Tuesday, April 29, 2014

ಒಂದು ನಾಣ್ಯ , ಎರಡು ಮುಖ!!!


ಆವತ್ತು ಗುರುವಾರ .. ಮೀಸೆ ಪರವ ಎಂದಿನಂತೆ ತನ್ನ ಕೆಲಸಗಳನ್ನು ಮುಗಿಸಿ ದೇವಸ್ತಾನದತ್ತ ಸಾಗಿದ್ದ.. ಜಾತಿಯಲ್ಲಿ ದಲಿತ.. ರಾಘವೇಂದ್ರ ಸ್ವಾಮಿಗಳ ದೊಡ್ಡ ಭಕ್ತ .. ಊರಿನಲ್ಲೇ ಇರುವ ರಾಯರ ಗುಡಿಗೆ ಹೋಗೋಣವೆಂದು ಅತ್ತ ಸಾಗಿದ್ದ.. ಆವತ್ತು ದೇವಸ್ತಾನದಲ್ಲಿ ಯಾವುದೋ ವಿಶೇಷ ಪೂಜೆ ನಡೆಯುತ್ತಿತ್ತು .. ದೇವರ ದರ್ಶನ ಪಡೆದವನೇ ಊಟದ ಛತ್ರದತ್ತ ಸಾಗಿದ್ದ.. ರಾಯರ ಪ್ರಸಾದ ಸ್ವೀಕರಿಸಿ ಹೋಗೋಣವೆಂದು ಊಟದ ಎಲೆ ಮುಂದೆ ಕೂತಿದ್ದವನಿಗೆ ಇಂಥ ಪರಿಸ್ತಿತಿ ಬರಬಹುದೆಂದು ಕನಸೋ ಬಿದ್ದಿರಲಿಕ್ಕಿಲ್ಲ!!

ಊಟದ ಎಲೆ ಮುಂದೆ ಕೂತಿದ್ದ  ಮೀಸೆ ಪರವ ಇನ್ನೇನು ಊಟದ ಎಲೆಗೆ ಕೈ ಹಾಕಬೇಕು ಅನ್ನುವಸ್ತರಲ್ಲಿ ಆತನ ಮುಂದೆ ಬಂದು ನಿಂತಿದ್ದರು ಶಾಸ್ತ್ರಿಗಳು , ಅವರ ಜೊತೆ ಇನ್ನೂ ೩-೪ ಜನರಿದ್ದರು.. ನೋಡಿದರೆ ಬ್ರಾಹ್ಮಣರೆಂದು ಗೊತ್ತಗುತ್ತಿತ್ತು..

"ಯಾರು ನೀನು??"  ಶಾಸ್ತ್ರಿಗಳು ಏರು ದನಿಯಲ್ಲಿ ಕೆಳಿದರು ..
"ನಾನು ಸ್ವಾಮೀ , ಮೀಸೆ ಪರವ"..
"ದಲಿತರ ಜಾತಿ ಅಲ್ವೇ "
"ಹೌದು "
"ಮತ್ತೆ ಏಕೆ ಬ್ರಾಹ್ಮಣರ ಜೊತೆ ಊಟಕ್ಕೆ ಕೂತೆ?" ಶಾಸ್ತ್ರಿಗಳ ಕಂಚಿನ ಕಂಠ ಅಲ್ಲಿ ಪ್ರತಿಧ್ವನಿಸಿತು ..
ಮೀಸೆ ಪರವನಿಗೆ ಮಾತೆ ಹೊರಡಲಿಲ್ಲ !! ನಾನೂ ಮನುಷ್ಯನಲ್ವೆ? ದಲಿತ ಅನ್ನುವುದಾದರೂ ಏನು?

"ಕಿವಿ ಕೆಳೋದಿಲ್ವೆ" ಶಾಸ್ತ್ರಿಗಳು ಮತ್ತೆ ಅಬ್ಬರಿಸಿದರು !!
"ಇವನನ್ನು ಎತ್ತಿ ಹೊರಗೆ ಹಾಕಿ" ಜೊತೆಯಲ್ಲಿದ್ದವರಿಗೆ ಶಾಸ್ತ್ರಿಗಳು ಆಜ್ಞಾಪಿಸಿದರು .. ಒಂದೇ ಕ್ಷಣ !! ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಮೀಸೆ ಪರವನನ್ನು ಎತ್ತಿ ದೇವಸ್ತಾನದಿಂದ ಹೊರ ಹಾಕಲಾಗಿತ್ತು !!!
ಅಲ್ಲಿದ್ದ ಯಾರೂ ಮಾತಾಡಲಿಲ್ಲ !! ಹೊರಗಿದ್ದ ದಲಿತರೂ ಸಹ !! ಕಾರಣ ಅವರ ಜಾತಿ !!!

-------------------------------------------------------------------------------------------------------------------

ಸುಬ್ಬಾ ಭಟ್ಟರಿಗೆ ಆವತ್ತು ಸ್ವರ್ಗಕ್ಕೆ ಮೂರೇ  ಗೇಣು !! ಅತೀ ಬಡತನದಲ್ಲಿ ಬದುಕಿದ್ದರೂ ಸಹ ಮಗ MBBS ಪಾಸು ಮಾಡಿದ ಕ್ಷಣ !!
"ಅಪ್ಪ , ಇವತ್ತು ಸಂದರ್ಶನವಿದೆ , ಆಶಿರ್ವಾದ ಮಾಡಿ" ಮಗ ಚಿದಂಬರ ಕಾಲಿಗೆ ಬಿದ್ದು ನಮಸ್ಕರಿಸಿದ ..
"ಒಳ್ಳೆದಾಗಲಿ ಮಗಾ" ಸುಬ್ಬ ಭಟ್ಟರ ಬಾಯಿಂದ ಇದಕ್ಕಿಂತ ಹೆಚ್ಚಿನ ಮಾತು ಹೊರಡಲಿಲ್ಲ .. ಕಣ್ಣಲ್ಲಿ ಆನಂದ ಬಾಷ್ಪ !! ಮಗನಿಗೆ ಇನ್ನೇನು ಸರ್ಕಾರಿ ನೌಕರಿ ಸಿಗಲಿದೆ .. ಎಲ್ಲ ಕಷ್ಟಗಳು ದೂರವಾದವು ಎಂದು ಸುಬ್ಬ ಭಟ್ಟರು ಆನಂದ ವಾಗಿದ್ದರು !!

ಆವತ್ತು ಡಾಕ್ಟರ್ ಗಳಿಗಾಗಿ ಸರಕಾರ ಅಭ್ಯರ್ಥಿ ಗಳಿಗೆ ಸಂದರ್ಶನ ಕರೆದಿತ್ತು .. ಚಿದಂಬರ ಅದೇ ಕೆಲಸಕ್ಕೆ ಅರ್ಜಿ ಹಾಕಿದ್ದ .. ಸಂದರ್ಶನಕ್ಕೆ ಕರೆ ಕೂಡ ಬಂದಿತ್ತು ... ೮೦ ಶೇಕಡಾ ಅಂಕ ಗಳಿಸಿದ ತನಗೆ ನೌಕರಿ ಶತಸಿದ್ಧ  ಆದರೆ ಅಲ್ಲಿ ನಡೆದದ್ದೇ ಬೇರೆ!!

ಸಂದರ್ಶನಕ್ಕೆ ಕರೆದ ಪಟ್ಟಿಯಲ್ಲಿ ಆತನ ಹೆಸರೇ ಮಾಯವಾಗಿತ್ತು !!!
ಈ ಹುದ್ದೆಗಳು ಮೀಸಲಾಗಿವೆ .. ಬ್ರಾಹ್ಮಣರಿಗೆ ಅವಕಾಶವಿಲ್ಲ !!! ಚಿದಂಬರ ಬೆಚ್ಚಿಬಿದ್ದ !!
೫೦ ಶೇಕಡಾ ಅಂಕ ಗಳಿಸಿದ ದಲಿತ , ಈ ಹುದ್ದೆ ಪಡೆಯಬಹುದು.. ಆತ ಜನರ ಜೀವ ರಕ್ಷಿಸುವ ವೈದ್ಯ !! ಅದೇ ೮೦ ಶೇಕಡಾ ಅಂಕ ಗಳಿಸಿದ ಚಿದಂಬರನಿಗೆ ಅವಕಾಶವಿಲ್ಲ.. ಕಾರಣ ಅವನ ಜಾತಿ !!!

-----------------------------------------------------------------------------------------------------------------------

ಗೋರೆ ಉವಾಚ !!!

ಎಲ್ಲರೂ ಸಮಾನರು!! ಕೆಲವರು ಮಾತ್ರ ಹೆಚ್ಚು ಸಮಾನರು !!! ಇನ್ನು ಕೆಲವರು ಅತೀ ಹೆಚ್ಚು ಸಮಾನರು !!!!!!!


 

1 comment:

sunaath said...

ಒಂದೇ ನಾಣ್ಯದ ಎರಡು ಮುಖಗಳು!