"ಲೇ ಬೊ.. ಮಗನೆ.... ಎಷ್ಟು ಸಾರಿ ಹೇಳಿದ್ದೀನಿ ನಿಂಗೆ ದಾರಿಯಲ್ಲಿ ಮೀನು ಸ್ವಚ್ಚ ಮಾಡುತ್ತಾ ಕೂರಬೇಡ ಅಂತ... ಗೊತ್ತಾಗೊದಿಲ್ವೇನಯ್ಯಾ ನಿಂಗೆ.. ಸೂ.. ಮಗನೆ... " ಭಟ್ಟರು ಒಂದೇ ಸಮನೆ ಕಿರುಚಾಡುತ್ತಿದ್ದರೆ ಕೋಪ ಉಕ್ಕಿ ಉರಿಯಿತು ... ಮನೆ ಅಂಗಳದಲ್ಲಿ ಮೀನು ಸ್ವಚ್ಛ ಮಾಡುತ್ತಾ ಕುಳಿತಿದ್ದ ಚನಿಯ ಧಡಾರನೆ ಎದ್ದು ನಿಂತ.."ಏನು ಭಟ್ರೇ , ನಾವು ಮೀನು ದಾರಿಯಲ್ಲದ್ರೂ ಹಾಕ್ತಿವಿ, ಇಲ್ಲ ದಂಡೆಯಲ್ಲದ್ರೂ ಹಾಕ್ತೀವಿ... ಇದು ನನ್ನ ಮನೆ ಅಂಗಳ , ನೀವ್ಯಾರ್ರಿ ಕೇಳೋಕೆ... ನಿಮಗೆ ಇಷ್ಟ ಇದ್ರೆ ಇದನ್ನು ದಾಟ್ಕೊಂಡು ಹೋಗ್ರಿ... ಇಲ್ಲಾಂದ್ರೆ ಇದ್ದೆ ಇದೆಯಲ್ಲ ಊರಿನ ದಾರಿ ಅದ್ರಲ್ಲಿ ಹೋಗ್ರಿ.. ನೀವು ಏನ್ ಮಾಡಿದ್ರು ಸರಿನಾ?? ನಿಮ್ಮ ಮನೆ ದಾರಿಯಲ್ಲಿ ಇಡೀ ದರ್ಭೆ ಬೆಳೆಸಿ ಇಟ್ಟಿದ್ದಿರಲ್ಲ... ಯಾರದು , ನಿಮ್ಮಪ್ಪನ ಜಾಗಾನ ಅದು.. ಸುಮ್ನೆ ಹೋಗ್ರಿ.." ಚನಿಯಪ್ಪನೂ ಪ್ರತ್ಯುತ್ತರ ಕೊಟ್ಟಿದ್ದ.. ಹತ್ತಿರದ ದಾರಿಯಾದ್ದರಿಂದ ಚನಿಯಪ್ಪನ ಮನೆ ಅಂಗಳದಿಂದ ದಾಟಿ ಹೋಗುತ್ತಿದ್ದ ಭಟ್ಟರು ಸಿಟ್ಟಿನಿಂದ ಊರಿನ ದಾರಿಯಲ್ಲಿ ೨ ಕಿಲೋಮೀಟರು ಹೆಚ್ಚು ನಡೆದು ಮನೆ ಸೇರಿದ್ದರು...
ಇಷ್ಟಕ್ಕೂ ಚನಿಯಪ್ಪ ಆವತ್ತು ಮೀನು ಹಿಡಿದು ತಂದಿದ್ದು ತಾನು ಮೀನು ಸಾಕುತ್ತಿದ್ದ ಊರಿನ ಕೆರೆಯಿಂದ... ಅದು ಭಟ್ಟರ ಮನೆ ಪಕ್ಕದಲ್ಲೇ ಇದೆ.. ೩೬೫ ದಿನವೂ ನೀರಿನಿಂದ ತುಂಬಿ ತುಳುಕುವ ಆ ಭಾರಿ ಕೆರೆ ಬೇಸಿಗೆಯಲ್ಲಿ ಅಲ್ಲಿನ ಹೆಚ್ಚಿನ ಜನರಿಗೆ ನೀರಿನ ಮೂಲವಾಗಿತ್ತು... ಅಲ್ಲಿ ಚನಿಯ ಮೀನು ಹಿಡಿಯುತ್ತಿದ್ದ... ಹಿಡಿದ ಮೀನನ್ನು ಮಾರಿ, ಕೆಲವೊಮ್ಮೆ ಕೂಲಿಗೆ ಹೋಗಿ ಜೀವನ ಸಾಗಿಸುತ್ತಿದ್ದ ಚನಿಯ...ಊರಿನ ಕೆರೆಯಾದ್ದರಿಂದ ಯಾರು ಬೇಕಾದರೂ ನೀರು ಉಪಯೋಗಿಸಬಹುದಿತ್ತು... ವರ್ಷಕ್ಕೊಮ್ಮೆ ಭಟ್ಟರು ಆ ಕೆರೆಯನ್ನು ಸ್ವಚ್ಚ ಗೊಳಿಸಿ ಊರಿನ ಜನರ ಉಪಯೋಗಕ್ಕೆಂದು ಅಲ್ಲಿಂದ ನೀರು ಸರಬರಾಜಿಗೂ ವ್ಯವಸ್ಥೆ ಮಾಡಿದ್ದರು.. ಅಲ್ಲಿ ಮೀನು ಸಾಕುವ ಕೆಲಸ ಮಾಡುತ್ತಿದ್ದುದು ಚನಿಯ... ಮೀನುಗಳಿಂದಾಗಿ ನೀರೂ ಸ್ವಚ್ಚ ವಾಗಿರುತ್ತದೆ ಎಂದು ತಿಳಿದಿದ್ದ ಭಟ್ಟರೂ ಅದಕ್ಕೆ ಸಮ್ಮತಿ ಸೂಚಿಸಿದ್ದರು...
ಮನೆಗೆ ಬಂದಿದ್ದ ಮಗಳಿಗೆ ಭರ್ಜರಿ ಮೀನಿನ ಭೋಜನ ಉಣಬಡಿಸಿದ್ದ ಚನಿಯ ಆಕೆಯನ್ನು ವಾಪಸು ಊರಿಗೆ ಕಳಿಸಿ ಆಕೆಯ ಮನೆಯಲ್ಲೇ ಎರಡು ದಿನ ಇದ್ದು ವಾಪಸು ಬಂದಿದ್ದ... ವಾಪಸು ಮನೆಗೆ ಬಂದ ಚನಿಯನಿಗೆ ಅದ್ಯಾಕೋ ಮೂರು ದಿನಗಳ ಹಿಂದೆ ಭಟ್ಟರ ಜೊತೆ ಆಡಿದ್ದ ಜಗಳ ನೆನಪಾಯಿತು.. ಅದ್ಯಾವುದೋ ಆಲೋಚನೆಯಲ್ಲಿ , ಸೋಲ್ಪವೇ ಸ್ವಲ್ಪ ಕುಡಿದಿದ್ದ ಮತ್ತಿನಲ್ಲಿ ತಾನು ಭಟ್ಟರಿಗೆ ಬೈದಿದ್ದು , ಭಟ್ಟರು ಸಿಟ್ಟಿನಿಂದ ಕುದಿಯುತ್ತಾ ಸಾಗಿದ್ದು.. ಎಲ್ಲವೂ ನೆನಪಾಗತೊಡಗಿತು... ತಾನು ಮಾಡಿದ್ದು ತಪ್ಪಲ್ಲವೇ.? ಭಟ್ಟರಿಗೆ ತಾನು ಬೈಯಬಹುದಿತ್ತೆ... ಅವರೇನಾದರೂ ಶಾಪ ಹಾಕಿಬಿಟ್ಟರೆ... ಅದ್ಯಾಕೋ ಚನಿಯ ಹೆದರಿಕೆಯಿಂದ ನಡುಗತೊಡಗಿದ... ಛೆ !! ಈ ಕಲಿಗಾಲದಲ್ಲಿ ಅದ್ಯಾವ ಬ್ರಾಹ್ಮಣ , ಅದ್ಯಾವ ಶಾಪ? ತನ್ನಷ್ಟಕ್ಕೆ ತಾನೆ ಸಮಾಧಾನ ಹೇಳಿಕೊಂಡು ಮೀನು ಹಿಡಿಯಲು ಕೆರೆಯತ್ತ ಸಾಗಿದ... ಒಂದು ಘಂಟೆ , ಎರಡು ಘಂಟೆ ಉಹುಂ..ಎಷ್ಟು ಹೊತ್ತಾದರೂ ಒಂದೇ ಒಂದು ಮೀನು ಗಾಳಕ್ಕೆ ಸಿಕ್ಕಿಬೀಳಲಿಲ್ಲ... ಊರಿಗೆ ಕುಡಿಯುವ ನೀರು ಒದಗಿಸುವ ಕೆರೆಯಾದ್ದರಿಂದ ಗಲೀಜು ಮಾಡುವಂತಿಲ್ಲ... ಒಂದರ್ಧ ಗಂಟೆಯೊಳಗೆ ಮೀನಿನ ಬುಟ್ಟಿ ತುಂಬಿಸಿ ಬಿಡುತ್ತಿದ್ದ ಚನಿಯನಿಗೆ ಇವತ್ತು ಗಂಟೆಗಟ್ಟಲೆ ಕಾದರೂ ಒಂದೇ ಒಂದು ಮೀನು ಸಿಗದೇ ಇದ್ದಿದ್ದು ಅಚ್ಚರಿ ಮೂಡಿಸಿತು.. ಅದೇನೇನೋ ಆಲೋಚನೆಗಳು ಬರತೊಡಗಿದವು...ಚನಿಯನಿಗೆ ಭಯ ಹೆಚ್ಚಾಗ ತೊಡಗಿತು.. ಇಲ್ಲ ಇದು ಭಟ್ಟರ ಶಾಪವೇ ಇರಬೇಕು.. ಆವತ್ತು ಸಿಟ್ಟಿನಿಂದ ಹೊರಟು ಹೋದ ಭಟ್ಟರ ಮುಖ ನೆನಪಾಯಿತು...ಇನ್ನು ನನಗೆ ಒಳ್ಳೆಯದಾಗದು... ಈಗಲೇ ಹೋಗಿ ಭಟ್ಟರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು... ಹಾಗಂತ ನಿರ್ಧರಿಸಿದವನೆ ನಡುಗುವ ಕಾಲುಗಳೊಂದಿಗೆ ಚನಿಯ , ಭಟ್ಟರ ಮನೆ ಕಡೆ ದೌಡಾಯಿಸತೊಡಗಿದ... ದೂರದಿಂದ ಇದನ್ನು ಗಮನಿಸುತ್ತಿದ್ದ ಭಟ್ಟರು , ನಿನ್ನೆ ತಾನೆ ಪಕ್ಕದ ಊರಿನಿಂದ ಹನೀಫ ನನ್ನು ಕರೆಸಿ ಕೆರೆಯಲ್ಲಿದ್ದ ಎಲ್ಲ ಮೀನುಗಳನ್ನು ಹಿಡಿಸಿದ್ದು ಯಾರಿಗೂ ಗೊತ್ತಾಗಲಿಲ್ಲವೆಂದು ಒಳಗೊಳಗೇ ಗಹಗಹಿಸಿ ನಗತೊಡಗಿದರು...!!!
Monday, November 30, 2009
Thursday, September 24, 2009
ನಾನು ಸುತ್ತಿಗೆಯಿಂದ ಬಡಿಯುತ್ತಲೇ ಇದ್ದೆ....(ನನ್ನ ಕಥೆ -ಭಾಗ ೨)
ಆಗ ನನಗೆ ನೆನಪಾದದ್ದೇ ಸುತ್ತಿಗೆ ವಿದ್ಯೆ... ಅಂದರೆ ಬೆಳ್ಳಿಯ ಕುಸುರಿ ಕೆಲಸ... ನನ್ನ ಚಡ್ಡಿ ದೋಸ್ತು ಸದಾನಂದನ ಮನೆಯಲ್ಲಿ ಈ ಕೆಲಸ ನಡೆಯುತ್ತಿತ್ತು... ಆತನ ತಂದೆ ಬೆಳ್ಳಿಯ ಕೆಲಸದಲ್ಲಿ ನಿಸ್ಸೀಮರು.. ಬೆಳ್ಳಿಯ ಮೂರ್ತಿಗಳು, ಕಲಶಗಳು, ದೇವಸ್ಥಾನದ ಬಾಗಿಲು, ಪಲ್ಲಕ್ಕಿ ಇಂಥ ಕೆಲಸಗಳಲ್ಲಿ ಆಗ ಅವರು ಭಾರಿ ಹೆಸರುವಾಸಿ... ರಜಾ ದಿನಗಳಲ್ಲಿ ನಾನು ಮತ್ತು ಸದಾನಂದನೂ ಸುತ್ತಿಗೆ ಹಿಡಿದು ಕೂರುತ್ತಿದ್ದೆವು... ಅದೆಷ್ಟೋ ಕೆಲಸ ಮಾಡಿ ನಾವೂ ಅದರಲ್ಲಿ ಅಲ್ಪ ಸ್ವಲ್ಪ ನಿಸ್ಸೀಮರಾಗಿ ಬಿಟ್ಟಿದ್ದೆವು.. ಒಂದು ಸಾರಿ ಆ ಚಿಕ್ಕ ಸುತ್ತಿಗೆ ಏಟು ತಪ್ಪಿ ನನ್ನ ಕೈಗೆ ಬಿದ್ದು ಗಾಯ ಮಾಡಿಕೊಂಡಿದ್ದೆ , ಆವತ್ತಿನಿಂದ ನಾವು ಬೆಳ್ಳಿ ಕೆಲಸ ಅನ್ನೋ ಬದಲು ಸುತ್ತಿಗೆ ಕೆಲಸ ಎಂದು ಕರೆಯುತ್ತಿದ್ದೆವು...ಈಗ ನನಗೆ ನೆನಪಾದದ್ದೇ ಆ ವಿದ್ಯೆ... ಸರಿ ಮುಂದೆ ಆಲೋಚಿಸುವುದೆನಿದೆ... ಒಬ್ಬಂಟಿಯಾಗಿ ಕೆಲಸ ಪ್ರಾರಂಭಿಸಿಯೇ ಬಿಟ್ಟೆ ... ಇನ್ನೂ ವಿದ್ಯೆ ಮರೆತಿಲ್ಲ ಅನ್ನೋದಕ್ಕೆ ಸಾಕ್ಷಿಯಾಗಿ ತಿಂಗಳ ಒಳಗಾಗಿ ಎರಡು ಅದ್ಭುತ ಬೆಳ್ಳಿಯ ಮೂರ್ತಿಗಳು ತಯಾರಾಗಿ ಬಿಟ್ಟಿದ್ದವು... ಅವನ್ನು ಮಾರುವದೇನೂ ಕಷ್ಟವಾಗಲಿಲ್ಲ... ನೋಡ ನೋಡುತ್ತಲೇ ಈ ಕೆಲಸ ಅದ್ಯಾವ ಪರಿ ಬೇಡಿಕೆ ತಂದು ಕೊಟ್ಟಿತೆಂದರೆ ೨-೩ ತಿಂಗಳೊಳಗಾಗಿ ೧೦ ಜನ ನನ್ನಲ್ಲಿ ಕೆಲಸ ಮಾಡುವಂತಾಯಿತು.. ಇಷ್ಟೊಂದು ವರ್ಷ ಸರ್ಕಾರಿ ಕೆಲಸ ಮಾಡಿದ್ದು ಯಾಕೆ ಎಂದು ನನ್ನನ್ನು ನಾನು ಕೇಳುವಷ್ಟು ಪ್ರಸಿದ್ಧಿ ಯಾಗಿಬಿಟ್ಟೆ... ದಿನಗಳು ಕಳೆಯುತ್ತಿದ್ದವು... ನನ್ನ ಈ ಕೆಲಸದಲ್ಲಿ ವರ್ಷ ಕಳೆದಿದ್ದೆ ನನಗೆ ಗೊತ್ತಾಗಲಿಲ್ಲ... ಇನ್ನೂ ೬೦ ವರ್ಷ ಬದುಕಬೇಕು ಅಂತ ನನಗೆ ಜೀವನದಲ್ಲಿ ಮೊದಲಬಾರಿ ಅನ್ನಿಸತೊಡಗಿತ್ತು...
ಆದರೆ ಈ ಒಂದು ವರ್ಷದ ಅವಧಿಯಲ್ಲಿ ಒಂದೇ ಒಂದು ಸಾರಿಯೂ ಮಗಳಾಗಲಿ ಅಥವಾ ಮಗನಾಗಲಿ ಫೋನ್ ಮಾಡಲಿಲ್ಲ.. ಬರೆದ ಈ -ಮೇಲ್ ಬಹುಶ ಕಂಪ್ಯೂಟರ್ ಕಸದ ಬುಟ್ಟಿಗೆ ಸೇರಿದ್ದವೋ ಏನೋ.. ಆದರೆ ನಾನು ಮಾತ್ರ ಒಂದು ಅಥವಾ ಎರಡು ತಿಂಗಳಿಗೊಮ್ಮೆಯಾದರೂ ಫೋನಾಯಿಸುತ್ತಿದ್ದೆ.. ಆವತ್ತೊಂದಿನ "ಒಂದೇ ಒಂದು ಸಾರಿ ಮಗ ಮತ್ತು ಮಗಳಿಗೆ ಫೋನ್ ಮಾಡೋಣ.. ಬನ್ನಿ ಅಂದ್ರೆ ಹೋಗೋಣ... ಏನು ಅಂತ ಗೊತ್ತಾಗುತ್ತಲ್ಲ.. ಫೋನ್ ಮಾಡೋಣ.. ಅವ್ರನ್ನ ಇಲ್ಲಿಗೆ ಬರೋಕೆ ಹೇಳೋಣ" ಹಾಗಂತ ಹೆಂಡತಿ ಹೇಳಿದ್ದು ಸರಿಯೆನಿಸಿತು... ಆಕೆಗೂ ಬಹುಶ ಮಕ್ಕಳನ್ನು ನೋಡಬೇಕು ಅಂತ ಅನ್ನಿಸಿರಬೇಕು.. ಎಷ್ಟಾದರೂ ತಾಯಿ ಹೃದಯವಲ್ಲವೇ...ಹಾಗಂತ ಮಗನಿಗೆ ಫೋನ್ ಹೊಡೆದದ್ದು ಆಯಿತು.. ಎಲ್ಲ ಕ್ಷೇಮ ಸಮಾಚಾರದ ನಂತರ ಮೆಲ್ಲನೆ ನಾನು ವಿಷಯಕ್ಕೆ ಬಂದೆ.. "ಒಂದು ಸ್ವಲ್ಪ ದಿನ ಅಲ್ಲಿಗೆ ಬರ್ತೀವಿ.. ವಯಸ್ಸೂ ಆಗ್ತಿದೆ.. ಒಮ್ಮೆ ಅಮ್ಮನಿಗೂ ಅಮೇರಿಕಾ ನೋದಬೇಕೆನ್ನೋ ಆಸೆಯಿದೆ.. ಪೂರೈಸಲು ನನ್ನಿಂದಾಗಲಿಲ್ಲ .. ನಾವು ಬರ್ಲೆನಪ್ಪ" ಹಾಗಂತ ಕೇಳಿದೆ.. "ಒಹ್ ಖಂಡಿತಾ ಬನ್ನಿ.. ಒಂದು ತಿಂಗಳು ಇರಿ ಅಪ್ಪಾ.. ತುಂಬಾ ದಿನ ಇರೋದು ಕಷ್ಟ ಅಪ್ಪ.. ಇಲ್ಲಿ ತುಂಬಾ ದಿನ ಇರೋದು ಕಷ್ಟ.. ನಂಗೆ ತುಂಬಾ ಟೂರ್ ಗಳಿರುತ್ವೆ.. ಅವಳಿಗೂ ಅಷ್ಟೆ ತುಂಬಾ ಕೆಲಸ.. ಒಂದು ತಿಂಗಳ ಮಟ್ಟಿಗೆ ಬನ್ನಿ" ಹಾಗಂತ ಮಗನಿಂದ ಆಮಂತ್ರಣವೂ ಬಂತು... ಆವತ್ತು ಮಗಳಿಗೆ ಫೋನ್ ಹೊಡೆದೆ... "ಅಪ್ಪಾ.. ಈಗ ತಾನೆ ನಾನು ಫೋನ್ ಮಾಡುವವಳಿದ್ದೆ ಅಷ್ಟರಲ್ಲಿ ನೀವೇ ಫೋನ್ ಮಾಡಿದ್ರಿ... ನನಗೀಗ ೪ ತಿಂಗಳು.. ಅಮ್ಮನನ್ನ ಕಳಿಸಿ ಕೊಡಿ.." ಹಾಗಂತ ಹೇಳಿದಳು... ನಾನೂ ಬರ್ಲೆನಮ್ಮಾ ಅಂತ ಕೇಳೋ ಮನಸ್ಸಾಗದೆ ಫೋನ್ ಹೆಂಡತಿಯ ಕೈಗೆ ವರ್ಗಾಯಿಸಿ ನಾನು ಬೆಳ್ಳಿಯ ಕೆಲಸ ಮಾಡಿಟ್ಟಿದ್ದ ಶೆಡ್ಡಿನತ್ತ ಹೆಜ್ಜೆ ಹಾಕಿದೆ.. ಸ್ವಲ್ಪ ಹೊತ್ತಿಗೆ ಯಾರೋ ಒಳಗೆ ಬಂದಂತಾಯಿತು .. ತಲೆಯೆತ್ತಿ ನೋಡಿದರೆ ಹೆಂಡತಿ.. ಮುಖ ಕೆಂಪಗಾಗಿ ಕಣ್ಣೀರು ಈಗಲೋ ಆಗಲೋ ಧುಮುಕಲು ತಯಾರಾದನ್ತಿತ್ತು.. ಬಹುಶ ಇವತ್ತು ಆಕೆಯ ಸಹನೆಯ ಕಟ್ಟೆ ಒಡೆದಿರಬೇಕು.. ಮಗಳಿಗೆ ಅದ್ಯಾವ ಪರಿ ಮಂಗಳಾರ್ಚನೆ ಯಾಗಿರಬಹುದು ಅಂತ ನನಗೆ ಅರ್ಥವಾಗಿ ಹೋಗಿತ್ತು..
"ಎಷ್ಟಾದರೂ ಮಕ್ಕಳಲ್ವೇ .. ಅವರು ತಪ್ಪು ಮಾಡದೇ ನಾವು ಮಾಡೋಕಾಗುತ್ತಾ.... ಬರೋದಾದ್ರೆ ನಾವಿಬ್ರೂ ಬರ್ತೀವಿ , ಇಲ್ಲಾಂದ್ರೆ ಒಬ್ರೂ ಬರಲ್ಲ ಅಂತ ಹೇಳಿ ಬಿಟ್ಟಿದ್ದೀನಿ.. ಮುಂದಿನ ತಿಂಗಳು ಹೊಗೊಣಾವೆನ್ರೀ.. ಪಾಪ ಒಬ್ಳಿಗೆ ಅದೆಷ್ಟು ಕಷ್ಟವಾಗುತ್ತೋ ಏನೋ.." ಆಕೆ ಮಾತನಾಡುತ್ತಲೇ ಇದ್ದಳು...
ನನ್ನ ಎದುರಿಗೇ ಇದ್ದ ಬೆಳ್ಳಿಯ ತಗಡಿಗೆ , ತೂತು ಬಿದ್ದಿದ್ದನ್ನೂ ಗಮನಿಸದೆ ನಾನು ಆ ಸಣ್ಣ ಸುತ್ತಿಗೆಯಿಂದ ಅದಕ್ಕೆ ಅವ್ಯಾಹತವಾಗಿ ಬಡಿಯುತ್ತಲೇ ಇದ್ದೆ..ಟಕ್.....ಟಕ್.....ಟಕ್.....ಟಕ್...
(ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಆ ಮಗ ತನ್ನನ್ನು ಸಾಕಿ ಸಲಹಿದ ತಂದೆ ತಾಯಿಯನ್ನು , ಸುರಿಯುತ್ತಿದ್ದ ಜಡಿಮಳೆಯಲ್ಲಿ ಮನೆಯಿಂದ ಹೊರಗೆ ಹಾಕಿದ ಘಟನೆ ಇನ್ನೂ ನನ್ನ ಕಣ್ಣ ಮುಂದಿದೆ.. ಅದನ್ನು ಬರೆಯುವ ಮನಸ್ಸಾಗದೆ ಹೀಗೊಂದು ಕಥೆ ಹುಟ್ಟಿಕೊಂಡಿತು.......)
(ಈ ಬರಹ "ಕೆಂಡಸಂಪಿಗೆ" ಯಲ್ಲಿ ದಿನದ ಬ್ಲಾಗ್ ಎಂದು ೨೫ ಸೆಪ್ಟೆಂಬರ್ ನಂದು ಆಯ್ಕೆಯಾಗಿದೆ .. http://www.kendasampige.com/article.php?id=1774)
ಆದರೆ ಈ ಒಂದು ವರ್ಷದ ಅವಧಿಯಲ್ಲಿ ಒಂದೇ ಒಂದು ಸಾರಿಯೂ ಮಗಳಾಗಲಿ ಅಥವಾ ಮಗನಾಗಲಿ ಫೋನ್ ಮಾಡಲಿಲ್ಲ.. ಬರೆದ ಈ -ಮೇಲ್ ಬಹುಶ ಕಂಪ್ಯೂಟರ್ ಕಸದ ಬುಟ್ಟಿಗೆ ಸೇರಿದ್ದವೋ ಏನೋ.. ಆದರೆ ನಾನು ಮಾತ್ರ ಒಂದು ಅಥವಾ ಎರಡು ತಿಂಗಳಿಗೊಮ್ಮೆಯಾದರೂ ಫೋನಾಯಿಸುತ್ತಿದ್ದೆ.. ಆವತ್ತೊಂದಿನ "ಒಂದೇ ಒಂದು ಸಾರಿ ಮಗ ಮತ್ತು ಮಗಳಿಗೆ ಫೋನ್ ಮಾಡೋಣ.. ಬನ್ನಿ ಅಂದ್ರೆ ಹೋಗೋಣ... ಏನು ಅಂತ ಗೊತ್ತಾಗುತ್ತಲ್ಲ.. ಫೋನ್ ಮಾಡೋಣ.. ಅವ್ರನ್ನ ಇಲ್ಲಿಗೆ ಬರೋಕೆ ಹೇಳೋಣ" ಹಾಗಂತ ಹೆಂಡತಿ ಹೇಳಿದ್ದು ಸರಿಯೆನಿಸಿತು... ಆಕೆಗೂ ಬಹುಶ ಮಕ್ಕಳನ್ನು ನೋಡಬೇಕು ಅಂತ ಅನ್ನಿಸಿರಬೇಕು.. ಎಷ್ಟಾದರೂ ತಾಯಿ ಹೃದಯವಲ್ಲವೇ...ಹಾಗಂತ ಮಗನಿಗೆ ಫೋನ್ ಹೊಡೆದದ್ದು ಆಯಿತು.. ಎಲ್ಲ ಕ್ಷೇಮ ಸಮಾಚಾರದ ನಂತರ ಮೆಲ್ಲನೆ ನಾನು ವಿಷಯಕ್ಕೆ ಬಂದೆ.. "ಒಂದು ಸ್ವಲ್ಪ ದಿನ ಅಲ್ಲಿಗೆ ಬರ್ತೀವಿ.. ವಯಸ್ಸೂ ಆಗ್ತಿದೆ.. ಒಮ್ಮೆ ಅಮ್ಮನಿಗೂ ಅಮೇರಿಕಾ ನೋದಬೇಕೆನ್ನೋ ಆಸೆಯಿದೆ.. ಪೂರೈಸಲು ನನ್ನಿಂದಾಗಲಿಲ್ಲ .. ನಾವು ಬರ್ಲೆನಪ್ಪ" ಹಾಗಂತ ಕೇಳಿದೆ.. "ಒಹ್ ಖಂಡಿತಾ ಬನ್ನಿ.. ಒಂದು ತಿಂಗಳು ಇರಿ ಅಪ್ಪಾ.. ತುಂಬಾ ದಿನ ಇರೋದು ಕಷ್ಟ ಅಪ್ಪ.. ಇಲ್ಲಿ ತುಂಬಾ ದಿನ ಇರೋದು ಕಷ್ಟ.. ನಂಗೆ ತುಂಬಾ ಟೂರ್ ಗಳಿರುತ್ವೆ.. ಅವಳಿಗೂ ಅಷ್ಟೆ ತುಂಬಾ ಕೆಲಸ.. ಒಂದು ತಿಂಗಳ ಮಟ್ಟಿಗೆ ಬನ್ನಿ" ಹಾಗಂತ ಮಗನಿಂದ ಆಮಂತ್ರಣವೂ ಬಂತು... ಆವತ್ತು ಮಗಳಿಗೆ ಫೋನ್ ಹೊಡೆದೆ... "ಅಪ್ಪಾ.. ಈಗ ತಾನೆ ನಾನು ಫೋನ್ ಮಾಡುವವಳಿದ್ದೆ ಅಷ್ಟರಲ್ಲಿ ನೀವೇ ಫೋನ್ ಮಾಡಿದ್ರಿ... ನನಗೀಗ ೪ ತಿಂಗಳು.. ಅಮ್ಮನನ್ನ ಕಳಿಸಿ ಕೊಡಿ.." ಹಾಗಂತ ಹೇಳಿದಳು... ನಾನೂ ಬರ್ಲೆನಮ್ಮಾ ಅಂತ ಕೇಳೋ ಮನಸ್ಸಾಗದೆ ಫೋನ್ ಹೆಂಡತಿಯ ಕೈಗೆ ವರ್ಗಾಯಿಸಿ ನಾನು ಬೆಳ್ಳಿಯ ಕೆಲಸ ಮಾಡಿಟ್ಟಿದ್ದ ಶೆಡ್ಡಿನತ್ತ ಹೆಜ್ಜೆ ಹಾಕಿದೆ.. ಸ್ವಲ್ಪ ಹೊತ್ತಿಗೆ ಯಾರೋ ಒಳಗೆ ಬಂದಂತಾಯಿತು .. ತಲೆಯೆತ್ತಿ ನೋಡಿದರೆ ಹೆಂಡತಿ.. ಮುಖ ಕೆಂಪಗಾಗಿ ಕಣ್ಣೀರು ಈಗಲೋ ಆಗಲೋ ಧುಮುಕಲು ತಯಾರಾದನ್ತಿತ್ತು.. ಬಹುಶ ಇವತ್ತು ಆಕೆಯ ಸಹನೆಯ ಕಟ್ಟೆ ಒಡೆದಿರಬೇಕು.. ಮಗಳಿಗೆ ಅದ್ಯಾವ ಪರಿ ಮಂಗಳಾರ್ಚನೆ ಯಾಗಿರಬಹುದು ಅಂತ ನನಗೆ ಅರ್ಥವಾಗಿ ಹೋಗಿತ್ತು..
"ಎಷ್ಟಾದರೂ ಮಕ್ಕಳಲ್ವೇ .. ಅವರು ತಪ್ಪು ಮಾಡದೇ ನಾವು ಮಾಡೋಕಾಗುತ್ತಾ.... ಬರೋದಾದ್ರೆ ನಾವಿಬ್ರೂ ಬರ್ತೀವಿ , ಇಲ್ಲಾಂದ್ರೆ ಒಬ್ರೂ ಬರಲ್ಲ ಅಂತ ಹೇಳಿ ಬಿಟ್ಟಿದ್ದೀನಿ.. ಮುಂದಿನ ತಿಂಗಳು ಹೊಗೊಣಾವೆನ್ರೀ.. ಪಾಪ ಒಬ್ಳಿಗೆ ಅದೆಷ್ಟು ಕಷ್ಟವಾಗುತ್ತೋ ಏನೋ.." ಆಕೆ ಮಾತನಾಡುತ್ತಲೇ ಇದ್ದಳು...
ನನ್ನ ಎದುರಿಗೇ ಇದ್ದ ಬೆಳ್ಳಿಯ ತಗಡಿಗೆ , ತೂತು ಬಿದ್ದಿದ್ದನ್ನೂ ಗಮನಿಸದೆ ನಾನು ಆ ಸಣ್ಣ ಸುತ್ತಿಗೆಯಿಂದ ಅದಕ್ಕೆ ಅವ್ಯಾಹತವಾಗಿ ಬಡಿಯುತ್ತಲೇ ಇದ್ದೆ..ಟಕ್.....ಟಕ್.....ಟಕ್.....ಟಕ್...
(ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಆ ಮಗ ತನ್ನನ್ನು ಸಾಕಿ ಸಲಹಿದ ತಂದೆ ತಾಯಿಯನ್ನು , ಸುರಿಯುತ್ತಿದ್ದ ಜಡಿಮಳೆಯಲ್ಲಿ ಮನೆಯಿಂದ ಹೊರಗೆ ಹಾಕಿದ ಘಟನೆ ಇನ್ನೂ ನನ್ನ ಕಣ್ಣ ಮುಂದಿದೆ.. ಅದನ್ನು ಬರೆಯುವ ಮನಸ್ಸಾಗದೆ ಹೀಗೊಂದು ಕಥೆ ಹುಟ್ಟಿಕೊಂಡಿತು.......)
(ಈ ಬರಹ "ಕೆಂಡಸಂಪಿಗೆ" ಯಲ್ಲಿ ದಿನದ ಬ್ಲಾಗ್ ಎಂದು ೨೫ ಸೆಪ್ಟೆಂಬರ್ ನಂದು ಆಯ್ಕೆಯಾಗಿದೆ .. http://www.kendasampige.com/article.php?id=1774)
Tuesday, September 22, 2009
ನನ್ನ ಕಥೆ..
ಆಗ ನನಗೆ ೫೬ ವರ್ಷ.. ಇನ್ಯಾಕೆ ಬೇಕು ಈ ಸರ್ಕಾರಿ ಕೆಲಸ... ಹಾಗಂತ ಒಂದು ದಿನ ನಿರ್ಧಾರ ಮಾಡಿದವನೇ, ಮಾಡುತ್ತಿದ್ದ ಸರ್ಕಾರಿ ಕೆಲಸದ ಮುಖಕ್ಕೊಂದು ರಾಜೀನಾಮೆ ಬಿಸಾಕಿ ಮನೆಗೆ ಬಂದು ಆರಾಮಾಗಿ ಕೂತುಬಿಟ್ಟೆ... ಮೊನ್ನೆಯಷ್ಟೇ ಮದುವೆಯಾಗಿ ಅಮೆರಿಕಾದಲ್ಲಿ ಕೈತುಂಬಾ ಸಂಬಳ ಪಡೆಯುವ ಮಗ-ಸೊಸೆ.. ಈಗಾಗಲೇ ಜರ್ಮನಿ ಯಲ್ಲಿ ಠಿಕಾಣಿ ಹೂಡಿರೋ ಮಗಳು ಮತ್ತು ಅಳಿಯ.. ಒಬ್ಬ ಅಪ್ಪ ತನ್ನ ಮಕ್ಕಳಿಗೆ ಒದಿಸಿ, ಕಲಿಸಿ, ಪ್ರೀತಿಸಿ ಇದಕ್ಕಿಂತ ಹೆಚ್ಚಾಗಿ ಇನ್ನೇನು ಮಾಡಲು ಸಾದ್ಧ್ಯ... ಹಾಗಂತ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದೆ...
"ಮೊದಲಿಗೆ ಎಲ್ಲಿಗೆ ಹೋಗೋಣ? ಮಗಳ ಮನೆಗೋ? ಇಲ್ಲ ಮಗನ ಮನೆಗೋ?" ಹಾಗಂತ ಒಂದು ದಿನ ಹೆಂಡತಿಯಲ್ಲಿ ಕೇಳಿದೆ..." ಮಗಳ ಮನೆಗೆ ಹೋಗೋಣಾರಿ.. ಮಗ ಈಗ ತಾನೆ ಮದ್ವೇಯಾಗಿದ್ದಾನೆ.. ಸ್ವಲ್ಪ ದಿನ ಇಬ್ರೆ ಇರ್ಲಿ" ಹಾಗಂತ ಹೇಳಿದ್ದಳಾಕೆ .. ಸರಿ ಅಂದು ನಾನು ಆ ದಿನಕ್ಕಾಗಿ ಕಾಯುತ್ತಿದ್ದೆ... ಬಹುಶ ಜೀವನದ ಅತೀ ಸುಂದರ ಕ್ಷಣಗಳು ಅವೇ ಅನ್ನಿಸಿಬಿಟ್ಟಿತ್ತು...
ಆದರೆ ಹಿಂದಿನಂತೆ ಮಗಳು ಈಗೀಗ ವಾರಕ್ಕೊಂದು ಸಾರಿ ಇರಲಿ , ತಿಂಗಳಿಗೊಮ್ಮೆಯಾದರೂ ಫೋನ್ ಮಾಡುವುದು ನಿಂತೆ ಹೋಗಿತ್ತು.. ಹಾಗಂತ ನಾನು ಮಾತ್ರ ತಿಂಗಳಿಗೊಮ್ಮೆಯಾದರೂ ಫೋನ್ ಮಾಡಿ ವಿಚಾರಿಸುವ ನನ್ನ ಕ್ರಮವನ್ನು ಮಾತ್ರ ಬಿಟ್ಟಿರಲಿಲ್ಲ.. ಆದರೆ ಇದ್ಯಾಕೆ ಹೀಗಾಗಿ ಹೋಯ್ತು?? ಈಗೀಗ ನಮ್ಮ ಕರೆಗೆ ಮಗಳಿಂದ ಸರಿಯಾದ ಉತ್ತರವೇ ಬರುತ್ತಿರಲಿಲ್ಲ... ಬೇಕೋ ಬೇಡವೋ ಅನ್ನುವ ನಾಟಕೀಯ ಉತ್ತರಗಳು... ಇಲ್ಲಿ ತುಂಬಾ ಚಳಿ , ನಿಮ್ಮಿಂದ ಇಲ್ಲಿರೋಕೆ ಕಷ್ಟ ಆಗಬಹುದು ಅನ್ನೋವಂಥ ಮಾತು .. ಇಷ್ಟೊಂದು ಪ್ರೀತಿಯಿಂದ ಬೆಳೆಸಿದ ಮಗಳಿಗೆ ನಾವು ಬೇಡವಾದೆವೆ?? ೨ ವರ್ಷಕ್ಕೆ ಹಿಂದೆ ನಂ ಜೊತೆ ಬನ್ನಿ ಅಂತ ರಚ್ಚೆ ಹಿಡಿದಿದ್ದ ಮಗಳು ಇವಳೇನಾ? ನನಗ್ಯಾಕೋ ತಲೆ ಧಿಂ ಎನ್ನ ತೊಡಗಿತ್ತು...
ಹೀಗೆ ಸುಮಾರು ಒಂದು ವರ್ಷ ಕಳೆದಿದ್ದೆ ಗೊತ್ತಾಗಲಿಲ್ಲ... ಮನೆಯ ಖರ್ಚುಗಳು ನನ್ನ ಅರ್ಧ ಸಂಬಳ ಸಾಕಾಗೋದಿಲ್ಲ ಅನ್ನೋ ಸೂಚನೆ ಕೊಡತೊಡಗಿದ್ದವು.. ಮಗ ಅಥವಾ ಮಗಳನ್ನು ದುಡ್ಡು ಕೇಳಲು ಯಾಕೋ ಮನಸ್ಸಾಕ್ಷಿ ಒಪ್ಪಲಿಲ್ಲ... ಇನ್ನೊಂದೇ ಒಂದು ವರ್ಷ ಕಳೆದರೂ ಸಾಕು.. ನನ್ನ , ನನ್ನ ಹೆಂಡತಿಯ ಹೆಸರಲ್ಲಿರೋ ಇನ್ಸೂರೆನ್ಸ್ ದುಡ್ಡು ಸಿಕ್ಕಿ ಬಿಡುತ್ತದೆ.. ಆಮೇಲೆ ಏನೂ ತೊಂದರೆಯಿಲ್ಲ... ಆದರೆ ಈ ಒಂದು ವರ್ಷ ಏನ್ಮಾಡಲಿ... ಹಾಗಂತ ಆಲೋಚಿಸುತ್ತ ಮಲಗಿದ್ದೆ...ನನ್ನ ಅಲ್ಪ ಸ್ವಲ್ಪ ಉಳಿತಾಯದ ದುಡ್ಡು ಈಗಲೇ ತೆಗೆದರೂ ಅದು ಅಷ್ಟಕ್ಕಷೆ.. ಅದಕ್ಕಿಂತ ಮುಂದಿನ ವರ್ಷ ತೆಗೆದರೆನೆ ಲಾಭ... ಇಲ್ಲಾ , ಏನಾದರೂ ಮಾಡಲೇ ಬೇಕು... ಯಾವ ಕೆಲಸವಾದರೂ ಸರಿ.. ಒಂದಿಷ್ಟು ದುಡ್ಡು ಸ್ವಲ್ಪ ದಿನದ ಮಟ್ಟಿಗೆ ಸಂಪಾದನೆ ಮಾಡಲೇಬೇಕು.. ಹಾಗಂತ ನಿರ್ಧರಿಸಿದವನಿಗೆ ನೆನಪಾದದ್ದೇ ನನ್ನ ಹಳೆಯ ವಿದ್ಯೆ..ಕಾಲೇಜ್ ಗೆ ಹೋಗುತ್ತಿದ್ದ ದಿನಗಳಲ್ಲಿ ನಾನು ಮತ್ತು ನನ್ನ ಚಡ್ಡಿ ದೋಸ್ತು ಸದಾನಂದ ಆ ಕೆಲಸ ಮಾಡುತ್ತಿದ್ದೆವು.. ಆವಾಗ ಸುಮ್ನೆ ತಮಾಷೆಗೆಂದು ಮಾಡುತ್ತಿದ್ದ ಆ ವಿದ್ಯೆ ಇವತ್ತು ಉಪಯೋಗಕ್ಕೆ ಬರಬಹುದು ಅಂತ ನಾನು ಕನಸಿನಲ್ಲೂ ಎಣಿಸಿರಲಿಲ್ಲ...
-- ಮುಂದುವರೆಯುವುದು..
"ಮೊದಲಿಗೆ ಎಲ್ಲಿಗೆ ಹೋಗೋಣ? ಮಗಳ ಮನೆಗೋ? ಇಲ್ಲ ಮಗನ ಮನೆಗೋ?" ಹಾಗಂತ ಒಂದು ದಿನ ಹೆಂಡತಿಯಲ್ಲಿ ಕೇಳಿದೆ..." ಮಗಳ ಮನೆಗೆ ಹೋಗೋಣಾರಿ.. ಮಗ ಈಗ ತಾನೆ ಮದ್ವೇಯಾಗಿದ್ದಾನೆ.. ಸ್ವಲ್ಪ ದಿನ ಇಬ್ರೆ ಇರ್ಲಿ" ಹಾಗಂತ ಹೇಳಿದ್ದಳಾಕೆ .. ಸರಿ ಅಂದು ನಾನು ಆ ದಿನಕ್ಕಾಗಿ ಕಾಯುತ್ತಿದ್ದೆ... ಬಹುಶ ಜೀವನದ ಅತೀ ಸುಂದರ ಕ್ಷಣಗಳು ಅವೇ ಅನ್ನಿಸಿಬಿಟ್ಟಿತ್ತು...
ಆದರೆ ಹಿಂದಿನಂತೆ ಮಗಳು ಈಗೀಗ ವಾರಕ್ಕೊಂದು ಸಾರಿ ಇರಲಿ , ತಿಂಗಳಿಗೊಮ್ಮೆಯಾದರೂ ಫೋನ್ ಮಾಡುವುದು ನಿಂತೆ ಹೋಗಿತ್ತು.. ಹಾಗಂತ ನಾನು ಮಾತ್ರ ತಿಂಗಳಿಗೊಮ್ಮೆಯಾದರೂ ಫೋನ್ ಮಾಡಿ ವಿಚಾರಿಸುವ ನನ್ನ ಕ್ರಮವನ್ನು ಮಾತ್ರ ಬಿಟ್ಟಿರಲಿಲ್ಲ.. ಆದರೆ ಇದ್ಯಾಕೆ ಹೀಗಾಗಿ ಹೋಯ್ತು?? ಈಗೀಗ ನಮ್ಮ ಕರೆಗೆ ಮಗಳಿಂದ ಸರಿಯಾದ ಉತ್ತರವೇ ಬರುತ್ತಿರಲಿಲ್ಲ... ಬೇಕೋ ಬೇಡವೋ ಅನ್ನುವ ನಾಟಕೀಯ ಉತ್ತರಗಳು... ಇಲ್ಲಿ ತುಂಬಾ ಚಳಿ , ನಿಮ್ಮಿಂದ ಇಲ್ಲಿರೋಕೆ ಕಷ್ಟ ಆಗಬಹುದು ಅನ್ನೋವಂಥ ಮಾತು .. ಇಷ್ಟೊಂದು ಪ್ರೀತಿಯಿಂದ ಬೆಳೆಸಿದ ಮಗಳಿಗೆ ನಾವು ಬೇಡವಾದೆವೆ?? ೨ ವರ್ಷಕ್ಕೆ ಹಿಂದೆ ನಂ ಜೊತೆ ಬನ್ನಿ ಅಂತ ರಚ್ಚೆ ಹಿಡಿದಿದ್ದ ಮಗಳು ಇವಳೇನಾ? ನನಗ್ಯಾಕೋ ತಲೆ ಧಿಂ ಎನ್ನ ತೊಡಗಿತ್ತು...
ಹೀಗೆ ಸುಮಾರು ಒಂದು ವರ್ಷ ಕಳೆದಿದ್ದೆ ಗೊತ್ತಾಗಲಿಲ್ಲ... ಮನೆಯ ಖರ್ಚುಗಳು ನನ್ನ ಅರ್ಧ ಸಂಬಳ ಸಾಕಾಗೋದಿಲ್ಲ ಅನ್ನೋ ಸೂಚನೆ ಕೊಡತೊಡಗಿದ್ದವು.. ಮಗ ಅಥವಾ ಮಗಳನ್ನು ದುಡ್ಡು ಕೇಳಲು ಯಾಕೋ ಮನಸ್ಸಾಕ್ಷಿ ಒಪ್ಪಲಿಲ್ಲ... ಇನ್ನೊಂದೇ ಒಂದು ವರ್ಷ ಕಳೆದರೂ ಸಾಕು.. ನನ್ನ , ನನ್ನ ಹೆಂಡತಿಯ ಹೆಸರಲ್ಲಿರೋ ಇನ್ಸೂರೆನ್ಸ್ ದುಡ್ಡು ಸಿಕ್ಕಿ ಬಿಡುತ್ತದೆ.. ಆಮೇಲೆ ಏನೂ ತೊಂದರೆಯಿಲ್ಲ... ಆದರೆ ಈ ಒಂದು ವರ್ಷ ಏನ್ಮಾಡಲಿ... ಹಾಗಂತ ಆಲೋಚಿಸುತ್ತ ಮಲಗಿದ್ದೆ...ನನ್ನ ಅಲ್ಪ ಸ್ವಲ್ಪ ಉಳಿತಾಯದ ದುಡ್ಡು ಈಗಲೇ ತೆಗೆದರೂ ಅದು ಅಷ್ಟಕ್ಕಷೆ.. ಅದಕ್ಕಿಂತ ಮುಂದಿನ ವರ್ಷ ತೆಗೆದರೆನೆ ಲಾಭ... ಇಲ್ಲಾ , ಏನಾದರೂ ಮಾಡಲೇ ಬೇಕು... ಯಾವ ಕೆಲಸವಾದರೂ ಸರಿ.. ಒಂದಿಷ್ಟು ದುಡ್ಡು ಸ್ವಲ್ಪ ದಿನದ ಮಟ್ಟಿಗೆ ಸಂಪಾದನೆ ಮಾಡಲೇಬೇಕು.. ಹಾಗಂತ ನಿರ್ಧರಿಸಿದವನಿಗೆ ನೆನಪಾದದ್ದೇ ನನ್ನ ಹಳೆಯ ವಿದ್ಯೆ..ಕಾಲೇಜ್ ಗೆ ಹೋಗುತ್ತಿದ್ದ ದಿನಗಳಲ್ಲಿ ನಾನು ಮತ್ತು ನನ್ನ ಚಡ್ಡಿ ದೋಸ್ತು ಸದಾನಂದ ಆ ಕೆಲಸ ಮಾಡುತ್ತಿದ್ದೆವು.. ಆವಾಗ ಸುಮ್ನೆ ತಮಾಷೆಗೆಂದು ಮಾಡುತ್ತಿದ್ದ ಆ ವಿದ್ಯೆ ಇವತ್ತು ಉಪಯೋಗಕ್ಕೆ ಬರಬಹುದು ಅಂತ ನಾನು ಕನಸಿನಲ್ಲೂ ಎಣಿಸಿರಲಿಲ್ಲ...
-- ಮುಂದುವರೆಯುವುದು..
Friday, July 24, 2009
ಆವತ್ತು ಯಾಕೋ ಮತ್ತೆ ಮಳೆ ಯಾಗಲೇ ಇಲ್ಲ
ಎರಡು ವರ್ಷಕ್ಕೆ ಹಿಂದೆ ಶುಕ್ರವಾರ ಬಂತೆಂದರೆ ಮತ್ತೆ ಕೇಳಬೇಕೆ... ನಾವೊಂದು ಎಂಟುಜನರ ಗುಂಪು ಗುರು ಗಾರ್ಡನ್ ಅನ್ನೋ ಅಡ್ಡದಲ್ಲಿ ೭-೭.೩೦ ಯಹಾಗೆ ಪ್ರತ್ಯಕ್ಷ ರಾಗಿ ಬಿಡುತ್ತಿದ್ದೆವು... ನಾವು ಬರುತ್ತೇವೆ ಎಂದು ತಿಳಿದಿದ್ದ ಗಾರ್ಡೆನ್ ಮಂದಿಯೂ ನಮಗೆ ಟೇಬಲ್ ಕಾಯ್ದಿರಿಸುತ್ತಿದ್ದರು... ತಂಪಾದ ಬಿಯರು...... ಹುಹ್ ಆ ದಿನಗಳು !!!!!!!
ನಮ್ಮಲ್ಲೊಬ್ಬ ನಿದ್ದ ಸದಾನಂದ ಅಂತ... ನನ್ನ ಭಾರಿ ಚಡ್ಡಿ ದೋಸ್ತು... ನಾನೆಂದರೆ ಆತನಿಗೆ ಏನೋ ನಂಬಿಕೆ, ಪ್ರೀತಿ...
ಆತನಿಗೆ ಶನಿವಾರವೂ ಆಫೀಸ್... ಆದರೆ ನಮಗೆ ಮಾತ್ರ ರಜೆ ಇದ್ದ ಕಾರಣ ಆತನೂ ನಮ್ಮ ಜೊತೆ ಬಂದಾಗಲೆಲ್ಲಾ ಮರುದಿನ ಆಫೀಸ್ ಗೆ ಚಕ್ಕರ್....ಕಾರಣ ಹಿಂದಿನ ದಿನದ ಹಂಗೋವೆರ್, ಆಫೀಸ್ ನಲ್ಲಿ ಪ್ರತಿಸಾರಿಯೂ ಆತ ಕೊಡುತ್ತಿದ್ದ ಕಾರಣ ತಾಯಿಗೆ ಹುಷಾರ್ ಇರ್ಲಿಲ್ಲ ಸಾರ್... ಅಂತ... ಆತ ಸುಳ್ಳು ಹೇಳುತ್ತಿದ್ದಿದ್ದು ನಿಜ, ಆದರೆ ತಾಯಿ ಯನ್ನು ತುಂಬ ಪ್ರೀತಿಸುತ್ತಿದ್ದ... ಅದು ಮಾತ್ರ ಖರೆ...
ಆವತ್ತೂ ಶುಕ್ರವಾರ , ಪ್ರತಿಸಾರಿಯಂತೆ ಅಂದೂ ಗಡದ್ದು ಪಾರ್ಟಿ ಮಾಡಿದ್ದೆವು... ಮರುದಿನ ಬೆಳಿಗ್ಗೆ ಸದಾನಂದನ ತಾಯಿ ಗೆ ಏನೋ ಹುಶಾರಿಲ್ಲವಾಗಿತ್ತು !!!! ಹಾಗಂತ ಆತ ಆಫೀಸ್ ಗೆ ಫೋನ್ ಹೊಡೆದದ್ದೂ ಆಯಿತು... ಆ ಕಡೆಯಿಂದ ಅದ್ಯಾವ ಪರಿ ಮಂಗಳಾರ್ಚನೆ ಆಯಿತೋ ಗೊತ್ತಿಲ್ಲ.... ಅಂತೂ ಇಂತೂ ಆತ ಆಫೀಸಿಗೆ ಹೋಗಲೇ ಬೇಕಾಯಿತು...ಆವತ್ತು ಆಕಾಶದಲ್ಲಿ ಭಾರಿ ಮೋಡ ಈಗಲೋ ಆಗಲೋ ಮಳೆ ಬರಿಸಲು ತಯಾರಾಗಿತ್ತು.. ಮದ್ಧ್ಯಾನ್ನ ಸುಮಾರು ಹನ್ನೆರಡು ಗಂಟೆ ಹೊತ್ತಿಗೆ ನನ್ನ ಫೋನ್ ರಿಂಗ್ ಆಗಿತ್ತು.. ಯಾರೆಂದು ನೋಡಿದರೆ ಸದಾನಂದ... ಏನಪ್ಪಾ ಅಂದೇ... "ತಾಯಿಗೆ ಹುಷಾರಿಲ್ಲ ಈಗ ತಾನೆ ಫೋನ್ ಮಾಡಿದ್ರು, ಎದೆ ನೋಯ್ತಿದೆಯಂತೆ, ಪ್ಲೀಸ್ ಆಸ್ಪತ್ರೆಗೆ ಬೇಗ ಕರ್ಕೊಂಡು ಹೋಗು... ಗೊತ್ತಲ್ಲ ನಾನು ತಾಯಿಗೆ ಹುಷಾರಿಲ್ಲ ಅಂದ್ರೆ ನನ್ನ ಇವತ್ತು ಕೆಲಸದಿಂದ ತೆಗ್ದೆ ಹಾಕ್ತಾರೆ " ಹಾಗಂತ ಆತ ಹೇಳುತ್ತಿದ್ದಂತೆ ಬೈಕ್ ಹೊರಗೆ ಎಳೆದು ಹಾಕಿದವನೇ ಆತನ ಮನೆಯತ್ತ ಧಾವಿಸಿದೆ... ಆತನ ತಾಯಿ ಎದೆ ನೋವು ಅಂದು ಒಂದು ಕಡೆ ಕೂತು ಬಿಟ್ಟಿದ್ದರು... ಅಲ್ಲಿಂದಲೇ ಒಂದು ಆಟೋ ದಲ್ಲಿ ಅವರನ್ನ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದೆ... ಹಾರ್ಟ್ ಅಟ್ಯಾಕ್ ಆಗಿದೆ ಅಂದು ICU ನಲ್ಲಿ ಸೇರಿಸಿದೆವು... ಪ್ರತಿ ಅರ್ಧ ಗಂಟೆಗೆ ಒಮ್ಮೆ ಸದಾನಂದ ಫೋನ್ ಮಾಡುತ್ತಲೇ ಇದ್ದ... ೫ ಗಂಟೆಯ ಹೊತ್ತಿಗೆ ಆಕೆ ಮತ್ತೆ ನಗುವುದನ್ನು ನೋಡಿ ನನಗೆ ಸಮಾಧಾನವಾಗಿತ್ತು...ಸುಮಾರು ಆರು ಗಂಟೆಯ ಹೊತ್ತಿಗೆ ಆತನ ಅಮ್ಮನಿಗೆ ಏನಾದರು ಕುಡಿಯಲು ಕೊಡೋಣ ಎಂದು ಹೊರಗೆ ಹೋಗಿ ಜೂಸ್ ತಂದು ಆಕೆಯ ವಾರ್ದಿನತ್ತ ಹೆಜ್ಜೆ ಹಾಕಿದೆ... ಸದಾನಂದನ ತಾಯಿ ಕಣ್ಣು ಮಿಟುಕಿಸದೆ ನನ್ನನ್ನೇ ನೋಡುತ್ತಿದ್ದರು... ಒಂದು ಸಲ ಗಾಭರಿಯಿಂದ ನೋಡಿದೆ.. ಹತ್ತಿರ ಬಂದ ಡಾಕ್ಟರ "ಸಾರೀ ಸಾರ್" ಅಂದ... ತಲೆ ಗಿರ್ರನೆ ತಿರುಗತೊಡಗಿತು...ಕೈಯಲ್ಲಿದ್ದ ಜೂಸ್ ಲೋಟ ಧಡಾರನೆ ನೆಲಕ್ಕುರುಳಿತು... ಸದಾನಂದ ನ ಫೋನ್ ಬರುತ್ತಲೇ ಇತ್ತು...
ಈಗಲೋ ಆಗಲೋ ಮಳೆ ಬರುವಂತಿದ್ದ ಆವತ್ತು ಯಾಕೋ ಮತ್ತೆ ಮಳೆ ಯಾಗಲೇ ಇಲ್ಲ...
ನಮ್ಮಲ್ಲೊಬ್ಬ ನಿದ್ದ ಸದಾನಂದ ಅಂತ... ನನ್ನ ಭಾರಿ ಚಡ್ಡಿ ದೋಸ್ತು... ನಾನೆಂದರೆ ಆತನಿಗೆ ಏನೋ ನಂಬಿಕೆ, ಪ್ರೀತಿ...
ಆತನಿಗೆ ಶನಿವಾರವೂ ಆಫೀಸ್... ಆದರೆ ನಮಗೆ ಮಾತ್ರ ರಜೆ ಇದ್ದ ಕಾರಣ ಆತನೂ ನಮ್ಮ ಜೊತೆ ಬಂದಾಗಲೆಲ್ಲಾ ಮರುದಿನ ಆಫೀಸ್ ಗೆ ಚಕ್ಕರ್....ಕಾರಣ ಹಿಂದಿನ ದಿನದ ಹಂಗೋವೆರ್, ಆಫೀಸ್ ನಲ್ಲಿ ಪ್ರತಿಸಾರಿಯೂ ಆತ ಕೊಡುತ್ತಿದ್ದ ಕಾರಣ ತಾಯಿಗೆ ಹುಷಾರ್ ಇರ್ಲಿಲ್ಲ ಸಾರ್... ಅಂತ... ಆತ ಸುಳ್ಳು ಹೇಳುತ್ತಿದ್ದಿದ್ದು ನಿಜ, ಆದರೆ ತಾಯಿ ಯನ್ನು ತುಂಬ ಪ್ರೀತಿಸುತ್ತಿದ್ದ... ಅದು ಮಾತ್ರ ಖರೆ...
ಆವತ್ತೂ ಶುಕ್ರವಾರ , ಪ್ರತಿಸಾರಿಯಂತೆ ಅಂದೂ ಗಡದ್ದು ಪಾರ್ಟಿ ಮಾಡಿದ್ದೆವು... ಮರುದಿನ ಬೆಳಿಗ್ಗೆ ಸದಾನಂದನ ತಾಯಿ ಗೆ ಏನೋ ಹುಶಾರಿಲ್ಲವಾಗಿತ್ತು !!!! ಹಾಗಂತ ಆತ ಆಫೀಸ್ ಗೆ ಫೋನ್ ಹೊಡೆದದ್ದೂ ಆಯಿತು... ಆ ಕಡೆಯಿಂದ ಅದ್ಯಾವ ಪರಿ ಮಂಗಳಾರ್ಚನೆ ಆಯಿತೋ ಗೊತ್ತಿಲ್ಲ.... ಅಂತೂ ಇಂತೂ ಆತ ಆಫೀಸಿಗೆ ಹೋಗಲೇ ಬೇಕಾಯಿತು...ಆವತ್ತು ಆಕಾಶದಲ್ಲಿ ಭಾರಿ ಮೋಡ ಈಗಲೋ ಆಗಲೋ ಮಳೆ ಬರಿಸಲು ತಯಾರಾಗಿತ್ತು.. ಮದ್ಧ್ಯಾನ್ನ ಸುಮಾರು ಹನ್ನೆರಡು ಗಂಟೆ ಹೊತ್ತಿಗೆ ನನ್ನ ಫೋನ್ ರಿಂಗ್ ಆಗಿತ್ತು.. ಯಾರೆಂದು ನೋಡಿದರೆ ಸದಾನಂದ... ಏನಪ್ಪಾ ಅಂದೇ... "ತಾಯಿಗೆ ಹುಷಾರಿಲ್ಲ ಈಗ ತಾನೆ ಫೋನ್ ಮಾಡಿದ್ರು, ಎದೆ ನೋಯ್ತಿದೆಯಂತೆ, ಪ್ಲೀಸ್ ಆಸ್ಪತ್ರೆಗೆ ಬೇಗ ಕರ್ಕೊಂಡು ಹೋಗು... ಗೊತ್ತಲ್ಲ ನಾನು ತಾಯಿಗೆ ಹುಷಾರಿಲ್ಲ ಅಂದ್ರೆ ನನ್ನ ಇವತ್ತು ಕೆಲಸದಿಂದ ತೆಗ್ದೆ ಹಾಕ್ತಾರೆ " ಹಾಗಂತ ಆತ ಹೇಳುತ್ತಿದ್ದಂತೆ ಬೈಕ್ ಹೊರಗೆ ಎಳೆದು ಹಾಕಿದವನೇ ಆತನ ಮನೆಯತ್ತ ಧಾವಿಸಿದೆ... ಆತನ ತಾಯಿ ಎದೆ ನೋವು ಅಂದು ಒಂದು ಕಡೆ ಕೂತು ಬಿಟ್ಟಿದ್ದರು... ಅಲ್ಲಿಂದಲೇ ಒಂದು ಆಟೋ ದಲ್ಲಿ ಅವರನ್ನ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದೆ... ಹಾರ್ಟ್ ಅಟ್ಯಾಕ್ ಆಗಿದೆ ಅಂದು ICU ನಲ್ಲಿ ಸೇರಿಸಿದೆವು... ಪ್ರತಿ ಅರ್ಧ ಗಂಟೆಗೆ ಒಮ್ಮೆ ಸದಾನಂದ ಫೋನ್ ಮಾಡುತ್ತಲೇ ಇದ್ದ... ೫ ಗಂಟೆಯ ಹೊತ್ತಿಗೆ ಆಕೆ ಮತ್ತೆ ನಗುವುದನ್ನು ನೋಡಿ ನನಗೆ ಸಮಾಧಾನವಾಗಿತ್ತು...ಸುಮಾರು ಆರು ಗಂಟೆಯ ಹೊತ್ತಿಗೆ ಆತನ ಅಮ್ಮನಿಗೆ ಏನಾದರು ಕುಡಿಯಲು ಕೊಡೋಣ ಎಂದು ಹೊರಗೆ ಹೋಗಿ ಜೂಸ್ ತಂದು ಆಕೆಯ ವಾರ್ದಿನತ್ತ ಹೆಜ್ಜೆ ಹಾಕಿದೆ... ಸದಾನಂದನ ತಾಯಿ ಕಣ್ಣು ಮಿಟುಕಿಸದೆ ನನ್ನನ್ನೇ ನೋಡುತ್ತಿದ್ದರು... ಒಂದು ಸಲ ಗಾಭರಿಯಿಂದ ನೋಡಿದೆ.. ಹತ್ತಿರ ಬಂದ ಡಾಕ್ಟರ "ಸಾರೀ ಸಾರ್" ಅಂದ... ತಲೆ ಗಿರ್ರನೆ ತಿರುಗತೊಡಗಿತು...ಕೈಯಲ್ಲಿದ್ದ ಜೂಸ್ ಲೋಟ ಧಡಾರನೆ ನೆಲಕ್ಕುರುಳಿತು... ಸದಾನಂದ ನ ಫೋನ್ ಬರುತ್ತಲೇ ಇತ್ತು...
ಈಗಲೋ ಆಗಲೋ ಮಳೆ ಬರುವಂತಿದ್ದ ಆವತ್ತು ಯಾಕೋ ಮತ್ತೆ ಮಳೆ ಯಾಗಲೇ ಇಲ್ಲ...
Tuesday, June 16, 2009
Friday, May 22, 2009
ಆತ ಯಾರೆಂದು ಕೊನೆಗೂ ತಿಳಿಯಲೇ ಇಲ್ಲ..!!!!
IPL ಗಿಂತ... ಆತನ ಬ್ಲಾಗ್ ಹೆಚ್ಚು ಜನಪ್ರಿಯವಾಯಿತು... IPL ನ ವೆಬ್ ಸೈಟ್ ಗೆ ಭೇಟಿ ನೀಡಿದವರಿಗಿಂತ ಆತನ ಬ್ಲಾಗ್ ಗೆ ಭೇಟಿ ನೀಡಿದವರ ಸಂಖೆಯೇ ಹೆಚ್ಚು... ಕೊಲ್ಕತ್ತಾ ನೈಟ್ riders, ಅದರ ಬಾಸ್ ಶಾರುಖ್, ಅಧಿಕಪ್ರಸಂಗಿ ಶ್ರೀಸಾಂತ್ ಎಲ್ಲರ ಜನ್ಮ ಜಾಲಾಡಿಸಿಬಿಟ್ಟ.. ೨೫ ದಿನಗಳಲ್ಲಿ ಆತನ ಬ್ಲಾಗ್ ಗೆ ಕಡಿಮೆಯೆಂದರೂ ೧.೫೦ ಲಕ್ಷ ಜನರು ಭೇಟಿ ನೀಡಿದರು... ಆತ ಯಾರು ಅನ್ನೋದು ಮೊನ್ನೆ ೧೮ ಕ್ಕೆ ಗೊತ್ತಾಗಬೇಕಿತ್ತು ಆದರೆ Fakeiplplayer ಎಂದು ತನ್ನನ್ನು ತಾನು ಕರೆಸಿಕೊಂಡ ಆತ ಕೊನೆಗೂ ಯಾರೆಂದು ತಿಳಿಯಲೇ ಇಲ್ಲ...
ಹೌದು... ನೀವು ಭೇಟಿ ಕೊಟ್ತಿದ್ದೀರೋ ಇಲ್ಲವೊ ಗೊತ್ತಿಲ್ಲ... ಆತನ ಬ್ಲಾಗ್ ಎಲ್ಲವನ್ನೂ ಹೇಳುತ್ತದೆ... ಟೀಂ ಮೀಟಿಂಗ್ ನಲ್ಲಿ ಏನಾಯಿತು, ಶಾಪಿಂಗ್ ಗೆ ಹೋದಾಗ, ಆಟ ಆಡೋವಾಗ, ಕಾಮೆಂಟರಿ ಮಾಡೋವಾಗ... ಎಲ್ಲೆಲ್ಲ ಏನೇನ್ ನಡಿಯತ್ತೆ, ಕೊಲ್ಕತ್ತಾ ಯಾಕೆ ಸೋತಿತು... ಹುಹ್... ಅದೆಷ್ಟು ನಿಜ , ಅದೆಷ್ಟು ಸುಳ್ಳು ಗೊತ್ತಿಲ್ಲ...ಆದರೆ ಎಲ್ಲವನ್ನು ಆತ ಹೇಳುತ್ತಾನೆ.. ತನ್ನನ್ನು ತಾನು FakeIPLPlayer ಎಂದು ಕರೆಸಿಕೊಳ್ಳುವ ಆತ ಹೇಳಿಕೊಳ್ಳುವಂತೆ ಆತ ಕೋಲ್ಕತ್ತಾ ಟೀಂ ನ ಆಟಗಾರ... ರಣಜಿ ಆಡಿದ್ದಾನೆ, ಭಾಷೆ ನೋಡಿದರೆ ಬೆಂಗಾಲಿ ಥರ ಅನ್ನಿಸುತ್ತೆ... ಸ್ವಚ್ಛ ಇಂಗ್ಲಿಷು... ಕಲಿತಿದ್ದು ಡೆಲ್ಲಿಯಲ್ಲಿ, ಭಾರತೀಯ ಟೀಂ ನಲ್ಲಿ ಆಡುವ ಅರ್ಹತೆ ಇದ್ದೂ ಆಡಲಾಗದವನು... ಕಳೆದ ವರ್ಷದ IPL ನಲ್ಲಿ ಚಾನ್ಸ್ ಸಿಗಲಿಲ್ಲ... ಈ ವರ್ಷ ಟೀಂ ನಲ್ಲಿ ಇದ್ದೂ ಆತನನ್ನು ಯಾರೂ ಆಡಿಸಲಿಲ್ಲ...
ಕೆಲವರು ಆತ ಆಕಾಶ್ ಚೋಪ್ರಾ ಅಂದರು, ಇನ್ನು ಕೆಲವರು ಸಂಜಯ್ ಬಂಗಾರ್ ಕಡೆ ಬೊಟ್ಟು ಮಾಡಿದರು... ಉಹುಂ... ಅವರಾರೂ ಅಲ್ಲ... ಆತ ಟೀಂ ನ ಮ್ಯಾಚ್ ಮುಗಿದ ಕೂಡಲೇ ಬ್ಲಾಗ್ ಬರೆಯುತ್ತಾನೆ, ಹೋಟೆಲ್ ರೂಮಲ್ಲಿ ಎಲ್ರೂ ಮಲಗಿದರೆ ಬ್ಲಾಗ್ ಗೀಚ್ತಾನೇ, ಹೊಸ ಲ್ಯಾಪ್ಟಾಪ್ ಖರೀದಿಸಿದ್ದೀನಿ ಅಂತಾನೆ, ಕೋಚ್ ನ ಲ್ಯಾಪ್ಟಾಪ್ ನಿಂದ ಅಂತ ಒಂದೆರಡು ವಾಕ್ಯ ಗೀಚುತ್ತಾನೆ.... ಆದರೆ ಇದುವರೆಗೂ ಆತ ಯಾರೆಂದು ತಿಳಿದಿಲ್ಲ...
ಆತನ ಬರಹದಲ್ಲಿ ಎಲ್ಲರಿಗೂ ಒಂದೊಂದು ಅಡ್ಡ ಹೆಸರಿದೆ... ಫಾರೆನ್ ಬಬುಸ್, ಪ್ರಿನ್ಸ್ ಆಫ್ ಪಟಿಯಾಲ, ಅಪ್ಪಂ , ದೀವಾರ್, ಬೆವದಾ , ಬಾಟ್ಲಿ ವಾಲಾ...ಹೀಗೆ... ಕ್ರಿಕೆಟ್, ಅದರೊಳಗಿನ ಡಂಭಾಚಾರ, ಮಂದಿರಾ ಬೇಡಿ, ಅಲ್ಲಿನ ರಾಜಕೀಯ, ಸೆಕ್ಸ್, ಪಾರ್ಟಿಗಳು... ಹುಹ್ ಏನೇನಿಲ್ಲ... ನಾನು ಜಾಸ್ತಿ ಹೇಳುವುದು ಒಳ್ಳೆಯದಲ್ಲ... ನೀವೇ ಸ್ವತಹ ಒಮ್ಮೆ ಓದಿ... ಆತ ಅದೆಷ್ಟು ನಿಜ, ಅದೆಷ್ಟು ಸುಳ್ಳು ಯಾರಿಗೂ ಗೊತ್ತಿಲ್ಲ... ಆತ ನಿಜವಾಗಿ ಕೊಲಕತ್ತಾ ಆಟಗಾರನೇ ಅಥವ ನಮ್ಮ ನಿಮ್ಮಂಥ ಸಾಮನ್ಯ ನೆ ತಿಳಿದಿಲ್ಲ... ಯಾರೇ ಇರಲಿ ತುಂಬ ಬುದ್ಧಿವಂತ... ಕೆಲವೊಂದು ಬಾರಿ ನನಗೆ IPL ಮ್ಯಾಚ್ ಬೋರ್ ಆದಾಗ ಟೈಮ್ ಪಾಸು ಮಾಡಿಸಿದ್ದಾನೆ... ಆತನ ಬ್ಲಾಗ್ ಓದಿ ಕೆಟ್ಟ ಮ್ಯಾಚ್ ಮರೆತು ಮತ್ತೆ ನಕ್ಕಿದ್ದೇನೆ...
ನನ್ನ ಪ್ರಕಾರ ಆತ ಯಾರೋ ಮೂರನೇ ವ್ಯಕ್ತಿ... ಕೋಲ್ಕತ್ತಾ ಟೀಂ ನ ಒಳಗಿನಿಂದ ಆತ ಯಾರ ಜೊತೆಗೋ ಸಂಪರ್ಕ ಇಟ್ಟುಕೊಂಡಿದ್ದಾನೆ... ಎಲ್ಲ ಮಾಹಿತಿ ಪಡೆದು ಬ್ಲಾಗ್ ಗೀಚುತ್ತಾನೆ... ಯಾಕಂದ್ರೆ ಅಲ್ಲಿರುವ ಇಂಟರ್ನೆಟ್, wi-fi ಎಲ್ಲದಕ್ಕೂ ಮೋಸ ಮಾಡುವ ಹಾಗಿಲ್ಲ... ಆದ್ದರಿಂದ ಅಲ್ಲಿಂದಲೇ ಬರೆಯುವ ಪ್ರಮೇಯ ತುಂಬಾ ಕಮ್ಮಿ... ಇನ್ನು ಒಂದು ತಿಂಗಳ ಕಾಲ ಎಲ್ಲರ ಕಣ್ಣು ತಪ್ಪಿಸಿ ಅಲ್ಲಿಂದ ಬರೆಯುವ ಸಾಧ್ಯತೆ ಕೂಡ ತುಂಬಾ ಕಮ್ಮಿ... ಆತನ ಬ್ಲಾಗ್ ಓದಲು ಇಲ್ಲಿ ಭೇಟಿ ಕೊಡಿ... http://fakeiplplayer.blogspot.com/
ಹೌದು... ನೀವು ಭೇಟಿ ಕೊಟ್ತಿದ್ದೀರೋ ಇಲ್ಲವೊ ಗೊತ್ತಿಲ್ಲ... ಆತನ ಬ್ಲಾಗ್ ಎಲ್ಲವನ್ನೂ ಹೇಳುತ್ತದೆ... ಟೀಂ ಮೀಟಿಂಗ್ ನಲ್ಲಿ ಏನಾಯಿತು, ಶಾಪಿಂಗ್ ಗೆ ಹೋದಾಗ, ಆಟ ಆಡೋವಾಗ, ಕಾಮೆಂಟರಿ ಮಾಡೋವಾಗ... ಎಲ್ಲೆಲ್ಲ ಏನೇನ್ ನಡಿಯತ್ತೆ, ಕೊಲ್ಕತ್ತಾ ಯಾಕೆ ಸೋತಿತು... ಹುಹ್... ಅದೆಷ್ಟು ನಿಜ , ಅದೆಷ್ಟು ಸುಳ್ಳು ಗೊತ್ತಿಲ್ಲ...ಆದರೆ ಎಲ್ಲವನ್ನು ಆತ ಹೇಳುತ್ತಾನೆ.. ತನ್ನನ್ನು ತಾನು FakeIPLPlayer ಎಂದು ಕರೆಸಿಕೊಳ್ಳುವ ಆತ ಹೇಳಿಕೊಳ್ಳುವಂತೆ ಆತ ಕೋಲ್ಕತ್ತಾ ಟೀಂ ನ ಆಟಗಾರ... ರಣಜಿ ಆಡಿದ್ದಾನೆ, ಭಾಷೆ ನೋಡಿದರೆ ಬೆಂಗಾಲಿ ಥರ ಅನ್ನಿಸುತ್ತೆ... ಸ್ವಚ್ಛ ಇಂಗ್ಲಿಷು... ಕಲಿತಿದ್ದು ಡೆಲ್ಲಿಯಲ್ಲಿ, ಭಾರತೀಯ ಟೀಂ ನಲ್ಲಿ ಆಡುವ ಅರ್ಹತೆ ಇದ್ದೂ ಆಡಲಾಗದವನು... ಕಳೆದ ವರ್ಷದ IPL ನಲ್ಲಿ ಚಾನ್ಸ್ ಸಿಗಲಿಲ್ಲ... ಈ ವರ್ಷ ಟೀಂ ನಲ್ಲಿ ಇದ್ದೂ ಆತನನ್ನು ಯಾರೂ ಆಡಿಸಲಿಲ್ಲ...
ಕೆಲವರು ಆತ ಆಕಾಶ್ ಚೋಪ್ರಾ ಅಂದರು, ಇನ್ನು ಕೆಲವರು ಸಂಜಯ್ ಬಂಗಾರ್ ಕಡೆ ಬೊಟ್ಟು ಮಾಡಿದರು... ಉಹುಂ... ಅವರಾರೂ ಅಲ್ಲ... ಆತ ಟೀಂ ನ ಮ್ಯಾಚ್ ಮುಗಿದ ಕೂಡಲೇ ಬ್ಲಾಗ್ ಬರೆಯುತ್ತಾನೆ, ಹೋಟೆಲ್ ರೂಮಲ್ಲಿ ಎಲ್ರೂ ಮಲಗಿದರೆ ಬ್ಲಾಗ್ ಗೀಚ್ತಾನೇ, ಹೊಸ ಲ್ಯಾಪ್ಟಾಪ್ ಖರೀದಿಸಿದ್ದೀನಿ ಅಂತಾನೆ, ಕೋಚ್ ನ ಲ್ಯಾಪ್ಟಾಪ್ ನಿಂದ ಅಂತ ಒಂದೆರಡು ವಾಕ್ಯ ಗೀಚುತ್ತಾನೆ.... ಆದರೆ ಇದುವರೆಗೂ ಆತ ಯಾರೆಂದು ತಿಳಿದಿಲ್ಲ...
ಆತನ ಬರಹದಲ್ಲಿ ಎಲ್ಲರಿಗೂ ಒಂದೊಂದು ಅಡ್ಡ ಹೆಸರಿದೆ... ಫಾರೆನ್ ಬಬುಸ್, ಪ್ರಿನ್ಸ್ ಆಫ್ ಪಟಿಯಾಲ, ಅಪ್ಪಂ , ದೀವಾರ್, ಬೆವದಾ , ಬಾಟ್ಲಿ ವಾಲಾ...ಹೀಗೆ... ಕ್ರಿಕೆಟ್, ಅದರೊಳಗಿನ ಡಂಭಾಚಾರ, ಮಂದಿರಾ ಬೇಡಿ, ಅಲ್ಲಿನ ರಾಜಕೀಯ, ಸೆಕ್ಸ್, ಪಾರ್ಟಿಗಳು... ಹುಹ್ ಏನೇನಿಲ್ಲ... ನಾನು ಜಾಸ್ತಿ ಹೇಳುವುದು ಒಳ್ಳೆಯದಲ್ಲ... ನೀವೇ ಸ್ವತಹ ಒಮ್ಮೆ ಓದಿ... ಆತ ಅದೆಷ್ಟು ನಿಜ, ಅದೆಷ್ಟು ಸುಳ್ಳು ಯಾರಿಗೂ ಗೊತ್ತಿಲ್ಲ... ಆತ ನಿಜವಾಗಿ ಕೊಲಕತ್ತಾ ಆಟಗಾರನೇ ಅಥವ ನಮ್ಮ ನಿಮ್ಮಂಥ ಸಾಮನ್ಯ ನೆ ತಿಳಿದಿಲ್ಲ... ಯಾರೇ ಇರಲಿ ತುಂಬ ಬುದ್ಧಿವಂತ... ಕೆಲವೊಂದು ಬಾರಿ ನನಗೆ IPL ಮ್ಯಾಚ್ ಬೋರ್ ಆದಾಗ ಟೈಮ್ ಪಾಸು ಮಾಡಿಸಿದ್ದಾನೆ... ಆತನ ಬ್ಲಾಗ್ ಓದಿ ಕೆಟ್ಟ ಮ್ಯಾಚ್ ಮರೆತು ಮತ್ತೆ ನಕ್ಕಿದ್ದೇನೆ...
ನನ್ನ ಪ್ರಕಾರ ಆತ ಯಾರೋ ಮೂರನೇ ವ್ಯಕ್ತಿ... ಕೋಲ್ಕತ್ತಾ ಟೀಂ ನ ಒಳಗಿನಿಂದ ಆತ ಯಾರ ಜೊತೆಗೋ ಸಂಪರ್ಕ ಇಟ್ಟುಕೊಂಡಿದ್ದಾನೆ... ಎಲ್ಲ ಮಾಹಿತಿ ಪಡೆದು ಬ್ಲಾಗ್ ಗೀಚುತ್ತಾನೆ... ಯಾಕಂದ್ರೆ ಅಲ್ಲಿರುವ ಇಂಟರ್ನೆಟ್, wi-fi ಎಲ್ಲದಕ್ಕೂ ಮೋಸ ಮಾಡುವ ಹಾಗಿಲ್ಲ... ಆದ್ದರಿಂದ ಅಲ್ಲಿಂದಲೇ ಬರೆಯುವ ಪ್ರಮೇಯ ತುಂಬಾ ಕಮ್ಮಿ... ಇನ್ನು ಒಂದು ತಿಂಗಳ ಕಾಲ ಎಲ್ಲರ ಕಣ್ಣು ತಪ್ಪಿಸಿ ಅಲ್ಲಿಂದ ಬರೆಯುವ ಸಾಧ್ಯತೆ ಕೂಡ ತುಂಬಾ ಕಮ್ಮಿ... ಆತನ ಬ್ಲಾಗ್ ಓದಲು ಇಲ್ಲಿ ಭೇಟಿ ಕೊಡಿ... http://fakeiplplayer.blogspot.com/
Tuesday, May 5, 2009
ಇನ್ನು ನಮಗೆ ಕೆಲಸ ಇಲ್ಲಾ!!!!
"Say no to Bangalore, Yes to Buffalo"..
ಹಾಗಂತ ಅಮೇರಿಕಾದ ಅಧ್ಯಕ್ಷ ಒಬಾಮ ಹೇಳಿಬಿಟ್ಟಿದ್ದಾನೆ...!!! ಅಮೇರಿಕಾ ದಂಥಾ ಅಮೇರಿಕಾ ದುಡ್ಡಿಗಾಗಿ ಪರದಾಡುತ್ತಿದ್ದರೆ ಆತನಿಂದ ಈ ಹೇಳಿಕೆ ಬಂದುಬಿಟ್ಟಿದೆ...ಅಲ್ಲಾ, ಈ ಒಬಾಮ ಅಧ್ಯಕ್ಷನಾಗಿ ಎಷ್ಟು ದಿನಗಳಾದವು?? ೧೦೦?? ೧೧೦? ೧೨೫??? ಕೇವಲ ೧೦೦ ದಿನದಲ್ಲಿ ಅಮೇರಿಕಾದ ಪರಿಸ್ತಿತಿ ಸುಧಾರಿಸಬೇಕಿದ್ದರೆ ಏನು ಮಾಡಬೇಕು ಅದನ್ನ ಮಾಡಿದ್ದಾನೆ... ಈ ಸಾಫ್ಟ್ವೇರ್, ಬಿ ಪಿ ಓ ಅನ್ನೋ ಕೆಲಸ ನಾವಿಲ್ಲಿ ಮಾಡ್ತಿವಲ್ಲ??? ಅಲ್ಲ, ನಾವ್ಯಾವತ್ತಾದ್ರೂ ಯೋಚಿಸಿದ್ದೀವ ಅಮೇರಿಕಾದವರು ನಮಗೆ ಯಾಕೆ ಕೆಲಸ ಕೊಡ್ತಿದ್ದಾರೆ ಅಂತ?? ಅವ್ರ ಲಾಭಕ್ಕಾಗಿ ತಾನೆ? ಅಲ್ಲ ಆನೋಕ್ಕಾಗಲ್ಲ.. ಹಾಗಂತ ನಮಗೇನೂ ಇದ್ರಿಂದ ಉಪಯೋಗ ಆಗ್ಲಿಲ್ವಾ?? ಖಂಡಿತ ಆಗಿದೆ...ಬಹುಶ ಭಾರತದಲ್ಲಿ ಇಷ್ಟೊಂದು ಉದ್ಯೋಗ ಸೃಷ್ಟಿಸಿದ್ದು , ದುಡ್ಡು ಹರಿದಾಡಿದ್ದು ಇವುಗಳಿ೦ದಾನೆ.. ಇಲ್ಲಾಂದ್ರೆ ಈ ಹಡಬೆ ಸರಕಾರಗಳು ನಮಗೆಲ್ಲಿ ಕೆಲಸ ಕೊಡ್ತಾ ಇದ್ವು?? ಎಲ್ಲಾ ಓಕೆ.. ಆದ್ರೆ ಈ ಅಮೇರಿಕಾ ಹೇಳಿದ್ದೆ ಯಾಕೆ??
ನಮ್ಮಲ್ಲಿ ದುಡ್ಡಿಲ್ಲ, ನಮ್ಮಲ್ಲಿ ಕೆಲಸ ಇಲ್ಲ ಅನ್ನೋ ಈ ಅಮೇರಿಕಾ ಪಾಕಿಸ್ತಾನಕ್ಕೆ ಬಿಲಿಯನ್ ಗಟ್ಟಲೆ ದುಡ್ಡು ಎಲ್ಲಿಂದ ಕೊಡುತ್ತೆ?? ಇರಾಕ್ ಮೇಲೆ ದಾಳಿ ಮಾಡಿ ಇಡೀ ವಿಶ್ವದ ಪೆಟ್ರೋಲಿಯಂ ಮೇಲೆ ಹೇಗೆ ಹಿಡಿತ ಸಾಧಿಸುತ್ತೆ?? ಬಹುಶ ಈ ಪ್ರಶ್ನೆಗಳಿಗೆ ಉತ್ತರ ಜೋರ್ಜ್ ಬುಷ್ ಅಥವಾ ಒಬಾಮ ಕೊಡಬಲ್ಲರೆನೋ... ನನ್ನದೊಂದು ಪ್ರಶ್ನೆ ಇಲ್ಲಿದೆ... ನಾವು ಭಾರತಕ್ಕೆ ಉದ್ಯೋಗ ಕೊಡೋದಿಲ್ಲ, ೧ ಡಾಲರ್ ಬೇಕಿದ್ರೆ ೫೦ ರುಪಾಯಿ ಕೊಡಿ ಅಂತ ಅವ್ರು ಕೇಳಬೇಕಾದರೆ ನಾವೇನ್ ಮಾಡಬಹುದು???
ಈ ಬಗ್ಗೆ ನಾನು ತುಂಬಾ ಆಲೋಚಿಸಿದೆ... ಉತ್ತರ ಹುಡುಕಿದೆ... ಉಹುಂ ಯಾಕೋ ಸಮಾಧಾನವಾಗಲಿಲ್ಲ...
"ಇವತ್ತಿಂದ ನಾಳೆಗೆ ಫಲಿತಾಂಶ ಬೇಕೆಂದರೆ ಹೇಗೆ ಸ್ವಾಮೀ.. ರಷ್ಯಾ ದಂಥ ದೇಶವನ್ನ ಹುಡಿ ಮಾಡಲು ಈ ಅಮೇರಿಕಾ ಬರೋಬ್ಬರಿ ೬೦ ವರ್ಷ ಕಾಯಲಿಲ್ಲವೇ?? ಬ್ರಿಟೀಷರು ಭಾರತದ ಮೇಲೆ ಹಿಡಿತ ಸಾಧಿಸಲು ಅದೆಷ್ಟು ವರ್ಷ ಕಾಯಲಿಲ್ಲ? ಅದೇ ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ ಬೇಕು ಅಂತ ಅದೆಷ್ಟೋ ಮಂದಿ ಊಟ ,ನಿದ್ದೆ ಎಲ್ಲ ಬಿಟ್ಟು ಅದೆಷ್ಟು ದಿನ ಹೊರಾಡಲಿಲ್ಲ?? ಹಾಗೆ..ಉತ್ತಮ ಫಲಿತಾಂಶಕ್ಕಾಗಿ ಹೋರಾಡಬೇಕು, ಕಾಯಬೇಕು, ಪ್ಲಾನ್ ಮಾಡ್ಬೇಕು" ಹಾಗಂತ ಮನಸ್ಸು ಎಚ್ಚರಿಸುತ್ತಲೇ ಇತ್ತು...
ಅಲ್ಲಯ್ಯ ಈ ಅಮೇರಿಕಾ ದವರು ನಮಗೆ ಕೆಲಸ ಕೊಡಲ್ಲ , ಸರಿ ,ನಂ ಕೆಲಸ , ನನ್ನ ದೇಶದ ಕೆಲಸ ನಾನ್ ಮಾಡ್ತೀನಿ...
ಅಮೇರಿಕಾ ಕ್ಕೆ ೧೦೦೦ ಕೋಟಿ ರುಪಾಯಿಯ ಸಾಫ್ಟ್ವೇರ್ ಬೇಕಂತೆ... ಸರಿ , ಜಗತ್ತಿನ ೭ನೆ ದೊಡ್ಡ ದೇಶ, ೧೦೦ ಕೋಟಿಗಿಂತಲೂ ಹೆಚ್ಚು ಜನರಿರುವ ನಮ್ಮ ದೇಶಕ್ಕೆ ಅದೆಷ್ಟು ಸಾವಿರ ಕೋಟಿ ಗಳ ಸಾಫ್ಟ್ವೇರ್ ಬೇಡ???
naಮ್ಮ ಜನಕ್ಕೆ ನಿಮ್ಮಲ್ಲಿಂದ ಕೆಲಸ ಸಿಗಲ್ಲ... ಹೋಗ್ರಯ್ಯ ನಿಮ್ ಪೆಪ್ಸಿ ಕೋಕ್ ನಂಗೂ ಬೇಡ...
ನೀವು ಕೊಡೊ ಕುರ್ಕುರೆ ಗಿಂತ ನಮ್ಮಜ್ಜಿ ಮಾಡೋ ಚಿಪ್ಸ್ ಅದೆಷ್ಟೋ ಚೆನ್ನಾಗಿರ್ತವೆ..
ನಿಮ್ಮ ಕೋಲ್ ಗೇಟ್ ಗೆ ಬೆಂಕಿ ಹಾಕಿ, ನಮ್ಮಲ್ಲಿರೋ ಇದ್ದಿಲ ಹುಡಿ ಸಾಕು... ಪಿಜ್ಜಾ ಹಟ್, ಪೀಚೆ ಹಟ್....
ಹಾಗಂತ ನಾವೂ ಹೇಳಿದ್ರೆ ಹೆಂಗೆ??? ಬಹುಶ ಇವತ್ತಿಂದ ನಾಳೆ ಫಲಿತಾಂಶ ಸಿಗೋದಿಲ್ಲ ... ಆದ್ರೆ ಆ ಮೂಲಕ ನಾವೂ ನಮ್ಮ ದೇಶಕ್ಕೆ ಅಲ್ಪ ಸಹಾಯ ಮಾಡಬಹುದು... ಮುಂದೊಂದು ದಿನ ಒಬ್ಬ ರೂಢಿಸಿದ ಈ ಅಬ್ಭ್ಯಾಸ ೧೦೦ ಜನ ರೂಢಿಸಿಕೊಂಡಾರು ...
ಹನಿ ಹನಿ ಕೂಡಿದರೆ ಹಳ್ಳ ತಾನೆ... ಯಾಕೋ ಆಜಾದಿ ಬಚಾವ್ ಆಂದೋಲನದ ರಾಜೀವ್ ದೀಕ್ಷಿತ್ ತುಂಬಾ ನೆನಪಾಗುತ್ತಿದ್ದಾನೆ ...
ಹಾಗಂತ ಅಮೇರಿಕಾದ ಅಧ್ಯಕ್ಷ ಒಬಾಮ ಹೇಳಿಬಿಟ್ಟಿದ್ದಾನೆ...!!! ಅಮೇರಿಕಾ ದಂಥಾ ಅಮೇರಿಕಾ ದುಡ್ಡಿಗಾಗಿ ಪರದಾಡುತ್ತಿದ್ದರೆ ಆತನಿಂದ ಈ ಹೇಳಿಕೆ ಬಂದುಬಿಟ್ಟಿದೆ...ಅಲ್ಲಾ, ಈ ಒಬಾಮ ಅಧ್ಯಕ್ಷನಾಗಿ ಎಷ್ಟು ದಿನಗಳಾದವು?? ೧೦೦?? ೧೧೦? ೧೨೫??? ಕೇವಲ ೧೦೦ ದಿನದಲ್ಲಿ ಅಮೇರಿಕಾದ ಪರಿಸ್ತಿತಿ ಸುಧಾರಿಸಬೇಕಿದ್ದರೆ ಏನು ಮಾಡಬೇಕು ಅದನ್ನ ಮಾಡಿದ್ದಾನೆ... ಈ ಸಾಫ್ಟ್ವೇರ್, ಬಿ ಪಿ ಓ ಅನ್ನೋ ಕೆಲಸ ನಾವಿಲ್ಲಿ ಮಾಡ್ತಿವಲ್ಲ??? ಅಲ್ಲ, ನಾವ್ಯಾವತ್ತಾದ್ರೂ ಯೋಚಿಸಿದ್ದೀವ ಅಮೇರಿಕಾದವರು ನಮಗೆ ಯಾಕೆ ಕೆಲಸ ಕೊಡ್ತಿದ್ದಾರೆ ಅಂತ?? ಅವ್ರ ಲಾಭಕ್ಕಾಗಿ ತಾನೆ? ಅಲ್ಲ ಆನೋಕ್ಕಾಗಲ್ಲ.. ಹಾಗಂತ ನಮಗೇನೂ ಇದ್ರಿಂದ ಉಪಯೋಗ ಆಗ್ಲಿಲ್ವಾ?? ಖಂಡಿತ ಆಗಿದೆ...ಬಹುಶ ಭಾರತದಲ್ಲಿ ಇಷ್ಟೊಂದು ಉದ್ಯೋಗ ಸೃಷ್ಟಿಸಿದ್ದು , ದುಡ್ಡು ಹರಿದಾಡಿದ್ದು ಇವುಗಳಿ೦ದಾನೆ.. ಇಲ್ಲಾಂದ್ರೆ ಈ ಹಡಬೆ ಸರಕಾರಗಳು ನಮಗೆಲ್ಲಿ ಕೆಲಸ ಕೊಡ್ತಾ ಇದ್ವು?? ಎಲ್ಲಾ ಓಕೆ.. ಆದ್ರೆ ಈ ಅಮೇರಿಕಾ ಹೇಳಿದ್ದೆ ಯಾಕೆ??
ನಮ್ಮಲ್ಲಿ ದುಡ್ಡಿಲ್ಲ, ನಮ್ಮಲ್ಲಿ ಕೆಲಸ ಇಲ್ಲ ಅನ್ನೋ ಈ ಅಮೇರಿಕಾ ಪಾಕಿಸ್ತಾನಕ್ಕೆ ಬಿಲಿಯನ್ ಗಟ್ಟಲೆ ದುಡ್ಡು ಎಲ್ಲಿಂದ ಕೊಡುತ್ತೆ?? ಇರಾಕ್ ಮೇಲೆ ದಾಳಿ ಮಾಡಿ ಇಡೀ ವಿಶ್ವದ ಪೆಟ್ರೋಲಿಯಂ ಮೇಲೆ ಹೇಗೆ ಹಿಡಿತ ಸಾಧಿಸುತ್ತೆ?? ಬಹುಶ ಈ ಪ್ರಶ್ನೆಗಳಿಗೆ ಉತ್ತರ ಜೋರ್ಜ್ ಬುಷ್ ಅಥವಾ ಒಬಾಮ ಕೊಡಬಲ್ಲರೆನೋ... ನನ್ನದೊಂದು ಪ್ರಶ್ನೆ ಇಲ್ಲಿದೆ... ನಾವು ಭಾರತಕ್ಕೆ ಉದ್ಯೋಗ ಕೊಡೋದಿಲ್ಲ, ೧ ಡಾಲರ್ ಬೇಕಿದ್ರೆ ೫೦ ರುಪಾಯಿ ಕೊಡಿ ಅಂತ ಅವ್ರು ಕೇಳಬೇಕಾದರೆ ನಾವೇನ್ ಮಾಡಬಹುದು???
ಈ ಬಗ್ಗೆ ನಾನು ತುಂಬಾ ಆಲೋಚಿಸಿದೆ... ಉತ್ತರ ಹುಡುಕಿದೆ... ಉಹುಂ ಯಾಕೋ ಸಮಾಧಾನವಾಗಲಿಲ್ಲ...
"ಇವತ್ತಿಂದ ನಾಳೆಗೆ ಫಲಿತಾಂಶ ಬೇಕೆಂದರೆ ಹೇಗೆ ಸ್ವಾಮೀ.. ರಷ್ಯಾ ದಂಥ ದೇಶವನ್ನ ಹುಡಿ ಮಾಡಲು ಈ ಅಮೇರಿಕಾ ಬರೋಬ್ಬರಿ ೬೦ ವರ್ಷ ಕಾಯಲಿಲ್ಲವೇ?? ಬ್ರಿಟೀಷರು ಭಾರತದ ಮೇಲೆ ಹಿಡಿತ ಸಾಧಿಸಲು ಅದೆಷ್ಟು ವರ್ಷ ಕಾಯಲಿಲ್ಲ? ಅದೇ ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ ಬೇಕು ಅಂತ ಅದೆಷ್ಟೋ ಮಂದಿ ಊಟ ,ನಿದ್ದೆ ಎಲ್ಲ ಬಿಟ್ಟು ಅದೆಷ್ಟು ದಿನ ಹೊರಾಡಲಿಲ್ಲ?? ಹಾಗೆ..ಉತ್ತಮ ಫಲಿತಾಂಶಕ್ಕಾಗಿ ಹೋರಾಡಬೇಕು, ಕಾಯಬೇಕು, ಪ್ಲಾನ್ ಮಾಡ್ಬೇಕು" ಹಾಗಂತ ಮನಸ್ಸು ಎಚ್ಚರಿಸುತ್ತಲೇ ಇತ್ತು...
ಅಲ್ಲಯ್ಯ ಈ ಅಮೇರಿಕಾ ದವರು ನಮಗೆ ಕೆಲಸ ಕೊಡಲ್ಲ , ಸರಿ ,ನಂ ಕೆಲಸ , ನನ್ನ ದೇಶದ ಕೆಲಸ ನಾನ್ ಮಾಡ್ತೀನಿ...
ಅಮೇರಿಕಾ ಕ್ಕೆ ೧೦೦೦ ಕೋಟಿ ರುಪಾಯಿಯ ಸಾಫ್ಟ್ವೇರ್ ಬೇಕಂತೆ... ಸರಿ , ಜಗತ್ತಿನ ೭ನೆ ದೊಡ್ಡ ದೇಶ, ೧೦೦ ಕೋಟಿಗಿಂತಲೂ ಹೆಚ್ಚು ಜನರಿರುವ ನಮ್ಮ ದೇಶಕ್ಕೆ ಅದೆಷ್ಟು ಸಾವಿರ ಕೋಟಿ ಗಳ ಸಾಫ್ಟ್ವೇರ್ ಬೇಡ???
naಮ್ಮ ಜನಕ್ಕೆ ನಿಮ್ಮಲ್ಲಿಂದ ಕೆಲಸ ಸಿಗಲ್ಲ... ಹೋಗ್ರಯ್ಯ ನಿಮ್ ಪೆಪ್ಸಿ ಕೋಕ್ ನಂಗೂ ಬೇಡ...
ನೀವು ಕೊಡೊ ಕುರ್ಕುರೆ ಗಿಂತ ನಮ್ಮಜ್ಜಿ ಮಾಡೋ ಚಿಪ್ಸ್ ಅದೆಷ್ಟೋ ಚೆನ್ನಾಗಿರ್ತವೆ..
ನಿಮ್ಮ ಕೋಲ್ ಗೇಟ್ ಗೆ ಬೆಂಕಿ ಹಾಕಿ, ನಮ್ಮಲ್ಲಿರೋ ಇದ್ದಿಲ ಹುಡಿ ಸಾಕು... ಪಿಜ್ಜಾ ಹಟ್, ಪೀಚೆ ಹಟ್....
ಹಾಗಂತ ನಾವೂ ಹೇಳಿದ್ರೆ ಹೆಂಗೆ??? ಬಹುಶ ಇವತ್ತಿಂದ ನಾಳೆ ಫಲಿತಾಂಶ ಸಿಗೋದಿಲ್ಲ ... ಆದ್ರೆ ಆ ಮೂಲಕ ನಾವೂ ನಮ್ಮ ದೇಶಕ್ಕೆ ಅಲ್ಪ ಸಹಾಯ ಮಾಡಬಹುದು... ಮುಂದೊಂದು ದಿನ ಒಬ್ಬ ರೂಢಿಸಿದ ಈ ಅಬ್ಭ್ಯಾಸ ೧೦೦ ಜನ ರೂಢಿಸಿಕೊಂಡಾರು ...
ಹನಿ ಹನಿ ಕೂಡಿದರೆ ಹಳ್ಳ ತಾನೆ... ಯಾಕೋ ಆಜಾದಿ ಬಚಾವ್ ಆಂದೋಲನದ ರಾಜೀವ್ ದೀಕ್ಷಿತ್ ತುಂಬಾ ನೆನಪಾಗುತ್ತಿದ್ದಾನೆ ...
Subscribe to:
Posts (Atom)