ಮುತ್ತು..
ಮಾತು ಬೆಳ್ಳಿ
ಮೌನ ಬಂಗಾರವೆಂದರು.
ಬಂಗಾರದ ಆಸೆಗೆ ಮೌನವಾಗಿದ್ದೆ
ಅಮೂಲ್ಯ ಮುತ್ತೊಂದನ್ನ ಕಳೆದುಕೊಂಡಿದ್ದೆ !!
------------------------------------------------------------------------------------------------------------------------
ಅವಸ್ಥೆ
ಕುಂಬಾರನಿಗೆ ವರುಷ
ದೊಣ್ಣೆಗೆ ನಿಮಿಷ ಅಂದರು
ನಿಜವೋ ಸುಳ್ಳೋ ನೋಡಲು ಮುಂದಾದೆ..!
ಕುಂಬಾರನ ತಲೆಗೆ
ದೊಣ್ಣೆಯಿಂದ ಹೊಡೆದು
ಮರುದಿನ ಜೈಲುವಾಸಿಯಾದೆ!!!!
--------------------------------------------------------------------------------------------------------------------
ಮಾಯ
ಬೆಂಗಳೂರನ್ನು
ಮಾಯಾನಗರಿ ಅಂದರು.
'ಮಾಯಾ'ಳನ್ನು ಹುಡುಕುತ್ತ
ನಗರಿಗೆ ಕಾಲಿಟ್ಟೆ..
ಇಂದು ನಾನೇ ಮಾಯವಾದೆ!!
43 comments:
ಮಸ್ತ್ ಅದಾವ್ರೀ ಸರಾ...ಹೇಳ್ರೀ ಮುಂದ..
hahaha super!!
:D ತುಂಬಾ ಚೆನ್ನಾಗಿದೆ. ಕುಂಬಾರನ ಕಥೆ, ಮಾಯಾನಗರಿಯ ಕಲ್ಪನೆ ತುಂಬಾ ನಗು ತರಿಸಿತು.
ಸುಮ್ನೆ ತಮಾಷೆಗೆ ಅ೦ತ ಹೇಳ್ತಾ ಹೇಳ್ತಾ ಸಖತ್ ಪ೦ಚ್ ಕೊಟ್ಟಿದ್ದೀರಿ. ಚೆನ್ನಾಗಿವೆ.
ಮುತ್ತಿನ ಮತ್ತಿನಲ್ಲಿ ಮಾಯಾಳ ಅವಸ್ಥೆ ಓದಿ ನಗು ಬಂತು.ಚೆನ್ನಾಗಿದೆ ರೀ.
ಸುಮ್ನೆ ತಮಾಷೆಗೆ ನಿಜವಾಗಲೂ ಚೆನ್ನಾಗಿದೆ...ಇದನ್ನ ಹೀಗೇ ಮುಂದುವರೆಸಿ.
ಸುಮ್ನೇ ತಮಾಷೆಗೆ ಅಂತ ನೀವು ಹೇಳಿದ್ರೂ..
ಚೆನ್ನಾಗಿದೆ.
ತಮಾಷೆಗಾದ್ರೂ ನಿಲ್ಲಿಸ್ಬೇಡಿ..ಮುಂದುವರೆಸಿ.
ಇದು ನಿಜವಾಗಲೂ ತಮಾಶೆ ಕಣ್ರೀ!
ಹ ಹ ಹ... ಸುಮ್ನೆ ತಮಾಷೆಗೆ ಬರೆದರೂ ತಮಾಷೆಯಾಗಿದೆ ಕವನಗಳು :)
:)
ಗೋರೆಯವರೇ,
ನಿಜಕ್ಕೂ ಕವನ ಚೆನ್ನಾಗಿದೆ.
ತಮಾಷೆ ಇರುವುದು ಕೆಲವು ಕಮೆಂಟ್ ಗಳಲ್ಲಿ!
ಕಮೆಂಟಲ್ಲಿಯೇ ತಮಾಷೆ ಸೃಸ್ಟಿಸಿದ ಸ್ನೇಹಿತರಿಗೆ ವಂದನೆಗಳು.
ಗೋರೆ ಸರ್ ನಿಜಕ್ಕೂ ಚೆನ್ನಾಗಿವೆ ಅಭಿನಂದನೆಗಳು..
Ravi avare ,
Mast anthen ilri , adru sumaragi adavri..bejaru madkobyadri , naa swalpa iddang helovaru
Nimm hale post bhari adavari adakka Bahutek naa tumba expect madta iddineno...
ಬಹಳ ಚೆನ್ನಾಗಿ ಬರೀತೀರಿ!ಹೀಗೇ ಬರೀತಾ ಇರಿ!
ರವಿಕಾಂತ್,
ತಮಾಷೆ ಚೆನ್ನಾಗಿದೆ...... ಇಷ್ಟು ಚೆನ್ನಾಗಿ ಬರೆದರೂ 'ತಮಾಷೆಗೆ' ಅನ್ನುತ್ತೀರಲ್ಲಾ.....
ನಿಮ್ಮ ಹನಿಗಳ ಮೂಲಕ ಒಳ್ಳೆ ಪಂಚ್ ಕೊಟ್ಟಿರುವಿರಿ.
ಸುಬ್ರಮಣ್ಯ ಸಾರ್,
ತುಂಬಾ ಥ್ಯಾಂಕ್ಯು ರೀ...
ಮನಸು ಮೇಡಂ,
ಧನ್ಯವಾದ ನಿಮಗೆ..
ತೇಜಸ್ವಿನಿ ಮೇಡಂ,
ಬ್ಲಾಗ್ ಗೆ ನಿಮಗೆ ಸ್ವಾಗತ.. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ.. ಹೀಗೆ ಬರುತ್ತಿರಿ..
ಪರಾಂಜಪೆಯವರೇ,
ಧನ್ಯವಾದ ಸಾರ್..
ಶಶಿಯವರೇ,
ಧನ್ಯವಾದ ಸಾರ್..
ನಾರಾಯಣ ಸಾರ್,
ಧನ್ಯವಾದ ಸಾರ್..
ವೆಂಕಟಕೃಷ್ಣ ಅವರೇ,
ಹೀಗೆ ಬರುತ್ತಿರಿ..
ಧನ್ಯವಾದ...
ಸುನಾಥ್ ಸಾರ್,
ಹಾಹಾ ಹೌಸು ಸುಮ್ನೆ ತಮಾಷೆಗೆ ಅಷ್ಟೇ...
ಸುಧೇಶ್,
ಹೌದು.. ತಮಾಷೆಗಾಗಿ ಬರ್ದಿದ್ದು, ತಮಾಷೆಯಾಗಿ ಇರಬೇಕಷ್ಟೇ...:-)
ಆನಂದ ಸಾರ್,
ಯಿಪ್ಪಿ ಅಷ್ಟೇನಾ?? :-)
ಉಮೇಶ್ ಸಾರ್,
ಧನ್ಯವಾದ ನಿಮಗೆ...
ಮನಸಾರೆ ಮಾದಂ,
ಮನಸಾರೀ ಅಂತ ಹೆಸರಿತ್ತುಕೊಂಡ ಮೇಲೆ ಮನಸ್ಸಿಗೆ ಬಂದದ್ದು ಹೇಳ್ಬೇಕ್ರಿ... ಬೇಜಾರ್ ಖಂಡಿತಾ ಇಲ್ಲ.. ಹೀಗೆ ಬಂದು ಕಿವಿ ಹಿಂಡುತ್ತಿರಿ.. ಒಂದಲ್ಲ ಒಂದು ದಿನ ಸುಧಾರಿಸುತ್ತೀನಿ.. :-)
ನಮಸ್ತೆ ಸತೀಶ್,
ತುಂಬಾ ದಿನ ಆಯಿತು ಕಾಣಿಸಲೇ ಇಲ್ಲಾ? ಬ್ಯುಸಿ ನಾ? ಧನ್ಯವಾದ..
ದಿನಕರ್,
ಧನ್ಯವಾದ ರೀ..
ಉದಯ್ ಸಾರ್,
ನನ್ನ ಹಂಗೆ ನಿಮಗೂ ಬ್ಲಾಗ್ ಓಪನ್ ಆಗ್ತಾ ಇರ್ಲಿಲ್ವಾ?? ಪತ್ತೇನೆ ಇರ್ಲಿಲ್ಲಾ?? ಅಂತೂ ಇಂತೂ ಬಂದ್ರಲ್ಲ.. ಧನ್ಯವಾದ ಸಾರ್..
ರವಿಸರ್,
ಚುಟುಕುಗಳು ಸೂಪರ್...
ಶಶಿಯವರೇ ಧನ್ಯವಾದ ಸರ್ ಅಂತ ಬರೆದಿದ್ದೀರಿ .
ನಾನು ಸರ್ ಅಲ್ಲ ಮೇಡಂ ಸರ್ .
ha ha ha... good ri...
ಸುಮ್ನೆ ತಮಾಷೆಗೆ ಬರೆದರೂ ಮಸ್ತ್ ಆಗಿವೆ....
ಹೀಗೇ ಮುಂದುವರೆಸಿ....
ಮಹೇಶ್!
ರವಿಕಾಂತ್, ಮಾತು ಬೆಳ್ಳಿ ಮೌನ ಬಂಗಾರ....ಹಹಹ...ಮಾತನಾಡಿದ್ದರೆ ಮುತ್ತು ಸಿಗ್ತಿತ್ತೇನೋ...ಅಲ್ಲ ಕುಂಬಾರನ ಮಡಕೆಯಮೇಲೆ ತೋರಬೇಕಾದ್ದನ್ನು....ಹಹಹ...ಚೆನ್ನಾಗಿವೆ ಚುಟುಕಿನ ಕುಟುಕು..
ಶಿವೂ,
ಧನ್ಯವಾದಗಳು..
ಶಶಿ ಮೇಡಂ,
ಹೌದು, ಅಲ್ಲಿ ತಪ್ಪಾಗಿ ಬರೆದಿದ್ದೆ.. ಕ್ಷಮಿಸಿ :-) ಧನ್ಯವಾದ ಮೇಡಂ..!!
ಶಿವಪ್ರಕಾಶ್,
ಹೀಗೆ ನಗುತ್ತಿರಿ.. ಹೀಗೆ ಬರುತ್ತಿರಿ..
ಸವಿಗನಸು ಅವರೇ,
ನಿಮಗೆ ಧನ್ಯವಾದಗಳು..
ಆಜಾದ್ ಸಾರ್,
ಹಾಹಾಹಾ.. ಹೌದು.. ಸುಮ್ನೆ ಕೂತಿದ್ದಾಗ ಇಂಥವೆಲ್ಲ ಹೊಳೆಯುತ್ತೆ...!! :-)
:-) muttu, kuttu, maya, chennagide.
Thank you nisha..
Post a Comment