗರೇಟಿನ ಫಿಲ್ಟರ್ ಭಾಗವನ್ನು ಬಾಯಿಯಲ್ಲಿಟ್ಟು ಎಳೆದಾಗ ಇದರಲ್ಲಿರೋ ಸೇನ್ಸೆರ್ ಗಾಳಿಯ ಒತ್ತಡ ಅರಿತು ಬಿಸಿಯಾಗಿಸುವ ಭಾಗಕ್ಕೆ ಎಲೆಕ್ಟ್ರೋನಿಕ್ ಸಿಗ್ನಲ್  ಕಳಿಸುತ್ತೆ.. ಆಗ ಈ ಭಾಗ ಬಿಸಿಯಾಗಿ ಫಿಲ್ಟರ್ (Cratridge ) ಒಳಗಿರುವ ಅಲ್ಪ  ನಿಕೋ ಟೀನ್ ನ (ಅಥವಾ ನಿಕೋಟಿನ್ ಇಲ್ಲದ) ದ್ರವ ಪದಾರ್ಥವನ್ನು ಆವಿಯನ್ನಾಗಿಸುತ್ತದೆ.. ಕೆಲವು ಇ-ಸಿಗರೆಟುಗಳಲ್ಲಿ ಒಂದು ಚಿಕ್ಕ ಬಟನ್ ಒತ್ತಿ ಬಿಸಿಯಾಗಿಸುವ ಭಾಗವನ್ನು ಶುರು ಮಾಡಬೇಕಾಗುತ್ತೆ... ಹಾಗೆ ಇದರ ತುದಿಯಲ್ಲಿ ಒಂದು ಎಲ್ ಇ ಡಿ  ಲೈಟು ಉರಿದು , ಸಿಗರೇಟಿನ ಅನುಭವ ನೀಡುತ್ತೆ..

ಇದರ ಬಾಯಿಯೋಳಗಿಡುವ ಫಿಲ್ಟರ್ ಅನ್ನು ಪ್ಲಾಸ್ಟಿಕ್ ನಿಂದ ತಯಾರಿಸಿರುತ್ತಾರೆ.. ಇದರಲ್ಲಿ ಉಷ್ಣತೆಗೆ ಆವಿಯಾಗುವ ವಿವಿಧ ರುಚಿಯ ನಿಕೋಟಿನ್ ಯುಕ್ತ ದ್ರವವನ್ನು ತುಂಬಿಸಿರುತ್ತಾರೆ.. ಈ ದ್ರವವೇ ಉಷ್ತ್ನತೆಗೆ ಆವಿಯಾಗಿ ಹೊಗೆ ಬರುವಂತೆ ಮಾಡುವುದು.. ಇದು ಮುಗಿದಾಗ ಇದನ್ನು ಮತ್ತೆ ತುಂಬಿಸಬಹುದು ಅಥವಾ ಹೊಸ cratridge ಹಾಕಬಹುದು..

ಮತ್ತೆ ಇದರ ಬ್ಯಾಟರಿ ರೀ-ಚಾರ್ಜ್ ಮಾಡುವಂಥದ್ದು.. ಕೆಳಗೆ ನೋಡಿ ಇದನ್ನ ಹೇಗೆ ಚಾರ್ಜ್ ಮಾಡುತ್ತಾರೆ ಅಂತ.. (ಇನ್ನೊಂದು ತುದಿಯನ್ನು ಯು ಎಸ ಬಿ ಹೊಲ್ದೆರ್ ಗೆ ಹಾಕಬೇಕು :))..

ಗಮನಿಸಿ: ಇದರಲ್ಲಿ ಹಾಕುವ ದ್ರವ ಪದಾರ್ಥ ನಿಕೋಟಿನ್ ಯುಕ್ತ ಅಥವಾ ನಿಕೋಟಿನ್ ಇಲ್ಲದೆ ಕೂಡ ಸಿಗುತ್ತದೆ..
ಬೇರೆ ಬೇರೆ ಬಗೆಯ cratridge ಗಳು ಮತ್ತು ಅವುಗಳಲ್ಲಿರುವ ಪದಾರ್ಥಗಳು ಕೆಳಗಿನಂತಿವೆ..


ಇದರ ಒಂದು cratridge ೭೦-೮೦ ಬಾರಿ ಸೇದಲು ಸಾಕಾಗುತ್ತೆ.. ಹಾಗೆ ಬ್ಯಾಟರಿ ಮುಗಿದಿದೆ ಹಾಗೂ ಚಾರ್ಜ್ ಆಗಿದೆ ಅನ್ನೋ ಸೂಚನೆ ಕೊಡೊ ಲೈಟ್ ಬತೇರಿ ಮೇಲೆ ಇವೆ...

ಆರೋಗ್ಯದ ಮೇಲೆ ಇದರ ಪರಿಣಾಮ:

 ಇದರಿಂದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಇಲ್ಲ ಅಂತ ಇದರ ತಯಾರಕರು ಹೇಳಿಕೊಂಡಿದ್ದರೂ ಅದು ಸಾಬೀತಾಗಿಲ್ಲ.. ಇದರ ಮೇಲೆ ಇನ್ನೂ ಅಧ್ಯನ ನಡೆಯುತ್ತಲೇ ಇದೆ.. ಈಗಾಗಲೇ ಇದರ ಮೇಲೆ ಕೆಲವು ದೇಶಗಳು ನಿರ್ಬಂಧ ಹೇರಿವೆ..
ಅಮೆರಿಕಾದ ಸಂಸ್ಥೆ ಯೊಂದು NJoy  ಮತ್ತು Smoking Everywhere ಅನ್ನೋ ಕಂಪೆನಿಗಳ ಇ-ಸಿಗರೆಟ್ ಮೇಲೆ ಅಧ್ಯಯನ ಮಾಡಿ ಇದರಲ್ಲಿ ಮಾರಕ ರಾಸಾಯನಿಕಗಳು ಹಾಗು ಹೇಳಿಕೊಂಡಿದ್ದಕ್ಕಿಂತ ಹೆಚ್ಚಿನ ನಿಕೋಟಿನ್  ಇದೆ ಎಂದು ಪತ್ತೆ ಹಚ್ಚಿದೆ..
ಆದರೆ ಇದನ್ನು ಕಂಪನಿ ಅಲ್ಲ ಗಳೆದಿದೆ.. ಕೆಲವೊಂದು ಸಂಸ್ಥೆ ಗಳು ಈಗಾಗಲೇ ಇದಕ್ಕೆ ಬೆಂಬಲ ಸೂಚಿಸಿದ್ದಾರೆ ಇನ್ನು ಕೆಲವು ಇದು ಕೂಡ ಹಾನಿಕಾರಕ ಹಾಗೂ ಬಿಡಿಸಲಾಗದ ವ್ಯಸನ ಎಂದು ದೂರಿವೆ..
ಕೆನಡ ಕೂಡ ಇ-ಸಿಗರೆಟ್ ಅಷ್ಟೊಂದು ಉತ್ತಮವಲ್ಲ ಅಂತ ಹೇಳಿದೆ..ಇದರಿಂದಾಗಿ ತಂಬಾಕಿನ ವಿಷ ದೇಹದ ಮೇಲೆ ಪರಿಣಾಮ ಬೀರಬಹುದು (ಫುಡ್ Poisoning  ಥರ) ಹಾಗು ಇದನ್ನು ಉಪಯೋಗಿಸುವವರು ಇದಕ್ಕೆ ದಾಸರಾಗಬಹುದು ಅನ್ನೋ ಎಚ್ಚರಿಕೆ ಕೂಡ ನೀಡಿದೆ.. ಅದೇ ರೀತಿ ನ್ಯೂಜೀ ಲ್ಯಾಂಡ್ ನ ಕೆಲವು ವಿಜ್ಞಾನಿಗಳು ಇದರ ದುಷ್ಪರಿಣಾಮಗಳ ಬಗ್ಗೆ ಅಧ್ಯನ ನಡೆಸುತ್ತಲೇ ಇದ್ದಾರೆ..
 ಭಾರತ ದಲ್ಲಿ ಕೂಡ ಇದು ಸಿಗುತ್ತೆ.. ಭಾರತದಲ್ಲಿ ಸಿಗದ್ದೇನು ಅಲ್ಲವೇ? ಅದು ಎಸ್ಟೆ ಕೆಟ್ಟದಾದರೂ, ಲಂಚ ಪಡೆದು ಮಾರುಕಟ್ಟೆಗೆ ಬಿಡಲು ಅನುಮತಿ ನೀಡುವ ಬ್ರ್ಹಷ್ಟರು ನಮ್ಮಲ್ಲಿ ಬೇಕಾದಷ್ಟಿದ್ದಾರೆ...ಅಂದ ಹಾಗೆ ಇದರ ಬೆಲೆ ಸುಮಾರು ೧೫೦೦ ರುಪಾಯಿಯಿಂದ ೪೦೦೦ ರುಪಾಯಿವರೆಗಿದೆ..




                                        
ಇದು ಕೂಡ ಒಂದು ಮಾದರಿಯ ಇ-ಸಿಗರೆಟ್

ಏನೇ ಇರಲಿ ಇದರ ತಯಾರಕರು ಮಾತ್ರ ಇದು ಸುರಕ್ಷಿತ, ಸಿಗರೇಟು ಸೇವನೆಯ ಅಭ್ಯಾಸ ಬಿಡಿಸಿ ನಿಮ್ಮ ಆರೋಗ್ಯ ಕಾಪಾಡುತ್ತದೆ ಹಾಗೂ ಹಣ ಉಳಿಸುತ್ತದೆ ಅಂತ ಪ್ರಚಾರ ಮಾಡಿಕೊಂಡಿವೆ..


ಸೂಚನೆ: ಈ ಲೇಖನ ನಮ್ಮೆಲ್ಲರ ಮಾಹಿತಿಗಾಗಿ ಅಷ್ಟೇ.. ಯಾರಾದರು ಇ-ಸಿಗರೆಟ್ ಸೇದಿ , ಆರೋಗ್ಯ ಅಥವಾ ಅವರ ಹವ್ಯಾಸ, ಜೀವನದ ಮೇಲೆ ದುಷ್ಪರಿಣಾಮಗಳಾದರೆ  ಅದಕ್ಕೆ ನಾನು ಜವಾಬ್ದಾರನಲ್ಲ :D  


ಗೋರೆ ಉವಾಚ :
ವಿದ್ಯುತ್ತೆ ಕಾಣದ ಆ ಹಳ್ಳಿಗೆ ವಿದ್ಯುತ್ ಬಂದಿತ್ತು.. ಜನ ಖುಷಿಯಿಂದ ಕುಣಿಯುತ್ತಿದ್ದರೆ ಪಕ್ಕದಲ್ಲಿ ಒಂದು ನಾಯಿ ಸಹ ಡಾನ್ಸ್ ಮಾಡತೊಡಗಿತು.. ಅದನ್ನು ನೋಡಿದ ಹಳ್ಳಿಯ ಮುಖಂಡ ಅಚ್ಚರಿಯಿಂದ ನಾಯಿಯ ಬಳಿ ಸಾಗಿ ಕೇಳಿದ " ನಾಯಿ, ನಮಗೆ ವಿದ್ಯುತ್ ಬಂತು ಅದಕ್ಕೆ  ಸಂತೋಷ ದಿಂದ ಕುಣೀತಾ ಇದ್ದಿವಿ, ನೀನ್ಯಾಕೆ ಕುಣಿತಿದ್ದಿಯಾ?" .. ಆತನನ್ನೊಮ್ಮೆ ದುರುಗುಟ್ಟಿ ನೋಡಿದ ನಾಯಿ "ನಿಮ್ಮ ವಿದ್ಯುತ್ ಜೊತೆ ಕಂಬನೂ ಊರಿಗೆ ಬಂದಿದ್ಯಲ್ಲ" ಅಂತ ಹೇಳಿ ತನ್ನ ಡಾನ್ಸ್ ಮುಂದುವರೆಸಿತು!!

Monday, June 14, 2010

ವಿಚಿತ್ರ ಪ್ರಾಣಿ!!!

ದಿಸ್ಕಾವರಿ, ಅನಿಮಲ್ ಪ್ಲಾನೆಟ್, ನ್ಯಾಷನಲ್ geography  ಇಂತಹ ಚಾನೆಲ್ ನೋಡೋದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ.. ಇದರಲ್ಲಿ ತೋರಿಸೋ ಚಿತ್ರ ವಿಚಿತ್ರ ಪ್ರಾಣಿಗಳನ್ನ ನೋಡೋದು ಅಂದ್ರೆ ತುಂಬಾ ಇಷ್ಟ.. ಅವುಗಳ ಜೀವನ ಶೈಲಿ, ಬದುಕೋ ರೀತಿ, ವಿಚಿತ್ರ ಎನ್ನಿಸುವ ರೂಪ, ಪ್ರಕೃತಿಗೆ ಅವು ಹೊಂದುಕೊಳ್ಳುವ ಬಗೆಗಳು... ಇವನ್ನೆಲ್ಲಾ ಮೊನ್ನೆ ನೋಡುತ್ತಾ ಕೂತಿದ್ದೆ... ಅದ್ಯಾವುದೋ ಪ್ರಾಣಿಯೊಂದನ್ನು ನೋಡುತ್ತಿದ್ದ ನಾನು "ಒಹ್, ಈ ಪ್ರಾಣಿ ವಿಚಿತ್ರವಾಗಿದೆ " ಅಂತ ಉದ್ಗರಿಸಿದೆ...
"ಏನು?? ವಿಚಿತ್ರನಾ?? ಏನ್ ವಿಚಿತ್ರ? ಬಹುಶ ಭೂಮಿಯ ಮೇಲೆ ಅದರಲ್ಲೂ ಈ ಭಾರತ ದೇಶದಲ್ಲಿರೋ  ಮನುಷ್ಯ ನಷ್ಟು ವಿಚಿತ್ರ ಪ್ರಾಣಿ ಇನ್ನೊಂದಿಲ್ಲ" ಹಾಗಂತ ಸದಾನಂದ ಮೆಲ್ಲನೆ ಗೊಣಗಿದ್ದು ಕೇಳಿಸಿತು..
"ಯಾಕೆ ಏನಾಯಿತು? ಮನುಷ್ಯ  ಅದರಲ್ಲೋ ಭಾರತೀಯ ವಿಚಿತ್ರ ಅಂತ ಯಾಕೆ ಅನ್ನಿಸುತ್ತೆ ನಿಂಗೆ?" ಆತನಿಗೆ ಕೇಳಿದ್ದೆ ತಡ ಆತ ದೊಡ್ಡ ಭಾಷಣವೇ ಶುರು ಮಾಡಿದ್ದ...
"ಮತ್ತಿನ್ನೇನು.. ಇಲ್ಲಿ ಎಲ್ಲವೂ ಹುಚ್ಚು..
ಮನುಷ್ಯನಿಗೆ ಅತೀ ಅಗತ್ಯವಾದ ಪೋಲೀಸು , ಅಂಬು ಲೆನ್ಸ್  ಬರೋಕೆ ಗಂಟೆಗಟ್ಟಲೆ ಕಾಯಬೇಕು.. ಅದೇ ಪಿಜ್ಜಾ ಅನ್ನೋ ದರಿದ್ರ ೩೦ ನಿಮಿಷಗಳಲ್ಲಿ ಮನೆಗೆ ಬರುತ್ತೆ..
ಇಲ್ಲಿ  ಕಾರ್ ಸಾಲಕ್ಕೆ ಬಡ್ಡಿ ಕೇವಲ ೮%, ಅದೇ ಶಿಕ್ಷಣ ಸಾಲಕ್ಕೆ ೧೨%..
ಅಕ್ಕಿಗೆ ೪೦ ರುಪಾಯಿ, ಸಿಮ್ ಕಾರ್ಡು ಉಚಿತ...
ಕಾಲಿಗೆ ಹಾಕೋ ಚಪ್ಲಿನ ಹವಾನಿಯಂತ್ರಿತ ಶೋ ರೂಂ ಗಳಲ್ಲಿ ಮಾರ್ತಾರೆ, ಅದೇ ನಾವು ತಿನ್ನೋ ತರಕಾರಿ ಫೂಟ್ಪಾತಿನಲ್ಲಿ...
ಕುಡಿಯೋ ನಿಂಬೆ ಶರಬತ್ತಿಗೆ ರಾಸಾಯನಿಕ ಪದಾರ್ಥ, ಅದೇ ಬಟ್ಟೆ ಒಗೆಯೋ ಪೌಡರ್ ಶುದ್ಧ ನಿಂಬೆಯದ್ದು....
ನಿಂಗೆ ಇದೆಲ್ಲ ವಿಚಿತ್ರ ಮನುಷ್ಯರ ಥರಾ ಅನ್ಸಲ್ವಾ? ಮನುಷ್ಯ ಒಂದು ಪ್ರಾಣಿ ಅಂತ ಹೇಳೋದಾದ್ರೆ, ನಾವೇ ಎಲ್ಲಕ್ಕಿಂತ ವಿಚಿತ್ರ ಅಲ್ವಾ??"
 ಹಾಗಂತ ಆತ ಕೇಳಿದ್ದಕ್ಕೆ "ಆಲೋಚಿಸಬೇಕಾದ ವಿಚಾರ" ಅಂದಷ್ಟೇ ಹೇಳಿ ಸುಮ್ಮನಾದೆ..!!

(ಕೆಳಗಿನ ಕಾಲೋಮ್ "ಶಂಭುಲಿಂಗ" ಅವರ  ಕೊನೆಖಿಡಿ  ಕಾಲಂ ನೋಡಿದ ಮೇಲೆ , ನಾನೂ ಇಂಥದ್ದೇ ಒಂದು ಕಾಲಂ ಪ್ರತಿ ಬರಹದ ಕೆಳಗೆ  ಮಾಡಬೇಕು ಅಂತ ತೀರ್ಮಾನಿಸಿದ್ದು)

ಗೋರೆ ಉವಾಚ (ಕದ್ದಿದ್ದು)
ಮಲ್ಲಿಕಾ ಶೆರಾವತ್ ಮಿಕ್ಸಿಯಲ್ಲಿ  ಅದೇನೋ ಮಾಡುತ್ತಿರೋದು ನೋಡಿ ಮನೆ ಕೆಲಸದವ ಕೇಳಿದ " ಮೇಡಂ , ಜೂಸ್ ಮಾಡ್ತಾ ಇದ್ದೀರಾ??"
ಅದಕ್ಕೆ ಮಲ್ಲಿಕಾ ಶೆರಾವತ್ ಹೇಳಿದಳು " ಇಲ್ಲ ಮಾರಾಯಾ.. ನನ್ನ ಬಟ್ಟೆ ಒಗಿತಾ ಇದ್ದೇನೆ!!"

Tuesday, May 11, 2010

ಸುಮ್ನೆ ತಮಾಷೆಗೆ!! - ೨

ಕಥೆ
ನಾನೊಂದು ಕಥೆ ಬರೆದೆ
ಓದಿ ಅಭಿಪ್ರಾಯ ಹೇಳು ಅಂತ ಗೆಳೆಯನಿಗೆ ಕೊಟ್ಟೆ
ಆತ ಕಥೆಗಾರನಾದ!!
-------------------------------------------------------------------------------------------------------------
ಗುರುತು
ಭಾರತದಲ್ಲಿರುವವರು
ಭಾರತದವರು,
ಅಮೇರಿಕಾ ದಲ್ಲಿರುವವರು
ಅಮೇರಿಕಾದವರು,
ಆಸ್ಟ್ರೇಲಿಯಾದಲ್ಲಿರುವವರು
ಆಸ್ತ್ರೆಲಿಯಾದವರು,
ಮಲಬಾರ್ ನಲ್ಲಿರುವವರು
ಮಲ-ಬಾರದವರು!!!
-------------------------------------------------------------------------------------------------------------
ಅಡ್ಡ-ನಾಮ
ಹುಡುಗನಾದರೆ ಬೆಳ್ಳ,
ಹುಡುಗಿಯಾದರೆ ಬೆಳ್ಳಿ,
ಹಾಗಂತ ನನಗೆ ಹೇಳಿದ್ದು
ಬೆಳ್ಳುಳ್ಳಿ!!!
-------------------------------------------------------------------------------------------------------------

Wednesday, April 7, 2010

ಮತ್ತೆ ಭೂತದ ಬೆನ್ನು ಹತ್ತಿ!!!

ಭಾಗ ಒಂದು ಇಲ್ಲಿ ಓದಿ..

"ಆವತ್ತೇ ನನಗೆ ಗೊತ್ತಾಗಿ  ಹೋಗಿತ್ತು ಇದು ನನ್ನ ಬೆನ್ನು ಬಿಡೋದಿಲ್ಲ ಅಂತ"  ಕುಮಾರ ತನ್ನ ಮಾತು ಮುಂದುವರಿಸಿದ..
"ಜ್ಯೋತಿಷಿ ಪಕ್ಕಾ ಹೇಳಿದ್ದ.. ನಿನ್ನ ಮನೆಯಲ್ಲಾಗಲೀ ಆಜು ಬಾಜಿನಲ್ಲಾಗಲಿ ಮಾಟ ಮಾಡಿ, ಭೂತವನ್ನು ಬಂಧಿಸಿ ಇಡಲಾಗಿದೆ ಅಂತ.. ತುಂಬಾ ಹುಡುಕಿದೆ ಆದ್ರೆ ಏನೂ ಸಿಗಲಿಲ್ಲ..ಸಾಮಾನ್ಯವಾಗಿ ಇಂಥದ್ದೆಲ್ಲಾ ತಾಮ್ರದ ತಗಡಿನಲ್ಲಿ ಮಂತ್ರಿಸಿ, ಅಥವಾ ತೆಂಗಿನಕಾಯಿ, ನಿಂಬೆ ಹಣ್ಣು ಮಂತ್ರಿಸಿ ಮಾಡುತ್ತಾರಂತೆ, ಮಾಟದ ಪ್ರಭಾವ ದಿಂದ ಹೊರ ಬರಬೇಕಾದರೆ ಅದನ್ನು ನಮ್ಮ ಜಾಗದಿಂದ ದೂರ ಎಸೆಯಬೇಕು.. ಆವತ್ತಿಂದ ಹುಡುಕಿ ಹುಡುಕಿ ಸಾಕಾಯಿತು..ನನಗೇನೂ ಸಿಗಲಿಲ್ಲ...  ಪೂಜೆ ಹವನ ಎಲ್ಲಾ ಮಾಡಿಸ್ದೆ.. ಇಗೀಗ ನನ್ನ ಮಗಳು ಸಹ ಮಂಕಾಗಿರುತ್ತಾಳೆ.. ಮಾತೆ ಆಡೋದಿಲ್ಲ .. ಅವಳಿಗೆ ಏನಾದ್ರು ಆದ್ರೆ ಅಂತ ಹೆದರಿಕೆ." ಒಂದು ಕ್ಷಣ ಕುಮಾರ ಮಾತು ನಿಲ್ಲಿಸಿದ..
"ಇದು ೨೧ನೆ ಶತಮಾನ.. ಮಾಟ ಮಂತ್ರ ಇದ್ಯೋ ಇಲ್ವೋ ನಂಗೊತ್ತಿಲ್ಲ.. ದರಬೆಸಿ ಜನಗಳಿಗಿಂತ ದೊಡ್ಡ ಭೂತಾನೂ ಇರಲಿಕ್ಕಿಲ್ಲ,,, ಆದರೆ ನೀನೇನೂ ಹೆದರಬೇಡ... ಇದಕ್ಕೊಂದು ಪರಿಹಾರ ಇದೆ.." ನನ್ನ ಮಾತು ಕೇಳುತ್ತಿದ್ದ ಕುಮಾರ ನೆಟ್ಟಗಾದ... ಆತನಲ್ಲಿ ಕುತೂಹಲ ಮೂಡಿತು.. ಏನಾದರೂ ಮಾಡಿ ಈ ಮಾಟ-ಭೂತದಿಂದ ಹೊರ ಬಂದರೆ ಸಾಕು ಅನ್ನುವಂತಿತ್ತು ಆತನ ನೋಟ.. ಏನೆ ಹೇಳಿದರೂ ಮಾಡಲು ತಯಾರಾದಂತೆ ಅನ್ನಿಸಿತು...
"ನನಗೆ ಗೊತ್ತಿರೋ ಒಬ್ರು ಇದ್ದಾರೆ.. ಅವರಲ್ಲಿ ಇದಕ್ಕೆ ಖಂಡಿತಾ ಪರಿಹಾರ ಸಿಗಬಹುದು.. ಯಾವುದಕ್ಕೂ ನಾನು ಅವರನ್ನು ಭೇಟಿಯಾಗಿ ೨ ದಿನದಲ್ಲಿ ಇಲ್ಲಿಗೆ ಬರುತ್ತೇನೆ.. ಯಾವುದೇ ಭೂತವೇ ಇರಲಿ ಅದ್ರ ಬೆನ್ನು ಹತ್ತೋದು ಅಂದ್ರೆ ನಂಗೆ ತುಂಬಾ ಇಷ್ಟ" ಹಾಗಂತ ಹೇಳಿ ಹೊರಡಲನುವಾದೆ..
ತಾನೂ ಬರುತ್ತೇನೆ ಅಂದ ಕುಮಾರನಿಗೆ ಬೇಡ ಅಂತ ಹೇಳಿ ಅಲ್ಲಿಂದ ಎದ್ದು ಬಂದೆ..

ಛೆ.. ಹೇಗಿದ್ದ ಕುಮಾರ ಹೇಗಾದ? ಆ ಪೋಲಿ ಕುಮಾರ ಇವತ್ತು ಪೋಲಿಯೋ ಬಡಿದಂತೆ ಮಂಕಾಗಿದ್ದಾನೆ.. ಮಾಟ ಮಂತ್ರ, ಭೂತ ಎಲ್ಲಾ ಇದೆಯೋ ಇಲ್ಲವೋ, ಆದರೆ ಅದು ಇದೆ ಮತ್ತು ಅದು ನನ್ನ ಮೇಲೆ ದಾಳಿ ಮಾಡುವಂತೆ ಯಾರೋ ಮಾಡಿದ್ದಾರೆ  ಅನ್ನೋ ಹೆದರಿಕೆಯೇ ಆತನನ್ನು ಅರ್ಧ ಕೊಂದು ಹಾಕಿತ್ತು.. ಆಮೇಲೆ ನಡೆದ ಕೆಲವೊಂದು ಘಟನೆಗಳು , ಬೆಂಕಿಗೆ ತುಪ್ಪ ಸುರಿದಂತೆ ಆತನ ಹೆದರಿಕೆಯನ್ನು ಇಮ್ಮಡಿಗೊಳಿಸಿದ್ದವು..  ಆತ ಇದೆ ಗುಂಗಿನಲ್ಲಿ ತನ್ನ ಕೆಲಸ ಎಲ್ಲಾ ಬಿಟ್ಟು ಜ್ಯೋತಿಷಿ ಗಳ ಹಿಂದೆ ಬಿದ್ದಿದ್ದ.. ಬಿ ಪಿ ಹೆಚ್ಚಿತ್ತು.. ಆಡಲು ಬರುತ್ತಿದ್ದ ಮಗುವಿಗೆ ಬಯ್ಯುವುದು ಸಾಮಾನ್ಯವಾಗಿತ್ತು... ಮಗು ಮಂಕಾಗದೆ ಇನ್ನೇನಾಗುತ್ತೆ.?.. ಭೂತದ ಬೆನ್ನು ಹತ್ತಲು ನಾನು ತಯಾರಾದೆ!!

ಆತನ ಮನೆಗೆ ಮಾಡಿದ್ದ ಮಾಟ ತೆಗೆಸಲು ನಾನು ತಯಾರಾದೆ.. ಭೂತ ಓಡಿಸುವ ಬಗ್ಗೆ ಕೆಲವು ಬೇಕಾದ ಮಾಹಿತಿ ಕಲೆ ಹಾಕಿದೆ.. ಬೇಕಾದ ಸಿದ್ಧತೆ ಎಲ್ಲಾ ಮಾಡಿಕೊಂಡು ೨ ದಿನಗಳ ನಂತರ ನಾನು ಆತನ ಮನೆಯತ್ತ ಹೆಜ್ಜೆ ಹಾಕಿದೆ.. ಕೆಲವೊಂದು ಮಾತುಗಳ ನಂತರ ನಾನು ಆತನ ಮನೆಯೆಲ್ಲ ಒಮ್ಮೆ ಸುತ್ತು ಹಾಕಿದೆ.. ಮಲಗುವ ಕೋಣೆಯಲ್ಲಿ ಮಂಚವನ್ನು ಉತ್ತರ ದಿಕ್ಕಿನ ಕಡೆ ಹಾಕಲಾಗಿತ್ತು.. ಉತ್ತರ ದಿಕ್ಕಿಗೆ ಯಾಕೆ ತಲೆಹಾಕಿ ಮಲಗಬಾರದು ಅನ್ನೋ ಕಥೆ ನಮ್ಮ ಪುರಾಣಗಳಲ್ಲಿದೆ.. ಆದರೆ ಉತ್ತರ ದಿಕ್ಕಿನಲ್ಲಿ ಅಯಸ್ಕಾಂತೀಯ  ಶಕ್ತಿ ಹೆಚ್ಚು ಇದ್ದು ಅದು ನಮ್ಮ ಮೆದುಳಿನ ಮೇಲೆ ಪರಿಣಾಮ ಬೀರಬಹುದು ಅಂತ ಎಲ್ಲೊ ವಿಜ್ಞಾನ ಓದಿದ್ದು ನೆನಪಾಯಿತು.. ಕುಮಾರನಿಗೆ ಹೇಳಿ ಮಂಚವನ್ನು ಪೂರ್ವ ದಿಕ್ಕಿನ ಕಡೆ ತಿರುಗಿಸಿದೆ..ತೆಗೆದು ಕೊಂಡು ಹೋಗಿದ್ದ ಫೆಂಗ್ ಶುಇ ಅಂತ ಕರೆಯೋ ಕರ್ಕಶ ಶಬ್ದ ಮಾಡೋ ಸಾಮಾನೊಂದನ್ನು  ಚಾವಡಿಯಲ್ಲಿ ನೇತು ಹಾಕಿದೆ..
"ಮೊದಲಿಗೆ ಮಾಟ ಮಾಡಿದ ಅನುಭವ ನಿಮಗೆ ಹೇಗಾಯಿತು?" ಕುಮಾರನಿಗೆ ಪ್ರಶ್ನೆ ಹಾಕುತ್ತಿದ್ದಂತೆ, ಕುಮಾರ ಮತ್ತು ಆತನ ಹೆಂಡತಿ ನನ್ನನ್ನು ಒಬ್ಬ ಮಾಂತ್ರಿಕನನ್ನು ನೋಡುವಂತೆ ಬೆರಗು ಕಣ್ಣುಗಳಿಂದ ನೋಡತೊಡಗಿದರು.."ದನ ಒಂದು ಸತ್ತು ಹೋಯಿತು.. ಏನು ಅಂತ ಬಲಿಮೆ (ಭವಿಷ್ಯ) ಕೇಳಿದೆವು.. ಆಗ ತಿಳಿಯಿತು" ಕುಮಾರನ ಹೆಂಡತಿ ಹೇಳುತ್ತಿದ್ದಂತೆ, ಅವರಿಬ್ಬರನ್ನೂ ದನಗಳನ್ನು ಕಟ್ಟುತ್ತಿದ್ದ ಹಟ್ಟಿಯ ಬಳಿ ಹೋಗುವಂತೆ ಹೇಳಿದೆ..
"ಅಂದರೆ ಮಾಟ ಮಾಡಿದ್ದು ಇಲ್ಲೇ ಎಲ್ಲೊ ಇರಬೇಕು.. ಇಲ್ಲಿಂದ ಪ್ರಾರಂಭವಾಗಿದೆ.. ಈಗ ಹುಡುಕಿ.. ಹಟ್ಟಿಯ ಸಂದಿ ಸಂದಿಗಳನ್ನು ಹುಡುಕಿ.." ಹಾಗಂತ ಹೇಳಿ ನಾನು ಹೊರಬಂದೆ.. ಕುಮಾರ ಮತ್ತು ಆತನ ಹೆಂಡತಿ ಹುಡುಕಿದ್ದೇ ಹುಡುಕಿದ್ದು.. ಅಲ್ಲೇನಿದೆ ಮಣ್ಣಾಂಗಟ್ಟಿ ಸಿಗೋಕೆ.. ಬರುತ್ತಿದ್ದ ನಗು ತಡೆದುಕೊಂಡು ಕುಮಾರನ ಪುಟಾಣಿ ಮಗಳ ಜೊತೆ ಆಟವಾಡತೊಡಗಿದೆ... ಸುಮಾರು ಅರ್ಧ ಘಂಟೆ ಕಳೆಯಿತು..
"ಇಲ್ಲಿ , ಇಲ್ಲಿ ಏನೋ ಇದೆ!!!" ಕುಮಾರ ಕಿಟಾರನೆ ಕಿರುಚಿಕೊಂಡಿದ್ದು ನೋಡಿ ಥಟ್ಟನೆ ಅತ್ತ ಓಡಿದೆ..

ಹೌದು ಅಲ್ಲೇನೋ ವಸ್ತುವೊಂದು ಹಟ್ಟಿಯ ಸಂದಿಯಲ್ಲಿತ್ತು.. ಕುಮಾರ ಅದನ್ನು ಹೊರ ತೆಗೆದಿದ್ದ.. ಪ್ಲಾಸ್ಟಿಕ್ ನಲ್ಲಿ ಕಟ್ಟಲಾಗಿದೆ.. ಆತನ ಕೈಯಿಂದ ಅದನ್ನು ತೆಗೆದುಕೊಂಡು ಮೆಲ್ಲನೆ ಬಿಚ್ಚಿದೆ.. ಪ್ಲಾಸ್ಟಿಕ್ ಗೆ ಮಣ್ಣೆಲ್ಲ ಅಂಟಿಕೊಂಡಿತ್ತು.. ಒಳಗಡೆ ನೋಡಿದವನೇ ಬೆಚ್ಚಿಬಿದ್ದೆ!!! ಅದರಲ್ಲಿತ್ತು ಒಂದು ತಾಮ್ರದ ತಗಡು, ಅದರ ತುಂಬಾ ಕುಂಕುಮ..!!!
ಪೂರ್ತಿ ಬಿಚ್ಚಲು ಧೈರ್ಯ ಸಾಲದೇ ಹಾಗೆ ಮತ್ತೆ ಕಟ್ಟಿದೆ.. "ದೂರ ದೂರಕ್ಕೆ ಎಸೆದು ಬಾ.. ಪೀಡೆ ತೊಲಗಲಿ.. ಹೋಗು.. ಬೇಗ ಹೋಗು.. ಯಾರಿಗೂ ತಿಳಿಯದಂತೆ ,ಯಾರ ಕೈಗೂ ಸಿಗದಂತಹ ಜಾಗಕ್ಕೆ ಎಸೆದು ಬಾ.."  ಬೆವರಿನಿಂದ ಒದ್ದೆಯಾಗಿದ್ದ ನಾನು ನಡುಗುವ ಧ್ವನಿಯಲ್ಲಿ ಕುಮಾರನಿಗೆ ಆಜ್ಞಾಪಿಸಿದೆ.. ಹಿಂದೂ ಮುಂದು ನೋಡದೆ, ನನ್ನ ಕೈಯಿಂದ ಪೊಟ್ಟಣ ತೆಗೆದುಕೊಂದವನೇ ತೋಟದತ್ತ ಓಡಿದ ಕುಮಾರ.. ಆತನ ತೋಟ ದಾಟಿದರೆ ಇರುವುದೇ ಕಪಿಲಾ ನದಿ.. ಅಲ್ಲಿಯೇ ಬಿಸಾಕುತ್ತೇನೆ ಅಂತ ಹೇಳಿ ಒಂದೇ ಓಟ ಕಿತ್ತ... ಅರ್ಧ ಘಂಟೆಯೊಳಗೆ ಎಲ್ಲವೂ ಮುಗಿದು ನಾನು ಹೊರಡಲನುವಾದೆ.. ಈ ವಿಷಯ ಯಾರಿಗೂ ಹೇಳಬಾರದು ಎಂದೂ, ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಆರಾಮ ವಾಗಿರಬೇಕೆಂದು ಹೇಳಿ ನಾನು ಅಲ್ಲಿಂದ ಹೊರ ಬಂದೆ..ಕುಮಾರ ಮತ್ತು ಆತನ ಪತ್ನಿಯ ಮುಖದಲ್ಲಿ ಮಂದಹಾಸವಿತ್ತು.. ಕೆಲವು ದಿನಗಳ ನಂತರ ಆತ ತನ್ನ ಮನೆಯಲ್ಲಿ ಸತ್ಯನಾರಾಯಣ ಪೂಜೆ ,ಅದೂ ಇದೂ ಅಂತ ಕೆಲವೊಂದು ಪೂಜೆ ಮಾಡಿಸಿದ್ದ.. ನಾನೂ ಹೋಗಿ ಪ್ರಸಾದ ಸ್ವೀಕರಿಸಿ ಬಂದಿದ್ದೆ.. ಕುಮಾರನ ಸಂಸಾರ ಉಲ್ಲಾಸದಿಂದ ಇದ್ದಿದ್ದು ನೋಡಿ ಖುಷಿಯಾಯಿತು...
ಹಾಗಿರಲು, ಮೊನ್ನೆ ಕುಮಾರ ಫೋನ್ ಮಾಡಿದ್ದ.. ಕ್ಷೇಮ ಸಮಾಚಾರ ಮುಗಿದು "ನೀನು ಮಾಯವಾಗೋದು ಯಾವಾಗ" ಅಂತ ಆತನಿಗೆ ಕೇಳಿದೆ .. ಯಾಕೆ ಅಂದ.. ಅಲ್ಲ ನೀನು ಅಷ್ಟೊಂದು ಸಪೂರ ಆಗ್ಬಿಟ್ಟಿದ್ದೆ, ಹೀಗೆ ಆದ್ರೆ ಒಂದು ದಿನ ನೀನು ಮಾಯ ಆಗ್ಲೇ ಬೇಕಲ್ಲ ಅಂತ ನಕ್ಕೆ.. "ಇಲ್ವೋ ನಾನೀಗ ೬೫ ಕಿಲೋ ಗೊತ್ತ.." ಅಂತ ಪಕ ಪಕನೆ ನಕ್ಕ.. ಅದೇ ಕೆಲವೊಂದು ಪೋಲಿ ಜೋಕ್  ಮಾಡಿದ.. ಅಡಿಕೆ ಹೇಗಿತ್ತು ಈ ವರ್ಷ ಅಂತ ಕೇಳಿದ್ದಕ್ಕೆ "ಹೇಗಿರುತ್ತೆ?? ಪ್ರತಿ ಸಲದಂತೆ ಕೆಂಪಗೆ, ದುಂಡಗೆ ಹಾಗೆ ಇದೆ " ಅಂತ ಮತ್ತೆ ನಗಲು ಶುರು ಹಚ್ಚಿದ.. ಕುಮಾರ ಹಿಂದಿನಂತೆ ಆಗಿದ್ದು ನನಗೆ ಸಮಾಧಾನ ತಂದಿತ್ತು..ಮಾಟ ಮಂತ್ರ ಎಲ್ಲಾ ತೊಲಗಿ ಹೋಗಿದೆ ಅಂತ ಆತನಿಗೆ ಖಾತ್ರಿಯಾಗಿ ನಿರುಮ್ಮಳನಾಗಿದ್ದ... ಮಗಳನ್ನು ಈ ವರ್ಷ ಶಾಲೆಗೆ ಸೇರಿಸಬೇಕೆಂದು, ಇನ್ನೊಂದು ನಾಮಕರಣದ ಊಟಕ್ಕೆ  ನಾನು ಇನ್ನು ಕೆಲವೇ ತಿಂಗಳುಗಳಲ್ಲಿ ಆತನ ಮನೆಗೆ ಹೋಗಬೇಕಾಗುತ್ತೆ ಅಂತ ತಿಳಿದು ಸಂತೋಷವಾಯಿತು.. ಹಾಗೆ ಮಾತು ಮುಗಿಸಿದ ನಾನು,
ಆವತ್ತು ಹಟ್ಟಿಯಲ್ಲಿ ಸಿಕ್ಕಿದ್ದ ತಾಮ್ರದ ತಗಡನ್ನು ನಾನೇ ಶೆಣೈ ಅವರ ಅಂಗಡಿಯಿಂದ ತಂದಿದ್ದೆಂದೂ , ಅದರಲ್ಲಿ ಕುಂಕುಮ ಹಾಕಿ ಮಡಚಿ ಹಟ್ಟಿಯ ಹತ್ತಿರ ಹೋದಾಗ ಅವರಿಬ್ಬರಿಗೂ ತಿಳಿಯದಂತೆ ನಾನೇ ಇಟ್ಟಿದ್ದೆಂದೂ  , ಅದನ್ನೇ ಅವರಿಗೆ ಸಿಗುವಂತೆ ಮಾಡಿ ಮಾಟ ಎಲ್ಲಾ ಹೋಯ್ತು ಅನ್ನೋ ನಂಬಿಕೆ ಬರುವಂತೆ ಮಾಡಿದ್ದೆಂದೂ ,   ಕುಮಾರನಿಗೆ ಹೇಳಲೇ ಇಲ್ಲ!!!!!

--ಮುಗಿಯಿತು.

Monday, April 5, 2010

ಭೂತದ ಬೆನ್ನುಹತ್ತಿ !!!

ಕುಮಾರ ..!! ಕಾಲೇಜ್ ನಲ್ಲಿರುವಾಗ ನಮ್ಮ ಜೊತೆ ಗೆಳೆಯರ ಪೈಕಿ ಈತನೂ ಒಬ್ಬ... ನಮ್ಮ ಗುಂಪಿನಲ್ಲಿ ಅತ್ಯಂತ ಪೋಲಿ ಹುಡುಗ ಅಂದ್ರೆ ಈತನೇ.. ಯಾರಿಗಾದರೂ ಕಾಮೆಂಟ್ ಹೊಡೆಯೋದು, ತಮಾಷೆ ಮಾಡೋದು, ಲೈನ್ ಹೊಡೆಯೋದು ಎಲ್ಲದರಲ್ಲೂ ಮುಂದು.. ನಮ್ಮ ಕಾಲೇಜ್ ಗೆ ಬರುತ್ತಿದ್ದ ಮಿನಿ ಸ್ಕರ್ಟ್ ಹುಡುಗಿಯರಿಗೆ ಚೂಡಿದಾರ್ ಹಾಕಿಕೊಂಡು ಬರುವಂತೆ ಮಾಡಿದ್ದು ಈತನೇ... ಹೇಗೆ ಅಂತೀರಾ? ಯಾರಾದರೂ ಹುಡುಗೀರು ಮಿನಿ ಸ್ಕರ್ಟ್ ಹಾಕಿಕೊಂಡು ಬಂದರೆ ಮುಗೀತು ಈತ "ಉಫ್ಫ್" "ಉಫ್ಫ್" ಅಂತ ಗಾಳಿ ಬಿಡಲು ಪ್ರಾರಂಭಿಸುತ್ತಿದ್ದ.. ಏನಯ್ಯಾ ಇದು ಅಂತ ಒಮ್ಮೆ ಕೇಳಿದ್ದಕ್ಕೆ  "ಏನಿಲ್ಲಾ, ಅಷ್ಟೊಂದು ಚಿಕ್ಕ ಸ್ಕರ್ಟ್ ಹಾಕಿಕೊಂಡಿದ್ದಾಳಲ್ಲ, ಎಲ್ಲಿಯಾದರೂ ಗಾಳಿಗೆ ಮೇಲೆ ಹಾರುತ್ತೋ ನೋಡೋಣ" ಅಂತ ಹೇಳಿ ಪೋಲಿ ನಗು ಬೀರಿದ್ದ.. ಇದನ್ನು ತಿಳಿದ ಹುಡುಗೀರು ಮಿನಿ ಸ್ಕರ್ಟ್ ತೊಡೊದನ್ನೇ    ನಿಲ್ಲಿಸಿದರು...!!! ಇದೊಂದು sample  ಅಷ್ಟೇ ಆತನ ಪೋಲಿ ಕಥೆಗಳನ್ನು ನೆನೆಸಿಕೊಂಡರೆ ಈಗಲೂ ನಗು ಬರುತ್ತೆ.. ತುಂಬಾ ಚಟುವಟಿಕೆಯ ಮನುಷ್ಯ .. ನೋಡಲೂ ಸುಮಾರಾಗಿದ್ದ.. ಕಾಲೇಜ್ ಮುಗಿಸಿ ಅಪ್ಪ ಮಾಡಿಟ್ಟಿದ್ದ ೧೦-೧೨ ಎಕರೆ ಯಷ್ಟಿದ್ದ ಜಮೀನಿನಲ್ಲಿ  ಕೃಷಿ ಮಾಡಿಕೊಂಡು ಹಾಯಾಗಿದ್ದ.. ಮದುವೆಯೂ ಆಗಿ ೨೦೦೫ ರ ಹೊತ್ತಿಗೆ ಒಂದು ಮಗು ಕೂಡ ಆಗಿತ್ತು... ಆದರೆ....
ಅದು ೨೦೦೯ ಜನವರಿನೋ ಫೆಬ್ರುವರಿನೋ ಸರಿಯಾಗಿ ನೆನಪಿಲ್ಲ , ಒಂದು ಸಾರಿ ಊರಿಗೆ ಹೋಗಿದ್ದ ನಾನು ಕುಮಾರನನ್ನು ಭೇಟಿಯಾದೆ.. ಆತನನ್ನು ನೋಡಿದ ನಾನು ಒಂದು ಕ್ಷಣ ಬೆಚ್ಚಿಬಿದ್ದೆ.. ಈತನೇ ಕುಮಾರನಾ? ನಂಬಲಿಕ್ಕೆ ಆಗಲಿಲ್ಲ.. ಆತನ ದೇಹ ಅಸ್ತಿಪಂಜರದಂತೆ ಆಗಿ ಹೋಗಿತ್ತು... ಆತನೇ ತುಂಬಾ ಪ್ರೀತಿಯಿಂದ ಬೆಳೆಸಿದ್ದ ತೋಟ ನೀರಿಲ್ಲದೆ ಕೆಂಪಗಾಗಿತ್ತು..."ಏನಯ್ಯ ಇದು" ಅಂದೆ... ಯಾರಿಗಾದರೂ ತಮಾಷೆ ಮಾಡುತ್ತಾ ಅಷ್ಟೊಂದು ಉಲ್ಲಾಸದಿಂದಿದ್ದ ಹಿಂದಿನ ಕುಮಾರ ಮಾತೆ ಆಡಲಿಲ್ಲ.. ನನಗೆ ಗಾಬರಿಯಾಯಿತು.. ಎಷ್ಟಾದರೂ ನನ್ನ ಸ್ನೇಹಿತನಲ್ಲವೇ.. "ಏನಾದರೂ ಖಾಯಿಲೇನಾ" ಮತ್ತೆ ಕೇಳಿದೆ.. ಇಲ್ಲಪ್ಪ ಅಂದ.. ಮತ್ತಿನ್ನೇನು ಹೀಗಾಗಿದ್ದಿಯಾ? ಅಂತ ಕೇಳಿದ್ದಕ್ಕೆ ಮನೆಗೆ ಬಾ ಮಾತಾಡೋಣ ಅಂತ ಕರೆದುಕೊಂಡು ಹೋದ... ನಾವು ಮನೆಗೆ ಹೋಗುತ್ತಿದ್ದಂತೆ ಅಲ್ಲೇ ಅಂಗಳದಲ್ಲಿದ್ದ ಆತನ ೩.೫ ವರ್ಷದ ಮಗಳು ಮನೆಯೊಳಕ್ಕೆ ಓಡಿಹೋದಳು.. ಆತನ ಮನೆಯನ್ನೊಮ್ಮೆ ವೀಕ್ಷಿಸಿದೆ... ಹಿಂದಿನ ಸೊಬಗಿಲ್ಲ.. ಆತನ ಮನೆ ಮುಂದೆ ಇದ್ದ ಎರಡು ಭಯಂಕರ ನಾಯಿಗಳ ಶಬ್ದವಿಲ್ಲ... ಆತನ ಹೆಂಡತಿಯೂ ಸೊರಗಿ ಹೋಗಿದ್ದಳು.. ನನಗೇನೂ ಅರ್ಥವಾಗದೆ ಆತನ ಮನೆಯ ಬದಿಯಲ್ಲಿದ್ದ ದನಗಳ ಹಟ್ಟಿಯ ಕಡೆ ವೀಕ್ಷಿಸಿದೆ.. ೧೦-೧೨ ರಷ್ಟಿದ್ದ ದನ ಎಮ್ಮೆ ಯಾವುದೂ ಇರಲಿಲ್ಲ..ಉಹುಂ ಒಂದೇ ಒಂದು ದನವಾಗಲಿ ಎಮ್ಮೆಯಾಗಲಿ ಇಲ್ಲ.. ಏನಿದೆಲ್ಲಾ.. ನನಗೆ ಅರ್ಥವಾಗದೆ ಮೆಲ್ಲನೆ ಕುರ್ಚಿಯಲ್ಲಿ ಕೂತೆ.. ಮನಸ್ಸಿನಲ್ಲಿ ಏನೇನೊ ಕಲ್ಪನೆಗಳು... ಏನಾದರೂ ಖಾಯಿಲೆ ಬಂದಿರಬಹುದೇ..? ಅಥವಾ ಈತನ ಅಪ್ಪನಂತೆ ಈತನೂ ಕುಡಿತದ ದಾಸನಾಗಿ ಬಿಟ್ಟನೇ? ಅಪ್ಪನ ಕುಡಿತ ಬಿಡಿಸಲು ಶತಾಯ ಗತಾಯ ಯತ್ನಿಸಿದ್ದ ಕುಮಾರನೇ ಹೀಗೆ ಮಾಡಿಯಾನೆ?.. ನಾನು ಸುಮ್ಮನೆ ಗರಬಡಿದಂತೆ ಕುಳಿತೆ ಇದ್ದೆ.. ಆತ ಕಾಫಿ ತಂದುಕೊಟ್ಟ.. ನನಗೆ ತಡೆಯಲಾಗಲಿಲ್ಲ... "ಏನೋ ಇದು , ಇದೇನು ಎಲ್ಲಾ ಹೀಗಾಗಿ ಹೋಗಿದೆ? ಏನಾದ್ರು ತೊಂದ್ರೆನಾ.. ಕೃಷಿಯಲ್ಲಿ ಏನಾದರೂ ಲೋಸ್ಸ್ ಆಯ್ತಾ.." ಆತ ಒಂದು ಕ್ಷಣ ಆತನ ಹೆಂಡತಿಯ ಮುಖ ನೋಡಿದ.. ಆಕೆಯ ಕಣ್ಣುಗಳು ಆಗಲೇ ಒದ್ದೆಯಾಗಿದ್ದವು..."ಇಲ್ಲ ಗೋರೆ.. ಈಗೆ ೮ ತಿಂಗಳ ಹಿಂದಿನಿಂದ ಇದು ಪ್ರಾರಂಭವಾಯಿತು" ಅಂದ..

ಅರ್ಥವಾಗದೆ ಆತನ ಮುಖ ನೋಡಿದೆ.. "ಈಗ್ಗೆ ೮ ತಿಂಗಳ ಹಿಂದೆ ನಮ್ಮ ಹಟ್ಟಿಯಲ್ಲಿ ೨ ದನಗಳು ಸತ್ತು ಹೋದವು.. ಆಮೇಲೆ  ಒಂದು ನಾಯಿ.. ಹೀಗೆ ೨-೩ ತಿಂಗಳಲ್ಲಿ ೪-೫ ಜೀವಗಳು ಒಂದೊಂದಾಗಿ ಹೋಗಿಬಿಟ್ವು.. ಏನೆಂದೇ ಅರ್ಥವಾಗಲಿಲ್ಲ.. ಗೋ- ಡಾಕ್ಟರ ಸಹ ಕಾರಣ ತಿಳಿಯದೆ ಹಿಂದುರಿಗಿದ...ಎಲ್ಲಾ ಸಾಯೋದು ಬೇಡ ಅಂತ ಎಲ್ಲಾ ದನ-ಕರು ಮಾರಿಬಿಟ್ಟೆ.. ನಾನೇ ತುಂಬಾ ಜ್ಯೋತಿಷಿ ಗಳ ಬಳಿ ಹೋದೆ.. ಆಮೇಲೆ ತಿಳೀತು ನೋಡು" ಆತ ಮಾತು ನಿಲ್ಲಿಸಿದ..
"ಏನು ಏನಂತ ತಿಳೀತು"
"ಕುಂದಾಪುರದ ಹತ್ತಿರ ಒಬ್ಬ ಜ್ಯೋತಿಷಿ ಇದ್ದಾನೆ , ತುಂಬಾ ತಿಳಿದವನು..ತುಂಬಾ ಫೇಮಸ್ ... ಆತನ ಬಳಿ ಪ್ರಶ್ನೆ ಕೇಳಿದೆ. ಆಗ್ಲೇ ನನಗೆ ಈ ವಿಷಯ ತಿಳಿದದ್ದು.. ಪರಿಹಾರಕ್ಕಾಗಿ ತುಂಬಾ ಖರ್ಚು ಮಾಡಿದೆ ಆದರೆ ಯಾವುದೇ ಉಪಯೋಗ ಆಗ್ಲಿಲ್ಲ.."
ಆತನ ಮುಖವನ್ನೇ ಗಮನಿಸಿದೆ.. ಇಷ್ಟು ಮಾತಿಗೆ ಆತ ಬೆವರತೊಡಗಿದ್ದ .!!
"ಯಾರೋ , ಯಾರೋ ನಮಗೆ ಮಾಟ ಮಾಡಿದ್ದಾರಂತೆ!!!"  ಕುಮಾರ ಗಕ್ಕನೆ ತನ್ನ ಮಾತು ನಿಲ್ಲಿಸಿದ..
"ಏನು? ಮಾಟ?? "  ನಾನು ಒಂದು ಕ್ಷಣ ಬೆಚ್ಚಿಬಿದ್ದೆ!!!!

--ಮುಂದುವರೆಯುವುದು..

ಬ್ಲಾಗ್ ಕಳ್ಳರು!!!

ಇದು ತುಂಬಾ ದಿನಗಳಿಂದ ನನ್ನ ತಲೆ ತಿನ್ನುತ್ತಿತ್ತು... http ://ravikanth -gore .blogspot .com ಅಂತ ಟೈಪಿಸಿದ ಕೂಡಲೇ ನನ್ನ ಬ್ಲಾಗ್ ಗೆ ಹೋಗೋದು ಬಿಟ್ಟು ಅದು ಇನ್ನೊಂದು ತಾಣ http ://freegadget2015 .blogspot .com ಅನ್ನೋ ತಾಣಕ್ಕೆ ಲಗ್ಗೆ ಇಡುತ್ತಿತ್ತು... ಇದ್ದ್ಯಾಕೆ ಹೀಗೆ ಅಂತ ಕಾರಣ ಹುಡುಕುತ್ತಲೇ ಇದ್ದೆ... ಕೊನೆಗೂ ತಿಳಿಯಿತು, ಇಲ್ಲಿ ಬ್ಲಾಗ್ ಕಳ್ಳರೂ ಇದ್ದಾರೆ..
ಬ್ಲಾಗಿಗೆ ಕೆಲವಾರು ತಿಂಗಳ ಹಿಂದೆ ಚೆಸ್ ಆಟದ gadget  ಒಂದನ್ನ ಸೇರಿಸಿದ್ದೆ ಇದಕ್ಕೆ ಕಾರಣ.. ಈ gadget ನಲ್ಲಿ ನಮ್ಮ ಬ್ಲಾಗ್ ಅನ್ನು hijack  ಮಾಡೋ ಕೋಡ್ ಬರೆದಿರುತ್ತಾರೆ.. ಅದು ನಮಗೆ ಬೇಕಾದ ತಾಣ ಬಿಟ್ಟು ಬೇರೆಯದೇ ತಾಣಗಳಿಗೆ ಲಗ್ಗೆಯಿಡುತ್ತದೆ... ಆ ಮೂಲಕ ಬ್ಲಾಗ್ ಕಳ್ಳರು ತಮ್ಮ ತಾಣಗಳ ಭೇಟಿಗಳ ಸಂಖ್ಯೆ ಹೆಚ್ಚಿಸಿಕೊಂಡು, ಗೂಗಲ್ ad ಮೂಲಕ ದುಡ್ಡು ಮಾಡುತ್ತಾರೆ.. ನಾನು ಆ ಚೆಸ್ ಆಟದ gadget ತೆಗೆದಿದ್ದೆ ಎಲ್ಲವೂ ಸರಿಹೋಯಿತು..
ಇದಿಷ್ಟೂ ನಿಮಗೂ ತಿಳಿದಿರಲಿ ಎಂದು ಇಲ್ಲಿ ಹಾಕಿದೆ.. ನೀವೂ ಇಂತಹ ತೊಂದರೆಗೆ ಸಿಳುಕಿಕೊಂಡಿದ್ದಲ್ಲಿ ಒಮ್ಮೆ ಇಂತಹ ಬೇಡದ gadget  ತೆಗೆದು ಹಾಕಿ ನೋಡಿ... ಹೆಚ್ಚಿನ ಮಾಹಿತಿ ಬೇಕಿದ್ದರೆ ತಿಳಿಸಿ..

Thursday, March 25, 2010

ಸದಾನಂದ ಮತ್ತು ಗುಣಪಾಲ ಮೇಷ್ಟ್ರು!!

ಮೊನ್ನೆ ಸದಾನಂದ ಸಿಕ್ಕಿದ್ದ.. ತುಂಬಾ ದಿನಗಳಾಗಿದ್ದವು ಆತನನ್ನು ಭೇಟಿ ಮಾಡಿ.. ಅಪರೂಪಕ್ಕೆ ಒಮ್ಮೊಮ್ಮೆ ಬೀರ್ ಕುಡಿಯೋ ಅಭ್ಯಾಸವಿದೆ ಆತನಿಗೆ... ಮೊನ್ನೆ ಸಿಕ್ಕಿದವನೇ "ಬೀರು" ಅಂತ ನನ್ನ ಮುಖ ನೋಡಿ ನಕ್ಕ.."ಸರಿ , ನೀನು ಹೋಗಿ ಕುಡಿದು ಬಾ ನಾನಿಲ್ಲೇ ಇರ್ತೀನಿ" ಅಂದೆ.. ಇಲ್ಲ ನೀನು ನನ್ನ ಜೊತೆ ಬರಬೇಕು ಅಂತ ಹಠ ಹಿಡಿದ.. ಸರಿ ಅಂತ ಆತನ ಜೊತೆ ಒಂದು ಗಾರ್ಡನ್ ಹೋಟೆಲ್ ಕಡೆ ಸಾಗಿದೆ.. ನಾವಿಬ್ಬರೂ ಸಿಕ್ಕರೆ ನಮ್ಮ ಬಾಲ್ಯದ ಆಟಗಳು ನೆನಪಾಗುತ್ತವೆ.. ಮಾಡಿದ ಚೇಷ್ಟೆಗಳು, ಮಾಡಿಕೊಂಡ ಅವಘಡಗಳು, ಈಗ ನೆನೆಸಿಕೊಂಡರೆ ನಗು ಬರುತ್ತೆ.. ಹಾಗೆ ಮೊನ್ನೆ ಆತನ ಜೊತೆ ಕೂತಿದ್ದಾಗ ಕೆಲವೊಂದು ಘಟನೆಗಳು ನೆನಪಾದವು..

ಘಟನೆ ಒಂದು..
  ಆಗ ಬಹುಶ ನಾವು ನಾಲ್ಕನೇ ತರಗತಿಯಲ್ಲಿ ಇದ್ದಿರಬೇಕು.. ಬೆಳಗ್ಗೆ ನಾವಿಬ್ಬರೂ ಒಟ್ಟಿಗೆ ಶಾಲೆಗೇ ಹೋಗುತ್ತಿದ್ದೆವು.. ಆವತ್ತೋ ಹಾಗೆ ಶಾಲೆಗೇ ಹೊರಟವನನ್ನು ಕೇಳಿದೆ "ಮಗ್ಗಿ ಕಲ್ತಿಯಾ"?   ಯಾವ ಮಗ್ಗಿ ? ಸದಾನಂದ ಪ್ರಶ್ನಾರ್ಥಕವಾಗಿ ನನ್ನ ಮುಖ ನೋಡಿದ.. "ಲೋ ಗೂಬೆ ನಿನ್ನೆ ತಾನೇ ಗುಣಪಾಲ ಮೇಷ್ಟ್ರು ಹೇಳಿದ್ರಲ್ಲ ಎಲ್ರೂ ೬ ನೆ ಮಗ್ಗಿ ಬಾಯಿಪಾಠ ಮಾಡಿಕೊಂಡು ಬರಬೇಕು ಅಂತ.. ಕಲ್ತಿಲ್ವ? ನಿನಗಿವತ್ತು ಇದೆ ನೋಡು" ನಾನು ಇಷ್ಟು ಹೇಳಿದ್ದೆ ಸದಾನಂದ ಒಂದು ಕ್ಷಣ ಬೆಚ್ಚಿ ಬಿದ್ದ.. ಗುಣಪಾಲ ಮೇಷ್ಟ್ರು..!!! ನೆನೆಸಿಕೊಂಡರೆ ಹೆದರಿಕೆ ಯಾಗುತ್ತಿತ್ತು.. ತುಂಬಾ ಜೋರು.. ಅವರ ಬೆತ್ತದ ರುಚಿ ನೋಡದೆ ಯಾವುದೇ ವಿದ್ಯಾರ್ಥಿ ಶಾಲೆಯಿಂದ ಹೊರಗೆ ಬಂದಿರಲಿಕ್ಕಿಲ್ಲ.. ಇವತ್ತು ಸದಾನಂದನಿಗೆ ಹೊಡೆತ ಖಂಡಿತ.. ಸದಾನಂದನ ಮುಖ ಬಿಳುಚಿಕೊಂಡಿತ್ತು.. ಆಟದ ಮಧ್ಯೆ ಮಗ್ಗಿ ಕಲಿಯುವುದೇ ಮರೆತಿದ್ದನಾತ.. "ನೀನು ಹೋಗು ನಾನು ಈಗಲೇ ಬಂದೆ" ಅಂದವನೇ ಆತ ಮನೆಯತ್ತ ಓಟಕಿತ್ತ.. ಅದ್ಯಾಕೆ ಓಡಿದ ಎಂದು ತಿಳಿಯದೆ ನಾನು ಅವಕ್ಕಾಗಿ ಶಾಲೆಯತ್ತ ಹೆಜ್ಜೆ ಹಾಕಿದೆ.. ಇನ್ನೇನು ಗುಣಪಾಲ ಮಾಸ್ತರು ಪಾಠ ಮಾಡಲು ಬಂದರು ಅನ್ನುವಷ್ಟರಲ್ಲಿ ಸದಾನಂದ ಹಾಜರಾಗಿದ್ದ!!

"ಎಲ್ರೂ ಮಗ್ಗಿ ಕಲ್ತಿದ್ದೀರ??" ಮಾಸ್ತರು ಕೇಳಿದ್ದಕ್ಕೆ ನಾವೆಲ್ಲಾ "ಹೌದು ಸಾರ್" ಎಂದು ಕೂಗಿಕೊಂಡೆವು.. "ಒಬ್ಬೊಬ್ಬರಾಗಿ ಶುರು ಮಾಡಿ" ಹಾಗೆ ಮೇಷ್ಟ್ರು ಹೇಳುತ್ತಿದ್ದಂತೆ ಮೊದಲನೇ ಬೆಂಚಿನಿಂದ ಒಬ್ಬೊಬ್ಬರಾಗಿ ಮಗ್ಗಿ ಒಪ್ಪಿಸತೊಡಗಿದೆವು.. ನನ್ನ ಸರದಿಯೂ ಬಂತು.. ನಾನು ಮುಗಿಸಿದ್ದೇ ಸದಾನಂದ ನಿಧಾನಕ್ಕೆ ಎದ್ದು ನಿಂತ.. ಆತನ ಕೈ ಕಾಲು ಮೆಲ್ಲನೆ ನಡುಗುತ್ತಿತ್ತು.. "ಆರೊಂದ್ಲಿ ಆರು, ಆರು ಯೆರಡ್ಲಿ ಹನ್ನೆರಡು..ಆರು ಮೂರ್ಲಿ ...." ಸದಾನಂದ ತಡವರಿಸತೊಡಗಿದ..."ಆರು ಮೂರ್ಲಿ ಹದಿನೆಂಟು"  ಹಾಗಂತ ಹೇಳಿಕೊಟ್ಟ ಮೇಷ್ಟ್ರು ಆತನ ಬೆನ್ನಿನ ಮೇಲೆ "ಛಟ್" ಅಂತ ಬೆತ್ತ ಬೀಸಿಯೇ ಬಿಟ್ಟರು.. ಸದಾನಂದ ಹಾಗೆಯೇ ಹೇಳಿ ಮತ್ತೆ ತಡವರಿಸತೊಡಗಿದ.. ಪ್ರತಿಯೊಂದು ಮಗ್ಗಿಯ ಪಂಕ್ತಿಗೂ ಒಂದೊಂದು ಏಟು.. ಹುಹ್.. ಒಂದು ಅಥವಾ ಎರಡು ಏಟಿಗೆ ಕಣ್ಣೀರು ಹರಿಸುತ್ತಿದ್ದ ಸದಾನಂದ ಆವತ್ತು ನಾಲ್ಕು ಬಿದ್ದರೂ ತುಟಿಪಿಟಿಕ್ ಎಂದಿರಲಿಲ್ಲ.. ಬದಲಿಗೆ ಆತನ ಮುಖದಲ್ಲಿ ಸಣ್ಣಗೆ ನಗು.. ನನಗ್ಯಾಕೋ ಅನುಮಾನ ಕಾಡತೊಡಗಿತು..ಅದ್ಯಾಕೋ ಸದಾನಂದನಿಗೆ ಹೊಡೆಯುವಾಗ ಬೇರೆಯೇ ರೀತಿಯ ಶಬ್ದ ಬರುತ್ತಿತ್ತು!!!.. ಆತ ಅದೇನೋ ಬೆನ್ನಿಗೆ ಕಟ್ಟಿಕೊಂಡಂತೆ.. ಅದು ಮಾಸ್ತರಿಗೂ ಗೊತ್ತಾಗಿ ಹೋಯಿತು.. "ಅಂಗಿ ಬಿಚ್ಚು" ಗುಣಪಾಲ ಮಾಸ್ತರು ಅಬ್ಬರಿಸಿದರು.. ಸದಾನಂದ ನಡುಗುತ್ತ ಅವರ ಮುಖ ನೋಡತೊಡಗಿದ.. "ನಿಕ್ಕೆ ಪನ್ಯ ಅಂಗಿ ದೆಪ್ಪು" ಈ ಬಾರಿ ಗುಣಪಾಲ ಮೇಷ್ಟ್ರು ಸದನಂದನ ಮಾತೃ ಭಾಷೆ ತುಳುವಿನಲ್ಲಿ ಆಜ್ಞಾಪಿಸಿದರು .. ಬೇರೆ ವಿಧಿಯಿಲ್ಲದೇ ಸದಾನಂದ ನಿಧಾನಕ್ಕೆ ಅಂಗಿ ಬಿಚ್ಚಿದ.. ಅದನ್ನು ನೋಡಿ ನಾವೆಲ್ಲಾ ಹೊಟ್ಟೆ ಹುಣ್ಣಾಗುವಂತೆ ನಕ್ಕು ಬಿಟ್ಟೆವು..!!!!
ಗುಣಪಾಲ ಮಾಸ್ತರ ಏಟಿಗೆ ಹೆದರಿಕೊಂಡಿದ್ದ ಸದಾನಂದ ತನ್ನ ಬೆನ್ನಿಗೆ ಅಡಕೆ ಮರದ ಹಾಳೆಯೊಂದನ್ನು ಕಟ್ಟಿಕೊಂಡು ಬಂದಿದ್ದ.. ಆತ ಮನೆಗೆ ಓಡಿ ಹೋಗಿದ್ದು ಯಾಕೆ ಅನ್ನೋದು ನನಗೆ ಆಗ ಅರ್ಥವಾಗಿತ್ತು... ನಾವೆಲ್ಲಾ ಜೋರಾಗಿ ನಗುತ್ತಿದ್ದರೆ  ಅದನ್ನು ನೋಡಿ ಗುಣಪಾಲ ಮೇಷ್ಟ್ರು ಸಹ ನಗತೊಡಗಿದರು..."ನಾಳೆ ಬರುವಾಗ ಮಗ್ಗಿಯನ್ನು ೫೦ ಸಾರಿ ಬರೆದುಕೊಂಡು ಬಾ" ಅಂತ ಶಿಕ್ಷೆ ವಿಧಿಸಿದ ಮೇಷ್ಟ್ರು ನಗುತ್ತ ಕ್ಲಾಸಿನಿಂದ ಹೊರನಡೆದರು!!!

ಎರಡನೆ ಘಟನೆಯನ್ನು ಮುಂದೆ ಬರೆಯುವೆ!!!

Tuesday, March 23, 2010

ಸುಮ್ನೆ ತಮಾಷೆಗೆ!!!

ನೀತಿ !!!
ಬಿರುಗಾಳಿಗೆ ಬೀಸಲು ಯಾರೂ ಕಲಿಸುವುದಿಲ್ಲ,
ಸುನಾಮಿಗೆ ಹೇಗೆ ಅಪ್ಪಳಿಸಬೇಕೆಂದು ಯಾರೂ ಕಲಿಸುವುದಿಲ್ಲ,
ಭೂಮಿಗೆ ಹೇಗೆ ಕಂಪಿಸಬೇಕೆಂದು ಯಾರೂ ಕಲಿಸುವುದಿಲ್ಲ,
ಹಾಗೆಯೇ ಹೆಂಡತಿಯನ್ನು ಹೇಗೆ ಆಯ್ಕೆ ಮಾಡಬೇಕೆಂದು ಯಾರೂ ಕಲಿಸುವುದಿಲ್ಲ...
ನೀತಿ: ಪ್ರಕೃತಿ ವಿಕೋಪಗಳು ಯಾರೂ ಕಲಿಸಿ ಬರುವಂಥದ್ದಲ್ಲ, ಅವು ತನ್ನಿಂತಾನೆ ನಡೆಯುತ್ತವೆ!!!
----------------------------------------------------------------------------------------------------------------------------
ವ್ಯತ್ಯಾಸ!!
ಸ್ನೇಹಿತನಿಗೆ ನೀನು ನನ್ನ ಉತ್ತಮ ಸ್ನೇಹಿತ ಅಂತ ಹೇಳಬಹುದು..
ಆದರೆ ಹೆಂಡತಿಗೆ, ನೀನು ನಾನ ಉತ್ತಮ ಹೆಂಡತಿ ಅಂತ ಹೇಳುವ ಧೈರ್ಯ ಯಾರಿಗಿದೆ??
-----------------------------------------------------------------------------------------------------------------------------
ಅತೀ ಚಿಕ್ಕ ಗಲೀಜು ಕಥೆ!
ಅಪ್ಪಟ ರೇಷ್ಮೆ ಬಿಳುಪಿನ ಸುಂದರ ಕುದುರೆಯೊಂದು ಕೆಸರಿನಲ್ಲಿ ಬಿದ್ದು ಹೋಯಿತು!!!

Thursday, February 11, 2010

ಬದನೇಕಾಯಿ !!

ಬಿ ಟಿ ಬದನೆ.. ಬಹುಶ ಎಲ್ಲರೂ ಇದರ ಬಗ್ಗೆ ಕೇಳಿಯೇ ಇದ್ದೀರಿ.. ತುಂಬಾ ದಿನಗಳಿಂದ ಇದರ ಬಗ್ಗೆ ನ್ಯೂಸ್ ಪೇಪರ್ , ಟ್ಟಿ ವಿ ಗಳಲ್ಲಿ ಕೇಳುತ್ತಲೇ ಇದ್ದೇವೆ.. ಬಿ ಟಿ ಬದನೆ ಬೇಕೇ, ಬೇಡವೇ ಅನ್ನೋ ಜಿಜ್ಞಾಸೆ ತುಂಬಾ ದಿನಗಳಿಂದ ನಮ್ಮ ರಾಜಕಾರಣಿಗಳಿಗೆ, ವಿಜ್ಞಾನಿಗಳಿಗೆ ಇದ್ದೆ ಇದೆ.. ಇದು ಬೇಡವೇ ಬೇಡ ಅಂತ ಹೇಳಿರೋದು ಶುದ್ಧ ಭಾರತೀಯರು ಮಾತ್ರ.. ಅವರಿಗೆ ನಮ್ಮ ದೇಶದ ಬಗ್ಗೆ, ನಮ್ಮ ಜನರ ಬಗ್ಗೆ ಕಾಳಜಿಯಿತ್ತು.. ಅರೆ, ಈ ಬದನೆಗೂ ನಮ್ಮ ದೇಶದ ಭವಿಷ್ಯ ಕ್ಕೂ ಏನ್ರೀ ಸಂಬಂಧ ಅಂತ ಕೇಳ್ತೀರಾ?? ಹಾಗಾದ್ರೆ ಮುಂದೆ ಓದಿ..

ಈ ಬಿ ಟಿ  ಗೆ ಆಂಗ್ಲ ಭಾಷೆಯಲ್ಲಿ Bacillus thuringiensis ಅಂತ ಹೇಳ್ತಾರೆ.. ಇದೊಂದು ಥರ ಬ್ಯಾಕ್ಟಿರಿಯಾ ಇದ್ದ ಹಾಗೆ.. ಇದನ್ನು ಬದನೆಯ ಬಿಜಕ್ಕೆ injection ಥರಾ ಚುಚ್ಚಿ ಹೊಸ ತಳಿ ರೂಪಿಸಿದ್ರಲ್ಲಾ ಅದಕ್ಕೆ ಬಿ ಟಿ ಬದನೆ ಅಂದ್ರು.. ಇಂತಹ ತಳಿಗಳಿಗೆ Genetically  Modified ಆಹಾರ ಅನ್ನುತ್ತಾರೆ.. ಇದರ ಲಾಭ ಏನಪ್ಪಾ ಅಂದ್ರೆ ಇದು ನಮ್ಮ ಮಾಮೂಲಿ ತಳಿಗಿಂತ ಹೆಚ್ಚಿನ ಉತ್ಪತ್ತಿ ನೀಡುತ್ತೆ, ಕೊಳೆನಾಷಕ ಔಶಧಿಯ ಅಗತ್ಯವಿಲ್ಲ (ಇದಕ್ಕೆ ಬಳಸಿರೋ ಬ್ಯಾಕ್ಟಿರಿಯಾ ಮತ್ತು ಕೆಮಿಕಾಲ್ ಗಳು ಕೊಳೆ ಬರೋಕೆ ಬಿಡಲ್ಲ ಅಂದಮೇಲೆ ಕೊಳೆನಾಷಕ ಯಾಕ್ರೀ?), ಗಾತ್ರದಲ್ಲಿ ಇಂತಹ ತರಕಾರಿಗಳು ದೊಡ್ದದಾಗಿರುತ್ತವೆ... ಹೆಚ್ಚಿನ ತರಕಾರಿ, ಹೆಚ್ಚಿನ ದುಡ್ಡು, ಯಾವ ರೈತನಿಗೆ ಬೇಡ ಸ್ವಾಮೀ??
ಹಾಗಾದ್ರೆ ನಮಗೂ ಇದು ಇರ್ಲಾ? ಅಮೇರಿಕಾ ದಲ್ಲಿ ಹೆಚ್ಚಿನ ತರಕಾರಿಗಳೆಲ್ಲಾ ಹೀಗೆ Genetically Modified (ಬದನೆ ಬಿಟ್ಟು).. ಹಾಗಾದ್ರೆ ಇದರಿಂದ ಏನು ನಷ್ಟ? ನಮಗ್ಯಾಕೆ ಬೇಡಾ ಅಂತೀರಾ .. ಪಟ್ಟಿ ದೊಡ್ಡದಿದೆ..
೧. ಇಂತಹ ತರಕಾರಿಗಳಿಗೆ ರುಚಿ ಅನ್ನೋದು ಖಂಡಿತಾ ಇಲ್ಲ.
೨. ಇವು ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಅನ್ನೋದು ಇನ್ನೂ ಸಾಬಿತಾಗಿಲ್ಲ.
೩. ಇಡೀ ವಿಶ್ವದಲ್ಲಿ ಇದನ್ನು ಮಾಡೋ ತಾಕತ್ತಿರೋದು ಒಂದೇ ಒಂದು ಕಂಪನಿ ಗೆ ಅದು "ಮೊನ್ಸಂಟೋ".
೪. ಇದಕ್ಕೆ ಸಹಕರಿಸೋದು ಈ ಮೊನ್ಸಂಟೋ ಕಂಪನಿ ಯ ಅಂಗ ಸಂಸ್ತೆಗಳು.
೫. ಈ ಕಂಪನಿ ಅಮೆರಿಕಾದ್ದು..
೬. ಮೊನ್ಸಂಟೋ ಹೊರತಂದ ಇಂತಹ ಉತ್ಪನ್ನಗಳಿಗೆ "ಚೆನ್ನಾಗಿದೆ", "ಏನೂ ತೊಂದರೆ ಇಲ್ಲ ಅಂತ ಪ್ರಮಾಣ ಪತ್ರ ನೀಡೋದು ಶುದ್ಧ ಇಲ್ಲಿಯ ಕಳ್ಳರೇ (ಪ್ರಮಾಣ ಪತ್ರ ನೀಡಿದ ಕಂಪನಿ ಯ ಹೆಸರು ಬೇರೆ ಇರುತ್ತೆ.. ಕಂಪನಿ ಮಾತ್ರ ಮೊನ್ಸಂಟೋ ದ್ದೆ ಆಗಿರುತ್ತೆ)
ಅರೆ ಅರೆ.. ಪಟ್ಟಿ ಮುಂದೆ ಬೆಳೆಸ್ತಿನಿ , ಈಗ ಬದನೆಗೆ ಬರೋಣ.. ಈ ಬಿ ಟಿ ಬದನೆ ಇನ್ನೂ ಯಾವ ದೇಶದಲ್ಲೂ ಇಲ್ಲ.. ನಮ್ಮ ಭಾರತದಲ್ಲೇ ಮೊದಲು ಇದನ್ನು ಮನುಷ್ಯರಿಗೆ ತಿನ್ನಿಸೋಕೆ ಪ್ರಯತ್ನ ನಡೀತಾ ಇದೆ.. ಮೊನ್ಸಂಟೋ ಕಂಪನಿ ಯ ಇನ್ನೊಂದು ಅಂಗ ಸಂಸ್ತೆಯಾದ ಮಹಿಕೋ (Mahyco ) ಈ ಬಿ ಟಿ ಬದನೆ ಹೊರತಂದಿದೆ.. ಆದರೆ ಇದಕ್ಕೆ ಯಾವುದೇ ದೇಶ ಅನುಮತಿ ನೀಡದ ಕಾರಣ ಇದನ್ನು ಈಗ ಭಾರತೀಯರ ಮೇಲೆ ಪ್ರಯೋಗಿಸಲು ಯತ್ನಿಸಲಾಗುತ್ತಿದೆ.. ಎಷ್ಟಾದರೂ ನಾವು ಅಮೇರಿಕಾದ ಪಾಲಿಗೆ ಪ್ರಯೋಗ ಶಾಲೆಯಲ್ಲಿ ಇಲಿ ಇದ್ದಂತೆ ಅಲ್ಲವೇ..ಈ ಬದನೆ ನಮ್ಮ ಮೇಲೆ ಪ್ರಯೋಗ ಆಗಬೇಕು, ತೊಂದರೆ ಇದ್ದರೆ ಅದನ್ನು ಸರಿಪಡಿಸಬೇಕು.. ಯಾವ ಖಾಯಿಲೆ ಹೇಗೆ ಬರುತ್ತೆ ಅನ್ನೋ ಸಂಶೋಧನೆ ನಮ್ಮ ಮೇಲೆ ನಡೀಬೇಕು.. ಎಲ್ಲಾ ಓ ಕೆ ಆದ ಮೇಲೆ ಇದನ್ನು ಅಮೇರಿಕಾ ಬಳಸಬೇಕು...ಹೇಗಿದೆ ಚಾಣಕ್ಯ ನೀತಿ??
ಈಗಾಗಲೇ ಈ  ಬದನೆಯನ್ನು ಕೆಲವೊಂದು ಪ್ರಾಣಿಗಳ ಮೇಲೆ ಪ್ರಯೋಗ ನಡೆಸಲಾಗಿದೆ..
೧. ಬಿ ಟಿ ಬದನೆ ತಿಂದ ಇಲಿಗಳು diarrhoea ಗೆ ತುತ್ತಾಗಿವೆ.. ಒಮ್ಮೆಲೇ ಹೆಚ್ಚು ನೀರು ಕುಡಿಯಲು ಪ್ರಾರಂಭಿಸಿವೆ.. ಪಿತ್ತಕೋಶದ ಭಾರ ಕಮ್ಮಿಯಾಗಿದೆ..
೨. ಇದನ್ನು ತಿಂದ ಕೋಳಿಗಳು ಕಾಳು ತಿನ್ನೋದು ಕಮ್ಮಿ ಮಾಡಿದವು..
೩. ಇದನ್ನು ತಿಂದ ದನಗಳು ತಮ್ಮ ಮೈ ಭಾರ ಹಿಗ್ಗಿಸಿ ಕೊಂಡವು.. ಹೆಚ್ಚಿನ ಹಾಲು ನೀಡತೊಡಗಿದವು. ಇವೆಲ್ಲ ಇದರ ಸೈಡ್ ಎಫೆಕ್ಟ್ ಆಗಿತ್ತು..
೪. ಈ ಬದನೆಯಲ್ಲಿ ನಮ್ಮ ಮಾಮೂಲಿ ಬದನೆಗಿಂತ ಶೇಕಡಾ ೧೫ ರಷ್ಟು ವಿಟಮಿನ್ ಗಳು ಕಮ್ಮಿ ಇವೆ.. ಒಂಥರಾ toxic ಆಸಿಡ್ ಈ ಬದನೆಗಳಲ್ಲಿ ಕಂಡು ಬಂದಿದೆ..
೫. ಇದನ್ನು ಬೇರೆ ಬೇರೆ ಪ್ರಾಣಿಗಳ ಮೇಲೆ ಪ್ರಯೋಗ ಮಾಡಿದಾಗ ರಕ್ತದ ಕಾಯಿಲೆ ಗಳು ಕಂಡು ಬಂದಿವೆ.. ಅದೇ ರೀತಿ ನಮಗೆ ಗಾಯವಾದಾಗ ರಕ್ತ ಹೆಪ್ಪು ಕಟ್ಟುತ್ತದೆ ಅಲ್ಲವೇ? ಈ ಹೆಪ್ಪುಕಟ್ಟುವಿಕೆ ಅನ್ನೋ ಕ್ರಿಯೆ ಮಾಮೂಲಿಗಿಂತ ಹೆಚ್ಚಿನ ಸಮಯ ತೆಗುದು ಕೊಂಡದ್ದು ಸಂಶೋಧನೆಯಿಂದ ಸಾಬೀತಾಗಿದೆ..
೬. ಇದರಲ್ಲಿರುವ ವಿಟಾಮಿನ್ ಗಳಿಂದಾಗಿ ನಮ್ಮ ದೇಹದ ಮೇಲೆ ಮಾತ್ರೆಗಳು ತಮ್ಮ ರೋಗ ನಿರೋಧಕ ಶಕ್ತಿಯನ್ನು ದೇಹದ ಮೇಲೆ ತೋರಲು ವಿಫಲವಾಗಿವೆ (eg  : antibiotic resistance ).. ಇದು ನಮ್ಮ ಆರೋಗ್ಯದ ಮೇಲೆ ಎಂತಹ ಘೋರ ಪರಿಣಾಮ ಬೀರಬಹುದು ಗೊತ್ತೇ??

ಆದರೂ ನಮಗೆ ಈ ಬದನೆ ಬೇಕೇ? ನಮ್ಮ ದೇಶದಲ್ಲೇ ಸಿಗುವ ೨೫-೩೦ ಜಾತಿಯ ಬದನೆ ನಮಗೆ ಸಾಕಾಗದೆ?( ಇವೆಲ್ಲಾ ನೈಸರ್ಗಿಕ) .. ಈ ಬದನೆ ಮೇಲೆ ನಮ್ಮ ರಾಜಕಾರಣಿಗಳಿಗೆ ಯಾಕಿಷ್ಟು ಆಸೆ.. ?? ಉತ್ತರ ತುಂಬಾ ಸುಲಭ.. ಇಡೀ ಪ್ರಪಂಚದಲ್ಲಿ  , ತಮ್ಮ ಕೆಲಸವಾಗಲು , ದುಡ್ಡು ಮಾಡಲು "ಮೊನ್ಸಂಟೋ" ಕಂಪನಿ ಕೊಡುವಷ್ಟು ಲಂಚ ಯಾರೂ ಕೊಡಲ್ಲ.. ಇವರು ವರ್ಷಕ್ಕೆ ಅತೀ ಹೆಚ್ಚು ದುಡ್ಡು ಖರ್ಚು ಮಾಡುವುದೇ ಲಂಚ ನೀಡಲು ಅಂದ್ರೆ ನಂಬ್ತೀರಾ? (ಹಾಗಂತ ತುಂಬಾ ಜನ ಹೇಳೋದನ್ನ ಅಂತರಜಾಲದಲ್ಲಿ ಓದಿದೆ).. ಇಲ್ಲೂ ಅಷ್ಟೇ ನಮ್ಮ ರಾಜಕಾರಣಿಗಳಿಗೆ ಲಂಚ ಕೊಟ್ಟು ಇದೀಗ ಈ ಕಂಪನಿ ನಮ್ಮ ದೇಶವನ್ನು ಪ್ರಯೋಗ ಶಾಲೆಯನ್ನಾಗಿಸಲು ಹೊರಟಿದೆ.. ಈಗಾಗಲೇ ಬಿ ಟಿ ಹತ್ತಿ ತಂದು ತನ್ನ ವಂಶ ಬೆಳೆಸುತ್ತಿದೆ..
ಹೀಗೆ ಮುಂದುವರಿದರೆ ಏನಾದೀತು??
ನಾವು ಈ ಬಿ ಟಿ ಹತ್ತಿಯನ್ನೇ ನೋಡೋಣ.. ಈಗಾಗಲೇ ನಮ್ಮ ರೈತರು ಈ ಬಿ ಟಿ ಹತ್ತಿಗೆ ಮೊರೆ ಹೋಗಿದ್ದಾರೆ.. ಇದು ಬೀಜ ರಹಿತ ಹತ್ತಿ.. ಹೆಚ್ಚು ಇಳುವರಿ, ಹೆಚ್ಚು ಲಾಭ.. ಆದರೆ ಮೊನ್ಸಂಟೋ ರೈತರಿಗೆ ಈ ಬೀಜ ಕೊಡುವ ಮುನ್ನ ಒಂದು ಒಪ್ಪಂದ ಮಾಡಿಕೊಳ್ಳುತ್ತದೆ.. ಅದು , ಒಮ್ಮೆ ಈ ಬಿ ಟಿ ಬಳಸಿದರೆ ಮುಂದೆ ಕಮ್ಮಿ ಅಂದ್ರೂ ೧೦-೧೫ ವರ್ಷ ಅದನ್ನೇ ಬಳಸಬೇಕು.. ಬೇರೆ ಬೆಳೆ ಬೆಳೆಯುವಂತಿಲ್ಲ, ಮೊನ್ಸಂಟೋ ಕಂಪನಿ ನೀಡುವ ರಾಸಾಯನಿಕಗಳನ್ನೇ ಬಳಸಬೇಕು.. ಹೀಗೆ..
ಒಂದು ವೇಳೆ ಹೀಗೆ ಸಾಗಿದರೆ ಮುಂದೆನಾದಿತು?. ನಾವು ಬಿ ಟಿ ಹತ್ತಿಗೆ ಮೊರೆ ಹೋಗಿ ನಮ್ಮ ದೇಶಿಯ ಹತ್ತಿ ಸರ್ವ ನಾಶವಾಯಿತು ಅನ್ನೋವಾಗ ಯೆದ್ದೆಳುತ್ತಾರೆ ಈ ಕಳ್ಳರು..ಮೊದಲೇ ಇವರದ್ದು ಬೀಜ ರಹಿತ ಹತ್ತಿ.. ಬೆಳೆದ ಹತ್ತಿಯಿಂದ ಮುಂದಿನ ವರ್ಷದ ಬೆಳೆ ಬೆಳೆಯೋಕೆ ಸಾಧ್ಯನೇ ಇಲ್ಲ (ಬೀಜಾನೆ ಇಲ್ವಲ್ಲ ಸ್ವಾಮೀ..) .. ಆಗ ನಾವು ಮತ್ತೆ ಮೊನ್ಸಂಟೋ ಹತ್ತಿರ ಹೋಗಿ ಭಿಕ್ಷೆ ಬೇಡಬೇಕು.. ಬೀಜ ಕೊಡಿ ಅಂತ.. ಇಷ್ಟರವರೆಗೆ ೧ ರೂಪಾಯಿಗೆ ಸಿಗುತ್ತಿದ್ದ ಬೀಜಕ್ಕೆ ಈಗ ೧೦ ರೂಪಾಯಿ ಅನ್ನುತ್ತಾರೆ.. ನಾವು ತಗೋಳ್ಳಲೇ   ಬೇಕು.. ೧೦ ರೂಪಾಯಿ ಇದ್ದ ಹತ್ತಿಗೆ ೧೦೦ ರೂಪಾಯಿಯಾಗುತ್ತದೆ.. ಇದು ಹೀಗೆ ಮುಂದುವರಿದು ನಮ್ಮ ಕೃಷಿ ಎಲ್ಲಾ ಮೊನ್ಸಂಟೋ ಕೈಯಲ್ಲಿ..!!! ಇದು ಕೃಷಿಯಲ್ಲಿನ ಎಲ್ಲಾ ವಸ್ತುಗಳಿಗೆ ಅನ್ವಯಿಸೋಕೆ ಎಷ್ಟು ಕಾಲ ಬೇಕಾದೀತು.. ನಿಧಾನಕ್ಕೆ ಅದು ಎಲ್ಲವನ್ನೂ ನುಂಗಿ ನೀರು ಕುಡಿಯುತ್ತದೆ ..
ಅದೇನೋ ಸದ್ಯಕ್ಕೆ ಮಂತ್ರಿ ಮಹಾವರ್ಯ ಇದಕ್ಕೆ ಲಗಾಮು ಹಾಕಿದ್ದಾನೆ.. ಇದೆಲ್ಲ ನಮ್ಮ ನಿಮ್ಮೆಲ್ಲರ ಕಣ್ಣಿಗೆ ಬಟ್ಟೆ ಕಟ್ಟುವ ಕೆಲಸ.. ಇನ್ನು ಕೆಲವೇ ದಿನಗಳಲ್ಲಿ ಇಂಥಾ ಬೇರೆ ಬೇರೆ ತರಕಾರಿಗಳು, ಬದನೆ ಎಲ್ಲವೂ ಲಗ್ಗೆ ಹಾಕಲಿವೆ!!!
 "ಝಣ ಝಣ ಝಣ ಝಣ ಕಾಂಚಣ ದಲ್ಲಿ
 ಅಮೇರಿಕಾದ ಲಾಂಛನದಲ್ಲಿ ,
 ಎಲ್ಲಾ ಮಾಯ ನಾಳೆ ನಾವು ಮಾಯ
 ಎಲ್ಲಾ ಮಾಯ ನಾಳೆ ನೀವು ಮಾಯ" 

ಆದ್ದರಿಂದ.. ಏಳಿ ಭಾರತೀಯರೇ ಎದ್ದೇಳಿ..!!!!

Wednesday, February 3, 2010

ಸುಮ್ನೆ ತಮಾಷೆಗೆ..!!

ಮುತ್ತು..
ಮಾತು ಬೆಳ್ಳಿ
ಮೌನ ಬಂಗಾರವೆಂದರು.
ಬಂಗಾರದ ಆಸೆಗೆ ಮೌನವಾಗಿದ್ದೆ
ಅಮೂಲ್ಯ ಮುತ್ತೊಂದನ್ನ ಕಳೆದುಕೊಂಡಿದ್ದೆ !!

------------------------------------------------------------------------------------------------------------------------
ಅವಸ್ಥೆ
ಕುಂಬಾರನಿಗೆ ವರುಷ
ದೊಣ್ಣೆಗೆ ನಿಮಿಷ ಅಂದರು
ನಿಜವೋ ಸುಳ್ಳೋ ನೋಡಲು ಮುಂದಾದೆ..!
ಕುಂಬಾರನ  ತಲೆಗೆ
ದೊಣ್ಣೆಯಿಂದ ಹೊಡೆದು
ಮರುದಿನ ಜೈಲುವಾಸಿಯಾದೆ!!!!

--------------------------------------------------------------------------------------------------------------------
ಮಾಯ
ಬೆಂಗಳೂರನ್ನು
ಮಾಯಾನಗರಿ ಅಂದರು.
'ಮಾಯಾ'ಳನ್ನು ಹುಡುಕುತ್ತ
ನಗರಿಗೆ ಕಾಲಿಟ್ಟೆ..
ಇಂದು ನಾನೇ ಮಾಯವಾದೆ!!

Thursday, January 28, 2010

ಗಡಂಗ್ ರದ್ದಾವಡ್ !!!!

ಅವಲಕ್ಕಿ ಬಾಬು... ಆತನ ನಿಜವಾದ ಹೆಸರು ಏನು ಅಂತ ಗೊತ್ತಿಲ್ಲ... ಆದರೆ ಎಲ್ಲರೂ ಆತನನ್ನು ಬಜಿಲ್ ಬಾಬು ಅಂತ ಕರೆಯುತ್ತಿದ್ದರು.. ಅಂದ ಹಾಗೆ ಬಜಿಲ್ ಅಂದ್ರೆ ತುಳು ಭಾಷೆಯಲ್ಲಿ ಅವಲಕ್ಕಿ ಅಂತ ಅರ್ಥ.. ಈತ ನಮ್ಮ ಊರಿನ ಒಬ್ಬ ವಿದೂಷಕ ಇದ್ದಂತೆ... ದಿನ ಕೂಲಿ ಮಾಡಿಕೊಂಡು, ದುಡಿದ ದುಡ್ಡನ್ನು ಅರ್ಧ ಮನೆಗೂ ಅರ್ಧ ಶರಾಬು ಅಂಗಡೀಗೂ  ಹಾಕುತ್ತಿದ್ದ... ಮಾತಿನಲ್ಲಿ ಭಾರಿ ಜಾಣ.. ಆತ ಸಂಜೆಯ ಹೊತ್ತಿಗೆ ಶರಾಬು ಕುಡಿದು ತೂರಾಡುತ್ತ ಅದೇನೇನೋ ಮಾತಾಡಿಕೊಂಡು ತಿರುಗುತ್ತಿದ್ದುದು ಸಾಮನ್ಯ.. ಆದರೆ ಮರುದಿನ ಆತನಿಗೆ ಕೇಳಿದರೆ ಆತ ಏನು ಮಾಡಿದ್ದೂ ನೆನಪಿರುತ್ತಿರಲಿಲ್ಲ..ಅಥವಾ ಹಾಗೆ ಮಾಡುತ್ತಿದ್ದನೋ ಗೊತ್ತಿಲ್ಲ...


ಹಾಗಿರಲೊಂದು ದಿನ ನಮ್ಮ ಊರಿಗೆ ಕಾಲಿಟ್ಟಿದ್ದೆ ಮದ್ಯಪಾನ ವಿರೋಧಿ ಚಳುವಳಿ...ತುಂಬಾ ಮಂದಿ ಅದರಲ್ಲಿ ಭಾಗವಹಿಸಿದ್ದು, ನಮ್ಮ ಅವಲಕ್ಕಿ ಬಾಬು ಕೂಡ ಸೇರಿ ಕೊಂಡಿದ್ದಾನೆ ಅನ್ನೋ ಸುದ್ದಿ ಬಂತು.. ಕೆಲವು ದಿನ ಕಳೆದವು.. ಆವತ್ತು ಈ ಮದ್ಯಪಾನ ವಿರೋಧಿ ಕಾರ್ಯಕ್ರಮದ ಸಮಾರೋಪ ಸಮಾರಂಭ.. ಕಾರ್ಯಕ್ರಮ ಎಲ್ಲಾ ಮುಗಿದು ಎಲ್ಲರೂ ಘೋಷಣೆ ಕೂಗುತ್ತಿದ್ದರು... "ಗಡಂಗ್ ರದ್ದಾವಡ್, ಗಡಂಗ್ ರದ್ದಾವಡ್" (ಗಡಂಗ್ == ಶರಾಬು ಅಂಗಡಿ, ರದ್ದಾವಡ್==ರದ್ದಾಗಲಿ ಅಂತ ಅರ್ಥ) ಹಾಗಂತ ಎಲ್ಲರೂ ಅರಚಿದ್ದೆ ಅರಚಿದ್ದು..


ಕಾರ್ಯಕ್ರಮವೆಲ್ಲಾ ಮುಗಿದು ಸಂಜೆ ಆಯಿತು... ಸ್ವಲ್ಪ ಹೊತ್ತಿನಲ್ಲೇ ನಮ್ಮ ಬಜಿಲ್ ಬಾಬು ಶರಾಬು ಅಂಗಡಿಯಲ್ಲಿ ಪ್ರತ್ಯಕ್ಷ ನಾಗಿದ್ದ..."ಏನಯ್ಯ ಬಾಬು ಗಡಂಗ್ ರದ್ದಾವಡ್,ಗಡಂಗ್ ರದ್ದಾವಡ್ ಅಂತ ಭಾರಿ ಅರಚಿಕೊಳ್ತಿದ್ದೆ, ಈಗ್ಯಾಕೆ ಬಂದೆ ಇಲ್ಲಿಗೆ?" ಅದ್ಯಾರೋ ಕೇಳಿದ್ದಕ್ಕೆ ತಾನು ಹಾಗೆ ಹೇಳಲೇ ಇಲ್ಲ , ಎಲ್ಲಿ ಬೇಕಾದರೂ ಪ್ರಮಾಣ ಮಾಡುತ್ತೇನೆ ಅಂತ ಬಜಿಲ್ ಬಾಬು ವಾದಿಸಿದ.. ನಾನು ಅರಚಿಕೊಂಡಿದ್ದು ಶರಾಬು ಅಂಗಡಿಗೆ ಬೆಂಬಲವಾಗಿ ಅಂತ ಆತನ ಅಳಲು .." ಅಲ್ಲ ಅದ್ಹೇಗೆ ಆಗ್ತದೆ? ನೀನೂ ಹೇಳಿದ್ದು ಗಡಂಗ್ ರದ್ದಾವಡ್ ಅಂತ ತಾನೇ ? ಅದು ನಮಗೆ ಹೇಗೆ ಬೆಂಬಲ ವಾಗ್ತದೆ" ಒಬ್ಬ ಕುಡುಕ ತರಾಟೆಗೆ ತೆಗೆದುಕೊಂಡ... "ಅಯ್ಯೋ ಸ್ವಾಮೀ, ನೀವೇನ್ ಅರಚಿಕೊಂಡ್ರೋ ನಂಗೊತ್ತಿಲ್ಲ .. ನಾನು ಮಾತ್ರ ಬೊಬ್ಬೆ ಹೊಡೆದದ್ದು ಗಡಂಗ್ ರಡ್ದಾವಾಡ್,   ಗಡಂಗ್ ರಡ್ದಾವಾಡ್ ಅಂತ" (ತುಳುವಿನಲ್ಲಿ ರಡ್ಡ್ ಅಂದ್ರೆ ಎರಡು. ಅಂದ್ರೆ ಆತ ಹೇಳಿದ್ದು ಗಡಂಗ್ ಯೆರಡಾಗ್ಲಿ !!)  ಆತನ ಮಾತಿಗೆ ಅಲ್ಲಿದ್ದವರೆಲ್ಲ ಬಿದ್ದು ಬಿದ್ದು ನಗುತ್ತಿದ್ದರೆ, ಶರಾಬು ಅಂಗಡಿಯಾತ ಆತನ ಬುದ್ಧಿಮತ್ತೆಗೆ ಬಹುಮಾನವಾಗಿ  ಆವತ್ತಿನ ಶರಾಬು ಉಚಿತವಾಗಿ ನೀಡಿದ್ದ!!!

ಚಿತ್ರಕೃಪೆ : ಅಂತರ್ಜಾಲ

Friday, January 22, 2010

ಶೇಕ್ ಅಬ್ದುಲ್ಲ ಮತ್ತು ಸದಾನಂದ!!!

ಆಗಷ್ಟೇ ನಾವು ಗೋವಾ ದಿಂದ ಹಿಂದುರಿಗಿದ್ದೆವು... ಮಧ್ಯಾನ್ನದ ಸುಮಾರು ೧ ಘಂಟೆ.. ಮನೆಗೆ ಬಂದವರೇ  ಸ್ನಾನ ಮಾಡಿ ಊಟಕ್ಕೆ ಅಡುಗೆ ರಾತ್ರಿ ಮಾಡೋಣ ಅಂತ ನಿರ್ಧರಿಸಿ ಗಂಜಿ ಬೇಯಿಸಿಕೊಂಡೆವು.. ಇದ್ದಿದ್ದು ನಾವಿಬ್ಬರೇ, ನಾನು ಮತ್ತು ಸದಾನಂದ... ಹಿಂದಿನ ದಿನ ರಾತ್ರಿ ತುಂಬಾ ತಡವಾಗಿ ಮಲಗಿದ್ದೆವು... ಗೋವಾ ದ ಬೀಚ್ ಅಂದ ಮೇಲೆ ಕೇಳಬೇಕೆ.. ಇಡೀ ರಾತ್ರಿ ಅದು ನಿದ್ರಿಸುವುದಿಲ್ಲ... ಅಲ್ಲಿ ೨೪ ಘಂಟೆಯೂ ಮದ್ಯದ ಆರಾಧನೆ ನಡೆಯುತ್ತಲೇ ಇರುತ್ತದೆ... ಆ ಬೀಚಿನ ಬದಿಯಲ್ಲಿ ಕಳೆಯುವ ಕಾಲವೇ ಒಂಥರಾ ಮಜಾ..ಎಲ್ಲಿ ನೋಡಿದರೂ ಕಾಣುವ ಸಮುದ್ರದ ನೀರು, ಪಕ್ಕದಲ್ಲೇ ಮಲ್ಯನ ಬೀರು...

ನಾನು ಸದಾನಂದನೂ  ೪ ದಿನದ ಗೋವಾ ಪ್ರವಾಸದಿಂದಾಗಿ ಸೋತು ಹೋಗಿದ್ದೆವು.. ಅದ್ಯಾವಾಗ ಹಾಸಿಗೆ ಕಾಣಲಿಲ್ಲವೋ ಅಂತ ನನಗೆ ಅನಿಸತೊಡಗಿತು... ಸ್ನಾನ ಮುಗಿಸಿ , ಗೋವಾ ದಿಂದ ತಂದಿದ್ದ ಅಪರೂಪದ ತೀರ್ಥದ ಜೊತೆ ಗಂಜಿ ಊಟ ಮಾಡಿ ಮುಗಿಸಿದೆವು... ನನಗೋ ಕಣ್ಣು ಎಳೆಯ ಹತ್ತಿತು.. ಸರಿ ಇನ್ನು ಸ್ವಲ್ಪ ಹೊತ್ತು ಮಲಗೋಣ ಅಂತ ನಿರ್ಧರಿಸಿ ಸುಮಾರು ೩ ಗಂಟೆಯ ಹೊತ್ತಿಗೆ ಮಲಗಿದೆವು...

ನಾವು ಗೋವಾ ದಲ್ಲಿ ಉಳಿದು ಕೊಂಡಿದ್ದ ರೆಸಾರ್ಟ್ ನ ಈಜುಕೊಳ
ಟಿನ್ ಟಿನ್.. ಕಾಲಿಂಗ್ ಬೆಲ್ಲು ಕರ್ಕಶ ಶಬ್ದ ಮಾಡುವಾಗಲೇ ಎಚ್ಚರವಾದದ್ದು... ಮಲಗಿದ್ದಲ್ಲಿಂದಲೇ ಮೆಲ್ಲನೆ ಕಣ್ಣು ಬಿಟ್ಟು ನೋಡಿದೆ , ಸುಮಾರು ೪.೧೫ ರ ವೇಳೆ.. ಅದ್ಯಾರೋ ಪುಣ್ಯಾತ್ಮ ಬಂದು ನಮ್ಮ ಒಳ್ಳೆಯ ನಿದ್ದೆ ಹಾಳು ಮಾಡಿದ್ದ.. ನನಗೋ ಪೂರ್ತಿ ಎಚ್ಚರವಾಗಿರಲಿಲ್ಲ...ಅದೇನೋ ಮಂಪರು.. ಸುಮಾರು ನಾಲ್ಕು ದಿನದಿಂದ ಸರಿಯಾಗಿ ನಿದ್ದೆ ಮಾಡಿರಲಿಲ್ಲವಲ್ಲ.. ನನಗೆ ಏಳಲೇ ಆಗದಷ್ಟು ಮಂಪರು.. ಮತ್ತೆ ಹೊದಿಕೆ ಸರಿ ಮಾಡಿ ಗಟ್ಟಿಯಾಗಿ ಮಲಗಿಬಿಟ್ಟೆ... ಟಿನ್ ಟಿನ್.. ಮತ್ತೆ ಕಾಲಿಂಗ್ ಬೆಲ್ಲು ಕರ್ಕಶವಾಗಿ ಶಬ್ದ ಮಾಡಿತ್ತು ... "ಯಾವನೋ ಅವನು ಲೋ..ನಂ ಮಗ" ಅನ್ನುತ್ತಲೇ ನಿಧಾನವಾಗಿ ಎದ್ದು ಕೂತಿದ್ದು ಸದಾನಂದ.. ನನ್ನ ಕಡೆ ನೋಡಿದ .. ನಾನು ಮಂಪರು ಕಣ್ಣಲ್ಲೇ ಆತನನ್ನೊಮ್ಮೆ ನೋಡಿ ಮತ್ತೆ ಕಣ್ಣು ಮುಚ್ಚಿದೆ...ನಿಧಾನಕ್ಕೆ ಸದಾನಂದ ಎದ್ದು ನಿಲ್ಲುವುದಕ್ಕೂ ಟಿನ್ ಟಿನ್ ಅಂತ ಬೆಲ್ಲು ಮತ್ತೆ ಶಬ್ದಮಾಡುವುದಕ್ಕೂ ಸರಿ ಹೋಯಿತು... ಗೊಣಗುತ್ತಾ , ಕಣ್ಣುಜ್ಜಿಕೊಂಡು ಸದಾನಂದ ಬಾಗಿಲು ತೆಗೆದ...ಎದುರಿಗೆ ಅದ್ಯಾರೋ ನಿಂತಿದ್ದವನನ್ನು ದುರುಗುಟ್ಟಿ ನೋಡಿದ..." ಸಾರ್ ಶೇಕ್ ಅಬ್ದುಲ್ಲ ಇದ್ದಾರ??" ಬಂದ ವ್ಯಕ್ತಿ ಕೇಳಿದ್ದು ನಂಗೆ ಅಸ್ಪಷ್ಟವಾಗಿ ಕೇಳಿಸಿತ್ತು...ಅದೆಲ್ಲಿತ್ತೋ ಸಿಟ್ಟು ಸದಾನಂದ ಬಿರ್ರನೆ ಆತನತ್ತ ಗುರಾಯಿಸಿ , ತಾನು ಉಟ್ಟು ಕೊಂಡಿದ್ದ ಲುಂಗಿ ಬಿಚ್ಚಿಬಿಟ್ಟ..!! "ಅಬ್ದುಲ್ಲಾ ಇಲ್ಲಿದ್ದಾನೆ, ಬೇಕಾದ್ರೆ ಶೇಕ್ ಮಾಡಿಕೊ" .. ಸದಾನಂದ ಅಬ್ಬರಿಸಿದ್ದೂ , ಬಂದ ವ್ಯಕ್ತಿ ದಡ ದಡ ನೆ ಮೆಟ್ಟಿಲು ಇಳಿದು ಹೋಗಿದ್ದು ನನಗೆ ನಿದ್ದೆಯ ಮಂಪರಿನಲ್ಲೂ ಕೇಳಿಸುತ್ತಲೇ ಇತ್ತು...!!!!!

Tuesday, January 19, 2010

ಗಡಿಯಾರ!!

ಅದೊಂದು ಹುಚ್ಚು ಹಿಡಿದುಬಿಟ್ಟಿತ್ತು .. ಇದೇನೂ ಹಳೆಯ ಹುಚ್ಚಲ್ಲ.. ಇತ್ತೀಚಿಗೆ ಹುಟ್ಟಿಕೊಂಡಿದ್ದು..ಚಿಕ್ಕವನಿರುವಾಗ ಹಾರ್ಮೋನಿಯಂ ಕಲಿಯಬೇಕು ಅನ್ನುವ ಹುಚ್ಚು ಒಂದು ಬಿಟ್ಟರೆ ಬೇರೆ ಏನೂ ಅಷ್ಟೊಂದು ತಿಳಿದಿರಲಿಲ್ಲ... ಆದರೆ ಹಳ್ಳಿಯಲ್ಲಿ ಇದಕ್ಕೆಲ್ಲ ಪರಿಸ್ತಿತಿ ಒಗ್ಗಿ ಬರದ ಕಾರಣ ಹಾರ್ಮೋನಿಯಂ ಕನಸಾಗಿಯೇ ಉಳಿದಿದೆ... ಆದರೆ ಅದ್ಯಾಕೋ ಕೆಲವು ದಿನಗಳಿಂದ ನನಗೆ ಹಳೆಯ ಮರಳಿನ ಗಡಿಯಾರ ಬೇಕು ಅನ್ನಿಸಿಬಿಟ್ಟಿತ್ತು... ಇದಕ್ಕಾಗಿ ತುಂಬಾ ಹುಡುಕಿದ್ದೂ ಆಯಿತು.. ಕೊನೆಗೊಂದು ಸಿಕ್ಕಿಯೇ ಬಿಟ್ಟಿತಲ್ಲ.. ಹೌದು ಸಾರ್ ನನ್ನತ್ರ ಒಂದು ಹಳೆಯ ಮರಳಿನ ಗಡಿಯಾರ ಇದೆ ಬೇಕಾದ್ರೆ ಕೊಡ್ತೀನಿ ಹಾಗಂತ ಬನ್ನೇರುಘಟ್ಟ ರೋಡ್ನಲ್ಲಿ ಸಿಕ್ಕಿದ ದಿವಾಕರ ಅನ್ನೋ ಪುಣ್ಯಾತ್ಮ ಹೇಳಿದಾಗ ಸ್ವರ್ಗಕ್ಕೆ ಮೂರೇ ಗೇಣು.. ಆ ಗಡಿಯಾರಕ್ಕೆ ಆತ ಕೇಳಿದ್ದು ಬರೋಬ್ಬರಿ ೮ ಸಾವಿರ ರುಪಾಯಿ.. ಛೆ.. ಏನ್ಮಾಡೋದು... ಸರಿ , ಏನೆ ಇರಲಿ ಒಮ್ಮೆ ನೋಡೋಣ ಅಂತ ಹೇಳಿ ಆತನ ಮನೆಗೆ ಹೋದೆ... ವೌ.. ನನ್ನ ಕಣ್ಣುಗಳನ್ನು ನಂಬಲಾಗಲಿಲ್ಲ...

ಅತ್ಯಂತ ಸುಂದರವಾದ ಮರಳಿನ ಗಡಿಯಾರ... ಹಾಗೂ ಹೀಗೂ ಮಾತನಾಡಿ ಆ ಗಡಿಯಾರದ ರೇಟು ೫ ಸಾವಿರ ಅಂತ ಮಾತನಾಡಿಯಾಯಿತು.. " ಸಾರ್ ನೀವು ನಾಳೆ ಬಂದು ತಗೊಂಡು ಹೋಗಿ , ನನ್ನ ಮಗನಲ್ಲೂ ಒಂದು ಮಾತು ಕೇಳಬೇಕು.. ಯಾವ್ದಕ್ಕೂ ನೀವು ನಾಳೆಬನ್ನಿ" ಅಂತ ಆ ಆಸಾಮಿ ಹೇಳಿದ್ದಕ್ಕೆ ಸರಿ ಅಂತ ಹೇಳಿ ಅಲ್ಲಿಂದ ಹೊರಬಂದೆ...
ಮನೆಗೆ ಬಂದವನೇ, ಮನೆಯನ್ನೆಲ್ಲ ಸ್ವಚ್ಚ ಗೊಳಿಸಿದೆ.. ಯಾವ್ಯಾವುದನ್ನು ಎಲ್ಲೆಲ್ಲಿ ಇಡಬೇಕೂ ಅಂತ ಯೋಚಿಸಿ ಎಲ್ಲವನ್ನೂ ಜೋಡಿಸಿ ಇಡತೊಡಗಿದೆ.. ಕೋಣೆಗೆ ಎಲ್ಲವನ್ನೂ ಜೋಡಿಸಿ ನನ್ನ ಕನಸಿನ ಮರಳಿನ ಗಡಿಯಾರವನ್ನು ಟಿವಿ ಸ್ಟ್ಯಾಂಡ್ ಮೇಲೆ ಇಡುವುದೇ ಚಂದವೆನ್ನಿಸಿತು ... ನಾಳೆಯಿಂದ ನನ್ನ ಮನೆಯ ಚಂದವೇ ಬೇರೆ..!!! ಎಷ್ಟೊಂದು ಸುಂದರವಾದ ಮರಳಿನ ಗಡಿಯಾರ ... ಆಹಾ.. ಮನಸ್ಸು ಉಲ್ಲಾಸಗೊಂಡಿತ್ತು...
ಇಷ್ಟಕ್ಕೂ ಈ ಮರಳಿನ ಗಡಿಯಾರದ ವಿಷಯ ಹೇಳುತ್ತೇನೆ ಕೇಳಿ..ಈಗ ಇರುವ ಆಧಾರಗಳ ಪ್ರಕಾರ ಈ ಗಡಿಯಾರವನ್ನು ಕಂಡುಹಿಡಿದದ್ದು ಮೊದಲು ೧೪  ನೆ ಶತಮಾನದಲ್ಲಿ.. ೩ನೆ ಮತ್ತು ಹನ್ನೊಂದನೇ ಶತಮಾನ ಅನ್ನುವ ವಾದ ಇದ್ದರೂ ಅದಕ್ಕೆ ತಕ್ಕ ದಾಖಲೆಗಳಿಲ್ಲ...ಆಗಿನ ಕಾಲದಲ್ಲಿ ಈ ಗಡಿಯಾರಗಳನ್ನು ಬೇರೆ ಬೇರೆ ಪ್ರಕಾರಕ್ಕೆ ಬಳಸಿಕೊಳ್ಳಲಾಗುತ್ತಿತ್ತು.. ಕೆಲಸ ಮಾಡಲು, ಶಿಪ್ ಗಳಲ್ಲಿ, ಆ ನಂತರ ಶಿಪ್ ಅಥವಾ ವಾಹನಗಳ ವೇಗವಳೆಯಲು.. ಹೀಗೆ.. ಆಗೆಲ್ಲ ಮರಳಿನ ಗಡಿಯಾರಗಳು ೩೦ ನಿಮಿಷದ್ದಾಗಿರುತ್ತಿದ್ದವು.. ಬರ್ತಾ ಬರ್ತಾ ಇದರಲ್ಲಿ ಸಂಶೋಧನೆಗಳಾಗಿ ೧ ನಿಮಿಷದಿಂದ ೧ ಘಂಟೆಯವರೆಗಿನ  ಮರಳಿನ ಗಡಿಯಾರಗಳು ಬಂದವು...
ಮರಳಿನ ಗಡಿಯಾರದಲ್ಲಿ ಎರಡು ಗಾಜಿನ ಬೌಲ್ ಗಳಿರುತ್ತವೆ .. ಇವು ಒಂದರ ಮೇಲೊಂದು ಇದ್ದು ನಡುವೆ ಮರಳು ಹರಿಯಲು ಚಿಕ್ಕ ಕೊಳವೆಯಿರುತ್ತದೆ... ಈ ಮೇಲಿನ ಗಾಜಿನಿಂದ ಮರಳು ಎಲ್ಲಾ ಕೆಳಗಿನ ಬೌಲ್ ಗೆ ಬಂದಾಗ ಮತ್ತೆ ಅದನ್ನು ಉಲ್ಟಾ ಮಾಡಲಾಗುತ್ತದೆ..
ಕೊಳವೆಯ ಅಳತೆ,ಮರಳಿನ ಸೈಜ್, ಅದರ ಆಂಗಲ್ ಮತ್ತು ಮರಳಿನ ಹರಳಿನ ಅಳತೆ ಮೇಲೆ ಈ ಗಡಿಯಾರಗಳು ವಿವಿಧ ಟೈಮ್ ತೋರಿಸುತ್ತವೆ... ಮರಳಿಗೆ ಬದಲಾಗಿ ಕೋಳಿಮೊಟ್ಟೆಯ ಚಿಪ್ಪಿನ ಹುಡಿಯನ್ನೂ ಅಥವಾ ಮಾರ್ಬಲ್ ಹುಡಿಯನ್ನೂ ಸಹ ಉಪಯೋಗಿಸಬಹುದು...

ಹಳೆಯ ಕಾಲದ ಒಂದು ಗಡಿಯಾರ.. ಇದು ೧೫ ನಿಮಿಷದ್ದು



ಹಳೆಯ ಕಾಲದ ಕೆಲವು ಮರಳಿನ ಗಡಿಯಾರಗಳು..

ಮರಳಿನ ಗಡಿಯಾರವನ್ನು Hourglass ,sand timer ,egg timer ಅಂತಾನೂ ಕರೀತಾರೆ..
  ಈಗ ಈ ಮರಳಿನ ಗಡಿಯಾರ ಚಂದಕ್ಕಾಗಿ ಮನೆಯಲ್ಲಿ ಉಪಯೋಗಿಸಿದರೆ ಇದರ ಇತರ ಉಪಯೋಗಗಳು ಈ ರೀತಿ ಇವೆ..
ಅಡುಗೆ ಮನೆಯಲ್ಲಿ, ಆಟಗಳಲ್ಲಿ, ಸಂಗೀತ ಅಥವಾ ಇನ್ನಿತರ ಯಾವುದೇ ಕಲಿಯುವಿಕೆಯ ಅಭ್ಯಾಸಕ್ಕಾಗಿ ಹೀಗೆ...

                                      
ಕೆಲವು ನೂತನ ಮಾದರಿಯ ಮರಳು ಗಡಿಯಾರಗಳು..
ಹಾ..ಪುರಾಣ ಸಾಕು ಈಗ ವಿಷಯಕ್ಕೆ ಬರುತ್ತೇನೆ...
ಇಂತಿಪ್ಪ , ನಾನು ಆ ಮರಳಿನ ಗಡಿಯಾರ ಪಡೆಯಲು ಮರುದಿನ ಆತನ ಮನೆಯತ್ತ ಸಾಗಿದೆ... ಅಪ್ಪ ಮಗ ಇಬ್ಬರೂ ಇದ್ದರು.. "ಜೇಬಿನಿಂದ ೫ ಸಾವಿರ ತೆಗೆದವನೇ, "ತಗೊಳ್ಳಿ ಸಾರ್ , ನಾನು ಗಡಿಯಾರ ತೆಗೆದುಕೊಂಡು ಹೋಗಲು ಬಂದೆ" .. ಅಪ್ಪ ಮಗ ಇಬ್ಬರೂ ಮುಖ ಮುಖ ನೋಡಿಕೊಂಡರು..ನನಗ್ಯಾಕೋ ಅನುಮಾನ ಹುಟ್ಟಿತು..ಅರೆ ಇದ್ಯಾಕೆ ಹಿಂಗಾಡ್ತಿದ್ದಾರೆ? "ಸಾರೀ ಸಾರ್.. ನಿನ್ನೆಯಷ್ಟೇ ನಾನು ಇದನ್ನೊಂದು ಹಳೆಯ ವಸ್ತು ಸಂಗ್ರಹಾಲಯಕ್ಕೆ  ಒಂದಕ್ಕೆ ೪೫೦೦೦ ಕ್ಕೆ  ಮಾರಿದ್ದೇನೆ.. ಬೇಜಾರು ಮಾಡ್ಕೋಬೇಡಿ ಸಾರ್...ಒಂದು ವೇಳೆ ಅದಕ್ಕಿಂತ ಜಾಸ್ತಿ ಕೊಡ್ತೀರಾದ್ರೆ ನಾನು ನಿಮಗೆ ಕೊಡ್ತೀನಿ.." ಮಗ ಮಾತಾಡುತ್ತಲೇ ಇದ್ದ... ಯಾಕೋ ನನ್ನ ಟೈಮ್ ಸರಿ ಇಲ್ಲ ಅಂದುಕೊಂಡು ಮನೆಯತ್ತ ಬಂದೆ.. ಈಗ ಪಕ್ಕದಲ್ಲೇ ಇದ್ದ ಗಡಿಯಾರದ ಅಂಗಡಿಯೊಂದರಿಂದ ಅಜಂತಾ ಗಡಿಯಾರವೊಂದನ್ನು ಖರೀದಿಸಿ ಟಿವಿ ಸ್ಟ್ಯಾಂಡ್ ಮೇಲೆ ಇಟ್ಟಿದ್ದೇನೆ !!

Friday, January 15, 2010

Five Amazing Holes...

ಇದೊಂದು ಇಮೇಲ್ ಮೆಸೇಜ್ ಓದುತ್ತಿದ್ದಂತೆ ಏನು ಹೇಳಬೇಕಂತಲೇ ತಿಳಿಯಲಿಲ್ಲ... ನಿಮ್ಮ ಜೊತೆ ಹಂಚಿಕೊಳ್ಳಬೇಕು ಅನಿಸಿತು ಅದಕ್ಕೆ ಇಲ್ಲಿ ಹಾಕಿದ್ದೇನೆ... ಇದರ ಮೂಲಕರ್ತ ಯಾರೋ ತಿಳಿದಿಲ್ಲ...
Five Amazing Holes...

1. Kimberley Big Hole - South Africa




Apparently the largest ever hand-dug excavation in the world, this 1097-meter-deep mine yielded over three tons of diamonds before being closed.
2. Glory Hole - Monticello Dam, California




This is the Glory Hole at Monticello Dam, and it's the largest in the world of this type of spillway, its size enabling it to consume 14,400 cubic feet of water every second.

A glory hole is used when a dam is at full capacity and water needs to be drained from the reservoir.

3 Great Blue Hole , Belize




This incredible geographical phenomenon known as a blue hole is situated 60 miles off the mainland of Belize .

There are numerous blue holes around the world but none as stunning as this one.
4 Sinkhole in Guatemala



This photo is of a sinkhole that occurred February 2007 in Guatemala . It swallowed two dozen homes and killed at least three people.

5. This Indian Parliament is the famous Rat Hole.



It is capable of swallowing Millions of Tax Payers Money annually, never to be heard from again! It is reputed to contain at least 534 + 250 ass"holes".
 
ಇದು ಯಾರಿಗೆ ಹೊಳೆದದ್ದೇ ಇರಲಿ... ನನಗಂತೂ ನಕ್ಕೂ ನಕ್ಕೂ ಸುಸ್ತಾಯಿತು... ಇದರ ಮೂಲ ಯಾರು ಎಂದು ಯಾರಿಗಾದರೂ ತಿಳಿದಿದ್ದರೆ ದಯವಿಟ್ಟು ನನಗೆ ತಿಳಿಸಿ.. ಆತನಿಗೆ ಒಂದು ಪ್ರಶಸ್ತಿ ಕೊಡಲೇ ಬೇಕು!!!! :-)

Monday, January 11, 2010

ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲೆಬೇಕಿತ್ತು!! (ಭಾಗ ೨)

ದಿನಗಳು ಕಳೆದದ್ದೇ ತಿಳಿಯಲಿಲ್ಲ... ಸುನೀತಾ ಹಾಗು ನಮ್ಮ ಮಧ್ಯೆ ಮಾತು ಕತೆ ನಿಂತೇ ಹೋಗಿತ್ತು... ನಾವೂ ಆಕೆಗೆ ತಮಾಷೆ ಮಾಡೋದನ್ನ ಬಿಟ್ಟಿದ್ದರೆ, 'ಗರಗಸ' ತನ್ನ ಅಟ್ಟಹಾಸವನ್ನೂ ನಿಲ್ಲಿಸಿದ್ದ... ನಿಲ್ಲಿಸಿದ್ದ ಅನ್ನುವುದಕ್ಕಿಂತ, ನಾವೇ ಅವನಿಗೆ ಬಯ್ದು ಇನ್ನು ಹಾಗೆ ನಗಬಾರದು , ನಾವು ಸೇಡುತೀರಿಸಿಕೊಳ್ಳಲಿದ್ದೇವೆ ಎಂದು ತಾಕೀತು ಮಾಡಿದ್ದೆವು... ನಮ್ಮಗಳ ಮಧ್ಯೆ ಅದೊಂದು ತರಹದ ಶೀತಲ ಸಮರ... ಆದರೆ ನಾವು ಸೇಡು ತೀರಿಸಿಕೊಳ್ಳುವ ಪರಿ ಗೊತ್ತಿಲ್ಲದ ಸುನೀತ ಮಾತ್ರ ಹಾಯಾಗಿದ್ದಳೆನೋ.. ೫ ತಿಂಗಳು ಕಳೆದವು... ಮಧ್ಯವಾರ್ಷಿಕ ಪರೀಕ್ಷೆಗಳೆಲ್ಲಾ ಮುಗಿದು ನಾವೆಲ್ಲರೂ  ರಜಾದಿನಗಳಿಂದ  ವಾಪಸು ಕಾಲೇಜ್ ಕಡೆ ತಲೆ ಹಾಕಿದ್ದೆವು... ಹಾಗಿರಲೊಂದು ದಿನ ನಮ್ಮ ಸೇಡು ತೀರಿಸಿಕೊಳ್ಳುವ ಕಾಲ ಪಕ್ವವಾಗಿದೆ ಎಂದು ನಮಗನ್ನಿಸತೊಡಗಿತ್ತು.."ಇನ್ನು ತಡ ಮಾಡೋದು ಬೇಡ, ತುಂಬಾ ಕಷ್ಟವಾಗ್ತಿದೆ" ಸದಾನಂದ ಅದೊಂದು ದಿನ ನನ್ನಲ್ಲಿ ಹೇಳಿಕೊಂಡ.. ಸರಿ ಎಂದು ನಾವೂ ಒಂದು ಒಳ್ಳೆಯ ದಿನಕ್ಕಾಗಿ ಹುಡುಕಾಟ ನಡೆಸಿದೆವು.. ಆಗ ಬಂದಿದ್ದೆ ಕುಮಾರನ ಹುಟ್ಟುಹಬ್ಬ...!!!


ಈ ಕುಮಾರ ನಮ್ಮ ಗುಂಪಿನವನೊಬ್ಬ.. ಆತನದೂ ಕೆಲವು ಇಂಟರೆಸ್ಟಿಂಗ್ ಕಥೆಗಳಿವೆ ಅದನ್ನು ಮುಂದೆ ಹೇಳುವೆ...
ಅದ್ಹೇಗೋ ಆತನ ಮನ ವೊಪ್ಪಿಸಿ, ನಾವೇ ಸ್ವಲ್ಪ ಸ್ವಲ್ಪ ದುಡ್ಡು ಹಾಕಿ ಆತನ ಹುಟ್ಟುಹಬ್ಬಕ್ಕೆ, ಕ್ಲಾಸ್ ನವರಿಗೆಲ್ಲ ಪಾರ್ಟಿ ಕೊಡೋದು ಅಂತ ನಿರ್ಧರಿಸಿದೆವು...ಆತನ ಹುಟ್ಟುಹಬ್ಬ ಶುಕ್ರವಾರ ವಾಗಿತ್ತು.. ಅದನ್ನು ಶನಿವಾರಕ್ಕೆ ಮುಂದೆ ಹಾಕೋಣ ಎಂದು ಯೋಚಿಸಿದರೋ ಸಾಧ್ಯವಾಗಲಿಲ್ಲ... ಸರಿ ಶುಕ್ರವಾರವೇ ಪಾರ್ಟಿ... ಎಲ್ಲರೂ ಒಂದು ಕಡೆ ಸೇರುವುದು ಎಂದು ನಿರ್ಧಾರವಾಯಿತು... ಇದ್ದ ವೊಂದೇ ಅಡ್ಡ ಅಮೃತ್ ಕ್ರೀಂ ಪಾರ್ಲರ್ .. ಹಾಗಾಗಿ ಎಲ್ಲರನ್ನೂ ಕುಮಾರ ಶುಕ್ರವಾರ ಸಂಜೆ ಬರಬೇಕೆಂದು ಆಹ್ವಾನಿಸಿದ.. ಸುನೀತಾಳಿಗೂ ಕರೆ ಕೊಡಲಾಯಿತು... ಆ ಶುಕ್ರವಾರ ಬಂದೆ ಬಿಟ್ಟಿತು...
ಎಲ್ಲರೂ ಅಲ್ಲಿ ಸಂಜೆ ೫ ಗಂಟೆಗೆ ಹಾಜರು... ಗಡದ್ದು ಪಾರ್ಟಿ ಆರಂಭವಾಯಿತು.. ಆದರೆ ಸದಾನಂದ ಮಾತ್ರ ಕಾಣೆಯಾಗಿದ್ದ.. ಎಷ್ಟು ಹೊತ್ತಾದರೂ ಆತನ ಪತ್ತೆಯಿಲ್ಲ... "ಸೇಡು ತೀರಿಸಿಕೊಳ್ಳುತ್ತೇವೆ  ಅಂದ್ರಿ , ಆದ್ರೆ ಹೆದರಿ ಆತನೇ ಪರಾರಿನಾ? "  'ಗರಗಸ' ನನ್ನಲ್ಲಿ ಕೇಳಿದ್ದಕೆ ಆತನನ್ನು ಸುಮ್ಮನಾಗಿಸಿದೆ... ಇನ್ನೇನು ಪಾರ್ಟಿ ಮುಗಿಯುವ ಹೊತ್ತಾಯಿತು ಅನ್ನುವಷ್ಟರಲ್ಲಿ ಸದಾನಂದ ಪ್ರತ್ಯಕ್ಷನಾಗೆಬಿಟ್ಟಿದ್ದ  .. ಆತನ ಕೈಯಲ್ಲಿ ದೊಡ್ಡ ಸರಪಳಿ.. ಅದಕ್ಕೆ ಕಟ್ಟಿದ್ದಿದ್ದು ಒಂದು ಸುಂದರ ಮಜಬೂತಾದ ನಾಯಿ!!!!!


 ಎಲ್ಲರೂ ಆತನನ್ನೇ ನೋಡುತ್ತಿದ್ದರೆ, ಆ ನಾಯಿ ಹೆದರಿಕೆಯಿಂದ ಎಲ್ಲಾರನ್ನೂ ದುರುಗುಟ್ಟಿ ನೋಡುತ್ತಿತ್ತು...
" ನಾನು ಬರೋದು ಸ್ವಲ್ಪ ತಡವಾಯಿತು... ಇದು ನನ್ನ ನಾಯಿ, ತುಂಬಾ ಕಷ್ಟ ಪಟ್ಟು ಸಾಕಿ ಬೆಳೆಸಿದ್ದೇನೆ.. ಭಾರಿ ಬುದ್ಧೀನೂ ಇದೆ ಇದಕ್ಕೆ... ಯಾರು ಏನೆ ಹೇಳಿದ್ರೂ ಅದನ್ನ ಮಾಡುತ್ತೆ ಈ ನಾಯಿ" ಸದಾನಂದ ಪೀಠಿಕೆ ಹಾಕಿದ..."ಹೌದಾ!!" ಎಂದು ಎಲ್ಲರೂ ಅಚ್ಚರಿಯಿಂದ ನೋಡುತ್ತಿದ್ದರೆ "ಬೊಗಳೋ" ಅಂತ ನಾಯಿಗೆ ಆಜ್ನಾಪಿಸಿದ್ದು ಟೀನಾ.. ನಾಯಿ ಆಕೆಯನ್ನೊಮ್ಮೆ ದುರುಗುಟ್ಟಿ ಸುಮ್ಮನಾಯಿತು...
"ಕೈ ಕೊಡು" ಗರಗಸ ಆಜ್ಞಾಪಿಸಿದ... ಉಹುಂ ನಾಯಿ  ಏನೂ ಗೊತ್ತಿಲ್ಲದಂತೆ ಕುಳಿತಿತ್ತು..."ಏನೋ ಇದು ಏನ್ ಬೇಕಾದರೂ ಮಾಡುತ್ತೆ ಅಂದಿ, ಇದು ಸುಮ್ನೆ ಕುಳಿತುಬಿಟ್ಟಿದೆ" ಯಾರೋ ಮಧ್ಯದಲ್ಲಿ ಬಾಯಿಹಾಕಿದ್ದರು..."ಅದು ಹಾಗೆಲ್ಲ್ಲ ಆಗಲ್ಲ, ಅದರ ಹೆಸರು ಹೇಳಿ ಅದಕ್ಕೆ ಏನು ಮಾಡಬೇಕು ಅಂತ ಹೇಳಬೇಕು.. ಆಗ ಮಾತ್ರ ಅದು ಹೇಳಿದ್ದು ಮಾಡುತ್ತೆ" ಸದಾನಂದ ರಹಸ್ಯ ಬಿಟ್ಟುಕೊಟ್ಟ..."ಹೌದಾ, ಏನು ಇದರ ಹೆಸರೇನು" ಎಲ್ಲರೂ ತುಂಬಾ ಉತ್ಸಾಹದಿಂದ ಕೇಳಿದರು..."ಸುನೀತಾ ಅಂತ!!!" ಸದಾನಂದ ಹಾಗೆ ಹೇಳುತ್ತಿದ್ದಂತೆ ಎಲ್ಲಾರೂ ಅವಕ್ಕಾದರು...!!!
"ಸುನೀತಾ ಕೈ ಎತ್ತು" ಸದಾನಂದ ಹೇಳುತ್ತಿದ್ದಂತೆ ನಾಯಿ ತನ್ನ ಮುಂದಿನ ಕಾಲೆತ್ತಿ ಬಾಲ ಅಲ್ಲಾಡಿಸತೊಡಗಿತು!!! "ಸುನೀತಾ ಎರಡೂ ಕೈಯೆತ್ತು" ಈಗ ಅದು ತನ್ನ ಮುಂದಿನ ಎರಡೂ ಕಾಲೆತ್ತಿ ನಿಂತು ಬಿಟ್ಟಿತ್ತು..."ಸುನೀತಾ ಮಲ್ಕೋ" ನಾಯಿ ಸಟ್ಟನೆ ಮಲಗಿಕೊಂಡಿತು...!!!! "ಸುನೀತಾ ಕೂತ್ಕೋ" ನಾಯಿ ಕುಳಿತು ಎಲ್ಲರನ್ನೂ ದಿಟ್ಟಿಸಿ ನೋಡತೊಡಗಿತು...!! ಎಲ್ಲರೂ ಅದನ್ನೇ ಗಮನಿಸುತ್ತಿದ್ದರೆ , ಸುನೀತಾಳ ಮುಖ ಮಾತ್ರ ಇಂಗು ತಿಂದ ಮಂಗನಂತಾಗಿತ್ತು...!! "ಹೇ ಇದು ಗಂಡು ನಾಯಿ ಅಲ್ವೇನೋ? ಇದಕ್ಕೆ ಸುನೀತಾ ಅಂತ ಹೆಣ್ಣಿನ ಹೆಸರ್ಯಾಕೆ ಇಟ್ಟೆ" ನಾನು ಒಂದು ಗೋಲಿ ಬಿಟ್ಟೆ..." ನಾಯಿ ಗಂಡಾಗಿರಲಿ ಹೆಣ್ಣಾಗಿರಲಿ , ಅದಕ್ಕೆ ಸುನೀತಾ ಅನ್ನೋ ಹೆಸರು ತುಂಬಾ ಚೆನ್ನಾಗಿ ಒಪ್ಪುತ್ತೆ" ಸದಾನಂದ ಉರಿಯುವ ಬೆಂಕಿಗೆ ತುಪ್ಪ ಹಾಕಿದ್ದ... ಅಷ್ಟರಲ್ಲಾಗಲೇ ಅವಮಾನಕ್ಕೊಳಗಾದ ಸುನೀತಾ ಅಲ್ಲಿಂದ ಎದ್ದು ಹೊರಟೆ ಬಿಟ್ಟಳು...


"ಸುನೀತಾ ನಿಂತ್ಕೋ " ಸದಾನಂದ ಆಕೆಯ ಕಡೆ ಧಾವಿಸಿದ... ಆ ಮಾತಿಗೆ ನಾಯಿ ತನ್ನ ಮುಂದಿನ ಎರಡೂ ಕಾಲೆತ್ತಿ ನಿಂತಿದ್ದನ್ನು ಮಾತ್ರ ಯಾರೂ ಗಮನಿಸಲೇ ಇಲ್ಲ!!!.. ಎಲ್ಲರೂ ಸದಾನಂದ ಮತ್ತು ಸುನೀತಾಳನ್ನೇ ನೋಡುತ್ತಿದ್ದರು.. ಮುಂದೇನಾಗುತ್ತೋ ಅನ್ನೋ ಭಯ ಎಲ್ಲರಿಗೆ.."ಸುನೀತಾ ನೋಡು, ೫ ತಿಂಗಳ ಹಿಂದೆ ನಿನ್ನ ಮನೆಯಿಂದ ಒಂದು ನಾಯಿಮರಿ ಕಳುವಾಗಿತ್ತಲ್ಲ, ಅದೇ ಈ ನಾಯಿ.. ತಗೋ ನಿಂಗೆ ಇರ್ಲಿ.. ಚೆನ್ನಾಗಿ ಸಾಕಿದ್ದಿನಿ.. ಬುದ್ಧೀನೂ ಕಲಿಸಿದ್ದೀನಿ.. ಇನ್ನು ನೀನೆ ಸಂಭಾಳಿಸು.. ಆದ್ರೆ ನೆನಪಿಡು , ಅದ್ರ ಹೆಸರು ಕರೆದು ಹೇಳಿದ್ರೆನೆ ಅದು ಕೇಳೋದು . ಇಲ್ಲಾಂದ್ರೆ ಅದೂ ಏನೂ ಕೇಳಲ್ಲ..." ಸದಾನಂದ ತನ್ನ ಮಾತು ಮುಗಿಸಿ ನಾಯಿಯ ಸರಪಳಿಯನ್ನು ಆಕೆಯ ಕೈಗಿತ್ತ... ಸುನೀತಾ ಬಾ, ಸುನೀತಾ ಕೂತ್ಕೋ, ಸುನೀತಾ ಬೊಗಳು ಹೀಗೆಲ್ಲ ಸ್ವತಹ ಸುನೀತಾಳೆ ಹೇಳೋದನ್ನು ಕಲ್ಪಿಸಿಕೊಂಡು ನಾನು ಬಿದ್ದು ಬಿದ್ದು ನಗತೊಡಗಿದ್ದೆ... ಎಲ್ಲರಿಗೂ ಇದರ ಕಾರಣ ಅರ್ಥವಾಗಿ , ನಾವು ಸೇಡು ತೀರಿಸಿಕೊಂಡ ಪರಿ ನೋಡಿ ಒಳಗೊಳಗೇ ನಗತೊಡಗಿದರು..
ನಾಯಿಯನ್ನು ಸುನೀತಾಳ ಕೈಗೊಪ್ಪಿಸಿ, ಅದನ್ನು ಕದ್ದಿದ್ದಕ್ಕೆ ಆಕೆಯ ಕ್ಷಮೆ ಕೇಳಿ ನಾವು ಅಲ್ಲಿಂದ  ಮುಂದೆ ಹೆಜ್ಜೆ ಹಾಕಿದೆವು...!!!!

Thursday, January 7, 2010

ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲೆಬೇಕಿತ್ತು!!

"ನೀವು ನಿಮ್ಮ ಶಿಕ್ಷಣ ಮುಗಿದ ಮೇಲೆ ಏನಾಗಬೇಕು ಅಂತ ಇದ್ದೀರಾ?" ನಮ್ಮ ಲೆಕ್ಚರೆರ್ ಈ ಪ್ರಶ್ನೆ ಕೆಳುತ್ತಿದಂತೆ ಒಬ್ಬೊಬ್ಬರಾಗಿ ಎದ್ದು ನಿಂತು  ಉತ್ತರಿಸುತ್ತಿದ್ದರು..."ನಾನು ಎಂ ಬಿ ಏ ಮಾಡಿ ಒಳ್ಳೆ ಕಂಪನಿಲಿ ಕೆಲ್ಸಕ್ಕೆ ಸೇರಬೇಕು, ಆಮೇಲೆ ಎರಡು ಉತ್ತಮ ಮಕ್ಕಳಿಗೆ ತಾಯಿಯಾಗಬೇಕು" ಹಾಗಂತ ಸುನಿತಾ ಹೇಳಿದಾಗ ಇಡೀ ಕ್ಲಾಸು ಆಕೆಯ ಕಡೆ ಬೆರಗಿನಿಂದ ನೋಡಿತ್ತು..."ನೀವೇನ್ ಆಗ್ಬೇಕೂ ಅಂತ ಇದ್ದೀರಾ ಬುದ್ಧಿವಂತರೇ" ಹಾಗಂತ ಲೆಕ್ಚರೆರ್ ಕೇಳಿದ್ದು ತರಲೆ ಟೀಂ ಎಂದೇ ಖ್ಯಾತವಾಗಿದ್ದ ನಮ್ಮನ್ನ... ಮೊದಲಿಗೆ ನಿಧಾನವಾಗಿ ಎದ್ದು ನಿಂತ ಸದಾನಂದ, "ಯೆನಾಗ್ಬೇಕೂ ಅಂತ ಗೊತ್ತಿಲ್ಲ ಸಾರ್ , ಆದ್ರೆ ಆ ಎರಡು ಮಕ್ಕಳ ಅಪ್ಪ ಆಗ್ಬೇಕೂ ಅಂತ ತುಂಬಾ ಆಸೆ ಆಗ್ತಿದೆ " ಅಂತ ಸುನೀತಾ ಕಡೆ ವಾರೆ ದೃಷ್ಟಿ ಬೀರಿದ್ದ.. ಇಡೀ ಕ್ಲಾಸಿಗೆ ಕ್ಲಾಸ್ ಗೊಳ್ಳನೆ ನಕ್ಕರೆ ಸುನಿತಾ ಬಗ್ಗಿ ಅಳತೊಡಗಿದ್ದಳು.. ಸದಾನಂದ ತಮಾಷೆಗೆ ಅಂತ ಹೇಳಿದ್ದು ಗಂಭೀರ ರೂಪ ಪಡೆದಿತ್ತು... " ಕ್ಲಾಸ್ ನಿಂದ ಹೊರಗೆ ಹೋಗಿ" ಲೆಕ್ಚರೆರ್ ನಮ್ಮಕಡೆ ನೋಡಿ ಬೊಬ್ಬಿಟ್ಟರು... ನಮಗೆ ಅದೇನೂ ಹೊಸತಲ್ಲ... ಯಾರೇ ಆಗಲಿ "ಗೆಟ್" ಅನ್ನೋವಷ್ಟರಲ್ಲಿ  ಬಾಗಿಲಿನ ಹತ್ರ "ಔಟ್" ಅನ್ನೋವಷ್ಟರಲ್ಲಿ  ಚಿತ್ರಮಂದಿರದಲ್ಲಿರುತ್ತಿದ್ದ ನಾವು ಅಂದೂ ಹಾಗೆಯೇ ಮಾಡಿದ್ದೆವು...

ಆದರೆ ಮರುದಿವಸದಿಂದ ನನ್ನ ಮತ್ತು ಸದಾನಂದನ ಕೆಟ್ಟ ದಿನಗಳು ಪ್ರಾರಂಭವಾಗಿದ್ದವು...ಸದಾನಂದನಿಗೆ ನಾನೇ ಹಾಗೆ ಹೇಳಲು ಕಲಿಸಿ ಕೊಟ್ಟಿದ್ದು ಅನ್ನೋದು ಅದಕ್ಕೆ ಕಾರಣ.. ಸುನೀತಾ ಹಿಂದಿನ ದಿನದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಳು... ನನ್ನ ಮತ್ತು ಸದಾನಂದನ ಮೇಲೆ ಇಲ್ಲ ಸಲ್ಲದ ದೂರು ಕೊಟ್ಟು ಪ್ರತಿ ದಿನ ನಮ್ಮನ್ನು  ಕ್ಲಾಸ್ ನಿಂದ ಹೊರ ಕಳಿಸುತ್ತಿದ್ದಳು... ಸದಾನಂದ , ತಾನು ಹೇಳಿದ್ದು ತಮಾಷೆಗೆಂದೂ ಆಕೆಯಲ್ಲಿ ಕ್ಷಮೆ ಕೇಳಿದರೂ ಆಕೆ ಕೇಳಲಿಲ್ಲ... ಇದರಿಂದಾಗಿ ಒಂದೇ ಚಿತ್ರಮಂದಿರವಿದ್ದ ಆ ಊರಿನಲ್ಲಿ , ನಾನು ಮತ್ತು ಸದಾನಂದ ದಿನವೂ ಒಂದೇ ಚಲನಚಿತ್ರ ನೋಡುವ ಶಿಕ್ಷೆ ಅನುಭವಿಸಬೇಕಾಯಿತು...

ಕೆಲವು ದಿನ ಹೀಗೆ ಕಳೆಯಿತು .. ಆಮೇಲೆ ಎಲ್ಲವೂ ಹತೋಟಿಗೆ ಬಂತು ಅಂತ ಅಂದುಕೊಂಡಿದ್ದೆವು... ಆದರೆ ಸುನೀತಾಳನ್ನು ನೋಡುತ್ತಿದ್ದಂತೆ ನನಗೆ ನಗು ಉಕ್ಕಿ ಬರುತ್ತಿತ್ತು...ಕಷ್ಟ ಪಟ್ಟು ಅದೆಲ್ಲವನ್ನೂ ತಡೆಹಿಡಿಯುತ್ತಿದ್ದೆ... ಉಬ್ಬುಹಲ್ಲಿನ ಗರಗಸ ಮಾತ್ರ  ಆಕೆ ಎದುರು ಬರುತ್ತಿದ್ದಂತೆ ಗಹಗಹಿಸಿ ನಗುತ್ತಿದ್ದುದು ಮಾತ್ರ ಅಸಹ್ಯವಾಗಿರುತ್ತಿತ್ತು... "ನಗಬೇಡವೋ   ಇಡಿಯಟ್" ಆವತ್ತೊಂದಿನ ಸಹನೆ ಕಳೆದುಕೊಂಡಿದ್ದ ಸದಾನಂದ  ಜೋರಾಗಿ ಕಿರುಚಿಬಿಟ್ಟ.. ಗರಗಸವೂ ಕಮ್ಮಿ ಇಲ್ಲ.." ಮತ್ತೆನ್ರೋ , ನೀವೆಲ್ಲ ವೇಸ್ಟ್.. ಒಂದು ಚಿಕ್ಕ ಪಿ ಜೆ  ಹೇಳಿದ್ದಕ್ಕೆ ಆಕೆ ನಿಮ್ಮನ್ನು ಅದೆಷ್ಟು ದಿನ ಕ್ಲಾಸ್ನಿಂದ ಹೊರಗೆ ಕಳಿಸಲಿಲ್ಲ.. ನಿಮಗೇನಾದರೂ ನಾಚಿಕೆ ಮಾನ ಮರ್ಯಾದೆ ಇದ್ಯಾ? ಒಂದು ಹೆಣ್ಣಿನ ಮುಂದೆ ತಲೆ ಬಾಗಿಸಿ ಬಿಟ್ರಲ್ಲೋ.. ಗಂಡಸ್ರಾಗಿದ್ರೆ ಆಕೆ ಮೇಲೆ ಸೇಡು ತೀರಿಸಿಕೊಳ್ಳಿ".. ಆತ ನಮಗೆ  ಸವಾಲು ಎಸೆದಿದ್ದ...ನಾನು ಒಂದು ಕ್ಷಣ ಬೆಚ್ಚಿಬಿದ್ದೆ... ತಮಾಷೆ ಮಾಡೋದು , ಆಮೇಲೆ ಅದನ್ನು ಮರ್ತು ಬಿಡೋದು ಅದಷ್ಟೇ ನಮಗೆ ಗೊತ್ತು.. ದ್ವೇಷ ವನ್ನು ವರ್ಷಾನುಗಟ್ಟಲೆ ನೆನಪಿಟ್ಟುಕೊಂಡು ಸೇಡು ತೀರಿಸಿಕೊಳ್ಳೋದು ಚಿತ್ರಗಳಲ್ಲಿ ನೋಡಿದ್ದೆವು ಅಷ್ಟೇ... ಆದರೆ ಅದ್ಯಾಕೋ ಸುನೀತ ಮೇಲೆ ಸೇಡು ತೀರಿಸಿಕೊಳ್ಳಲೇ  ಬೇಕು ಅಂತ ನನಗನ್ನಿಸಿತ್ತು...  "ಹೌದು ಸದಾನಂದ.. ಈಗೇನಾದರೂ ಮಾಡಲೇ ಬೇಕು" ನಾನು ಸದಾನಂದನತ್ತ ನೋಡಿದೆ... "ಗೋರೆ , ನೀನೆ ಪರ್ಮಿಶನ್  ಕೊಟ್ಟ ಮೇಲೆ ಮುಗೀತು... ಉಳಿದದ್ದು ನನಗೆ ಬಿಡು" ಸದಾನಂದ ಪಕ್ಕನೆ ನಕ್ಕು ಹೇಳಿದ... "ಏನು ಮಾಡ್ತಿಯಾ" ಅಂತ ನಾವೆಲ್ಲರೂ  ಕೇಳಿದ್ದಕ್ಕೆ ಸದಾನಂದ ಏನೂ ಮಾತಾಡದೆ ನನ್ನನ್ನು ಎಳೆದುಕೊಂಡು ರೂಮಿನತ್ತ ಸಾಗಿದ್ದ...
ಅದಾಗಿ ೪ ದಿನಗಳಲ್ಲಿ ಸುನೀತಾ ಮನೆಯಿಂದ ಆಕೆಯ ಪ್ರೀತಿಯ ಚಿಕ್ಕ ನಾಯಿಮರಿ ಕಳುವಾಗಿ ಹೋಗಿತ್ತು...!!!!!!!!

ಮುಂದುವರೆಯುವುದು...