Sunday, May 22, 2016

ಗಾಂಧೀಜಿ ಯವರನ್ನು ಕೊಂದಿದ್ದು ಯಾರು ?

ಗಾಂಧೀಜಿ  ಯವರನ್ನು ಕೊಂದಿದ್ದು ಯಾರು ? ಈಗ ಈ ಪ್ರಶ್ನೆ ಕೇಳಿದರೆ ಎಲ್ ಕೆ ಜಿ ಓದುವ ಮಕ್ಕಳೂ ನಕ್ಕುಬಿಡುತ್ತಾರೆ .. ಉತ್ತರ ಎಲ್ಲರಿಗೂ ಗೊತ್ತಿದೆ .. ನಾಥೂರಾಮ್ ಗೋಡ್ಸೆ ೩೦ನೇ ಜನವರಿ ೧೯೪೮ ಸಂಜೆ ೫ ಗಂಟೆ ೧೭ ನಿಮಿಷಕ್ಕೆ ಇಟಲಿ ತಯಾರಿತ ಬೆರೆಟ್ಟಾ ಪಿಸ್ತೂಲಿನಿಂದ ಗುಂಡು ಹೊಡೆದು ಸಾಯಿಸಿದ ..


ಆದರೆ ಈ ಬಗ್ಗೆ ಹಲವು ಅನುಮಾನಗಳು ಆಗಲೂ ಇದ್ದವು ಮತ್ತು ಈಗಲೂ ಇವೆ .. ಮೊನ್ನೆಯ ಇಷ್ರತ್ ಜಹಾನ್ ಮತ್ತು ಮಲೆಗಾವ್ ಸ್ಪೋಟದ ಹಲವು ಕೊಂಡಿಗಳು ಬಿಚ್ಚುವುದರೊಂದಿಗೆ ನನ್ನ ಅನುಮಾನ ತಿರುಗಿದ್ದು ಗಾಂಧಿಜಿ ಹತ್ಯೆಯ ಬಗ್ಗೆ .. ಈ ಬಗ್ಗೆ ಇಂಟರ್ನೆಟ್ ನಲ್ಲಿ ಶೋಧಿಸುವಾಗ ಕೆಲವು ಸ್ಪೋಟಕ ಮಾಹಿತಿಗಳು ದಕ್ಕಿದವು.. ಅವನ್ನು ಈ ಬರಹದ ಮೂಲಕ ನಿಮ್ಮ ಮುಂದೆ ಇಡುತ್ತಿದ್ದೇನೆ ..


೩೦ನೆ ಜನವರಿ ೧೯೪೮ ಸಂಜೆ ೫ ಗಂಟೆ ೧೭ ನಿಮಿಷಕ್ಕೆ ಗಾಂಧೀಜಿಯವರನ್ನು ನಾಥೂರಾಮ್ ಗೋಡ್ಸೆ ಎಂಬಾತ ಬೆರೆಟ್ಟಾ ಮ್ ೯೩೪ ಎಂಬ   ಇಟಾಲಿಯನ್ ಪಿಸ್ತೂಲಿ ನಿಂದ ಗುಂಡು ಹಾರಿಸಿ ಕೊಂದ !! ಗುಂಡು ಹೊಡೆದ ೧ ಗಂಟೆಯೊಳಗೆ ಗಾಂದಿಜಿಯವರ ಪ್ರಾಣ ಪಕ್ಷಿ ಹಾರಿ ಹೋಯಿತು .. ಆದರೆ ಈಗ ನಿಜಾಮ್ಶಕ್ಕೆ ಬರೋಣ .. ಗಾಂಧೀಜಿಯವರ ಕೊಲೆ ಕೇಸಿನ FIR ಮೇಲೆ ಒಂದು ಸಾರಿ ಬಾರಿ ಕಣ್ಣು ಹಾಯಿಸಿದರೆ ಹಲವು ಅನುಮಾನಗಳು ಹುಟ್ಟುತ್ತವೆ ..






ಮೇಲಿನ ಚಿತ್ರದಲ್ಲಿರುವುದು FIR ೩೦೪ IPC  ಪ್ರತಿ ಮತ್ತು ಅದರ ಸಾರಾಂಶ .. ಅದರಲ್ಲಿ ಹೇಳಿರುವಂತೆ ೩೦ನೆ ಜನವರಿ ೧೯೪೮ ಸಂಜೆ ೫ ಗಂಟೆ ೪೫ ನಿಮಿಷಕ್ಕೆ ಇದನ್ನು ದಾಖಲಿಸಲಾಗಿದೆ !! ಗೋಡ್ಸೆ ಗುಂಡು ಹೊಡೆದದ್ದು ೫ ಗಂಟೆ ೧೭ ನಿಮಿಷಕ್ಕೆ..  ದೊರಕುವ ಮಾಹಿತಿ ಪ್ರಕಾರ ಗಾಂಧೀಜಿ ಯವರು ಗುಂಡು ಹೊಡೆದ ಕೂಡಲೇ ಪ್ರಾಣ ತ್ಯಜಿಸಲಿಲ್ಲ .. ಆದರೆ  FIR ಬರೆಸಿದ್ದು ೫ ಗಂಟೆ ೪೫ ನಿಮಿಷಕ್ಕೆ !!!!! ಇದು ನನ್ನ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತದೆ .. ಗಾಂಧೀಜಿ ಯವರನ್ನು ಕೊಂದದ್ದು ಗೋಡ್ಸೇನಾ ಅಥವಾ ಒಂದು ವ್ಯವಸ್ತಿತ ಸಂಚು ಮೊದಲೇ ರೂಪಿಸಲಾಗಿತ್ತೆ ?


ಗಾಂಧೀಜಿಯವರನ್ನು ಕೊಲ್ಲಲು ಉಪಯೋಗಿಸಿದ ಪಿಸ್ತೂಲು ಬೆರೆಟ್ಟಾ M೧೯೩೪  ಮತ್ತು ಅದರ ನೋಂದಣಿ ಸಂಖೆ ೬೦೬೮೨೪.. ಇವತ್ತಿನ ವರೆಗೂ ಗೊತ್ತಾಗದ ಒಂದು ಅಂಶವೆಂದರೆ ಈ ಪಿಸ್ತೂಲಿನ ವಾರಸುದಾರರು ಯಾರು ಎಂಬುದು .. ಇರಲಿ , ಗಾಂಧೀಜಿಯವರ ಪೋಸ್ಟ್ ಮಾರ್ಟಂ ಆದಾಗ ಅವರ ದೇಹದಲ್ಲಿ ಇದ್ದ ಗುಂಡುಗಳಿಗೆ ಮತ್ತು ಪಿಸ್ತೂಲಿನಲ್ಲಿ ಇದ್ದ ಗುಂಡುಗಳು ಹೋಲುತ್ತಿದ್ದವೆ ? ಉಹುಂ !!! ಅವರ ಪೋಸ್ಟ್ ಮಾರ್ಟಂ ಮಾಡೇ ಇಲ್ಲ ಅನ್ನುವ ವಿಷಯ ಮಾತ್ರ ಬೆಚ್ಚಿಬೀಲಿಸುವಂಥಾ ದ್ದು  !! ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಬೆರೆಟ್ಟಾ ಅನ್ನುವ ಈ ಪಿಸ್ತೂಲನ್ನು ರಾಯಲ್ ಇಟಾಲಿಯನ್  ಆರ್ಮಿ ಉಪಯೋಗಿಸಿತ್ತು ... ಇದರಲ್ಲಿ ೭ ಸುತ್ತು ಗುಂಡು ಹಾರಿಸಬಹುದಿತ್ತು ! ಹಾರಿಸಿದ ಮೂರು ಗುಂಡುಗಳನ್ನು ಪಿಸ್ತೂಲಿನಲ್ಲಿ ಉಳಿದ ೪ ಗುಂಡುಗಳಿಗೆ ಹೋಲಿಸಿ ನೋಡಬಹುದಿತ್ತು  ಆದರೆ ಉಳಿದ ಆ ೪ ಗುಂಡುಗಳು ಏನಾದವು ಅನ್ನುವುದು ಮಾತ್ರ ಎಲ್ಲೂ ಸ್ಪಷ್ಟವಾಗಿಲ್ಲ !! ಮತ್ತೆ ಅದೇ ಪ್ರಶ್ನೆ ಉದ್ಭವಿಸುತ್ತದೆ , ಗಾಂಧೀಜಿಯವರ ಸಾವಿಗೆ ಕಾರಣವೇನು? ಮತ್ತು ಎಷ್ಟು ಹೊತ್ತಿಗೆ ಈ ಹೇಯ ಕೃತ್ಯ ಯೆಸಗಲಾಯಿತು??





ಹತ್ಯೆಯ ಮರುದಿನ ನ್ಯೂ ಯಾರ್ಕ್ ಟೈಮ್ಸ್ ಅನ್ನುವ ಪತ್ರಿಕೆಯಲ್ಲಿ ಬಂದ ಸುದ್ದಿ .. ಹೇ ರಾಮ್ ಅಂದಿದ್ದೇ , ಅಥವಾ ನೀರು ಬೇಕು ಅಂದಿದ್ದೆ ?








ಅನುಮಾನಗಳು ಬಲಗೊಳ್ಳುವಾಗಲೆ ಇನ್ನು ಕೆಲವು ನಿಘೂಡತೆಗಳು ಎದ್ದು ನಿಲ್ಲುತ್ತವೆ ! ಗಾಂಧೀಜಿ ಯವರಂಥ ಮಹಾನ್ ನಾಯಕನನ್ನು ಹತ್ಯೆಗೈದಾಗಿನ ಚಾರ್ಜ್ ಶೀಟ್ ಕಾಣೆಯಾಗಿದೆ !! ಹೌದು , ಅವರ ಹತ್ಯೆಯ ಚಾರ್ಜ್ ಶೀಟ್ ಅನ್ನು ಇವತ್ತು ನೋಡುವುದು ಸಾಧ್ಯವಿಲ್ಲ .. ಅನೇಕ ದಾಖಲೆಗಳಂತೆ ಅದೂ ಕಾಣೆಯಾಗಿದೆ !! ಒಬ್ಬ ಮಹಾನ್ ನಾಯಕನ ಹತ್ಯೆಯ ಚಾರ್ಜ್ ಶೀಟ್ ಕಾಣೆಯಾಗುವುದು ಎಂದರೇನು ? ಇದನ್ನು ಕಾಣೆಯಾಗಿಸಿದವರು ಯಾರು ? ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ !!
ಗೋಡ್ಸೆ ಗುಂಡು ಹೊಡೆದಾಗ ಗಾಂಧೀಜಿ ಯವರು ಇನ್ನೂ ಉಸಿರಾಡುತ್ತಿದ್ದರು .. ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಬಿರ್ಲಾ ಹೌಸ್ ನ ವಸತಿ ಗೃಹಕ್ಕೆ  ಏತಕ್ಕೆ ಕರೆದೊಯ್ಯಲಾಯಿತು ?




ಅಲ್ಲಿ ಗಾಂಧೀಜಿ ಯವರನ್ನ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ತೆಯೇ ಇರಲಿಲ್ಲ ಎಂದರೆ ಯಾರಾದರೂ ನಂಬುವ ವಿಷಯವೇ ? ೧೯೪೮ ರಲ್ಲಿ ಸೈಂಟ್ ಸ್ಟೀಫನ್ಸ್ ಆಸ್ಪತ್ರೆ ಬಿರ್ಲಾ ಹೌಸ್ ನಿಂದ ಇದ್ದಿದ್ದು ೧೦ ಕಿಲೋ ಮೀಟರು ಅಂತರದಲ್ಲಿ .. ಆಸ್ಪತ್ರೆ ಗೆ ಸೇರಿಸುವುದು ಕಷ್ಟದ್ದಾಗಿರಲಿಲ್ಲ !!
ಇಟಾಲಿಯನ್ ಪಿಸ್ತೂಲು , ಪೋಸ್ಟ್ ಮೊರ್ಟಮ್ ಮಾಡದೆ ಇದ್ದಿದ್ದು , ೫ ಗಂಟೆ ೪೫ ನಿಮಿಷಕ್ಕೆ FIR ಬರೆದಿದ್ದು , ಆಸ್ಪತ್ರೆಗೆ ಸಾಗಿಸದೆ ಇದ್ದಿದ್ದು , ಚಾರ್ಜ್ ಶೀಟ್ ಕಾಣೆಯಾಗಿದ್ದು  ಎಲ್ಲವೂ ನಿಗೂಢ !!


ಗಾಂಧಿಜಿ ಯವರನ್ನು ಕೊಂದ ಗೋಡ್ಸೆ ಯನ್ನು ಅಲ್ಲಿಂದ ಓಡಿ ಹೋಗದಂತೆ ಹಿಡಿದದ್ದು ಬೇರೆ ಯಾರೂ ಅಲ್ಲ ಟಾಮ್ ರೀನೆರ್ ಅನ್ನುವ ಅಮೇರಿಕಾದ ಪ್ರಜೆ !! ಆತ ಈ ಹತ್ಯೆಯ ಕೆಲವು ಸಮಯದ ಹಿಂದಷ್ಟೇ ಭಾರತಕ್ಕೆ ಬಂದಿದ್ದ ... ಆತ ಗೋಡ್ಸೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ , ಇದು ಮೆಚ್ಚಬೇಕಾದ್ದೆ !! ಆದರೆ ಆತ ಅಲ್ಲಿಗೆ ಯಾಕೆ ಬಂದಿದ್ದ ?


ಕೆಲವು ಪತ್ರಿಕೆಗಳಲ್ಲಿ ಹತ್ಯೆಯ ನಂತರ ಈ ಬಗ್ಗೆ ಸುದ್ದಿಗಳು ಪ್ರಸಾರವಾದವು .. ಹತ್ಯೆಗಯ್ಯುವಾಗ ಗೋಡ್ಸೆ ಹೇಗಿದ್ದ ಅನ್ನುವುದನ್ನ ನ್ಯೂ ಯಾರ್ಕ್ ಟೈಮ್ಸ್ ಮತ್ತು ದಿ ಹಿಂದು ಅನ್ನುವ ಪತ್ರಿಕೆಗಳು ಹೀಗೆ ಬರೆದಿದ್ದವು .. ಅದು ಹೇಗೆ ಆತನ ಬಟ್ಟೆಗಳು ಒಬ್ಬೊಬ್ಬರಿಗೆ ಒಂದೊಂದು ಥರ ಕಂಡವೋ ದೇವರೇ ಬಲ್ಲ !!


















ಟೈಮ್ಸ್ ಆಫ್ ಇಂಡಿಯಾ ಅನ್ನುವ ರದ್ದಿ ಪತ್ರಿಕೆಯಂತೂ ಗಾಂಧೀಜಿ ಯವರಿಗೆ ೪ ಗುಂಡು ಹಾರಿಸಲಾಯಿತು ಅಂತ ಬರೆಯಿತು !!




ಮುಂದುವರಿಯುವುದು .....


ಕೃಪೆ : https://twitter.com/loosebool







ಗೋರೆ ಉವಾಚ :   ಹುಟ್ಟುಹಬ್ಬದ ದಿನ ಕೇಕ್ ಮೇಲೆ ಇಡುವ ಮೇಣದ ಬತ್ತಿಗಳಿಗೆ ಕೇಕ್ ಗಿಂತ ಹೆಚ್ಚಿನ ದುಡ್ಡು ಖರ್ಚಾದರೆ ನಿಮಗೆ ವಯಸ್ಸಾಯಿತು ಎಂದರ್ಥ !!!



1 comment:

sunaath said...

ಗೋರೆಯವರೆ,
ದೀರ್ಘ ಕಾಲದ ನಂತರ ಒಂದು ಲೇಖನವನ್ನು ಕೊಟ್ಟಿದ್ದೀರಿ. ಆದರೆ ಇದು ಉತ್ತಮ ಮಾಹಿತಿ ನೀಡುವ ಲೇಖನ ಎನ್ನುವುದರಲ್ಲಿ ಸಂಶಯವಿಲ್ಲ. ಮುಂದಿನ ಭಾಗಕ್ಕಾಗಿ ಎದುರು ನೋಡುತ್ತಿರುವೆ.