Tuesday, January 19, 2010

ಗಡಿಯಾರ!!

ಅದೊಂದು ಹುಚ್ಚು ಹಿಡಿದುಬಿಟ್ಟಿತ್ತು .. ಇದೇನೂ ಹಳೆಯ ಹುಚ್ಚಲ್ಲ.. ಇತ್ತೀಚಿಗೆ ಹುಟ್ಟಿಕೊಂಡಿದ್ದು..ಚಿಕ್ಕವನಿರುವಾಗ ಹಾರ್ಮೋನಿಯಂ ಕಲಿಯಬೇಕು ಅನ್ನುವ ಹುಚ್ಚು ಒಂದು ಬಿಟ್ಟರೆ ಬೇರೆ ಏನೂ ಅಷ್ಟೊಂದು ತಿಳಿದಿರಲಿಲ್ಲ... ಆದರೆ ಹಳ್ಳಿಯಲ್ಲಿ ಇದಕ್ಕೆಲ್ಲ ಪರಿಸ್ತಿತಿ ಒಗ್ಗಿ ಬರದ ಕಾರಣ ಹಾರ್ಮೋನಿಯಂ ಕನಸಾಗಿಯೇ ಉಳಿದಿದೆ... ಆದರೆ ಅದ್ಯಾಕೋ ಕೆಲವು ದಿನಗಳಿಂದ ನನಗೆ ಹಳೆಯ ಮರಳಿನ ಗಡಿಯಾರ ಬೇಕು ಅನ್ನಿಸಿಬಿಟ್ಟಿತ್ತು... ಇದಕ್ಕಾಗಿ ತುಂಬಾ ಹುಡುಕಿದ್ದೂ ಆಯಿತು.. ಕೊನೆಗೊಂದು ಸಿಕ್ಕಿಯೇ ಬಿಟ್ಟಿತಲ್ಲ.. ಹೌದು ಸಾರ್ ನನ್ನತ್ರ ಒಂದು ಹಳೆಯ ಮರಳಿನ ಗಡಿಯಾರ ಇದೆ ಬೇಕಾದ್ರೆ ಕೊಡ್ತೀನಿ ಹಾಗಂತ ಬನ್ನೇರುಘಟ್ಟ ರೋಡ್ನಲ್ಲಿ ಸಿಕ್ಕಿದ ದಿವಾಕರ ಅನ್ನೋ ಪುಣ್ಯಾತ್ಮ ಹೇಳಿದಾಗ ಸ್ವರ್ಗಕ್ಕೆ ಮೂರೇ ಗೇಣು.. ಆ ಗಡಿಯಾರಕ್ಕೆ ಆತ ಕೇಳಿದ್ದು ಬರೋಬ್ಬರಿ ೮ ಸಾವಿರ ರುಪಾಯಿ.. ಛೆ.. ಏನ್ಮಾಡೋದು... ಸರಿ , ಏನೆ ಇರಲಿ ಒಮ್ಮೆ ನೋಡೋಣ ಅಂತ ಹೇಳಿ ಆತನ ಮನೆಗೆ ಹೋದೆ... ವೌ.. ನನ್ನ ಕಣ್ಣುಗಳನ್ನು ನಂಬಲಾಗಲಿಲ್ಲ...

ಅತ್ಯಂತ ಸುಂದರವಾದ ಮರಳಿನ ಗಡಿಯಾರ... ಹಾಗೂ ಹೀಗೂ ಮಾತನಾಡಿ ಆ ಗಡಿಯಾರದ ರೇಟು ೫ ಸಾವಿರ ಅಂತ ಮಾತನಾಡಿಯಾಯಿತು.. " ಸಾರ್ ನೀವು ನಾಳೆ ಬಂದು ತಗೊಂಡು ಹೋಗಿ , ನನ್ನ ಮಗನಲ್ಲೂ ಒಂದು ಮಾತು ಕೇಳಬೇಕು.. ಯಾವ್ದಕ್ಕೂ ನೀವು ನಾಳೆಬನ್ನಿ" ಅಂತ ಆ ಆಸಾಮಿ ಹೇಳಿದ್ದಕ್ಕೆ ಸರಿ ಅಂತ ಹೇಳಿ ಅಲ್ಲಿಂದ ಹೊರಬಂದೆ...
ಮನೆಗೆ ಬಂದವನೇ, ಮನೆಯನ್ನೆಲ್ಲ ಸ್ವಚ್ಚ ಗೊಳಿಸಿದೆ.. ಯಾವ್ಯಾವುದನ್ನು ಎಲ್ಲೆಲ್ಲಿ ಇಡಬೇಕೂ ಅಂತ ಯೋಚಿಸಿ ಎಲ್ಲವನ್ನೂ ಜೋಡಿಸಿ ಇಡತೊಡಗಿದೆ.. ಕೋಣೆಗೆ ಎಲ್ಲವನ್ನೂ ಜೋಡಿಸಿ ನನ್ನ ಕನಸಿನ ಮರಳಿನ ಗಡಿಯಾರವನ್ನು ಟಿವಿ ಸ್ಟ್ಯಾಂಡ್ ಮೇಲೆ ಇಡುವುದೇ ಚಂದವೆನ್ನಿಸಿತು ... ನಾಳೆಯಿಂದ ನನ್ನ ಮನೆಯ ಚಂದವೇ ಬೇರೆ..!!! ಎಷ್ಟೊಂದು ಸುಂದರವಾದ ಮರಳಿನ ಗಡಿಯಾರ ... ಆಹಾ.. ಮನಸ್ಸು ಉಲ್ಲಾಸಗೊಂಡಿತ್ತು...
ಇಷ್ಟಕ್ಕೂ ಈ ಮರಳಿನ ಗಡಿಯಾರದ ವಿಷಯ ಹೇಳುತ್ತೇನೆ ಕೇಳಿ..ಈಗ ಇರುವ ಆಧಾರಗಳ ಪ್ರಕಾರ ಈ ಗಡಿಯಾರವನ್ನು ಕಂಡುಹಿಡಿದದ್ದು ಮೊದಲು ೧೪  ನೆ ಶತಮಾನದಲ್ಲಿ.. ೩ನೆ ಮತ್ತು ಹನ್ನೊಂದನೇ ಶತಮಾನ ಅನ್ನುವ ವಾದ ಇದ್ದರೂ ಅದಕ್ಕೆ ತಕ್ಕ ದಾಖಲೆಗಳಿಲ್ಲ...ಆಗಿನ ಕಾಲದಲ್ಲಿ ಈ ಗಡಿಯಾರಗಳನ್ನು ಬೇರೆ ಬೇರೆ ಪ್ರಕಾರಕ್ಕೆ ಬಳಸಿಕೊಳ್ಳಲಾಗುತ್ತಿತ್ತು.. ಕೆಲಸ ಮಾಡಲು, ಶಿಪ್ ಗಳಲ್ಲಿ, ಆ ನಂತರ ಶಿಪ್ ಅಥವಾ ವಾಹನಗಳ ವೇಗವಳೆಯಲು.. ಹೀಗೆ.. ಆಗೆಲ್ಲ ಮರಳಿನ ಗಡಿಯಾರಗಳು ೩೦ ನಿಮಿಷದ್ದಾಗಿರುತ್ತಿದ್ದವು.. ಬರ್ತಾ ಬರ್ತಾ ಇದರಲ್ಲಿ ಸಂಶೋಧನೆಗಳಾಗಿ ೧ ನಿಮಿಷದಿಂದ ೧ ಘಂಟೆಯವರೆಗಿನ  ಮರಳಿನ ಗಡಿಯಾರಗಳು ಬಂದವು...
ಮರಳಿನ ಗಡಿಯಾರದಲ್ಲಿ ಎರಡು ಗಾಜಿನ ಬೌಲ್ ಗಳಿರುತ್ತವೆ .. ಇವು ಒಂದರ ಮೇಲೊಂದು ಇದ್ದು ನಡುವೆ ಮರಳು ಹರಿಯಲು ಚಿಕ್ಕ ಕೊಳವೆಯಿರುತ್ತದೆ... ಈ ಮೇಲಿನ ಗಾಜಿನಿಂದ ಮರಳು ಎಲ್ಲಾ ಕೆಳಗಿನ ಬೌಲ್ ಗೆ ಬಂದಾಗ ಮತ್ತೆ ಅದನ್ನು ಉಲ್ಟಾ ಮಾಡಲಾಗುತ್ತದೆ..
ಕೊಳವೆಯ ಅಳತೆ,ಮರಳಿನ ಸೈಜ್, ಅದರ ಆಂಗಲ್ ಮತ್ತು ಮರಳಿನ ಹರಳಿನ ಅಳತೆ ಮೇಲೆ ಈ ಗಡಿಯಾರಗಳು ವಿವಿಧ ಟೈಮ್ ತೋರಿಸುತ್ತವೆ... ಮರಳಿಗೆ ಬದಲಾಗಿ ಕೋಳಿಮೊಟ್ಟೆಯ ಚಿಪ್ಪಿನ ಹುಡಿಯನ್ನೂ ಅಥವಾ ಮಾರ್ಬಲ್ ಹುಡಿಯನ್ನೂ ಸಹ ಉಪಯೋಗಿಸಬಹುದು...

ಹಳೆಯ ಕಾಲದ ಒಂದು ಗಡಿಯಾರ.. ಇದು ೧೫ ನಿಮಿಷದ್ದು



ಹಳೆಯ ಕಾಲದ ಕೆಲವು ಮರಳಿನ ಗಡಿಯಾರಗಳು..

ಮರಳಿನ ಗಡಿಯಾರವನ್ನು Hourglass ,sand timer ,egg timer ಅಂತಾನೂ ಕರೀತಾರೆ..
  ಈಗ ಈ ಮರಳಿನ ಗಡಿಯಾರ ಚಂದಕ್ಕಾಗಿ ಮನೆಯಲ್ಲಿ ಉಪಯೋಗಿಸಿದರೆ ಇದರ ಇತರ ಉಪಯೋಗಗಳು ಈ ರೀತಿ ಇವೆ..
ಅಡುಗೆ ಮನೆಯಲ್ಲಿ, ಆಟಗಳಲ್ಲಿ, ಸಂಗೀತ ಅಥವಾ ಇನ್ನಿತರ ಯಾವುದೇ ಕಲಿಯುವಿಕೆಯ ಅಭ್ಯಾಸಕ್ಕಾಗಿ ಹೀಗೆ...

                                      
ಕೆಲವು ನೂತನ ಮಾದರಿಯ ಮರಳು ಗಡಿಯಾರಗಳು..
ಹಾ..ಪುರಾಣ ಸಾಕು ಈಗ ವಿಷಯಕ್ಕೆ ಬರುತ್ತೇನೆ...
ಇಂತಿಪ್ಪ , ನಾನು ಆ ಮರಳಿನ ಗಡಿಯಾರ ಪಡೆಯಲು ಮರುದಿನ ಆತನ ಮನೆಯತ್ತ ಸಾಗಿದೆ... ಅಪ್ಪ ಮಗ ಇಬ್ಬರೂ ಇದ್ದರು.. "ಜೇಬಿನಿಂದ ೫ ಸಾವಿರ ತೆಗೆದವನೇ, "ತಗೊಳ್ಳಿ ಸಾರ್ , ನಾನು ಗಡಿಯಾರ ತೆಗೆದುಕೊಂಡು ಹೋಗಲು ಬಂದೆ" .. ಅಪ್ಪ ಮಗ ಇಬ್ಬರೂ ಮುಖ ಮುಖ ನೋಡಿಕೊಂಡರು..ನನಗ್ಯಾಕೋ ಅನುಮಾನ ಹುಟ್ಟಿತು..ಅರೆ ಇದ್ಯಾಕೆ ಹಿಂಗಾಡ್ತಿದ್ದಾರೆ? "ಸಾರೀ ಸಾರ್.. ನಿನ್ನೆಯಷ್ಟೇ ನಾನು ಇದನ್ನೊಂದು ಹಳೆಯ ವಸ್ತು ಸಂಗ್ರಹಾಲಯಕ್ಕೆ  ಒಂದಕ್ಕೆ ೪೫೦೦೦ ಕ್ಕೆ  ಮಾರಿದ್ದೇನೆ.. ಬೇಜಾರು ಮಾಡ್ಕೋಬೇಡಿ ಸಾರ್...ಒಂದು ವೇಳೆ ಅದಕ್ಕಿಂತ ಜಾಸ್ತಿ ಕೊಡ್ತೀರಾದ್ರೆ ನಾನು ನಿಮಗೆ ಕೊಡ್ತೀನಿ.." ಮಗ ಮಾತಾಡುತ್ತಲೇ ಇದ್ದ... ಯಾಕೋ ನನ್ನ ಟೈಮ್ ಸರಿ ಇಲ್ಲ ಅಂದುಕೊಂಡು ಮನೆಯತ್ತ ಬಂದೆ.. ಈಗ ಪಕ್ಕದಲ್ಲೇ ಇದ್ದ ಗಡಿಯಾರದ ಅಂಗಡಿಯೊಂದರಿಂದ ಅಜಂತಾ ಗಡಿಯಾರವೊಂದನ್ನು ಖರೀದಿಸಿ ಟಿವಿ ಸ್ಟ್ಯಾಂಡ್ ಮೇಲೆ ಇಟ್ಟಿದ್ದೇನೆ !!

Friday, January 15, 2010

Five Amazing Holes...

ಇದೊಂದು ಇಮೇಲ್ ಮೆಸೇಜ್ ಓದುತ್ತಿದ್ದಂತೆ ಏನು ಹೇಳಬೇಕಂತಲೇ ತಿಳಿಯಲಿಲ್ಲ... ನಿಮ್ಮ ಜೊತೆ ಹಂಚಿಕೊಳ್ಳಬೇಕು ಅನಿಸಿತು ಅದಕ್ಕೆ ಇಲ್ಲಿ ಹಾಕಿದ್ದೇನೆ... ಇದರ ಮೂಲಕರ್ತ ಯಾರೋ ತಿಳಿದಿಲ್ಲ...
Five Amazing Holes...

1. Kimberley Big Hole - South Africa




Apparently the largest ever hand-dug excavation in the world, this 1097-meter-deep mine yielded over three tons of diamonds before being closed.
2. Glory Hole - Monticello Dam, California




This is the Glory Hole at Monticello Dam, and it's the largest in the world of this type of spillway, its size enabling it to consume 14,400 cubic feet of water every second.

A glory hole is used when a dam is at full capacity and water needs to be drained from the reservoir.

3 Great Blue Hole , Belize




This incredible geographical phenomenon known as a blue hole is situated 60 miles off the mainland of Belize .

There are numerous blue holes around the world but none as stunning as this one.
4 Sinkhole in Guatemala



This photo is of a sinkhole that occurred February 2007 in Guatemala . It swallowed two dozen homes and killed at least three people.

5. This Indian Parliament is the famous Rat Hole.



It is capable of swallowing Millions of Tax Payers Money annually, never to be heard from again! It is reputed to contain at least 534 + 250 ass"holes".
 
ಇದು ಯಾರಿಗೆ ಹೊಳೆದದ್ದೇ ಇರಲಿ... ನನಗಂತೂ ನಕ್ಕೂ ನಕ್ಕೂ ಸುಸ್ತಾಯಿತು... ಇದರ ಮೂಲ ಯಾರು ಎಂದು ಯಾರಿಗಾದರೂ ತಿಳಿದಿದ್ದರೆ ದಯವಿಟ್ಟು ನನಗೆ ತಿಳಿಸಿ.. ಆತನಿಗೆ ಒಂದು ಪ್ರಶಸ್ತಿ ಕೊಡಲೇ ಬೇಕು!!!! :-)

Monday, January 11, 2010

ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲೆಬೇಕಿತ್ತು!! (ಭಾಗ ೨)

ದಿನಗಳು ಕಳೆದದ್ದೇ ತಿಳಿಯಲಿಲ್ಲ... ಸುನೀತಾ ಹಾಗು ನಮ್ಮ ಮಧ್ಯೆ ಮಾತು ಕತೆ ನಿಂತೇ ಹೋಗಿತ್ತು... ನಾವೂ ಆಕೆಗೆ ತಮಾಷೆ ಮಾಡೋದನ್ನ ಬಿಟ್ಟಿದ್ದರೆ, 'ಗರಗಸ' ತನ್ನ ಅಟ್ಟಹಾಸವನ್ನೂ ನಿಲ್ಲಿಸಿದ್ದ... ನಿಲ್ಲಿಸಿದ್ದ ಅನ್ನುವುದಕ್ಕಿಂತ, ನಾವೇ ಅವನಿಗೆ ಬಯ್ದು ಇನ್ನು ಹಾಗೆ ನಗಬಾರದು , ನಾವು ಸೇಡುತೀರಿಸಿಕೊಳ್ಳಲಿದ್ದೇವೆ ಎಂದು ತಾಕೀತು ಮಾಡಿದ್ದೆವು... ನಮ್ಮಗಳ ಮಧ್ಯೆ ಅದೊಂದು ತರಹದ ಶೀತಲ ಸಮರ... ಆದರೆ ನಾವು ಸೇಡು ತೀರಿಸಿಕೊಳ್ಳುವ ಪರಿ ಗೊತ್ತಿಲ್ಲದ ಸುನೀತ ಮಾತ್ರ ಹಾಯಾಗಿದ್ದಳೆನೋ.. ೫ ತಿಂಗಳು ಕಳೆದವು... ಮಧ್ಯವಾರ್ಷಿಕ ಪರೀಕ್ಷೆಗಳೆಲ್ಲಾ ಮುಗಿದು ನಾವೆಲ್ಲರೂ  ರಜಾದಿನಗಳಿಂದ  ವಾಪಸು ಕಾಲೇಜ್ ಕಡೆ ತಲೆ ಹಾಕಿದ್ದೆವು... ಹಾಗಿರಲೊಂದು ದಿನ ನಮ್ಮ ಸೇಡು ತೀರಿಸಿಕೊಳ್ಳುವ ಕಾಲ ಪಕ್ವವಾಗಿದೆ ಎಂದು ನಮಗನ್ನಿಸತೊಡಗಿತ್ತು.."ಇನ್ನು ತಡ ಮಾಡೋದು ಬೇಡ, ತುಂಬಾ ಕಷ್ಟವಾಗ್ತಿದೆ" ಸದಾನಂದ ಅದೊಂದು ದಿನ ನನ್ನಲ್ಲಿ ಹೇಳಿಕೊಂಡ.. ಸರಿ ಎಂದು ನಾವೂ ಒಂದು ಒಳ್ಳೆಯ ದಿನಕ್ಕಾಗಿ ಹುಡುಕಾಟ ನಡೆಸಿದೆವು.. ಆಗ ಬಂದಿದ್ದೆ ಕುಮಾರನ ಹುಟ್ಟುಹಬ್ಬ...!!!


ಈ ಕುಮಾರ ನಮ್ಮ ಗುಂಪಿನವನೊಬ್ಬ.. ಆತನದೂ ಕೆಲವು ಇಂಟರೆಸ್ಟಿಂಗ್ ಕಥೆಗಳಿವೆ ಅದನ್ನು ಮುಂದೆ ಹೇಳುವೆ...
ಅದ್ಹೇಗೋ ಆತನ ಮನ ವೊಪ್ಪಿಸಿ, ನಾವೇ ಸ್ವಲ್ಪ ಸ್ವಲ್ಪ ದುಡ್ಡು ಹಾಕಿ ಆತನ ಹುಟ್ಟುಹಬ್ಬಕ್ಕೆ, ಕ್ಲಾಸ್ ನವರಿಗೆಲ್ಲ ಪಾರ್ಟಿ ಕೊಡೋದು ಅಂತ ನಿರ್ಧರಿಸಿದೆವು...ಆತನ ಹುಟ್ಟುಹಬ್ಬ ಶುಕ್ರವಾರ ವಾಗಿತ್ತು.. ಅದನ್ನು ಶನಿವಾರಕ್ಕೆ ಮುಂದೆ ಹಾಕೋಣ ಎಂದು ಯೋಚಿಸಿದರೋ ಸಾಧ್ಯವಾಗಲಿಲ್ಲ... ಸರಿ ಶುಕ್ರವಾರವೇ ಪಾರ್ಟಿ... ಎಲ್ಲರೂ ಒಂದು ಕಡೆ ಸೇರುವುದು ಎಂದು ನಿರ್ಧಾರವಾಯಿತು... ಇದ್ದ ವೊಂದೇ ಅಡ್ಡ ಅಮೃತ್ ಕ್ರೀಂ ಪಾರ್ಲರ್ .. ಹಾಗಾಗಿ ಎಲ್ಲರನ್ನೂ ಕುಮಾರ ಶುಕ್ರವಾರ ಸಂಜೆ ಬರಬೇಕೆಂದು ಆಹ್ವಾನಿಸಿದ.. ಸುನೀತಾಳಿಗೂ ಕರೆ ಕೊಡಲಾಯಿತು... ಆ ಶುಕ್ರವಾರ ಬಂದೆ ಬಿಟ್ಟಿತು...
ಎಲ್ಲರೂ ಅಲ್ಲಿ ಸಂಜೆ ೫ ಗಂಟೆಗೆ ಹಾಜರು... ಗಡದ್ದು ಪಾರ್ಟಿ ಆರಂಭವಾಯಿತು.. ಆದರೆ ಸದಾನಂದ ಮಾತ್ರ ಕಾಣೆಯಾಗಿದ್ದ.. ಎಷ್ಟು ಹೊತ್ತಾದರೂ ಆತನ ಪತ್ತೆಯಿಲ್ಲ... "ಸೇಡು ತೀರಿಸಿಕೊಳ್ಳುತ್ತೇವೆ  ಅಂದ್ರಿ , ಆದ್ರೆ ಹೆದರಿ ಆತನೇ ಪರಾರಿನಾ? "  'ಗರಗಸ' ನನ್ನಲ್ಲಿ ಕೇಳಿದ್ದಕೆ ಆತನನ್ನು ಸುಮ್ಮನಾಗಿಸಿದೆ... ಇನ್ನೇನು ಪಾರ್ಟಿ ಮುಗಿಯುವ ಹೊತ್ತಾಯಿತು ಅನ್ನುವಷ್ಟರಲ್ಲಿ ಸದಾನಂದ ಪ್ರತ್ಯಕ್ಷನಾಗೆಬಿಟ್ಟಿದ್ದ  .. ಆತನ ಕೈಯಲ್ಲಿ ದೊಡ್ಡ ಸರಪಳಿ.. ಅದಕ್ಕೆ ಕಟ್ಟಿದ್ದಿದ್ದು ಒಂದು ಸುಂದರ ಮಜಬೂತಾದ ನಾಯಿ!!!!!


 ಎಲ್ಲರೂ ಆತನನ್ನೇ ನೋಡುತ್ತಿದ್ದರೆ, ಆ ನಾಯಿ ಹೆದರಿಕೆಯಿಂದ ಎಲ್ಲಾರನ್ನೂ ದುರುಗುಟ್ಟಿ ನೋಡುತ್ತಿತ್ತು...
" ನಾನು ಬರೋದು ಸ್ವಲ್ಪ ತಡವಾಯಿತು... ಇದು ನನ್ನ ನಾಯಿ, ತುಂಬಾ ಕಷ್ಟ ಪಟ್ಟು ಸಾಕಿ ಬೆಳೆಸಿದ್ದೇನೆ.. ಭಾರಿ ಬುದ್ಧೀನೂ ಇದೆ ಇದಕ್ಕೆ... ಯಾರು ಏನೆ ಹೇಳಿದ್ರೂ ಅದನ್ನ ಮಾಡುತ್ತೆ ಈ ನಾಯಿ" ಸದಾನಂದ ಪೀಠಿಕೆ ಹಾಕಿದ..."ಹೌದಾ!!" ಎಂದು ಎಲ್ಲರೂ ಅಚ್ಚರಿಯಿಂದ ನೋಡುತ್ತಿದ್ದರೆ "ಬೊಗಳೋ" ಅಂತ ನಾಯಿಗೆ ಆಜ್ನಾಪಿಸಿದ್ದು ಟೀನಾ.. ನಾಯಿ ಆಕೆಯನ್ನೊಮ್ಮೆ ದುರುಗುಟ್ಟಿ ಸುಮ್ಮನಾಯಿತು...
"ಕೈ ಕೊಡು" ಗರಗಸ ಆಜ್ಞಾಪಿಸಿದ... ಉಹುಂ ನಾಯಿ  ಏನೂ ಗೊತ್ತಿಲ್ಲದಂತೆ ಕುಳಿತಿತ್ತು..."ಏನೋ ಇದು ಏನ್ ಬೇಕಾದರೂ ಮಾಡುತ್ತೆ ಅಂದಿ, ಇದು ಸುಮ್ನೆ ಕುಳಿತುಬಿಟ್ಟಿದೆ" ಯಾರೋ ಮಧ್ಯದಲ್ಲಿ ಬಾಯಿಹಾಕಿದ್ದರು..."ಅದು ಹಾಗೆಲ್ಲ್ಲ ಆಗಲ್ಲ, ಅದರ ಹೆಸರು ಹೇಳಿ ಅದಕ್ಕೆ ಏನು ಮಾಡಬೇಕು ಅಂತ ಹೇಳಬೇಕು.. ಆಗ ಮಾತ್ರ ಅದು ಹೇಳಿದ್ದು ಮಾಡುತ್ತೆ" ಸದಾನಂದ ರಹಸ್ಯ ಬಿಟ್ಟುಕೊಟ್ಟ..."ಹೌದಾ, ಏನು ಇದರ ಹೆಸರೇನು" ಎಲ್ಲರೂ ತುಂಬಾ ಉತ್ಸಾಹದಿಂದ ಕೇಳಿದರು..."ಸುನೀತಾ ಅಂತ!!!" ಸದಾನಂದ ಹಾಗೆ ಹೇಳುತ್ತಿದ್ದಂತೆ ಎಲ್ಲಾರೂ ಅವಕ್ಕಾದರು...!!!
"ಸುನೀತಾ ಕೈ ಎತ್ತು" ಸದಾನಂದ ಹೇಳುತ್ತಿದ್ದಂತೆ ನಾಯಿ ತನ್ನ ಮುಂದಿನ ಕಾಲೆತ್ತಿ ಬಾಲ ಅಲ್ಲಾಡಿಸತೊಡಗಿತು!!! "ಸುನೀತಾ ಎರಡೂ ಕೈಯೆತ್ತು" ಈಗ ಅದು ತನ್ನ ಮುಂದಿನ ಎರಡೂ ಕಾಲೆತ್ತಿ ನಿಂತು ಬಿಟ್ಟಿತ್ತು..."ಸುನೀತಾ ಮಲ್ಕೋ" ನಾಯಿ ಸಟ್ಟನೆ ಮಲಗಿಕೊಂಡಿತು...!!!! "ಸುನೀತಾ ಕೂತ್ಕೋ" ನಾಯಿ ಕುಳಿತು ಎಲ್ಲರನ್ನೂ ದಿಟ್ಟಿಸಿ ನೋಡತೊಡಗಿತು...!! ಎಲ್ಲರೂ ಅದನ್ನೇ ಗಮನಿಸುತ್ತಿದ್ದರೆ , ಸುನೀತಾಳ ಮುಖ ಮಾತ್ರ ಇಂಗು ತಿಂದ ಮಂಗನಂತಾಗಿತ್ತು...!! "ಹೇ ಇದು ಗಂಡು ನಾಯಿ ಅಲ್ವೇನೋ? ಇದಕ್ಕೆ ಸುನೀತಾ ಅಂತ ಹೆಣ್ಣಿನ ಹೆಸರ್ಯಾಕೆ ಇಟ್ಟೆ" ನಾನು ಒಂದು ಗೋಲಿ ಬಿಟ್ಟೆ..." ನಾಯಿ ಗಂಡಾಗಿರಲಿ ಹೆಣ್ಣಾಗಿರಲಿ , ಅದಕ್ಕೆ ಸುನೀತಾ ಅನ್ನೋ ಹೆಸರು ತುಂಬಾ ಚೆನ್ನಾಗಿ ಒಪ್ಪುತ್ತೆ" ಸದಾನಂದ ಉರಿಯುವ ಬೆಂಕಿಗೆ ತುಪ್ಪ ಹಾಕಿದ್ದ... ಅಷ್ಟರಲ್ಲಾಗಲೇ ಅವಮಾನಕ್ಕೊಳಗಾದ ಸುನೀತಾ ಅಲ್ಲಿಂದ ಎದ್ದು ಹೊರಟೆ ಬಿಟ್ಟಳು...


"ಸುನೀತಾ ನಿಂತ್ಕೋ " ಸದಾನಂದ ಆಕೆಯ ಕಡೆ ಧಾವಿಸಿದ... ಆ ಮಾತಿಗೆ ನಾಯಿ ತನ್ನ ಮುಂದಿನ ಎರಡೂ ಕಾಲೆತ್ತಿ ನಿಂತಿದ್ದನ್ನು ಮಾತ್ರ ಯಾರೂ ಗಮನಿಸಲೇ ಇಲ್ಲ!!!.. ಎಲ್ಲರೂ ಸದಾನಂದ ಮತ್ತು ಸುನೀತಾಳನ್ನೇ ನೋಡುತ್ತಿದ್ದರು.. ಮುಂದೇನಾಗುತ್ತೋ ಅನ್ನೋ ಭಯ ಎಲ್ಲರಿಗೆ.."ಸುನೀತಾ ನೋಡು, ೫ ತಿಂಗಳ ಹಿಂದೆ ನಿನ್ನ ಮನೆಯಿಂದ ಒಂದು ನಾಯಿಮರಿ ಕಳುವಾಗಿತ್ತಲ್ಲ, ಅದೇ ಈ ನಾಯಿ.. ತಗೋ ನಿಂಗೆ ಇರ್ಲಿ.. ಚೆನ್ನಾಗಿ ಸಾಕಿದ್ದಿನಿ.. ಬುದ್ಧೀನೂ ಕಲಿಸಿದ್ದೀನಿ.. ಇನ್ನು ನೀನೆ ಸಂಭಾಳಿಸು.. ಆದ್ರೆ ನೆನಪಿಡು , ಅದ್ರ ಹೆಸರು ಕರೆದು ಹೇಳಿದ್ರೆನೆ ಅದು ಕೇಳೋದು . ಇಲ್ಲಾಂದ್ರೆ ಅದೂ ಏನೂ ಕೇಳಲ್ಲ..." ಸದಾನಂದ ತನ್ನ ಮಾತು ಮುಗಿಸಿ ನಾಯಿಯ ಸರಪಳಿಯನ್ನು ಆಕೆಯ ಕೈಗಿತ್ತ... ಸುನೀತಾ ಬಾ, ಸುನೀತಾ ಕೂತ್ಕೋ, ಸುನೀತಾ ಬೊಗಳು ಹೀಗೆಲ್ಲ ಸ್ವತಹ ಸುನೀತಾಳೆ ಹೇಳೋದನ್ನು ಕಲ್ಪಿಸಿಕೊಂಡು ನಾನು ಬಿದ್ದು ಬಿದ್ದು ನಗತೊಡಗಿದ್ದೆ... ಎಲ್ಲರಿಗೂ ಇದರ ಕಾರಣ ಅರ್ಥವಾಗಿ , ನಾವು ಸೇಡು ತೀರಿಸಿಕೊಂಡ ಪರಿ ನೋಡಿ ಒಳಗೊಳಗೇ ನಗತೊಡಗಿದರು..
ನಾಯಿಯನ್ನು ಸುನೀತಾಳ ಕೈಗೊಪ್ಪಿಸಿ, ಅದನ್ನು ಕದ್ದಿದ್ದಕ್ಕೆ ಆಕೆಯ ಕ್ಷಮೆ ಕೇಳಿ ನಾವು ಅಲ್ಲಿಂದ  ಮುಂದೆ ಹೆಜ್ಜೆ ಹಾಕಿದೆವು...!!!!

Thursday, January 7, 2010

ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲೆಬೇಕಿತ್ತು!!

"ನೀವು ನಿಮ್ಮ ಶಿಕ್ಷಣ ಮುಗಿದ ಮೇಲೆ ಏನಾಗಬೇಕು ಅಂತ ಇದ್ದೀರಾ?" ನಮ್ಮ ಲೆಕ್ಚರೆರ್ ಈ ಪ್ರಶ್ನೆ ಕೆಳುತ್ತಿದಂತೆ ಒಬ್ಬೊಬ್ಬರಾಗಿ ಎದ್ದು ನಿಂತು  ಉತ್ತರಿಸುತ್ತಿದ್ದರು..."ನಾನು ಎಂ ಬಿ ಏ ಮಾಡಿ ಒಳ್ಳೆ ಕಂಪನಿಲಿ ಕೆಲ್ಸಕ್ಕೆ ಸೇರಬೇಕು, ಆಮೇಲೆ ಎರಡು ಉತ್ತಮ ಮಕ್ಕಳಿಗೆ ತಾಯಿಯಾಗಬೇಕು" ಹಾಗಂತ ಸುನಿತಾ ಹೇಳಿದಾಗ ಇಡೀ ಕ್ಲಾಸು ಆಕೆಯ ಕಡೆ ಬೆರಗಿನಿಂದ ನೋಡಿತ್ತು..."ನೀವೇನ್ ಆಗ್ಬೇಕೂ ಅಂತ ಇದ್ದೀರಾ ಬುದ್ಧಿವಂತರೇ" ಹಾಗಂತ ಲೆಕ್ಚರೆರ್ ಕೇಳಿದ್ದು ತರಲೆ ಟೀಂ ಎಂದೇ ಖ್ಯಾತವಾಗಿದ್ದ ನಮ್ಮನ್ನ... ಮೊದಲಿಗೆ ನಿಧಾನವಾಗಿ ಎದ್ದು ನಿಂತ ಸದಾನಂದ, "ಯೆನಾಗ್ಬೇಕೂ ಅಂತ ಗೊತ್ತಿಲ್ಲ ಸಾರ್ , ಆದ್ರೆ ಆ ಎರಡು ಮಕ್ಕಳ ಅಪ್ಪ ಆಗ್ಬೇಕೂ ಅಂತ ತುಂಬಾ ಆಸೆ ಆಗ್ತಿದೆ " ಅಂತ ಸುನೀತಾ ಕಡೆ ವಾರೆ ದೃಷ್ಟಿ ಬೀರಿದ್ದ.. ಇಡೀ ಕ್ಲಾಸಿಗೆ ಕ್ಲಾಸ್ ಗೊಳ್ಳನೆ ನಕ್ಕರೆ ಸುನಿತಾ ಬಗ್ಗಿ ಅಳತೊಡಗಿದ್ದಳು.. ಸದಾನಂದ ತಮಾಷೆಗೆ ಅಂತ ಹೇಳಿದ್ದು ಗಂಭೀರ ರೂಪ ಪಡೆದಿತ್ತು... " ಕ್ಲಾಸ್ ನಿಂದ ಹೊರಗೆ ಹೋಗಿ" ಲೆಕ್ಚರೆರ್ ನಮ್ಮಕಡೆ ನೋಡಿ ಬೊಬ್ಬಿಟ್ಟರು... ನಮಗೆ ಅದೇನೂ ಹೊಸತಲ್ಲ... ಯಾರೇ ಆಗಲಿ "ಗೆಟ್" ಅನ್ನೋವಷ್ಟರಲ್ಲಿ  ಬಾಗಿಲಿನ ಹತ್ರ "ಔಟ್" ಅನ್ನೋವಷ್ಟರಲ್ಲಿ  ಚಿತ್ರಮಂದಿರದಲ್ಲಿರುತ್ತಿದ್ದ ನಾವು ಅಂದೂ ಹಾಗೆಯೇ ಮಾಡಿದ್ದೆವು...

ಆದರೆ ಮರುದಿವಸದಿಂದ ನನ್ನ ಮತ್ತು ಸದಾನಂದನ ಕೆಟ್ಟ ದಿನಗಳು ಪ್ರಾರಂಭವಾಗಿದ್ದವು...ಸದಾನಂದನಿಗೆ ನಾನೇ ಹಾಗೆ ಹೇಳಲು ಕಲಿಸಿ ಕೊಟ್ಟಿದ್ದು ಅನ್ನೋದು ಅದಕ್ಕೆ ಕಾರಣ.. ಸುನೀತಾ ಹಿಂದಿನ ದಿನದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಳು... ನನ್ನ ಮತ್ತು ಸದಾನಂದನ ಮೇಲೆ ಇಲ್ಲ ಸಲ್ಲದ ದೂರು ಕೊಟ್ಟು ಪ್ರತಿ ದಿನ ನಮ್ಮನ್ನು  ಕ್ಲಾಸ್ ನಿಂದ ಹೊರ ಕಳಿಸುತ್ತಿದ್ದಳು... ಸದಾನಂದ , ತಾನು ಹೇಳಿದ್ದು ತಮಾಷೆಗೆಂದೂ ಆಕೆಯಲ್ಲಿ ಕ್ಷಮೆ ಕೇಳಿದರೂ ಆಕೆ ಕೇಳಲಿಲ್ಲ... ಇದರಿಂದಾಗಿ ಒಂದೇ ಚಿತ್ರಮಂದಿರವಿದ್ದ ಆ ಊರಿನಲ್ಲಿ , ನಾನು ಮತ್ತು ಸದಾನಂದ ದಿನವೂ ಒಂದೇ ಚಲನಚಿತ್ರ ನೋಡುವ ಶಿಕ್ಷೆ ಅನುಭವಿಸಬೇಕಾಯಿತು...

ಕೆಲವು ದಿನ ಹೀಗೆ ಕಳೆಯಿತು .. ಆಮೇಲೆ ಎಲ್ಲವೂ ಹತೋಟಿಗೆ ಬಂತು ಅಂತ ಅಂದುಕೊಂಡಿದ್ದೆವು... ಆದರೆ ಸುನೀತಾಳನ್ನು ನೋಡುತ್ತಿದ್ದಂತೆ ನನಗೆ ನಗು ಉಕ್ಕಿ ಬರುತ್ತಿತ್ತು...ಕಷ್ಟ ಪಟ್ಟು ಅದೆಲ್ಲವನ್ನೂ ತಡೆಹಿಡಿಯುತ್ತಿದ್ದೆ... ಉಬ್ಬುಹಲ್ಲಿನ ಗರಗಸ ಮಾತ್ರ  ಆಕೆ ಎದುರು ಬರುತ್ತಿದ್ದಂತೆ ಗಹಗಹಿಸಿ ನಗುತ್ತಿದ್ದುದು ಮಾತ್ರ ಅಸಹ್ಯವಾಗಿರುತ್ತಿತ್ತು... "ನಗಬೇಡವೋ   ಇಡಿಯಟ್" ಆವತ್ತೊಂದಿನ ಸಹನೆ ಕಳೆದುಕೊಂಡಿದ್ದ ಸದಾನಂದ  ಜೋರಾಗಿ ಕಿರುಚಿಬಿಟ್ಟ.. ಗರಗಸವೂ ಕಮ್ಮಿ ಇಲ್ಲ.." ಮತ್ತೆನ್ರೋ , ನೀವೆಲ್ಲ ವೇಸ್ಟ್.. ಒಂದು ಚಿಕ್ಕ ಪಿ ಜೆ  ಹೇಳಿದ್ದಕ್ಕೆ ಆಕೆ ನಿಮ್ಮನ್ನು ಅದೆಷ್ಟು ದಿನ ಕ್ಲಾಸ್ನಿಂದ ಹೊರಗೆ ಕಳಿಸಲಿಲ್ಲ.. ನಿಮಗೇನಾದರೂ ನಾಚಿಕೆ ಮಾನ ಮರ್ಯಾದೆ ಇದ್ಯಾ? ಒಂದು ಹೆಣ್ಣಿನ ಮುಂದೆ ತಲೆ ಬಾಗಿಸಿ ಬಿಟ್ರಲ್ಲೋ.. ಗಂಡಸ್ರಾಗಿದ್ರೆ ಆಕೆ ಮೇಲೆ ಸೇಡು ತೀರಿಸಿಕೊಳ್ಳಿ".. ಆತ ನಮಗೆ  ಸವಾಲು ಎಸೆದಿದ್ದ...ನಾನು ಒಂದು ಕ್ಷಣ ಬೆಚ್ಚಿಬಿದ್ದೆ... ತಮಾಷೆ ಮಾಡೋದು , ಆಮೇಲೆ ಅದನ್ನು ಮರ್ತು ಬಿಡೋದು ಅದಷ್ಟೇ ನಮಗೆ ಗೊತ್ತು.. ದ್ವೇಷ ವನ್ನು ವರ್ಷಾನುಗಟ್ಟಲೆ ನೆನಪಿಟ್ಟುಕೊಂಡು ಸೇಡು ತೀರಿಸಿಕೊಳ್ಳೋದು ಚಿತ್ರಗಳಲ್ಲಿ ನೋಡಿದ್ದೆವು ಅಷ್ಟೇ... ಆದರೆ ಅದ್ಯಾಕೋ ಸುನೀತ ಮೇಲೆ ಸೇಡು ತೀರಿಸಿಕೊಳ್ಳಲೇ  ಬೇಕು ಅಂತ ನನಗನ್ನಿಸಿತ್ತು...  "ಹೌದು ಸದಾನಂದ.. ಈಗೇನಾದರೂ ಮಾಡಲೇ ಬೇಕು" ನಾನು ಸದಾನಂದನತ್ತ ನೋಡಿದೆ... "ಗೋರೆ , ನೀನೆ ಪರ್ಮಿಶನ್  ಕೊಟ್ಟ ಮೇಲೆ ಮುಗೀತು... ಉಳಿದದ್ದು ನನಗೆ ಬಿಡು" ಸದಾನಂದ ಪಕ್ಕನೆ ನಕ್ಕು ಹೇಳಿದ... "ಏನು ಮಾಡ್ತಿಯಾ" ಅಂತ ನಾವೆಲ್ಲರೂ  ಕೇಳಿದ್ದಕ್ಕೆ ಸದಾನಂದ ಏನೂ ಮಾತಾಡದೆ ನನ್ನನ್ನು ಎಳೆದುಕೊಂಡು ರೂಮಿನತ್ತ ಸಾಗಿದ್ದ...
ಅದಾಗಿ ೪ ದಿನಗಳಲ್ಲಿ ಸುನೀತಾ ಮನೆಯಿಂದ ಆಕೆಯ ಪ್ರೀತಿಯ ಚಿಕ್ಕ ನಾಯಿಮರಿ ಕಳುವಾಗಿ ಹೋಗಿತ್ತು...!!!!!!!!

ಮುಂದುವರೆಯುವುದು...

Monday, December 14, 2009

ಮರೆಯದ ಹಾಡು- ೧

   ಆಗ ನಾನು ತುಂಬಾ ಚಿಕ್ಕವನು.. ಬಹುಶ ೨-೩ ನೆ ಕ್ಲಾಸ್ ನಲ್ಲಿದ್ದಿರಬೇಕು... ಮನೆಯಲ್ಲಿ ಅಮ್ಮ ಕೆಲಸ ಮಾಡುತ್ತಾ ಹೇಳುತ್ತಿದ್ದ ಹಾಡುಗಳು ನನ್ನನ್ನು ಆಕರ್ಷಿಸಿದ್ದವು... ಇವತ್ತು ಏನೂ ಕೆಲಸ ಇಲ್ಲದೆ ಕುಳಿತಿದ್ದಾಗ ಹಿಂದಿನದೆಲ್ಲವೂ ನೆನಪಾಯಿತು... ಆ ಹಾಡುಗಳು ಎಲ್ಲವೂ ಮರೆತೆ ಹೋಗಿವೆ.. ಆದರೂ ನನ್ನ ನೆನಪಿನ ಬುತ್ತಿಯನ್ನು ಕದಡಿ , ಜಾಲಾಡಿ ಈ ಒಂದು ಹಾಡು ನಿಮ್ಮ ಮುಂದಿಡುತ್ತಿದ್ದೇನೆ... ಇದರ ಮೂಲ ಲೇಖಕ/ಲೇಖಕಿ ಯಾರೆಂದು ಗೊತ್ತಿಲ್ಲ... ಬಹುಶ ಜಾನಪದವಿರಬೇಕು... ಇದನ್ನು ರಾಗವಾಗಿ ಹಾಡುತ್ತಿದ್ದ  ಅಮ್ಮನ ಧ್ವನಿ ಈಗಲೂ ಕಿವಿಯಲ್ಲಿ ಗುಯಿಗುಡುತ್ತಿದೆ...

 ಅತ್ತೆ ಮನೆಯ ಸಮ್ಮಾನ
ವ್ಹಾರೆ ಪರಮಾನ್ನ..
ಪರಮಾನ್ನ ತಿನಲಿಕೆಂದೇ ನಾನು ಮದುವೆಯಾದೆನು..
ಸಂಜೆ ಹೊತ್ತಿನಲ್ಲಿ ಅತ್ತೆ ಮನೆಗೆ ನಡೆದೆನು...

ಮಾಡಿದಾರೆ ಪಾಯಸ
ತಿಂದು ನನಗೆ ಉಬ್ಬಸ
ರಾತ್ರಿಯಿಡೀ ನಿದ್ದೆ ಇಲ್ಲ
ಎಣಿಸಿ ಎಣಿಸಿ ಪಾಯಸ ..

ಮೆಲ್ಲನೆದ್ದೆನು
ಅಡುಗೆ ಕೋಣೆಗೆ ನಡೆದೆನು
ಮೂಲೆಯಲ್ಲಿದ್ದ ಪಾಯಸದ ಮಡಕೆಗೆ ಮಂಡೆ ಹಾಕ್ದೆನು..

ಸಿಗಲಿಲ್ಲ ಪಾಯಸ
ಸಿಗದೇ ನಾನು ಬಿಡಲಿಲ್ಲ
ಸಿಗುವ ಗೌಜಿ ಮಂಡೆ ಒಡೆದು
ಓಡು ಕುತ್ತಿಗೆಗಾಯ್ತಲ್ಲ..

ಅತ್ತೆ ಎದ್ದರು
ಹಿಡಿವ ಸೂಡಿ ಹಿಡಿದರು
ಸೊಕಿದ ಬೆಕ್ಕು ಬರುವುದೆಂದು ಕಾದು ಕುಳಿತರು
ಕಾದು ಕುಳಿತ ನನ್ನ ಅತ್ತೆ ಎರಡು ಬಿಟ್ಟರು..

ಸಮ್ಮಾನ ಬರೋಬ್ಬರಿ
ಪೆಟ್ಟಿನ ಲೆಕ್ಕ ಕೆಳ್ವಿರಾ?
ಏಕ್, ದೋ ತೀನ್ ಚಾರ್ ಪಾಂಚ್ ತಿಂದಿರಾ..

ಅತ್ತೆ ಮನೆಗೆ ಹೋಗಲು
ಈಗ ಬಹಳ ನಾಚಿಕೆ
ಅಲ್ಲಿ
 ನಾದಿನಿಯರ ಮೊಗವ ಕಂಡರೆ ನಗುವು ಬರುವುದು..

ಯಾರಿಗಾದರೂ ಈ ಹಾಡು ಗೊತ್ತಿದ್ದರೆ ಮತ್ತು ಇದರಲ್ಲಿ ತಪ್ಪುಗಳಿದ್ದರೆ ದಯವಿಟ್ಟು ಸರಿಪಡಿಸಿ ಮತ್ತು ನನಗೆ ತಿಳಿಸಿ.. ಹಾಗೆಯೇ ಎಲ್ಲಿಯಾದರೂ ಅರ್ಥವಾಗದೇ  ಇದ್ದರೆ ತಿಳಿಸಿ :-)

ಇಂತಹ ಅದೆಷ್ಟೋ ಹಾಡುಗಳಿವೆ... ನಿಮಗಿಷ್ಟವಾದರೆ, ನೆನಪಾದಾಗಲೆಲ್ಲ ಹಾಕುವೆ..

Tuesday, December 8, 2009

ಪಿಂಡದಾನ !!

  " ಥೂ ಎಲ್ಲಾ ನಾಟಕ... ನಮ್ಮನ್ನ ಪರೀಕ್ಷೆನಲ್ಲಿ ಫೈಲ್ ಮಾಡ್ಬೇಕು ಅಂತ ಇವ್ರು ಹಿಂಗಾಡ್ತಾರೆ... ಅವರ ಮೋಡಿಗೆ ಮರುಳಾಗಿ ನಾವು ಅವ್ರಿಗೆ ಲೈನ್ ಹೊಡ್ದು ಅವ್ರ ಬಗ್ಗೆ ಆಲೋಚನೆ ಮಾಡ್ತಾ ಇರ್ತೀವಿ... ಅವರೋ ಆರಾಮಾಗಿ ಓದ್ಕೊಂಡು ನಮಗೆ ಟೋಪಿ ಹಾಕ್ತಾರೆ.." ಸದಾನಂದ ಧಿಮಿಗುಡುತ್ತಲೇ ಇದ್ದ.. "ಛೆ ಹೀಗೆಲ್ಲ ಮಾಡಲ್ಲ ಯಾರೂ.. ಅದು ನಿನ್ನ ಆಲೋಚನೆ ಅಷ್ಟೇ.." ನಾನು ಆತನನ್ನು ಸಮಾಧಾನ ಗೊಳಿಸಲು ಯತ್ನಿಸಿದೆ.. "ಹೇ ನಿನ್ಗದೆಲ್ಲ ಗೊತ್ತಾಗಲ್ಲ ಗೋರೆ.." ಸದಾನಂದ ತಿರುಗಿ ಬಿದ್ದ..."ಹೌದು ಈ ಹುಡ್ಗೀರೆ ಹೀಗೆ ಎಲ್ಲಾ ಮೋಸ" ಹಾಗಂತ ಮದ್ಧ್ಯೆ ಎಲ್ಲಿಂದಲೋ ಮನೀಶ್ ನುಗ್ಗಿ ಬಂದ.. ಆತನೇನೋ ನಮ್ಮ ಸ್ನೇಹಿತರ ಗುಂಪಿನವನಲ್ಲ.. ಆತನಿಗೂ ಸದಾನಂದನೀಗೂ ಅಷ್ಟಕ್ಕಷ್ಟೇ.. ಆದರೆ ಆವತ್ತು ಅವರಿಬ್ಬರ ಆಲೋಚನೆಗಳು ಒಂದೇ ಆಗಿದ್ದವು.. ಒಬ್ಬರಿಗೊಬ್ಬರು ಬೆಂಬಲಿಸುತ್ತಿದರು... ಇಷ್ಟಕ್ಕೂ ಆವತ್ತು ಸದಾನಂದ  ಸಿಟ್ಟು ಮಾಡಿಕೊಂಡಿದ್ದುದು ಟೀನಾ ಮೇಲೆ..
ಅದು ನಮ್ಮ ಕಾಲೇಜ್ ದಿನಗಳು.. ಈ ಸದಾನಂದ ನಮ್ಮ ಎಂಟು ಜನರ ಸ್ನೇಹಿತರ  ಗುಂಪಿನಲ್ಲಿ ಒಬ್ಬ.. ಆತ ನಮ್ಮದೇ ಕ್ಲಾಸ್ ನ ಟೀನಾ ಅನ್ನೋ ಸುಂದರ ಹುಡುಗಿಗೆ ಲೈನ್ ಹೊಡಿತಾ ಇದ್ದಿದ್ದು ತಿಳಿದಿದ್ದ ವಿಷಯವೇ.. ಆದರೆ ಆಕೆಯನ್ನು ಮಾತಾಡಿಸುವಷ್ಟು  ಧೈರ್ಯವಂತನಲ್ಲ.. ಆತನಿಗೆ ಸ್ಪರ್ಧೆಗೆ ಇಳಿದವನು ನಮ್ಮ ಕ್ಲಾಸ್ನ ಇನ್ನೊಂದು ಗುಂಪಿನ ಲೀಡರ್ ಮನೀಶ್... ಆತನೂ ಟೀನಾ ಹಿಂದೆ ಸುತ್ತೊದನ್ನ ನೋಡಿ ಸದಾನಂದ ಆತನಿಗೆ ಎಚ್ಚರಿಕೆಯನ್ನೂ ಕೊಟ್ಟಿದ್ದ... ದಿನ ಕಳೆದಂತೆ ಟೀನಾ , ಸದಾನಂದನನ್ನು  ನೋಡಿ ನಗೋದಕ್ಕೂ ," ಹಲೋ , ಹಾಯ್" ಅಂತ ಹೇಳೋದನ್ನೂ ನೋಡಿ ನಾವೂ ಅಚ್ಚರಿಗೊಂಡಿದ್ದೆವು..
ಆವತ್ತು ಸದಾನಂದನ ಹುಟ್ಟು ಹಬ್ಬ.. ಅಂತೂ ಇಂತೂ ಧೈರ್ಯಮಾಡಿ ಆತ ಪಾರ್ಟಿಗೆ ಟೀನಳನ್ನು ಕರೆದದ್ದೂ ಆಯ್ತು..
ಅಲ್ಲೇ ಪಕ್ಕದಲ್ಲೇ ಇದ್ದ ಅಮೃತ್ ಕ್ರೀಂ ಪಾರ್ಲರ್ ಅನ್ನೋ ಇದ್ದ ಒಂದೇ ಒಂದು ಅಡ್ಡಕ್ಕೆ ನಾವು ೫ ಗಂಟೆಗೆ ನುಗ್ಗಿದೆವು.. ಟೀನಾ ೫.೩೦ ಬರುತ್ತೇನೆ ಅಂದಿದ್ದಳಂತೆ.. ನಾವು ಸದಾನಂದನ ಕಾಲೆಳೆಯುತ್ತಾ  ತಮಾಷೆ ಮಾಡುತ್ತಾ ಸಾಗಿದ್ದರೆ, ಸದಾನಂದ ಟೀನಾ ಬರ್ತಾಳೆ ಅಂತ ಕಾಯ್ತಾನೆ ಇದ್ದ...  ೫.೩೦, ಆಯ್ತು..೫.೪೫.. ೬.೦೦ ಉಹುಂ ಆಕೆಯ ಸುದ್ದಿಯೇ ಇಲ್ಲ.. ಆಕೆಗಾಗಿ ಕಾದು ಕಾದು ಬೇಸತ್ತಿದ್ದ ಸದದಾನಂದನನ್ನು ನಾನೇ ಮೆಲ್ಲ ಸಮಾಧಾನ ಪಡಿಸಿ ೮  ಗಂಟೆಯಷ್ಟು ಹೊತ್ತಿಗೆ ಎಬ್ಬಿಸಿಕೊಂಡು ಹೋದೆ...
ಮರುದಿನ ಕಾಲೇಜಿಗೆ ಬಂದಾಗ ನಮ್ಮ ಅರ್ಧವಾರ್ಷಿಕ ಪರೀಕ್ಷೆಯ ಅಂಕಗಳು ಹೊರ ಬಿದ್ದಿದ್ದವು..ನಾನು ಮತ್ತೆ ಸದಾನಂದ ಯಾವಾಗಲೂ ಟಾಪ್ ೫ ರಲ್ಲಿ ಗ್ಯಾರೆಂಟಿ... ಆ ಪರೀಕ್ಷೆಯಲ್ಲಿ ನಾನು ಮೂರನೇ ಸ್ತಾನದಲ್ಲಿದ್ದರೆ ಸದಾನಂದ ೧೧ನೆ ಸ್ತಾನಕ್ಕೆ ಜಾರಿದ್ದ.. ಟೀನಾ ಎಂಟನೆ ಸ್ತಾನದಲ್ಲಿದ್ದಳು.. ಹಿಂದಿನ ದಿನ ಟೀನಾ ಪಾರ್ಟಿಗೆ ಬರದೆ ಇರೋ ಸಿಟ್ಟು ಮತ್ತು ಪರೀಕ್ಷೆಯಲ್ಲಿ ಹಿಂದಕ್ಕೆ ಬಿದ್ದ ಸಿಟ್ಟು ಎರಡೂ ಆತನನ್ನು ಮುತ್ತಿಕೊಂಡಿದ್ದವು... ಆಗಲೇ ಆತ " ಥೂ ಎಲ್ಲಾ ನಾಟಕ... " ಅನ್ನೋ ಡೈಲಾಗ್ ಹೊಡೆಯಲು ಶುರುಮಾಡಿದ್ದು...

ಎಷ್ಟೇ ಪ್ರಯತ್ನಿಸಿದರೂ ಆತನನ್ನು ಸಮಾಧಾನ ಪಡಿಸಲು ಸಾದ್ಧ್ಯವಾಗಲಿಲ್ಲ.. ಬದಲಿಗೆ ಮನೀಶ್ ಬೇರೆ ಸೇರಿಕೊಂಡಿದ್ದ.. ಟೀನಾಳ ಬಗ್ಗೆ ಕನುಸು ಕಾಣುತ್ತ ಓದದೆ ೪ ಪರೀಕ್ಷೆಯಲ್ಲಿ ಫೈಲ್ ಆದ ತನ್ನ ದುರ್ಗತಿ ವಿವರಿಸಿಕೊಂಡ... ನಾನು ನಗುತ್ತಲೇ ಇದ್ದೆ...
ಸರಿ ಇನ್ನೇನ್ ಮಾಡೋದು... "ಇನ್ಯಾವತ್ತು ನಾನು ಹುಡ್ಗೀರಿಗೆ ಲೈನ್ ಹೊಡೆಯೋದಿಲ್ಲ"  ಸದಾನಂದ  ಪ್ರಮಾಣ ಮಾಡಿದ.. "ನಾನೂ ಅಷ್ಟೇ " ದನಿಗೂಡಿಸಿದ್ದು ಮನೀಶ್.. "ಅಲ್ಲಯ್ಯ ಮತ್ತೆ ಟೀನಾ?" ಮಧ್ಯದಲ್ಲಿ ಹುಳಿ ಹಿಂಡಿದ್ದು  ಮಾಧವ ಅನ್ನೋ ಉಬ್ಬು ಹಲ್ಲಿನ 'ಗರಗಸ'...
"ಆಕೆಗೆ ನಾನು ಪಿಂಡ ಬಿಡ್ತಾ ಇದ್ದೀನಿ " ಸದಾನಂದ ಅರಚಿಕೊಂಡ.. "ಹೌದು ಅದೇ ಸರಿ.. ಆಕೆಗೆ ಪಿಂಡ ದಾನ ಮಾಡಲೇ ಬೇಕು.. ಆಕೆ ಸತ್ತು ಹೋದಳು ಅಂತ ತಿಳ್ಕೊತಿನಿ" ಮನೀಶ್ ಕೂಡ ಯಾಕೋ ಹೆಜ್ಜೆ ತಪ್ಪುತ್ತಿದ್ದ... ಸದಾನಂದ ನನ್ನನ್ನು ಕರೆದುಕೊಂಡು ಕಾಲೇಜ್ ಹಿಂಭಾಗದಲ್ಲಿದ್ದ ತೋಟದತ್ತ ಸಾಗಿದ...ಉಳಿದವರೂ ನಮ್ಮನ್ನು ಹಿಂಬಾಲಿಸಿದರು... ನಮ್ಮ ಗುಂಪಿನ ಹರಿಪ್ರಸಾದ್ ಶಾಸ್ತ್ರಿ ಆವತ್ತು ಪುರೋಹಿತ.. ಆತ ತಿಥಿ ಕರ್ಮದ ಮಂತ್ರಗಳನ್ನು ಹೇಳೋದನ್ನೂ , ಸದಾನಂದ ಅಲ್ಲಿಯೇ ಇದ್ದ ನಲ್ಲಿಯಿಂದ ನೀರು ಬಿಡೋದನ್ನು ನೋಡಿ ನಾವು ಹೊಟ್ಟೆ ಹುಣ್ಣಾಗುವಷ್ಟು ನಕ್ಕೆವು... ಊಟಕ್ಕೆಂದು ತಂದಿದ್ದ ಅನ್ನ ಪಿಂಡವಾಗಿತ್ತು .. ಪಿಂಡ ದಾನಕ್ಕೆ ಸದಾನಂದ ಜೊತೆ ಸೇರಿಕೊಂಡಿದ್ದು ಮನೀಶ್.. ಸರಿ ಇಬ್ಬರೂ ಹರಿಪ್ರಸಾದ್ ಶಾಸ್ತ್ರಿಗಳ ಪೌರೋಹಿತ್ಯದಲ್ಲಿ ಪಿಂಡ ದಾನ ಮಾಡಿಬಿಟ್ಟಿದ್ದರು.. !!!
"ಇವತ್ತಿನಿಂದ ಟೀನಳ ಕಡೆ ತಿರುಗಿಯೂ ನೋಡಲಾರೆವು " ಹಾಗಂತ ಇಬ್ಬರೂ  ಶಪಥ ಗೈದರು...
ಆವತ್ತಿನಿಂದ ಸದಾನಂದ ಬದಲಾಗಿಬಿಟ್ಟಿದ್ದ.. ಟೀನಳ ಕಡೆ ತಿರುಗಿಯೂ ನೋಡುತ್ತಿರಲಿಲ್ಲ... ಬಹುಶ ಹುಟ್ಟುಹಬ್ಬದ ಪಾರ್ಟಿಗೆ ಬಂದಿಲ್ಲದ್ದಕ್ಕೆ ಹಿಂಗಾಡುತ್ತಿದ್ದಾನೆ ಅಂದು ಕೊಂಡಿದ್ದ ಟೀನಾ ಕಳಿಸಿದ 'ಸಾರೀ' ಗ್ರೀಟಿಂಗ್ಸ್ ಕಾರ್ಡು ಸಹ ಈ ಸದಾನಂದ ಹರಿದು ಬಿಸಾಕಿದ್ದ..
"ಎಲ್ಲಾ ನಾಟಕ ಕಣ್ರೋ.. ಅವ್ರಿಗೆ ನಿಜವಾಗಿ ನಿಮ್ ಮೇಲೆ ಪ್ರೀತಿ ಇರಲ್ಲ.. ಅವ್ರಿಗೆ ನಾವು ಇಷ್ಟೆಲ್ಲಾ ಮಜಾಮಾಡಿ ಪರೀಕ್ಷೆಯಲ್ಲಿ ಒಳ್ಳೆ ಅಂಕ ಕೂಡ ತೆಗೆಯೋದನ್ನ ನೋಡಿ ಹೊಟ್ಟೆ ಕಿಚ್ಚು..  ಕಂಠ ಪಾಠ ಮಾಡಿ ಮಾಡಿ ಸಾಧ್ಯ ಆಗದೆ ಇದ್ದಾಗ ನಮ್ ಹಿಂದೆ ಬರ್ತಾರೆ.. ಅವ್ರ ಮೋಡಿಗೆ ಒಳಗಾಗಿ ಬಿಟ್ವಿ ಅಂದ್ರೆ ಅಷ್ಟೇ.. ಆಮೇಲೆ ಪರೀಕ್ಷೆ , ಭವಿಷ್ಯ ಎಲ್ಲಾ ಮರ್ತು ಬಿಡಿ.. ..." ಸದಾನಂದ ನಮ್ಮ ಗುಂಪಿಗೆಲ್ಲ ಉಪೇಂದ್ರ ಸ್ಟೈಲ್ ನಲ್ಲಿ ಬುದ್ಧಿವಾದ ಹೇಳಿದ್ದ..
ಇದಾಗಿ ೩-೪ ತಿಂಗಳು ಕಳೆದವು...ಒಂದು ದಿನ ನಾವು ಕಾಲೇಜ್ ಮುಗಿಸಿ ನಮ್ಮ ರೂಂ ನತ್ತ ಹೆಜ್ಜೆ ಹಾಕುತ್ತಿದೆವು.. ಮೈ ಹುಷಾರಿಲ್ಲದ ಕಾರಣ ಸದಾನಂದ ಆವತ್ತು ಕಾಲೇಜ್ ಗೆ ಬರದೆ ರೂಮ್ನಲ್ಲೇ  ಮಲಗಿಕೊಂಡಿದ್ದ.. ನಾವು ಮುಂದೆ ಸಾಗುತ್ತಿದ್ದಂತೆ ದೂರದಲ್ಲಿ ಅಮೃತ್ ಕ್ರೀಂ ಪಾರ್ಲರ್ ನಲ್ಲಿ ಯಾರೋ ಹುಡುಗ-ಹುಡುಗಿ ಕುಳಿತಿದ್ದು ಮೊದಲಿಗೆ ನೋಡಿದ್ದೇ ನಮ್ಮ 'ಗರಗಸ'.. "ಅದು ಟೀನಾ ಅಲ್ವ " ತನ್ನ ಅನುಮಾನ ವ್ಯಕ್ತ ಪಡಿಸಿದ.. ಸೂಕ್ಷ್ಮವಾಗಿ ಗಮನಿಸಿದೆವು.. ಹೌದು ಅದು ಟೀನಾ.. ಆದರೆ ಆ ಹುಡುಗ ಯಾರು? ಸರಿಯಾಗಿ ಕಾಣಿಸುತ್ತಿರಲಿಲ್ಲ.. ಸರಿ, ನೋಡೇ ಬಿಡೋಣ ಅಂತ ಆಕಡೆ ಹೆಜ್ಜೆ ಹಾಕಿದೆವು.. ಮೆಲ್ಲನೆ ಕಳ್ಳ ರಂತೆ ಕದ್ದು ನೋಡುತ್ತಿದ್ದ ನಾವೆಲ್ಲಾ ಬೆಚ್ಚಿಬಿದ್ದೆವು.. ಆಕೆಯ ಜೊತೆಗಿದ್ದದ್ದು  ಮನೀಶ್!!!! ಅವರಿಬ್ಬರೂ  ಒಂದೇ ಬೌಲ್ ನಿಂದ ಐಸ್ ಕ್ರೀಂ ತಿನ್ನುತ್ತಿದ್ದರು.. ಅರೆ ಆವತ್ತು ಟೀನಗೆ ಪಿಂಡ ಬಿಟ್ಟಿದ್ದ ಮನೀಶ್!!! ಇನ್ಯಾವತ್ತು ಆಕೆಯನ್ನು ತಿರುಗೀನೂ ನೋಡಲ್ಲ ಅಂತ ಸದಾನಂದನ  ಜೊತೆಗೂಡಿ ಪ್ರತಿಜ್ಞೆ ಮಾಡಿದ್ದ ಮನೀಶ್!!!..ನಾವು ಒಂದು ಕ್ಷಣ ಒಬ್ಬರ ಮುಖ ಒಬ್ಬರು ನೋಡತೊಡಗಿದೆವು... ಅವರು ನಮ್ಮನ್ನು ನೋಡೋದು ಬೇಡ ಅಂತ  ನಾವು ಅವರಿಗೆ ತಿಳಿಯದಂತೆ ಅಲ್ಲಿಂದ ಪರಾರಿಯಾದೆವು...'ಗರಗಸ' ಮಾತ್ರ ರೂಂ ತಲುಪುವ ತನಕವೂ  ಬಿದ್ದು ಬಿದ್ದು ನಗುತ್ತಲೇ ಇದ್ದ..

 ಈ ವಿಷಯ ತಿಳಿದ ಸದಾನಂದ ಮರು ದಿವಸ, ಮೈ ಸುಡುವ ಜ್ವರದಲ್ಲೂ  ಅದೇ ಕಾಲೇಜ್ ತೋಟದಲ್ಲಿ, ಅದೇ ಹರಿಪ್ರಸಾದ್ ಶಾಸ್ತ್ರಿಗಳ ಪೌರೋಹಿತ್ಯದಲ್ಲಿ ಮನೀಶ್ ಗೆ ಪಿಂಡ ದಾನ ಮಾಡಿದ್ದ!!!!

Monday, November 30, 2009

ಶಾಪ...

"ಲೇ ಬೊ.. ಮಗನೆ.... ಎಷ್ಟು ಸಾರಿ ಹೇಳಿದ್ದೀನಿ ನಿಂಗೆ ದಾರಿಯಲ್ಲಿ ಮೀನು ಸ್ವಚ್ಚ ಮಾಡುತ್ತಾ ಕೂರಬೇಡ ಅಂತ... ಗೊತ್ತಾಗೊದಿಲ್ವೇನಯ್ಯಾ ನಿಂಗೆ.. ಸೂ.. ಮಗನೆ... " ಭಟ್ಟರು ಒಂದೇ ಸಮನೆ ಕಿರುಚಾಡುತ್ತಿದ್ದರೆ ಕೋಪ ಉಕ್ಕಿ ಉರಿಯಿತು ... ಮನೆ ಅಂಗಳದಲ್ಲಿ ಮೀನು ಸ್ವಚ್ಛ ಮಾಡುತ್ತಾ ಕುಳಿತಿದ್ದ ಚನಿಯ ಧಡಾರನೆ ಎದ್ದು ನಿಂತ.."ಏನು ಭಟ್ರೇ , ನಾವು ಮೀನು ದಾರಿಯಲ್ಲದ್ರೂ ಹಾಕ್ತಿವಿ, ಇಲ್ಲ ದಂಡೆಯಲ್ಲದ್ರೂ ಹಾಕ್ತೀವಿ... ಇದು ನನ್ನ ಮನೆ ಅಂಗಳ , ನೀವ್ಯಾರ್ರಿ ಕೇಳೋಕೆ... ನಿಮಗೆ ಇಷ್ಟ ಇದ್ರೆ ಇದನ್ನು ದಾಟ್ಕೊಂಡು ಹೋಗ್ರಿ... ಇಲ್ಲಾಂದ್ರೆ ಇದ್ದೆ ಇದೆಯಲ್ಲ ಊರಿನ ದಾರಿ ಅದ್ರಲ್ಲಿ ಹೋಗ್ರಿ.. ನೀವು ಏನ್ ಮಾಡಿದ್ರು ಸರಿನಾ?? ನಿಮ್ಮ ಮನೆ ದಾರಿಯಲ್ಲಿ ಇಡೀ ದರ್ಭೆ ಬೆಳೆಸಿ ಇಟ್ಟಿದ್ದಿರಲ್ಲ... ಯಾರದು , ನಿಮ್ಮಪ್ಪನ ಜಾಗಾನ ಅದು.. ಸುಮ್ನೆ ಹೋಗ್ರಿ.." ಚನಿಯಪ್ಪನೂ ಪ್ರತ್ಯುತ್ತರ ಕೊಟ್ಟಿದ್ದ.. ಹತ್ತಿರದ ದಾರಿಯಾದ್ದರಿಂದ ಚನಿಯಪ್ಪನ ಮನೆ ಅಂಗಳದಿಂದ ದಾಟಿ ಹೋಗುತ್ತಿದ್ದ ಭಟ್ಟರು ಸಿಟ್ಟಿನಿಂದ ಊರಿನ ದಾರಿಯಲ್ಲಿ ೨ ಕಿಲೋಮೀಟರು ಹೆಚ್ಚು ನಡೆದು ಮನೆ ಸೇರಿದ್ದರು...
ಇಷ್ಟಕ್ಕೂ ಚನಿಯಪ್ಪ ಆವತ್ತು ಮೀನು ಹಿಡಿದು ತಂದಿದ್ದು ತಾನು ಮೀನು ಸಾಕುತ್ತಿದ್ದ ಊರಿನ ಕೆರೆಯಿಂದ... ಅದು ಭಟ್ಟರ ಮನೆ ಪಕ್ಕದಲ್ಲೇ ಇದೆ.. ೩೬೫ ದಿನವೂ ನೀರಿನಿಂದ ತುಂಬಿ ತುಳುಕುವ ಆ ಭಾರಿ ಕೆರೆ ಬೇಸಿಗೆಯಲ್ಲಿ ಅಲ್ಲಿನ ಹೆಚ್ಚಿನ ಜನರಿಗೆ ನೀರಿನ ಮೂಲವಾಗಿತ್ತು... ಅಲ್ಲಿ ಚನಿಯ ಮೀನು ಹಿಡಿಯುತ್ತಿದ್ದ... ಹಿಡಿದ ಮೀನನ್ನು ಮಾರಿ, ಕೆಲವೊಮ್ಮೆ ಕೂಲಿಗೆ ಹೋಗಿ ಜೀವನ ಸಾಗಿಸುತ್ತಿದ್ದ ಚನಿಯ...ಊರಿನ ಕೆರೆಯಾದ್ದರಿಂದ ಯಾರು ಬೇಕಾದರೂ ನೀರು ಉಪಯೋಗಿಸಬಹುದಿತ್ತು... ವರ್ಷಕ್ಕೊಮ್ಮೆ ಭಟ್ಟರು ಆ ಕೆರೆಯನ್ನು ಸ್ವಚ್ಚ ಗೊಳಿಸಿ ಊರಿನ ಜನರ ಉಪಯೋಗಕ್ಕೆಂದು ಅಲ್ಲಿಂದ ನೀರು ಸರಬರಾಜಿಗೂ ವ್ಯವಸ್ಥೆ ಮಾಡಿದ್ದರು.. ಅಲ್ಲಿ ಮೀನು ಸಾಕುವ ಕೆಲಸ ಮಾಡುತ್ತಿದ್ದುದು ಚನಿಯ... ಮೀನುಗಳಿಂದಾಗಿ ನೀರೂ ಸ್ವಚ್ಚ ವಾಗಿರುತ್ತದೆ ಎಂದು ತಿಳಿದಿದ್ದ ಭಟ್ಟರೂ ಅದಕ್ಕೆ ಸಮ್ಮತಿ ಸೂಚಿಸಿದ್ದರು...

ಮನೆಗೆ ಬಂದಿದ್ದ ಮಗಳಿಗೆ ಭರ್ಜರಿ ಮೀನಿನ ಭೋಜನ ಉಣಬಡಿಸಿದ್ದ ಚನಿಯ ಆಕೆಯನ್ನು ವಾಪಸು ಊರಿಗೆ ಕಳಿಸಿ ಆಕೆಯ ಮನೆಯಲ್ಲೇ ಎರಡು ದಿನ ಇದ್ದು ವಾಪಸು ಬಂದಿದ್ದ... ವಾಪಸು ಮನೆಗೆ ಬಂದ ಚನಿಯನಿಗೆ ಅದ್ಯಾಕೋ ಮೂರು ದಿನಗಳ ಹಿಂದೆ ಭಟ್ಟರ ಜೊತೆ ಆಡಿದ್ದ ಜಗಳ ನೆನಪಾಯಿತು.. ಅದ್ಯಾವುದೋ ಆಲೋಚನೆಯಲ್ಲಿ , ಸೋಲ್ಪವೇ ಸ್ವಲ್ಪ ಕುಡಿದಿದ್ದ ಮತ್ತಿನಲ್ಲಿ ತಾನು ಭಟ್ಟರಿಗೆ ಬೈದಿದ್ದು , ಭಟ್ಟರು ಸಿಟ್ಟಿನಿಂದ ಕುದಿಯುತ್ತಾ ಸಾಗಿದ್ದು.. ಎಲ್ಲವೂ ನೆನಪಾಗತೊಡಗಿತು... ತಾನು ಮಾಡಿದ್ದು ತಪ್ಪಲ್ಲವೇ.? ಭಟ್ಟರಿಗೆ ತಾನು ಬೈಯಬಹುದಿತ್ತೆ... ಅವರೇನಾದರೂ ಶಾಪ ಹಾಕಿಬಿಟ್ಟರೆ... ಅದ್ಯಾಕೋ ಚನಿಯ ಹೆದರಿಕೆಯಿಂದ ನಡುಗತೊಡಗಿದ... ಛೆ !! ಈ ಕಲಿಗಾಲದಲ್ಲಿ ಅದ್ಯಾವ ಬ್ರಾಹ್ಮಣ , ಅದ್ಯಾವ ಶಾಪ? ತನ್ನಷ್ಟಕ್ಕೆ ತಾನೆ ಸಮಾಧಾನ ಹೇಳಿಕೊಂಡು ಮೀನು ಹಿಡಿಯಲು ಕೆರೆಯತ್ತ ಸಾಗಿದ... ಒಂದು ಘಂಟೆ , ಎರಡು ಘಂಟೆ ಉಹುಂ..ಎಷ್ಟು ಹೊತ್ತಾದರೂ ಒಂದೇ ಒಂದು ಮೀನು ಗಾಳಕ್ಕೆ ಸಿಕ್ಕಿಬೀಳಲಿಲ್ಲ... ಊರಿಗೆ ಕುಡಿಯುವ ನೀರು ಒದಗಿಸುವ ಕೆರೆಯಾದ್ದರಿಂದ ಗಲೀಜು ಮಾಡುವಂತಿಲ್ಲ... ಒಂದರ್ಧ ಗಂಟೆಯೊಳಗೆ ಮೀನಿನ ಬುಟ್ಟಿ ತುಂಬಿಸಿ ಬಿಡುತ್ತಿದ್ದ ಚನಿಯನಿಗೆ ಇವತ್ತು ಗಂಟೆಗಟ್ಟಲೆ ಕಾದರೂ ಒಂದೇ ಒಂದು ಮೀನು ಸಿಗದೇ ಇದ್ದಿದ್ದು ಅಚ್ಚರಿ ಮೂಡಿಸಿತು.. ಅದೇನೇನೋ ಆಲೋಚನೆಗಳು ಬರತೊಡಗಿದವು...ಚನಿಯನಿಗೆ ಭಯ ಹೆಚ್ಚಾಗ ತೊಡಗಿತು.. ಇಲ್ಲ ಇದು ಭಟ್ಟರ ಶಾಪವೇ ಇರಬೇಕು.. ಆವತ್ತು ಸಿಟ್ಟಿನಿಂದ ಹೊರಟು ಹೋದ ಭಟ್ಟರ ಮುಖ ನೆನಪಾಯಿತು...ಇನ್ನು ನನಗೆ ಒಳ್ಳೆಯದಾಗದು... ಈಗಲೇ ಹೋಗಿ ಭಟ್ಟರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು... ಹಾಗಂತ ನಿರ್ಧರಿಸಿದವನೆ ನಡುಗುವ ಕಾಲುಗಳೊಂದಿಗೆ ಚನಿಯ , ಭಟ್ಟರ ಮನೆ ಕಡೆ ದೌಡಾಯಿಸತೊಡಗಿದ... ದೂರದಿಂದ ಇದನ್ನು ಗಮನಿಸುತ್ತಿದ್ದ ಭಟ್ಟರು , ನಿನ್ನೆ ತಾನೆ ಪಕ್ಕದ ಊರಿನಿಂದ ಹನೀಫ ನನ್ನು ಕರೆಸಿ ಕೆರೆಯಲ್ಲಿದ್ದ ಎಲ್ಲ ಮೀನುಗಳನ್ನು ಹಿಡಿಸಿದ್ದು ಯಾರಿಗೂ ಗೊತ್ತಾಗಲಿಲ್ಲವೆಂದು ಒಳಗೊಳಗೇ ಗಹಗಹಿಸಿ ನಗತೊಡಗಿದರು...!!!